Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಸಂಗೀತ ಭಾರತಿ ಫೌಂಡೇಷನ್ (ರಿ.) ಪ್ರಸ್ತುತ ಪಡಿಸುವ ‘ಸ್ತ್ರೀ ಶಕ್ತಿ’ ಸಂಗೀತ ಕಾರ್ಯಕ್ರಮವು ದಿನಾಂಕ 24-03-2024ರಂದು ಸಂಜೆ 5.30ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಲಿದೆ. ಶ್ರೀಲಕ್ಷ್ಮಿ ಬೆಳ್ಮಣ್ಣು ಇವರ ಹಾಡುಗಾರಿಕೆಗೆ ನೀತಾ ಬೆಳ್ಮಣ್ಣು ಹಾಮೋನಿಯಂ ಹಾಗೂ ವಿಘ್ನೇಶ್ ಕಾಮತ್ ತಬ್ಲಾ ಸಾಥ್ ನೀಡಲಿದ್ದಾರೆ. ಸಂಸ್ಕೃತಿ ಮತ್ತು ಪ್ರಕೃತಿ ವಹನೆ ಇವರ ಸೀತಾರ್-ಸಂತೂರ್ ಜುಗಲ್ ಬಂಧಿಗೆ ಹೇಮಂತ್ ಜೋಶಿ ತಬ್ಲಾ ಸಾಥ್ ನೀಡಲಿದ್ದಾರೆ.
ಪುತ್ತೂರು : ಸುದಾನ ಸೆಂಟರ್ ಫಾರ್ ರೂರಲ್ ಡೆವಲಪ್ ಮೆಂಟ್ ಆ್ಯಂಡ್ ಎಜುಕೇಶನ್ ಇದರ ಅಂಗ ಸಂಸ್ಥೆಯಾದ ಸುದಾನ-ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್ ಮೆಂಟ್ ಸ್ಟಡೀಸ್ ಇದರ ವತಿಯಿಂದ ‘ಕೃತಿ ಲೋಕರ್ಪಣಾ ಕಾರ್ಯಕ್ರಮ’ವು ದಿನಾಂಕ 23-03-2024ರಂದು ನಡೆಯಲಿದೆ. ಪುತ್ತೂರಿನ ಶ್ರೀಮತಿ ಕವಿತಾ ಅಡೂರು ಇವರ ವಿಜಯವಾಣಿ ದೈನಿಕದ ‘ಕಗ್ಗದ ಬೆಳಕು’ ಅಂಕಣಬರಹಗಳ ಸಂಕಲನ ‘ಎಲ್ಲರೊಳಗೊಂದಾಗು’ ಕೃತಿ ಲೋಕರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುದಾನ-ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್ ಮೆಂಟ್ ಸ್ಟಡೀಸ್ ಇದರ ಅಧ್ಯಕ್ಷರು/ನಿರ್ದೇಶಕರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಇವರು ವಹಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕರು, ಹಿರಿಯ ಸಾಹಿತಿ ಮತ್ತು ಪತ್ರಕರ್ತರಾದ ಶ್ರೀ ವಿ.ಜಿ. ಅರ್ತಿಕಜೆ ಇವರು ಕೃತಿ ಲೋಕರ್ಪಣೆಗೊಳಿಸಲಿದ್ದು, ಮಡಿಕೇರಿ ಆಕಾಶವಾಣಿಯ ಉದ್ಘೋಷಕರು, ಸಾಹಿತಿಗಳಾದ ಶ್ರೀ ಸುಬ್ರಾಯ ಸಂಪಾಜೆ ಕೃತಿ ಪರಿಚಯ ಮಾಡಲಿದ್ದಾರೆ.
