ಮಂಗಳೂರು : ಕಲಾಸೂರ್ಯ ನೃತ್ಯಾಲಯ ಮಂಗಳೂರು ಆಯೋಜಿಸುತ್ತಿರುವ ‘ಕಲಾಭವ’ ಮಾಸಿಕ ನೃತ್ಯ ಸರಣಿ-09ರ ಕಾರ್ಯಕ್ರಮವು ದಿನಾಂಕ 31 ಮೇ 2026ರಂದು ಮಂಗಳೂರಿನ ಸುಬ್ರಹ್ಮಣ್ಯ ಸದನದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಅವರ ಶಿಷ್ಯೆ ವಿದುಷಿ ನಿಧಿ ಪುತ್ತೂರು ಇವರ ಏಕಾವ್ಯಕ್ತಿ ಭರತನಾಟ್ಯ ಪ್ರಸ್ತುತಿ ಕಲಾಸಕ್ತರ ಮನಸೂರೆಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಹ್ಯಾದ್ರಿ ಕಾಲೇಜ್ ಮಂಗಳೂರಿನಲ್ಲಿ ಜನಸಂಪರ್ಕ ಅಧಿಕಾರಿ ಹಾಗೂ ಕೌಶಲ್ಯ ಸಂಪರ್ಕ ಅಧಿಕಾರಿ ಆಗಿರುವ ಶ್ರೀಮತಿ ಮಾನಸ ಶೆಟ್ಟಿ ಇವರು ಕಲಾವಿದೆಯ ಪರಿಶ್ರಮ ಹಾಗೂ ಪ್ರಸ್ತುತಿಗೆ ಮೆಚ್ಚುಗೆ ಪಡಿಸಿ, ಜೊತೆಗೆ ಇಂತಹ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲಾಸೂರ್ಯ ನೃತ್ಯಾಲಯದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.





ಕಾರ್ಯಕ್ರಮದಲ್ಲಿ ಮಂಗಳೂರಿನ ಹಿರಿಯ ಮೃದಂಗ ವಾದಕಾರದ ವಿದ್ವಾನ್ ವಿ. ಮನೋಹರ್ ರಾವ್ ಇವರು ಕಲಾವಿದೆ ಹಾಗೂ ಗುರುಗಳಿಗೆ ಶುಭ ಹಾರೈಸಿದರು. ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ವಿದ್ವಾನ್ ಗಿರೀಶ್ ಕುಮಾರ್ ಉಪಸ್ಥಿತರಿದ್ದರು, ವಿದ್ವಾನ್ ಮನೋಹರ್ ರಾವ್, ಸುಮಂಗಲ ಪ್ರಭಾಕರ್ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು. ಕುಮಾರಿ ಮನ್ವಿತಾ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಮಾಸ್ಟರ್ ಶ್ಯಾಮ್ ಪಡುವೆಟ್ನಾಯ ಇವರ ಓಂಕಾರನಾದ, ಸೌಜನ್ಯ ಪಡುವೆಟ್ನಾಯ ಇವರ ಶಂಖನಾದ, ಕುಮಾರಿ ಶ್ರೇಯ ಬಾಪಟ್ ಇವರ ಪಂಚಾಂಗ ಪಠಣ ಶುಭಕರ ವಾತಾವರಣ ಸೃಷ್ಟಿಸಿ ಕಾರ್ಯಕ್ರಮಕ್ಕೆ ಉತ್ತಮ ನಾಂದಿ ಹಾಡಿತು. ಕಲಾಸೂರ್ಯ ನೃತ್ಯಾಲಯದ ನೃತ್ಯಗುರು ವಿದುಷಿ ಸೌಜನ್ಯ ವಿ. ಪಡುವೆಟ್ನಾಯ ಸ್ವಾಗತಿಸಿ, ಕುಮಾರಿ ದಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.








