ಮಂಗಳೂರು : ಚಾಮರ ಫೌಂಡೇಶನ್ (ರಿ.) ಮತ್ತು ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ (ರಿ.) ಇವರ ಸಹಭಾಗಿತ್ವದಲ್ಲಿ ವೃತ್ತಿಪರ ರಂಗ ಕಲಾವಿದೆ ತೃಷಾ ಶೆಟ್ಟಿಯವರ ನಿರ್ದೇಶನದಲ್ಲಿ ಏಳು ದಿನಗಳ ಮಕ್ಕಳ ‘ರಂಗ ಶಿಬಿರ 2026’ವನ್ನು ದಿನಾಂಕ 17ರಿಂದ 23 ಮೇ 2026ರವರೆಗೆ ಬೆಳಿಗ್ಗೆ 9-00ರಿಂದ ಮಧ್ಯಾಹ್ನ 1-00ರವರೆಗೆ ಮಂಗಳೂರಿನ ಆದರ್ಶನಗರ, ಚಿಲಿಂಬಿ ಗುಡ್ಡೆಯಲ್ಲಿ ಆಯೋಜಿಸಲಾಗಿದೆ.
ದಿ. ಯತೀಶ್ ವೈ. ಶೆಟ್ಟಿ ಇವರ ಸ್ಮರಣಾರ್ಥ ಹಮ್ಮಿಕೊಳ್ಳಲಾದ ಈ ಶಿಬಿರದಲ್ಲಿ 6ನೇ ತರಗತಿಯಿಂದ 12ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ 99459 96842 ಸಂಖ್ಯೆಯನ್ನು ಸಂಪರ್ಕಿಸಿರಿ.

