Subscribe to Updates

    Get the latest creative news from FooBar about art, design and business.

    What's Hot

    ವಿದ್ಯಾರ್ಥಿಗಳಿಗಾಗಿ ‘ಮಸುಮ’ ಸಣ್ಣ ಕಥಾ ಸ್ಪರ್ಧೆ | ಕೊನೆಯ ದಿನಾಂಕ ಸೆಪ್ಟೆಂಬರ್ 20

    September 7, 2026

    ಕವಿಗೋಷ್ಠಿ, ಗೀತಗಾಯನ ಮತ್ತು ಕೃತಿ ಲೋಕಾರ್ಪಣೆ ಕಾರ್ಯಕ್ರಮ | ಸೆಪ್ಟೆಂಬರ್ 20

    September 7, 2026

    ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವದಲ್ಲಿ ‘ದಸರಾ ಕವಿಗೋಷ್ಠಿ’ | ಅಕ್ಟೋಬರ್ 18

    September 7, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಲೇಖನ – ಸದ್ದುಗದ್ದಲವಿಲ್ಲದೆ ಪ್ರದರ್ಶನಗೊಂಡ ನಾಟಕ ‘ಪಗಪು’
    Drama

    ಲೇಖನ – ಸದ್ದುಗದ್ದಲವಿಲ್ಲದೆ ಪ್ರದರ್ಶನಗೊಂಡ ನಾಟಕ ‘ಪಗಪು’

    August 1, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಯುತ ತಾರಾನಾಥ್ ಗಟ್ಟಿಯವರ ನೇತೃತ್ವದಲ್ಲಿ ಅಕಾಡೆಮಿಯ ಸದಸ್ಯರ ಸಹಕಾರದೊಂದಿಗೆ ತುಳು ಭಾಷೆ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ . ಕಾಲೇಜು ವಿದ್ಯಾರ್ಥಿಗಳಿಗೆ ತುಳು ನಾಟಕ ಕಾರ್ಯಗಾರ ನಡೆಸಿ, ಅಲ್ಲಿ ತರಬೇತುಗೊಂಡ ವಿದ್ಯಾರ್ಥಿಗಳಿಂದ ಆ ನಾಟಕವನ್ನು ಬೇರೆ ಬೇರೆ ವೇದಿಕೆಗಳಲ್ಲಿ ಪ್ರದರ್ಶನ ಮಾಡುವ ಕಾರ್ಯಕ್ರವೂ ಇದರಲ್ಲಿ ಒಂದು.
    ಸರಕಾರಿ ಪದವಿ ಪೂರ್ವ ಹೆಣ್ಮಕ್ಕಳ ಕಾಲೇಜು ಬಲ್ಮಠದಲ್ಲಿ ಅಬ್ಬರವಿಲ್ಲದ, ಸರಳವಾದ, ಸುಂದರ ನಾಟಕವೊಂದು ಪ್ರದರ್ಶನಗೊಂಡಿತು. ಅಮೃತ ಕಾಲೇಜು ಪಡೀಲ್, ಮಂಗಳೂರು ಇಲ್ಲಿಯ ವಿದ್ಯಾರ್ಥಿಗಳು ಶ್ರೀ ಜಗನ್ ಪವಾರ್ ಬೇಕಲ್ ಇವರ ಅದ್ಭುತ ನಿರ್ದೇಶನದಲ್ಲಿ ರಂಗದ ಮೇಲೆ ಪ್ರದರ್ಶಿಸಿದ ನಾಟಕ “ಪಗಪು”. ಇದು ಪ್ರಥಮ ಪ್ರದರ್ಶನ. ಇನ್ನು ಬೇರೆ ಬೇರೆ ವೇದಿಕೆಗಳಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸೌಹಾರ್ದ ಸಂಸ್ಕೃತಿಯನ್ನು ಹಾಗೂ ನಾಟಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾಟಕದ ಬಗ್ಗೆ ಆಸಕ್ತಿ ಮೂಡಿಸಲು ಹಮ್ಮಿಕೊಂಡ ಕಾರ್ಯಕ್ರಮ ಇದು.

