ರಾಣೆಬೆನ್ನೂರು : ಜನಪ್ರಿಯ ಮಾಧ್ಯಮ ಸಂಸ್ಥೆಯಾದ ಜನಪರ ವಾಣಿ ಡಿಜಿಟಲ್ ಮೀಡಿಯಾ ಹಾಗೂ ಜನಪರ ವಾಣಿ ಪ್ರಕಾಶನದ ವತಿಯಿಂದ ಸಾಹಿತ್ಯಾಸಕ್ತರಿಗಾಗಿ ಹೊಸದೊಂದು ವಿನೂತನ ಯೋಜನೆಗೆ ಚಾಲನೆ ನೀಡಲಾಗಿದ್ದು, ಯುವ ಕವಿ ಮತ್ತು ಬರಹಗಾರರಿಂದ ‘ನೊಂದ ಹೃದಯಗಳು’ ಡಿಜಿಟಲ್ ಕವನ ಸಂಕಲನಕ್ಕೆ ಕವನಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಕವಿಗಳು ‘ನೊಂದ ಹೃದಯಗಳು’ ಕವನ ಸಂಕಲನಕ್ಕೆ ವಿಷಯಕ್ಕೆ ಅನುಗುಣವಾಗಿರುವ 16ರಿಂದ 18 ಸಾಲುಗಳ ಒಳಗಿನ ತಮ್ಮ ಸ್ವರಚಿತ ಕವನಗಳನ್ನು ‘ನುಡಿ’ ಅಥವಾ ‘ಟಿಡಿಪಿ’ (TDP) ತಂತ್ರಾಂಶದಲ್ಲಿ ಟೈಪ್ ಮಾಡಿ ಕಳುಹಿಸಬೇಕು. ಕವನದ ಜೊತೆಗೆ ಕವಿಯ ಹೆಸರು, ಊರು, ಜಿಲ್ಲೆ, ಭಾವಚಿತ್ರ, ಮೊಬೈಲ್ ಹಾಗೂ ವಾಟ್ಸಪ್ ಸಂಖ್ಯೆಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.
ಪ್ರಮುಖ ನಿಯಮಗಳು : ಈ ಹಿಂದೆ ಯಾವುದೇ ಪತ್ರಿಕೆ, ಮಾಧ್ಯಮ, ವಾಟ್ಸಪ್ ಗ್ರೂಪ್ಗಳಲ್ಲಿ ಪ್ರಕಟವಾದ ಅಥವಾ ಆನ್ಲೈನ್ ಸ್ಪರ್ಧೆಗಳಿಗೆ ಕಳುಹಿಸಿದ ಕವನಗಳನ್ನು ಕಳುಹಿಸುವಂತಿಲ್ಲ. ಕಡ್ಡಾಯವಾಗಿ ಹೊಸದಾಗಿ ರಚಿಸಿದ ಕವನಗಳಿಗೆ ಮಾತ್ರ ಅವಕಾಶವಿರುತ್ತದೆ. ಆಸಕ್ತರು ತಮ್ಮ ಕವನಗಳನ್ನು ಜನಪರ ವಾಣಿ ಪ್ರಕಾಶನದ ಅಧಿಕೃತ ವಾಟ್ಸಪ್ ಸಂಖ್ಯೆ 9019031850ಕ್ಕೆ ಕಳುಹಿಸಿಕೊಡಬಹುದು. ಸ್ವೀಕೃತವಾದ ಎಲ್ಲಾ ಕವನಗಳನ್ನು ಒಟ್ಟುಗೂಡಿಸಿ, ಅತ್ಯಂತ ಆಕರ್ಷಕವಾದ ಡಿಜಿಟಲ್ ಪಿಡಿಎಫ್ (PDF) ಕವನ ಸಂಕಲನವನ್ನು ಸಿದ್ಧಪಡಿಸಲಾಗುವುದು. ತದನಂತರ ಭಾಗವಹಿಸಿದ ಎಲ್ಲಾ ಕವಿಗಳಿಗೆ ವಾಟ್ಸಪ್ ಮೂಲಕವೇ ಅಭಿನಂದನಾ ಪತ್ರವನ್ನು ತಲುಪಿಸಲಾಗುವುದು ಎಂದು ಸಂಸ್ಥೆಯ ಶ್ರೀಮತಿ ಸುನೀತಾ ಜಿ. ಸಂಗಮ ತಿಳಿಸಿದ್ದಾರೆ.
