ತುಮಕೂರು : ಎಲ್ಲಾ ಕವಿ ಸಾಹಿತಿಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಆಗಸ್ಟ್ ತಿಂಗಳ ಮೊದಲನೇ ವಾರ ತುಮಕೂರಿನಲ್ಲಿ ಮೇಘಮೈತ್ರಿ ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈ ಸಮ್ಮೇಳನದಲ್ಲಿ ಒಟ್ಟು ನಾಲ್ಕು ದತ್ತಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಈ ದತ್ತಿ ಪ್ರಶಸ್ತಿಗೆ 2025-26ರಲ್ಲಿ ಮೊದಲ ಮುದ್ರಣವಾದ ಪುಸ್ತಕಗಳನ್ನು ಕಳುಹಿಸಿ ಕೊಡಲು ತಮಗೆ ತಿಳಿಸುತ್ತಿದ್ದೇನೆ. ಪುಸ್ತಕ ಕಳುಹಿಸುವ ಕೊನೆಯ ದಿನಾಂಕ 07 ಜುಲೈ 2026.
ಸೂಚನೆ :
*ಪ್ರಕಟಣೆಯಾದ 3 ಪ್ರತಿಗಳನ್ನು ಕಳುಹಿಸಿ ಕೊಡಬೇಕು.
*ಕಥಾ, ಕವನ, ಕಾದಂಬರಿ, ಪ್ರಬಂಧ ಹಾಗೂ ಲೇಖನಗಳ ಪ್ರಕಾರದ ಪುಸ್ತಕ ಕಳುಹಿಸಿ ಕೊಡಬಹುದು.
*ನೀವು ಯಾವ ದತ್ತಿಗೆ ಕಳುಹಿಸಿ ಕೊಡುತ್ತಿದ್ದೀರಿ ಎಂದು ನಮೂದಿಸಿ ಕಳುಹಿಸಿ
*ಕೊನೆಯ ದಿನಾಂಕ ನಂತರ ಕಳುಹಿಸಿ ಕೊಡಬೇಡಿ
*ದತ್ತಿ ಆಯ್ಕೆಯ ಸಮಿತಿಯ ತೀರ್ಮಾನವೇ ಅಂತಿಮ.
*ತಾವುಗಳು ಕಳುಹಿಸಿದ ಪುಸ್ತಕ ಮರಳಿ ಕಳುಹಿಸುವುದಿಲ್ಲ
ಪುಸ್ತಕ ಕಳುಹಿಸುವ ವಿಳಾಸ : ಎಂ.ರಮೇಶ ಕಮತಗಿ, S/o ಮಲ್ಲಪ್ಪ ಮೇಟಿ
ಕಿಲ್ಲಾ ಓಣಿ, ವಾರ್ಡ್ ನ-01, ಕಮತಗಿ -587120, ತಾಲೂಕು ಹುನಗುಂದ, ಜಿಲ್ಲೆ ಬಾಗಲಕೋಟೆ. ಮೊ-9686782774
ಮೇಘಮೈತ್ರಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿನ ದತ್ತಿ
“ದಿ. ಶ್ರೀಮತಿ ಮಾಪಮ್ಮ ಎಸ್. ಹೊಸಮನಿ ದತ್ತಿ ಪ್ರಶಸ್ತಿ”
ಮೇಘಮೈತ್ರಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿನ ದತ್ತಿ
“ಡಾ. ಪ್ರಕಾಶ ಖಾಡೆ ಮೇಘಮೈತ್ರಿ ಕಥಾ ಸಾಹಿತ್ಯ ದತ್ತಿ ಪ್ರಶಸ್ತಿ”
ಮೇಘಮೈತ್ರಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿನ ದತ್ತಿ
“ಡಾ. ವಿಜಯಕುಮಾರ ಎಸ್. ಕಟಗಿಹಳ್ಳಿಮಠ ಸಾಹಿತ್ಯ ದತ್ತಿ ಪ್ರಶಸ್ತಿ”
ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿನ ದತ್ತಿ
“ದಿ. ಸದಾನಂದ ಮೂರ್ತಿ ಶಿಕ್ಷಣ ರತ್ನ ದತ್ತಿ ಪ್ರಶಸ್ತಿ”
(ಈ ದತ್ತಿಗೆ ಮಾತ್ರ ಶಿಕ್ಷಕ ಸಾಹಿತಿಗಳಿಗೆ ಅವಕಾಶ ಇರುತ್ತದೆ)
