ಮೈಸೂರು : ಕರ್ನಾಟಕ ಏಕೀಕರಣ ಟ್ರಸ್ಟ್ (ರಿ.) ಮೈಸೂರು ವತಿಯಿಂದ ಸ್ವಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣ ಹೋರಾಟಗಾರ ಡಾ. ಸಿದ್ಧನಾಥ ಬಳ್ಳಾರಿ ಇವರ ಸ್ಮರಣಾರ್ಥ ಹಮ್ಮಿಕೊಂಡಿರುವ ಡಾ. ಸುಜಾತ ಅಕ್ಕಿಯವರ ಮೂರು ದಿನಗಳ ಏಕವ್ಯಕ್ತಿ ಪ್ರದರ್ಶನ ನಾಟಕೋತ್ಸವವನ್ನು ದಿನಾಂಕ 26, 27 ಮತ್ತು 28 ಜೂನ್ 2026ರಂದು ಪ್ರತಿದಿನ ಸಂಜೆ 6-00 ಗಂಟೆಗೆ ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಚಿಂತಕರು ಮತ್ತು ಅಂಕಣಕಾರರಾದ ನಾ ದಿವಾಕರ್ ಇವರು ಉದ್ಘಾಟನೆ ಮಾಡಲಿದ್ದು, ಮಾನ್ಯ ಶಾಸಕರಾದ ಕೆ. ಹರೀಶ್ ಗೌಡ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ದಿನಾಂಕ 26 ಜೂನ್ 2026ರಂದು ಹರಿಣಾಕ್ಷಿ ರಾವ್ ಇವರು ‘ಅಹಲ್ಯೆ’, ದಿನಾಂಕ 27 ಜೂನ್ 2026ರಂದು ಡಾ. ದಿವ್ಯಾ ಬಿ. ಎಸ್. ಇವರು ‘ಅಕ್ಕ ನಾಗಲೆ’ ಹಾಗೂ ದಿನಾಂಕ 28 ಜೂನ್ 2026ರಂದು ಡಾ. ಸುಮಾ ರವಿಕುಮಾರ್ ಇವರು ‘ಅಫಲೆ’ ಏಕವ್ಯಕ್ತಿ ಪ್ರದರ್ಶನ ನೀಡಲಿದ್ದಾರೆ. ಡಾ. ಸುಜಾತ ಅಕ್ಕಿಯವರು ವಿನ್ಯಾಸ ಮತ್ತು ನಿರ್ದೇಶನ ಹಾಗೂ ಅರಸೀಕೆರೆ ಯೋಗನಂದ ರಂಗಾಯಣ ಮೈಸೂರು ಇವರು ಸಹ ನಿರ್ದೇಶನ ಮಾಡಲಿದ್ದಾರೆ.

