Subscribe to Updates

    Get the latest creative news from FooBar about art, design and business.

    What's Hot

    ಪಿಲಿಕುಳದಲ್ಲಿ ಡಾ. ಹರಿಕೃಷ್ಣ ಪುನರೂರು ಅಭಿವಂದನ ಸಮಾರಂಭ

    May 12, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಸಂಗೀತ ಕಾರ್ಯಾಗಾರ | ಮೇ 24 ಮತ್ತು 25

    May 12, 2025

    ಡಾ. ಸುಷ್ಮಾ ಎಸ್.ವಿ.ಯವರಿಗೆ ‘ಗೌರಿ ಸುಂದರ್’ ವಾರ್ಷಿಕ ಪ್ರಶಸ್ತಿ ಪ್ರದಾನ

    May 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಣಿಪುರ ಕ್ಷೇತ್ರದಲ್ಲಿ ‘ಭಕ್ತಿರಸ’ ಭಕ್ತಿ ಭಾವಗೀತೆಗಳ ಕಲಿಕಾ ಕಾರ್ಯಾಗಾರ | ಸೆಪ್ಟೆಂಬರ್ 29
    Felicitation

    ಕಣಿಪುರ ಕ್ಷೇತ್ರದಲ್ಲಿ ‘ಭಕ್ತಿರಸ’ ಭಕ್ತಿ ಭಾವಗೀತೆಗಳ ಕಲಿಕಾ ಕಾರ್ಯಾಗಾರ | ಸೆಪ್ಟೆಂಬರ್ 29

    September 17, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕುಂಬಳೆ : ತೆಂಕುತಿಟ್ಟು ಯಕ್ಷಗಾನದ ತವರೂರು ಕುಂಬಳೆಯ ಕಣಿಪುರ ಕ್ಷೇತ್ರದಲ್ಲಿ ದಿನಾಂಕ 29 ಸೆಪ್ಟೆಂಬರ್ 2024ರಂದು ಇಡೀ ದಿನ ವಿಶೇಷ ಭಜನಾ ಕಮ್ಮಟ ಜರುಗಲಿದೆ. ಕನ್ನಡದ ಖ್ಯಾತ ಗಾಯಕ ಶ್ರೀ ಶಂಕರ್ ಶ್ಯಾನುಭೋಗ್ ಸಾರಥ್ಯದಲ್ಲಿ ಜರಗುವ ಕಮ್ಮಟವನ್ನು ಕಾಸರಗೋಡಿನ ಜನಪ್ರಿಯ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿಯ ಸಹ ಸಂಸ್ಥೆಗಳಾದ ನಾರಿ ಚಿನ್ನಾರಿ ಮತ್ತು ಸ್ವರ ಚಿನ್ನಾರಿ ಆಯೋಜಿಸಿದೆ.

    ಕನ್ನಡದ ಖ್ಯಾತ ಗಾಯಕ ಶ್ರೀ ಶಂಕರ್ ಶ್ಯಾನುಭೋಗ್ ನೇತೃತ್ವದಲ್ಲಿ ನಡೆಯುವ ಭಕ್ತಿರಸ ಕಾರ್ಯಾಗಾರವು ಭಜನೆ, ಭಾವಗೀತೆ ಕಲಿಕೆಗೆ ಸೀಮಿತವಾಗಿದ್ದು. ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜರುಗಲಿದೆ. ಕನ್ನಡನಾಡಿನ ದಾಸ ಪರಂಪರೆಯ ಗಾಯನ ಮತ್ತು ಭಾವಗೀತೆಗಳನ್ನು ವಿನೂತನ ಧಾಟಿಯಲ್ಲಿ ಕಲಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ. ಇದರಲ್ಲಿ ಪಾಲ್ಗೊಳ್ಳುವವರಿಗೆ ಹಾಡುವುದಕ್ಕಿಂತ ಭಿನ್ನವಾಗಿ ಹೊಸ ರಾಗ, ಶೈಲಿ ಕಲಿಯುವ ಅವಕಾಶ ಒದಗಲಿದೆ.

    ಬೆಳಿಗ್ಗೆ ಉದ್ಘಾಟನೆಗೊಂಡು ಸಂಜೆ 4ರ ತನಕ ನಡೆಯುವ ‘ಭಕ್ತಿರಸ’ ಗಾಯನ ಕಲಿಕಾ ಕಮ್ಮಟದಲ್ಲಿ ಕುಂಬಳೆ ಸಮೀಪದ ಸುಮಾರು 500 ಭಜನಾರ್ಥಿಗಳು ಪಾಲ್ಗೊಳ್ಳುವುದನ್ನು ಕಣಿಪುರ ಕ್ಷೇತ್ರದಲ್ಲಿ ನಡೆದ ಭಜಕರ ಸಿದ್ದತಾ ಸಭೆಯಲ್ಲಿ ನಿರ್ಣಯಿಸಿ ಖಚಿತಪಡಿಸಲಾಯಿತು. ಸಮಾರಂಭದ ಸಮಾರೋಪ ಸಭೆಯಲ್ಲಿ ನಾಡಿನ ಅತ್ಯಂತ ಹಿರಿಯ ಭಜನಾರ್ಥಿಗಳನ್ನು ಅನ್ವೇಷಿಸಿ, ಗುರುತಿಸಿ ನಗದು ಸಹಿತ ಗೌರವ ಸನ್ಮಾನ ನೀಡಲು ನಿರ್ಣಯಿಸಲಾಯಿತು.