ಮಂಗಳೂರು : ಕನ್ನಡ ತುಳು ವಿದ್ವಾಂಸರಾದ ಅಮೃತ ಸೋಮೇಶ್ವರ ಅವರ ಸಾಧನೆಗಳ ಕುರಿತು ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವ ವಿದ್ಯಾಲಯ) ಕಾಲೇಜಿನ ಸಭಾಂಗಣದಲ್ಲಿ ‘ಅಮೃತಾನುಸಂಧಾನ’ ರಾಷ್ಟ್ರೀಯ ವಿಚಾರ ಸಂಕಿರಣವು ದಿನಾಂಕ 10-03-2024ರಂದು ನಡೆಯಿತು. ಸೋಮೇಶ್ವರ ಉಚ್ಚಿಲದ ಕಲಾ ಗಂಗೋತ್ರಿ ಯಕ್ಷಗಾನ ಕೇಂದ್ರ ಮತ್ತು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗ ಜಂಟಿಯಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಕರಾವಳಿಯ ಅನೇಕ ವಿದ್ವಾಂಸರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಕುಲಪತಿ ಮತ್ತು ಅಮೃತರ ದೀರ್ಘ ಕಾಲದ ಒಡನಾಡಿ ಡಾ. ವಿವೇಕ ರೈಯವರು ಮಾತನಾಡಿ “ಭಾಷೆ, ಸಾಹಿತ್ಯದ ಪ್ರಬೇಧಗಳು, ಮಾಧ್ಯಮ ಮತ್ತು ಓದುಗ, ಕೇಳುಗ, ನೋಡುಗ ವರ್ಗ ಎಂದು ನಾಲ್ಕು ರೀತಿಯಿಂದ ಅಮೃತರ ಒಟ್ಟು ಸಾಧನೆಗಳನ್ನು ವಿಭಜಿಸಿ ಅರ್ಥಮಾಡಿಕೊಳ್ಳಬೇಕು. ಮೂರು ಭಾಷೆಯನ್ನು ಮಾತಾಡುತ್ತಿದ್ದ ಅಮೃತರು ತುಳುವನ್ನು ತನ್ನ ಮೂಲ ಶಕ್ತಿಯಾಗಿ ಬಳಸಿಕೊಂಡು ಕನ್ನಡದಲ್ಲಿ ಬರೆದರು. ಭಗವತೀ ಆರಾಧನೆಯಂತ ಪುಸ್ತಕ ಬರೆಯುವಾಗ ಅವರು ಮಲೆಯಾಳ ಭಾಷೆಯ ಅನುಭವಗಳನ್ನು ಬಳಸಿಕೊಂಡರು. 1962ರಷ್ಟು ಹಿಂದೆಯೇ ಇಂತಹ ಕೆಲಸಗಳನ್ನು…
ಮಂಗಳೂರು : ಅಳಪೆ-ಕಣ್ಣೂರು ಶ್ರೀ ಮುಂಡಿತ್ತಾಯ (ವೈದ್ಯನಾಥ) ದೈವಸ್ಥಾನ ಕೊಡಕಾಲ ಇದರ ಪುನಃ ಪ್ರತಿಷ್ಠಾ ಬ್ರಹ್ಮಕಲೋತ್ಸವ ಅಂಗವಾಗಿ ದಿನಾಂಕ 13-03-2024ರಂದು ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಶ್ರೀರಾಮ ದರ್ಶನ (ಜಾಂಬವತಿ ಕಲ್ಯಾಣ)’ ಯಕ್ಷಗಾನ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಶಾಂತ ರೈ ಪುತ್ತೂರು, ಚೆಂಡೆಯಲ್ಲಿ ರೋಹಿತ್ ಉಚ್ಚಿಲ್ ಮತ್ತು ಮದ್ದಳೆಯಲ್ಲಿ ಮಯೂರ್ ನಾಯಗ ಭಾಗವಹಿಸಿದ್ದರು. ಅರ್ಥಧಾರಿಗಳಲ್ಲಿ ಬಲರಾಮನಾಗಿ ಹಿರಿಯ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ, ಜಾಂಬವಂತನಾಗಿ ಶಂಭು ಶರ್ಮ ವಿಟ್ಲ, ಶ್ರೀಕೃಷ್ಣನಾಗಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ನಾರದನಾಗಿ ಡಾ. ದಿನಕರ ಎಸ್. ಪಚ್ಚನಾಡಿ ಭಾಗವಹಿಸಿದ್ದರು. ಕೊಡಕಾಲ ಶ್ರೀ ಮುಂಡಿತ್ತಾಯ (ವೈದ್ಯನಾಥ) ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕಲಾವಿದರಿಗೆ ಶಾಲು ಹೊದಿಸಿ, ಸ್ಮರಣಿಕೆಯಿತ್ತು ಗೌರವಿಸಿದರು. ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ಕಲಾವಿದರ ವಿವರ ನೀಡಿದರು. ಸಮಿತಿ ಕಾರ್ಯದರ್ಶಿ ಗೋಪಾಲಕೃಷ್ಣ…
