Subscribe to Updates

    Get the latest creative news from FooBar about art, design and business.

    What's Hot

    ಮೈಸೂರು ನಟನ ರಂಗಶಾಲೆಯಲ್ಲಿ ‘ಸಂಜೆ ಹಾಡು’ ನಾಟಕ | ಜೂನ್ 14

    June 12, 2026

    ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಯುಜಿ ಡಿಪ್ಲೋಮಾ – ಡ್ರಾಮಾ ಕೋರ್ಸ್

    June 12, 2026

    ನಾಟಕ ವಿಮರ್ಶೆ | ‘ಸ್ವಾತಂತ್ರ್ಯದ ಓಟ’ ಇತಿಹಾಸ, ಮಾನವೀಯತೆ ಮತ್ತು ರಂಗಸೌಂದರ್ಯದ ಅಪೂರ್ವ ಸಂಗಮ

    June 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕಯ್ಯಾರರು ಕನ್ನಡದ ಧ್ವನಿಯಾಗಿ ಬಾಳಿದವರು – ಡಾ. ಪ್ರಸನ್ನ ರೈ
    Music

    ಕಯ್ಯಾರರು ಕನ್ನಡದ ಧ್ವನಿಯಾಗಿ ಬಾಳಿದವರು – ಡಾ. ಪ್ರಸನ್ನ ರೈ

    May 13, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : “ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗೀತೆಗಳನ್ನು ರಚಿಸಿದ ಕಯ್ಯಾರರು ‘ಬೆಂಕಿ ಬಿದ್ದಿದೆ ಮನೆಗೆ ಬೇಗ ಬನ್ನಿ’ ಎಂಬ ಕ್ರಾಂತಿಕಾರಿ ಗೀತೆಯನ್ನೂ ರಚಿಸಿ ಅಜರಾಮರರಾಗಿದ್ದರು. ಅಖಿಲ ಕರ್ನಾಟಕದ ಮಹಾಕವಿಯಾಗಿ ಕಾಸರಗೋಡನ್ನು ಕರ್ನಾಟಕದಲ್ಲಿ ವಿಲೀನಗೊಳಿಸಬೇಕೆಂಬ ಆಶಯದೊಂದಿಗೆ ಬದುಕಿ ಬಾಳಿದವರು. ಕಾಸರಗೋಡು ಕರ್ನಾಟಕಕ್ಕೆ ಸೇರಿದ ದಿನ ನಾನು ಉಸಿರು ಚೆಲ್ಲುತ್ತೇನೆ ಎಂದು ಹೇಳಿ ಅಧ್ಯಾಪಕರಾಗಿ, ಕೃಷಿಕರಾಗಿ ಬಾಳಿ ಮಾದರಿಯಾದವರು” ಎಂದು ಡಾ. ಪ್ರಸನ್ನ ರೈ ಅವರು ಹೇಳಿದರು.

    ಕಾಸರಗೋಡಿನ ಸಾಹಿತ್ಯಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿಯ ಸಂಗೀತ ಘಟಕ ಸ್ವರ ಚಿನ್ನಾರಿಯು ಏರ್ಪಡಿಸಿದ ‘ಅಂತರಧ್ವನಿ – 16’ ಸಂಗೀತ ಕಾರ್ಯಕ್ರಮವನ್ನು ಬೀರಂತಬೈಲಿನಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

    “ಗ್ರಾಮೀಣ ಪ್ರದೇಶದ ಗಾಯಕರಿಗೆ ಗಟ್ಟಿಯಾದ ವೇದಿಕೆಯನ್ನು ನಿರ್ಮಿಸಿ, ಸಂಗೀತದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುವುದು ಸಾಹಸದ ಕೆಲಸ – ಕನ್ನಡವೇ ಕ್ಷೀಣಿಸುತ್ತಿರುವಾಗ ಇಂತಹ ಕಾರ್ಯಕ್ರಮಗಳು ಗಡಿನಾಡ ಕನ್ನಡಿಗರಲ್ಲಿ ಆತ್ಮಸ್ಥೈರ್ಯ ಮೂಡಲು ಸಹಾಯಕವಾಗುತ್ತದೆ ಎಂದರಲ್ಲದೆ ತಮ್ಮ ತಂದೆಯವರಾದ ಕಯ್ಯಾರರ ಗೀತೆಯನ್ನು ಹಾಡಿ ಜನರ ಮನಸ್ಸನ್ನು ಗೆದ್ದರು. ಅವರು ಕನ್ನಡದ ಧ್ವನಿಯಾಗಿ ಬಾಳಿದವರು” ಎಂದರು.