    ರಂಗಚಿನ್ನಾರಿ (ರಿ) ಸಂಸ್ಥೆಯ ಸಂಚಾಲಕ, ರಂಗಕರ್ಮಿ ಕಾಸರಗೋಡು ಚಿನ್ನಾ ಆಶಯ ಮಂಡಿಸಿ ಭಕ್ತಿರಸ ಯೋಜನೆಯ ಪ್ರಸ್ತಾಪ ಮಾಡಿದರು. ಹರಿದಾಸ, ಕಲಾರತ್ನ ಶಂ.ನಾ. ಅಡಿಗ ಕುಂಬಳೆ ಅಧ್ಯಕ್ಷತೆ ವಹಿಸಿ ಇದನ್ನು ಕುಂಬಳೆಯ ನೆಲದ ಕಾರ್ಯಕ್ರಮವಾಗಿ ಯಶಸ್ವಿಗೊಳಿಸಬೇಕು ಮತ್ತು ಕುಂಬಳೆಯ ಪ್ರತಿಯೊಬ್ಬ ಧಾರ್ಮಿಕ ಬಂಧುವೂ ಪಾಲ್ಗೊಳ್ಳುವಂತಾಗಬೇಕೆಂದು ವಿನಂತಿಸಿದರು. ಸಿದ್ದತಾ ಸಭೆಯಲ್ಲಿ ಪ್ರಾದೇಶಿಕ ಸಂಘಟನಾ ಸಮಿತಿ ಅಧ್ಯಕ್ಷ ಸುಧಾಕರ ಕಾಮತ್ ಕುಂಬಳೆ, ಉಪಾಧ್ಯಕ್ಷ ಸತೀಶ್ ನಾಯ್ಕಾಪು, ಕಾರ್ಯದರ್ಶಿ ಮಧುಸೂಧನ ಕಾಮತ್ ಹಾಗೂ ಊರ ಪ್ರಮುಖರು ಕುಂಬಳೆ ಸಮೀಪದ ಭಜನಾ ತರಬೇತುದಾರರು, ಭಜನಾರ್ಥಿಗಳು ಪಾಲ್ಗೊಂಡಿದ್ದರು.

    ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಛಿಸುವ ಶಿಬಿರಾರ್ಥಿಗಳು ತಮ್ಮ ಹೆಸರನ್ನು ಆದಷ್ಟು ಬೇಗನೆ
    ಶ್ರೀ ಸತೀಶ್ ನಾಯ್ಕಾಪು 9995712070
    ಶ್ರೀಮತಿ ಪ್ರೇಮಾ ಶೆಟ್ಟಿ 9037284743
    ಶ್ರೀ ಮಧುಸೂಧನ ಕಾಮತ್ 9447380970
    ಇವರಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಶ್ರೀ ಕಾಸರಗೋಡು ಚಿನ್ನಾ ತಿಳಿಸಿರುತ್ತಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಸಂಸ್ಕೃತಿ ಸಮ್ಮೇಳನ
    Next Article ಗುಂಡ್ಮಿ ಸಾಲಿಗ್ರಾಮದ ಯಕ್ಷಗಾನ ಕಲಾಕೇಂದ್ರದಲ್ಲಿ ‘ಪುಂಡಲೀಕ ಹಾಲಂಬಿ ಪ್ರಶಸ್ತಿ’ ಪ್ರದಾನ
    roovari

    Comments are closed.

    Related Posts

    ಪಿಲಿಕುಳದಲ್ಲಿ ಡಾ. ಹರಿಕೃಷ್ಣ ಪುನರೂರು ಅಭಿವಂದನ ಸಮಾರಂಭ

    May 12, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಸಂಗೀತ ಕಾರ್ಯಾಗಾರ | ಮೇ 24 ಮತ್ತು 25

    May 12, 2025

    ಡಾ. ಸುಷ್ಮಾ ಎಸ್.ವಿ.ಯವರಿಗೆ ‘ಗೌರಿ ಸುಂದರ್’ ವಾರ್ಷಿಕ ಪ್ರಶಸ್ತಿ ಪ್ರದಾನ

    May 12, 2025

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.