ಪುತ್ತೂರು : ಹಿರಿಯ ವಿದ್ವಾಂಸರು, ವಿಮರ್ಶಕರೂ ಆಗಿರುವ ಶ್ರೀ ಲಕ್ಷ್ಮೀಶ ತೋಳ್ಪಾಡಿ ಇವರ ‘ಮಹಾಭಾರತ ಅನುಸಂಧಾನ ಭಾರತ ಯಾತ್ರೆ’ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ‘ಸಾರ್ವಜನಿಕ ಅಭಿನಂದನಾ ಸಮಾರಂಭ’ವನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಪುರಂದರ ಭಟ್ ಅವರ ನೇತೃತ್ವದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶ್ರೀ ಲಕ್ಷ್ಮೀಶ ತೋಲ್ಪಾಡಿ ಸಾರ್ವಜನಿಕ ಅಭಿನಂದನಾ ಸಮಿತಿ ವತಿಯಿಂದ ದಿನಾಂಕ 17-03-2024ರ ಆದಿತ್ಯವಾರ ಸಂಜೆ 4:00 ಗಂಟೆಗೆ ಪುತ್ತೂರಿನ ಶ್ರೀ ರಾಧಾಕೃಷ್ಣ ಮಂದಿರ ರಸ್ತೆಯಲ್ಲಿರುವ ಅನುರಾಗ ವಠಾರದಲ್ಲಿ ಆಯೋಜನೆ ಮಾಡಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಪುರಂದರ ಭಟ್ ವಹಿಸಲಿದ್ದು, ಪ್ರಾಧ್ಯಾಪಕರು ಸಾಹಿತಿಗಳು ಹಾಗೂ ವಿಮರ್ಶಕರಾದ ಡಾ. ನರೇಂದ್ರ ರೈ ದೇರ್ಲ ಇವರು ಉದ್ಘಾಟಿಸಲಿರುವರು. ಹಿರಿಯ ವಿದ್ವಾಂಸರು, ಸಾಹಿತಿಗಳು ಹಾಗೂ ವಿಮರ್ಶಕರಾದ ಡಾ. ತಾಳ್ತಜೆ ವಸಂತ ಕುಮಾರ ಇವರು ಶ್ರೀ ಲಕ್ಷ್ಮೀಶ ತೋಲ್ಪಾಡಿಯವರನ್ನು ಅಭಿನಂದಿಸಿ ಸನ್ಮಾನಿಸಲಿದ್ದು, ‘ಮಹಾಭಾರತ ಅನುಸಂಧಾನ…
ಮಂಗಳೂರು : ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಅರ್ಪಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಯಕ್ಷಾವಾಸ್ಯಮ್ ಕಾರಿಂಜ (ರಿ.), ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ತುಳು ಸ್ನಾತಕೋತ್ತರ ವಿಭಾಗ ಮತ್ತು ವಿ.ವಿ. ಸಂಧ್ಯಾ ಕಾಲೇಜು ಮಂಗಳೂರು ಇವರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ‘ಯಕ್ಷ ಸುಮತಿ 2024’ ರಾಜ್ಯ ಮಟ್ಟದ ಯಕ್ಷಗಾನ ಮಹಿಳಾ ಕಲಾವಿದೆಯರ ಸಾಧನೆಯ ಸಂಭ್ರಮದ ಸಮ್ಮಿಲನ ಕಾರ್ಯಕ್ರಮವನ್ನು ದಿನಾಂಕ 16-03-2024ರಂದು ಬೆಳಿಗ್ಗೆ ಗಂಟೆ 9-00ರಿಂದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭವನ್ನು ಮಾನ್ಯ ವಿಧಾನ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು.ಟಿ. ಖಾದರ್ ಉದ್ಘಾಟನೆ ಮಾಡಲಿದ್ದು, ಮೂಡಬಿದ್ರೆಯ ಆಳ್ವಾಸ್ ಎಜುಕೇಶನ್ ಫೌಂಡೇಷನ್ ಇವರ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಇವರು ದೀಪೋಜ್ವಲನ ಮಾಡಲಿರುವರು. ಬೆಳಗ್ಗೆ ಗಂಟೆ 9-45ರಿಂದ ‘ಯಕ್ಷಗಾನದಲ್ಲಿ ಮಹಿಳೆ : ನಿನ್ನೆ-ಇಂದು-ನಾಳೆ’, ‘ಯಕ್ಷಗಾನದಲ್ಲಿ ಮಹಿಳಾ ಸಂವೇದನೆ’ ಹಾಗೂ ‘ಯಕ್ಷಗಾನದ ವಿವಿಧ ವಿಭಾಗಗಳಲ್ಲಿ ಮಹಿಳೆ’ ಎಂಬ…