    “ಪಗಪು” ನಾಟಕದಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಇದು ತುಳುನಾಡಿನ ಸೌಹಾರ್ದ ಪರಂಪರೆಯನ್ನು ಬಿಂಬಿಸುವ ತುಳು ನಾಟಕ. ಪ್ರತಿಯೊಬ್ಬನಿಗೂ ಈ ನೆಲದಲ್ಲಿ ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯ ಇದೆ. ಇನ್ನೊಬ್ಬರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು ಸರಿಯಲ್ಲ. ಆದರೆ ತನ್ನಂತೆಯೇ ಇನ್ನೊಬ್ಬನು ಬದುಕಬೇಕೆಂಬ ಮಾನವೀಯ ಮನೋಭಾವ ಇರುವವನೇ ಒಂದು ವರ್ಗದ ಜನರ ಕುತಂತ್ರಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುವುದು, ಮುಂದೆ ಅದೇ ರೀತಿ ಉದಾರ ಭಾವವನ್ನು ಹೊಂದಿರುವ ಸಮಾಜಮುಖಿ ಕೆಲಸ ಮಾಡುವ ಅವನ ಕುಡಿಯೊಂದು ಬಲಿಯಾಗುವ ಮೂಲಕ ಮಾನವೀಯತೆಗೆ ಬೆಲೆ ಇಲ್ಲದಾಗುತ್ತದೆ. ಎಲ್ಲರೂ ಸೌಹಾರ್ದಯುತವಾಗಿ ಬಾಳಬೇಕಾದ ಅನಿವಾರ್ಯತೆ ಇಂದಿನ ಸಮಾಜದಲ್ಲಿದೆ. ಈ ಅನಿವಾರ್ಯತೆಯನ್ನೇ ನಾಟಕದ ವಸ್ತುವನ್ನಾಗಿರಿಸಿಕೊಂಡು ಪ್ರಸ್ತುತಪಡಿಸಿದ ನಾಟಕ ‘ಪಗಪು’. ಈ ನಾಟಕವು ಜಾತಿ ಪದ್ಧತಿಯಂತಹ ಕೀಳು ಆಲೋಚನಾ ಕ್ರಮವನ್ನು ಮತ್ತು ಜನಸಾಮಾನ್ಯರನ್ನು ರಾಜಕೀಯ ದಾಳಗಳನ್ನಾಗಿ ಬಳಸುವ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ.
    ಯುವ ಜನಾಂಗಗಳ ಮನಸ್ಥಿತಿ ಬದಲಾಗಬೇಕು.
    ಸಮಾಜಕ್ಕೆ ಕೆಟ್ಟ ಪರಿಣಾಮ ಬೀರುವ ವಿಷಯಗಳ ಜಾಗಕ್ಕೆ ಉತ್ತಮ ಪರಿಣಾಮ ಬೀರುವ ವಿಚಾರಗಳನ್ನು ಬದಲಿಸಬೇಕು ಎಂಬ ಸಂದೇಶವನ್ನು ಯುವ ಜನಾಂಗಕ್ಕೆ ‘ಪಗಪು’ ನಾಟಕವು ನೀಡುತ್ತದೆ. ಇದು ಕನಿಷ್ಠ ಸಮಯದಲ್ಲಿ ಒಂದು ಮಹತ್ತರ ಸಂದೇಶವನ್ನು ಯುವ ಸಮುದಾಯಕ್ಕೆ ನೀಡುವ ನಾಟಕವಾಗಿದೆ.

            -ಅಕ್ಷರೀ

    Share. Facebook Twitter Pinterest LinkedIn Tumblr WhatsApp Email
    Previous Articleಕರ್ನಾಟಕ ನಾಟಕ ಅಕಾಡೆಮಿ ಆವರಣದ ರಂಗಚಾವಡಿಯಲ್ಲಿ ‘ರಂಗಸಂವಾದ -07’ | ಆಗಸ್ಟ್ 08
    Next Article ಬೆಂಗಳೂರಿನಲ್ಲಿ ‘ಪದ’ ಸಂಸ್ಥೆಯ ವತಿಯಿಂದ ‘ಪೌರಾಣಿಕ ರಂಗೋತ್ಸವ’ | ಆಗಸ್ಟ್ 05ರಿಂದ 07
    roovari

    Add Comment Cancel Reply


    Related Posts

    ಕಲಾಂಗಣದಲ್ಲಿ ‘ವಂದೇ ಮಾತರಂ’ ನಾಟಕ ಪ್ರದರ್ಶನ

    September 7, 2026

    ಪುಸ್ತಕ ವಿಮರ್ಶೆ | ತುಳುನಾಡಿನ ಸಾಂಸ್ಕೃತಿಕ ವಿಕಾಸಧಾರೆಯ ಶೋಧ

    September 7, 2026

    ಅಭಿನಯ ಭಾರತಿಯ ‘ವಜ್ರಸಿರಿ ರಂಗೋತ್ಸವ’ದ ಐದನೇ ದಿನದ ಕಾರ್ಯಕ್ರಮ

    September 7, 2026

    ಅಭಿನಯ ಭಾರತಿಯ ‘ವಜ್ರಸಿರಿ ರಂಗೋತ್ಸವ’ದ ನಾಲ್ಕನೇ ದಿನದ ಕಾರ್ಯಕ್ರಮ

    September 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.