ಬೆಂಗಳೂರು : ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಇವರ ಜಂಟಿ ಸಹಯೋಗದೊಂದಿಗೆ ‘ಬೆಂಗಳೂರು ಕಿರುನಾಟಕೋತ್ಸವ’ವನ್ನು ಆಯೋಜಿಸುತ್ತಿದ್ದು, ನಿರೂಪಣಾ ವಿಷಯ : ‘ನಾಗರಿಕ ಪ್ರಜ್ಞೆ’ ಆಗಿರುತ್ತದೆ. ದಿನಾಂಕ 26 ಜೂನ್ 2026 ನೋಂದಾವಣೆಗಾಗಿ ಕೊನೆಯ ದಿನಾಂಕವಾಗಿದ್ದು, 28 ಜೂನ್ 2026ರಂದು ಪ್ರಾಥಮಿಕ ಹಂತದ ಸ್ಪರ್ಧೆ ಹಾಗೂ 11 ಜುಲೈ 2025ರಂದು ಅಂತಿಮ ಹಂತದ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 99025 90303 ಮತ್ತು 96868 69676 ಸಂಖ್ಯೆಗಳನ್ನು ಸಂಪರ್ಕಿಸಿರಿ.
https://www.pravaratheatre.org/bspf2026

ಪ್ರಶಸ್ತಿಗಳು :
1. ಅತ್ಯುತ್ತಮ ನಾಟಕ (ತೀರ್ಪುಗಾರರ ಆಯ್ಕೆ) – ಫಲಕ & 10,000/- ನಗದು.
2. ಅತ್ಯುತ್ತಮ ನಾಟಕ (ಪ್ರೇಕ್ಷಕರ ಆಯ್ಕೆ) – ಫಲಕ & 10,000/- ನಗದು.
3. ‘ಆರ್ .ನಾಗೇಶ್’ ಗೌರವಾರ್ಥ ಅತ್ಯುತ್ತಮ ನಿರ್ದೇಶನ – ಫಲಕ & 2,500/- ನಗದು.
4. ‘ಸಂಚಾರಿ ವಿಜಯ್’ ಗೌರವಾರ್ಥ ಅತ್ಯುತ್ತಮ ನಟ – ಫಲಕ & 2,500/- ನಗದು.
5. ‘ಉಮಾಶ್ರೀ’ ಗೌರವಾರ್ಥ ಅತ್ಯುತ್ತಮ ನಟಿ – ಫಲಕ & 2,500/- ನಗದು.
6. ‘ಟಿ. ಪಿ.ಕೈಲಾಸಂ’ ಗೌರವಾರ್ಥ ಅತ್ಯುತ್ತಮ ನಾಟಕ ರಚನೆ – ಫಲಕ & 2,500/- ನಗದು.
7. ‘ಚನ್ನಕೇಶವ. ಜಿ’ ಗೌರವಾರ್ಥ ಅತ್ಯುತ್ತಮ ನಿರ್ವಹಣೆ – ಫಲಕ & 2,500/- ನಗದು.
8. ಅತ್ಯುತ್ತಮ ನಾಟಕ ವಿನ್ಯಾಸ – ಫಲಕ & 2,500/- ನಗದು.
9. ಅತ್ಯುತ್ತಮ ಭಿತ್ತಿಪತ್ರ ವಿನ್ಯಾಸ – ಫಲಕ & 2,500/- ನಗದು.
ವಿವರಗಳು :
1. ಬೆಂಗಳೂರು ಕಿರುನಾಟಕೋತ್ಸವ 2026ರ ನಿರೂಪಣಾ ವಿಷಯ – ‘ನಾಗರಿಕ ಪ್ರಜ್ಞೆ’.
2. ಭಾಗವಹಿಸುವ ತಂಡಗಳು ಮೇಲ್ಕಂಡ ವಿಷಯದ ಬಗ್ಗೆ ನಾಟಕವನ್ನು ಪ್ರದರ್ಶಿಸಬೇಕು.
3. ಭಾಗವಹಿಸುವ ಪ್ರತಿ ತಂಡಕ್ಕೂ, ರಂಗಸಜ್ಜಿಕೆಯ ಸಮಯ ಸೇರಿ 15 ನಿಮಿಷಗಳ ಕಾಲಾವಕಾಶವನ್ನು ನೀಡಲಾಗುವುದು. ನಾಟಕ ಪ್ರದರ್ಶನ ಕನಿಷ್ಠ 10 ನಿಮಿಷವಿರಬೇಕು.