ಕಾರ್ಕಳ : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಕಳ ಹೊಸಸಂಜೆ ಬಳಗದ ವತಿಯಿಂದ ದಿನಾಂಕ 10-03-2024ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದೆ, ತಾಳಮದ್ದಳೆ ಅರ್ಥದಾರಿ ಜಯಶ್ರೀ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು “ಯಕ್ಷಗಾನ ಕಲೆ ಅತ್ಯಂತ ಶ್ರೀಮಂತ ಕಲೆ. ಬಯಲಾಟ ಮತ್ತು ತಾಳಮದ್ದಳೆ ಎರಡೂ ಪ್ರಕಾರಗಳಲ್ಲಿಯೂ ಕೂಡ ವಿಪುಲ ಸಾಹಿತ್ಯ ಜೊತೆಗೆ ಪುರಾಣ ಇತಿಹಾಸಗಳ ವಿಸ್ತೃತ ಪರಿಚಯ ದೊರಕುತ್ತದೆ. ವೇಷಗಾರಿಕೆ, ಸಂಗೀತ, ನಾಟ್ಯ, ವಾಙ್ಮಯ ಮುಂತಾದ ಎಲ್ಲವೂ ಒಳಗೊಂಡ ಸರ್ವಾಂಗೀಣ ಕಲೆಯಾಗಿದ್ದು ನೂರಾರು ವರ್ಷಗಳ ಸುದೀರ್ಘ ಇತಿಹಾಸವಿದೆ. ಯಕ್ಷಗಾನ ಕಲೆಯನ್ನು ಬೆಳೆಸಿ ಭವಿಷ್ಯದ ಪೀಳಿಗೆಗೂ ತಲುಪಿಸುವ ಕೆಲಸ ಕಲಾವಿದರಿಂದ ನಿರಂತರವಾಗಿ ನಡೆಯಬೇಕು” ಎಂದು ಹೇಳಿದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷೆ ಸುವರ್ಣಾ ನಾಯಕ್, ಮುನಿಯಾಲು ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಅರುಣಾ ಎಸ್., ಹಿರಿಯ ನಾಗರಿಕ ಭಾಸ್ಕರ ಕಾರಂತ, ಕಾರ್ಕಳ ಪುರಸಭೆಯ ಮಾಜಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಯಕ್ಷಗಾನ ಗುರು ಹರೀಶ ಶೆಟ್ಟಿ ಸೂಡ, ವಿಜಯಾ…
ಬೆಂಗಳೂರು : ಶ್ರೀ ಅನ್ನಪೂರ್ಣೇಶ್ವರಿ ಸಂಗೀತ ಸಭಾ ವತಿಯಿಂದ ಬೆಂಗಳೂರಿನ ಸುಂಕದಕಟ್ಟೆ, ಅನ್ನಪೂರ್ಣೇಶ್ವರಿ ನಗರ, ಆರ್.ಎಚ್.ಸಿ.ಎಸ್. ಲೇಔಟ್, 2ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ ದಿನಾಂಕ 16-03-2024ರಂದು ಸಂಜೆ ಗಂಟೆ 6ಕ್ಕೆ ‘ಮಾಸಿಕ ಸಂಗೀತ ಕಾರ್ಯಕ್ರಮ’ ನಡೆಯಲಿದೆ. ಕರ್ನಾಟಕದ ಪ್ರಸಿದ್ಧ ಹಿರಿಯ ಗಾಯಕರು ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ.ಎಸ್. ಮೋಹನ್ ಕುಮಾರ್ ಇವರ ಹಾಡುಗಾರಿಕೆಗೆ ವಿದ್ವಾನ್ ವೆಂಕಟೇಶ್ ಜೋಷಿಯರ್ ವಯೋಲಿನ್, ವಿದುಷಿ ರಂಜನಿ ವೆಂಕಟೇಶ್ ಮೃದಂಗ ಹಾಗೂ ವಿದ್ವಾನ್ ಭಾನು ಪ್ರಕಾಶ್ ಮೋರ್ಚಿಂಗ್ ಸಾಥ್ ನೀಡಲಿದ್ದಾರೆ.
