ಉಡುಪಿ : ಶ್ರೀ ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರಮಂಡಳಿ ಹುಕ್ಲಮಕ್ಕಿ ಇದರ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಪುಸ್ತಕ ಲೋಕಾರ್ಪಣೆ, ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 17 ಮೇ 2026ರಂದು ಉಡುಪಿಯ ಯಕ್ಷಗಾನ ಕಲಾರಂಗ ಐ.ವೈ.ಸಿ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಯಕ್ಷಬ್ರಹ್ಮ ಪೂಜ್ಯ ಮಲ್ಪೆ ಶಂಕರನಾರಾಯಣ ಸಾಮಗರಿಂದ ರಚಿಸಲ್ಪಟ್ಟ ಯಕ್ಷಗಾನ ಅರ್ಥ ಸಹಿತ ‘ಅಂಗದ ಸಂಧಾನ’ ಮರು ಮುದ್ರಣದ ಲೋಕಾರ್ಪಣೆ, ಶತಮಾನೋತ್ಸವ ಪ್ರಶಸ್ತಿ ಪ್ರದಾನ ಹಾಗೂ ‘ಕರಂಡಕಾಸುರ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