4. ಭಾಗವಹಿಸುವ ಪ್ರತಿತಂಡದಲ್ಲೂ ರಂಗದ ಮೇಲೆ ಕನಿಷ್ಠ 2 – ಗರಿಷ್ಠ 8 ಕಲಾವಿದರಿರಬಹುದು.
5. 26 ಜೂನ್ 2026ರವರೆಗೆ ನೋಂದಣಿಗೆ ಅವಕಾಶವಿರುತ್ತದೆ.
6. ರಂಗತಂಡಗಳು ಮತ್ತು ರಂಗಕರ್ಮಿಗಳು ನೋಂದಾಯಿಸಿಕೊಳ್ಳಬಹುದು.
7. ರಂಗತಂಡಗಳು ಒಂದಕ್ಕಿಂತ ಹೆಚ್ಚು ನಾಟಕಗಳನ್ನು ನೋಂದಾಯಿಸಿಕೊಳ್ಳಬಹುದು, ಆದರೆ ಕಲಾವಿದರು ಒಂದಕ್ಕಿಂತ ಹೆಚ್ಚು ತಂಡದಲ್ಲಿ ಭಾಗವಹಿಸುವಂತಿಲ್ಲ.
8. ಪ್ರತಿ ತಂಡವೂ 1000/- ರೂಪಾಯಿಗಳ ಪ್ರವೇಶ ದರವನ್ನು ಪಾವತಿಸತಕ್ಕದ್ದು, ಅಂತಿಮ ಸುತ್ತಿಗೆ ಆಯ್ಕೆಯಾಗದ ತಂಡದ ಪ್ರವೇಶ ದರವನ್ನು ಹಿಂತಿರುಗಿಸಲಾಗುವುದು.
9. ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾದ ತಂಡದ ಪ್ರವೇಶ ದರವನ್ನು ಹಿಂತಿರುಗಿಸಲಾಗುವುದಿಲ್ಲ.
10. ಮೊದಲ ಹಂತದ ಆಯ್ಕೆ ಪ್ರಕ್ರಿಯೆ 28 ಜೂನ್ 2026ರಂದು ಬೆಂಗಳೂರಿನಲ್ಲಿ ನಡೆಯಲಿದೆ.
11. ವೇಷಭೂಷಣಗಳು ಮತ್ತು ರಂಗಪರಿಕರಗಳು ಮೊದಲ ಹಂತದ ಆಯ್ಕೆ ಪ್ರಕ್ರಿಯೆಗೆ ಕಡ್ಡಾಯವಲ್ಲ.
12. ಮೊದಲ ಹಂತದ ಆಯ್ಕೆ ಪ್ರಕ್ರಿಯೆಗೆ ಸಾಮಾನ್ಯ ಬೆಳಕಿನ ವ್ಯವಸ್ಥೆ ಇರುತ್ತದೆ. ಸಂಗೀತವಿದ್ದಲ್ಲಿ, ನಿರ್ವಹಣೆಯನ್ನು ಆಯಾ ತಂಡಗಳೇ ಮಾಡಬೇಕು.
13. ಪ್ರತಿ ತಂಡವು ನಿಗದಿಪಡಿಸಿದ ಸಮಯದಲ್ಲಿ ನಾಟಕವನ್ನು ಪ್ರದರ್ಶಿಸಬೇಕು, ತಪ್ಪಿದಲ್ಲಿ ಪ್ರವೇಶ ದರವನ್ನು ಹಿಂತಿರುಗಿಸಲಾಗುವುದಿಲ್ಲ.
14. ನೊಂದಣಿಯಾದ ತಂಡಗಳು ಹಿಂದೆ ಸರಿದಲ್ಲಿ, ತಂಡದ ಪ್ರವೇಶದರವನ್ನು ಹಿಂದಿರುಗಿಸಲಾಗುವುದಿಲ್ಲ.
15. ಅಂತಿಮ ಹಂತದ ಸ್ಪರ್ಧೆಗೆ 6 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.
16. ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾದ ತಂಡಗಳಲ್ಲಿ ಯಾವುದಾದರೂ ತಂಡ ಕಾರಣಾಂತರಗಳಿಂದ ಹಿಂದೆ ಸರಿದಲ್ಲಿ, ಅಂಕಗಳ ಆಧಾರದಲ್ಲಿ ಬೇರೆ ತಂಡವು ಅಂತಿಮ ಹಂತದ ಸ್ಪರ್ಧೆಗೆ ಪ್ರವೇಶ ಪಡೆಯುತ್ತದೆ.
17. ಮೊದಲ ಮತ್ತು ಅಂತಿಮ ಹಂತದ ಸ್ಪರ್ಧೆಯ ತೀರ್ಪುಗಾರರೂ ಬೇರೆಯಾಗಿರುತ್ತಾರೆ ಮತ್ತು ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ.
18. ನಾಟಕೋತ್ಸವದ ಸಂಚಾಲಕರು ಅಂತಿಮ ಸುತ್ತಿಗೆ ಆಯ್ಕೆಯಾಗುವ ತಂಡಗಳ ನಿರ್ದೇಶಕರು/ ಪ್ರತಿನಿಧಿಗಳನ್ನು ಸಂಪರ್ಕಿಸಿ ಅಂತಿಮ ಹಂತದ ಸ್ಪರ್ಧೆಯ ವಿವರಣೆಯನ್ನು ನೀಡುತ್ತಾರೆ.
19. ಬೆಳಕಿನ ವಿನ್ಯಾಸವನ್ನು ಪ್ರತಿ ತಂಡಕ್ಕೂ ಅಂತಿಮ ಹಂತದ ಸ್ಪರ್ಧೆಯ ಮೊದಲು ನೀಡಲಾಗುತ್ತದೆ.
20. ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾದ ತಂಡಗಳಿಗೆ ದಿನಾಂಕ 11 ಜುಲೈ 2026ರಂದು, ತಾಂತ್ರಿಕ ಪೂರ್ವಾಭ್ಯಾಸಕ್ಕಾಗಿ ಬೆಳಿಗ್ಗೆ 9:30ರಿಂದ ತಾಂತ್ರಿಕ ಪ್ರದರ್ಶನ ಮಾಡಲು ಸಮಯಾವಕಾಶ ನೀಡಲಾಗುತ್ತದೆ. ನಿಗದಿಪಡಿಸಿದ ಸಮಯದಲ್ಲಿ ಪ್ರದರ್ಶನವನ್ನು ಕಡ್ಡಾಯವಾಗಿ ನೀಡಬೇಕು. ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ.
21. ಪ್ರತಿ ತಂಡವು ಪ್ರಸಾದನ ಮುಗಿದ ನಂತರ, ಮತ್ತೊಂದು ತಂಡಕ್ಕೆ ಗ್ರೀನ್ ರೂಮ್ ಬಿಟ್ಟು ಕೊಡಬೇಕು.
22. ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾದ ತಂಡಗಳು ತಾವು ಪ್ರದರ್ಶಿಸುವ ನಾಟಕದ ಸ್ಕ್ರಿಪ್ಟ್ ಅನ್ನು ಟೈಪ್ ಮಾಡಿ, ಮೈಕ್ರೋಸಾಫ್ಟ್ ವರ್ಡ್ ಫಾರ್ಮ್ಯಾಟ್ ನಲ್ಲಿ ನೀಡಬೇಕು.
23. ಅಂತಿಮ ಹಂತದ ಸ್ಪರ್ಧೆಯ ಪ್ರತಿ ತಂಡದ ಪ್ರದರ್ಶನ ಸಮಯವನ್ನು, ಆಯ್ಕೆಯಾದ ಎಲ್ಲಾ ತಂಡಗಳ ಪ್ರತಿನಿಧಿಗಳ ಸಮಕ್ಷಮದಲ್ಲಿ 28 ಜೂನ್ 2026ರಂದು ಸಂಜೆ 5-00 ಗಂಟೆಗೆ ಚೀಟಿ ತೆಗೆಯುವುದರ ಮೂಲಕ ನಿರ್ಧರಿಸಲಾಗುವುದು.
24. ಅಂತಿಮ ಹಂತದ ಸ್ಪರ್ಧೆಯು 11 ಜುಲೈ 2026ರಂದು ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆಯಲಿದೆ.