ಕನ್ನಡದ ಯುವ ಬರಹಗಾರ್ತಿ ವಿದ್ಯಾ ಕೆ.ಎನ್. ಅವರ ಎರಡನೇ ಕಾದಂಬರಿ ‘ಯೋಗದಾ’. ಶೀರ್ಷಿಕೆಯೇ ಸೂಚಿಸುವಂತೆ ಇದು ಸನಾತನ ಹಿಂದೂ ಸಂಸ್ಕೃತಿಯನ್ನು ಜೀವಾಳವಾಗಿಸಿಕೊಂಡ ಒಂದು ಕೃತಿ. ಆಧುನಿಕತೆಯ ಹುಚ್ಚು ಪ್ರವಾಹದಲ್ಲಿ ತನ್ನತನವನ್ನು ಮರೆಯುತ್ತಿರುವ ಇಂದಿನ ಜನತೆಗೆ ಭಾರತೀಯ ಸಂಸ್ಕೃತಿಯೊಳಗಿನ ಅಗಾಧ ಶಕ್ತಿಯ ಮಹತ್ವವನ್ನು ನೆನಪಿಸುವ ಈ ಕೃತಿಯ ತಿರುಳು ಒಂದು ಸುಂದರ ಕೌಟುಂಬಿಕ ಕಥೆಯ ಕಣಕದೊಳಗೆ ಬೆಸೆದ ತತ್ವಜ್ಞಾನದ ಸಿಹಿ ಹೂರಣದಂತಿದೆ. ನಮ್ಮ ಹಿರಿಯರು ಹಿಂದೆ ಶ್ರದ್ಧೆಯಿಂದ ಮನೆ ಮನೆಗಳಲ್ಲಿ ಮಾಡುತ್ತಿದ್ದ ಶಕ್ತಿಯ ಉಪಾಸನೆ ಮತ್ತು ಆ ಮೂಲಕ ಮನೆಯೊಳಗೆ ಸಂಚರಿಸುವ ಧನಾತ್ಮಕ ವಾತಾವರಣದ ಬಗ್ಗೆ ಅವರ ಕಾಳಜಿಯನ್ನು ಈ ಕಾದಂಬರಿ ಪುನರ್ ಸ್ಥಾಪಿಸಲು ಪ್ರಯತ್ನಿಸುತ್ತದೆ. ಆಧುನಿಕತೆಯನ್ನು ರೂಢಿಸಿಕೊಂಡ ಕುಟುಂಬದೊಳಗೂ ಇದು ಸಾಧ್ಯ ಅನ್ನುವುದನ್ನು ತೋರಿಸಿ ಕೊಡುತ್ತದೆ. ಹುಟ್ಟೂರು ಸಾಂಸ್ಕೃತಿಕ ಮಹತ್ವದ ಸ್ಥಳ ಶೃಂಗೇರಿಯಾದರೂ ಉದ್ಯೋಗದ ಕಾರಣದಿಂದ ಬೆಂಗಳೂರಿನ ಕೆಂಗೇರಿಯಲ್ಲಿ ನೆಲೆಸಿರುವ ಶಂಕರ್ ದೀಕ್ಷಿತರು, ಅವರ ಪತ್ನಿ ಸುವರ್ಣಾ, ಮಕ್ಕಳಾದ ಅನಘಾ ಮತ್ತು ಅಭಿಜ್ಞಾರ ಸುಂದರ ಕೌಟುಂಬಿಕ ಬದುಕಿನ ಸುತ್ತ ಈ ಕಾದಂಬರಿ…
ಗೋವಾ : ಸಪ್ತಕ್ ಬೆಂಗಳೂರು ಮತ್ತು ಸ್ವಸ್ತಿಕ್ ಕಲ್ಚರಲ್ ಆಸೋಶಿಯೇಷನ್ ಗೋವಾ ಪ್ರಸ್ತುತ ಪಡಿಸುವ ‘ಸ್ವರ ಸ್ವಸ್ತಿಕ್’ ಕಾರ್ಯಕ್ರಮವು ದಿನಾಂಕ 17-03-2024ರಂದು ಸಂಜೆ 5.30ಕ್ಕೆ ಗೋವಾ ಪಣಜಿಯ ಕಲಾ ಅಕಾಡೆಮಿ ಬ್ಲಾಕ್ ಬಾಕ್ಸ್ ಇಲ್ಲಿ ನಡೆಯಲಿದೆ. ಪಲ್ಲವಿ ಪಾಟೀಲ ಇವರ ಹಾಡುಗಾರಿಕೆಗೆ ಶ್ರೀ ರೋಹಿದಾಸ್ ಪರಬ್ ತಬಲದಲ್ಲಿ, ಶ್ರೀ ಅನೈ ಘಾಟೆ ಹಾರ್ಮೋನಿಯಂ ಮತ್ತು ಶ್ರೀ ವಾಸೀಮ್ ಖಾನ್ ಸಾರಂಗಿ ಸಾಥ್ ನೀಡಲಿದ್ದಾರೆ. ಬೆಂಗಳೂರಿನ ಶ್ರೀ ಕೌಶಿಕ್ ಐತಾಳ್ ಇವರ ಹಾಡುಗಾರಿಕೆಗೆ ಡಾ. ಉದಯ್ ಕುಲಕರ್ಣಿ ತಬಲದಲ್ಲಿ ಮತ್ತು ಶ್ರೀ ಸುಭಾಷ್ ಫತರ್ಪೆಕರ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.