ಬೆಂಗಳೂರು : ಸಾಂಸ್ಕೃತಿಕ ಸಂಘಟನೆಯಾದ ರಂಗಚಂದಿರ (ರಿ.) ಇದರ ವತಿಯಿಂದ ಹಾಗೂ ಶಾರದಾ ಪ್ರತಿಷ್ಠಾನ ಮಾಗಡಿ – ರಂಗನಾಯಕ (ರಿ.) ಬೆಂಗಳೂರು ಇವರ ಸಹಯೋದದಲ್ಲಿ ಲೇಖಕರಾದ ರವಿ ಅಂಬೋಜಿಯವರ ‘ಗುಲಾಬಿ ಸೇನೆ’ ಕಾದಂಬರಿ ಕೃತಿ ಬಿಡುಗಡೆ ಸಮಾರಂಭವನ್ನು ದಿನಾಂಕ 15 ಮೇ 2026ರಂದು ಬೆಳಗ್ಗೆ ಗಂಟೆ 11-00ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷರಾದ ಡಾ. ಹೆಚ್.ಎಲ್. ಪುಷ್ಪ ಇವರು ವಹಿಸಲಿದ್ದು, ಅಂತರಾಷ್ಟ್ರೀಯ ಜಾನಪದ ಗಾಯಕರಾದ ಶ್ರೀಮತಿ ಸವಿತಕ್ಕ ಇವರು ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಲ್.ಎನ್. ಮುಕುಂದರಾಜ್ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ನಾಟಕಕಾರ, ರಂಗ ನಿರ್ದೇಶಕರಾದ ಡಾ. ಬೇಲೂರು ರಘುನಂದನ್ ಇವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸವಿಗಾನ ಮಂಜು ಇವರಿಂದ ಹೋರಾಟದ ಗೀತೆಗಳ ಗಾಯನ ಮತ್ತು ಸ್ವರಾಮೃತ ಸಂಗೀತ ಶಾಲೆ ಮಕ್ಕಳಿಂದ ಜಾನಪದ ಗೀತೆಗಳ ಗಾಯನ ನಡೆಯಲಿದೆ. ಸಿದ್ಧರಾಮ್ ಕೊಪ್ಪರ್ ಇವರ ನಿರ್ದೇಶನದಲ್ಲಿ ಕಗ್ಗರೆ ಮಂಜುನಾಥ್ ಇವರಿಂದ ರವಿ ಅಂಬೋಜಿಯವರ ‘ಮಾರ್ಗದಾಳು’ ಕಾದಂಬರಿ ಆಧಾರಿತ ಏಕವ್ಯಕ್ತಿ ಪ್ರಯೋಗ ಪ್ರದರ್ಶನಗೊಳ್ಳಲಿದೆ.

