ಧಾರವಾಡ : ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ‘ಇನ್ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ’ಗಳನ್ನು ಪ್ರತಿ ವರ್ಷ ಒಂದೊಂದು ಪ್ರಕಾರಕ್ಕೆ ಕೊಡುತ್ತಾ ಬಂದಿದ್ದು ಈಗ ಮೂರು ವರ್ಷಗಳ ಪ್ರಶಸ್ತಿ ಘೋಷಿಸಲಾಗಿದೆ.
2022ನೇ ಸಾಲಿಗೆ ಜ್ಯೋತಿ ಗುರುಪ್ರಸಾದ್ ಇವರ ಕವನ ಸಂಕಲನ ‘ಜಟಾಯು ಪಕ್ಷಿಗೆ ಶ್ರದ್ಧಾಂಜಲಿ’, 2023ನೇ ಸಾಲಿಗೆ ಅನುಪಮಾ ಪ್ರಸಾದ್ ಇವರ ಕಾದಂಬರಿ ‘ಪಕ್ಕಿ ಹಳ್ಳದ ಹಾದಿಗುಂಟ’, 2024ನೇ ಸಾಲಿಗೆ ಉಷಾ ನರಸಿಂಹನ್ ಇವರ ಕಥಾಸಂಕಲನ ‘ಸರಸ್ವತಿ ಸಾಕ್ಷಿ’ ಕೃತಿಗಳು ಆಯ್ಕೆಯಾಗಿವೆ.
ಪ್ರತಿಯೊಂದು ಕೃತಿಗೆ ಇಬ್ಬರು ನಿರ್ಣಾಯಕರು ಪ್ರತ್ಯೇಕವಾಗಿ ಅಂಕಗಳನ್ನು ಹಾಕಿ ಅವುಗಳ ಮೊತ್ತದ ಆಧಾರದಲ್ಲಿ ಫಲಿತಾಂಶವನ್ನು ಪ್ರಕಟಣೆ ಮಾಡಲಾಗಿದೆ. ಪ್ರಶಸ್ತಿಯು ರೂ. ಹತ್ತು ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಗೌರವ ಸನ್ಮಾನ ಒಳಗೊಂಡಿದೆ. ದಿನಾಂಕ 09 ಮೇ 2026ರಂದು ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಮರಾಠಿ ಪ್ರಸಿದ್ಧ ಸಾಹಿತಿ ಸುನಂದಾ ಭೋಸೆಕರ್ ಅತಿಥಿಗಳಾಗಿ ಆಗಮಿಸಲಿದ್ದಾರೆ.