    ಕವಿಸಿಂಚನ ಕಾರ್ಯಕ್ರಮದಲ್ಲಿ ಕಾಸರಗೋಡಿನ ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಲಕ್ಷ್ಮೀ ಕೆ. ಇವರು ಮಾತನಾಡಿ “ಕಯ್ಯಾರರು ಕವಿಯಾಗಿ ಬಹುಭಾಷಾ ವಿದ್ವಾಂಸರಾಗಿ ಸ್ವಾತಂತ್ರ್ಯ ಹೋರಾಟಗಾರರಾಗಿ, ಕಾಸರಗೋಡು ಚಳುವಳಿಯ ನಾಯಕರಾಗಿ, ಪತ್ರಿಕಾ ಸಂಪಾದಕರಾಗಿ, ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಗೋವಿಂದ ಪೈಯವರ ಒಡನಾಡಿಯಾಗಿ ಬಾಳಿದವರು” ಎಂದು ಹೇಳಿದರು.

    ರಂಗಚಿನ್ನಾರಿಯ ನಿರ್ದೇಶಕರೂ, ‘ಅಂತರಧ್ವನಿ’ಯ ಸಂಚಾಲಕರೂ ಆಗಿರುವ ಕಾಸರಗೋಡು ಚಿನ್ನಾರವರು ಪ್ರಾಸ್ತಾವಿಕ ಮಾತನಾಡಿದರು. ರಂಗಚಿನ್ನಾರಿಯ ಮತ್ತೊಬ್ಬ ನಿರ್ದೇಶಕರಾದ ಕೆ. ಸತೀಶ್ಚಂದ್ರ ಭಂಡಾರಿಯವರು ಸ್ವಾಗತಿಸಿ, ಶ್ರೀಮತಿ ಶೋಭಾ ಬೆಳ್ಳಾರೆ ಪ್ರಾರ್ಥಿಸಿದರು.

    ರಂಗಚಿನ್ನಾರಿಯ ನಿರ್ದೇಶಕರಾದ ನ್ಯಾಯವಾದಿ ಎ.ಎನ್. ಅಶೋಕ ಕುಮಾರ್, ಡಾ. ಸಂತೋಷ್ ಕಾಮತ್, ಕೆ. ಸತ್ಯನಾರಾಯಣ, ಗಾಯಕರೂ ವೈದ್ಯರೂ ಆಗಿರುವ ಡಾ. ಕೆ.ಕೆ. ಶ್ಯಾನು ಭೋಗ್ ಉಪಸ್ಥಿತರಿದ್ದರು. ಖ್ಯಾತ ಸಾಹಿತಿ ವೈ. ಸತ್ಯನಾರಾಯಣ ವಿರಚಿತ ‘ಪಲಾಯನ’ ಕಥಾ ಸಂಕಲನವನ್ನು ಎಲ್ಲಾ ಗಾಯಕರಿಗೆ ವಿತರಿಸಲಾಯಿತು. ಅಂತರಧ್ವನಿಯ ಸಹಸಂಚಾಲಕಿ ಬಬಿತಾ ಆಚಾರ್ಯ ವಂದಿಸಿದರು.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Articleಕಪ್ಪೆಕೆರೆ ಸುಬ್ರಾಯ ಭಾಗವತ ವಿಧಿವಶ
    Next Article ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ‘ಕಜ್ಜಾಯ’ ಲಲಿತ ಪ್ರಬಂಧಗಳ ಸಂಕಲನ
    roovari

    Add Comment Cancel Reply


    Related Posts

    ಮೈಸೂರು ನಟನ ರಂಗಶಾಲೆಯಲ್ಲಿ ‘ಸಂಜೆ ಹಾಡು’ ನಾಟಕ | ಜೂನ್ 14

    June 12, 2026

    ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಯುಜಿ ಡಿಪ್ಲೋಮಾ – ಡ್ರಾಮಾ ಕೋರ್ಸ್

    June 12, 2026

    ನಾಟಕ ವಿಮರ್ಶೆ | ‘ಸ್ವಾತಂತ್ರ್ಯದ ಓಟ’ ಇತಿಹಾಸ, ಮಾನವೀಯತೆ ಮತ್ತು ರಂಗಸೌಂದರ್ಯದ ಅಪೂರ್ವ ಸಂಗಮ

    June 12, 2026

    ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್ ಪ್ರಶಸ್ತಿಗೆ ಲೇಖಕಿಯ ಆಯ್ಕೆ

    June 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.