Subscribe to Updates

    Get the latest creative news from FooBar about art, design and business.

    What's Hot

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮಂಚಿಯ ಲಯನ್ಸ್ ಸೇವಾ ಮಂದಿರದಲ್ಲಿ ‘ಕಲಾಧಾರಾ – 8’ ನೃತ್ಯ ಕಾರ್ಯಕ್ರಮ
    Bharathanatya

    ಮಂಚಿಯ ಲಯನ್ಸ್ ಸೇವಾ ಮಂದಿರದಲ್ಲಿ ‘ಕಲಾಧಾರಾ – 8’ ನೃತ್ಯ ಕಾರ್ಯಕ್ರಮ

    April 23, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಚಿ : ಲಯನ್ಸ್ ಸೇವಾ ಟ್ರಸ್ಟ್ (ರಿ.) ಮಂಚಿ ಹಾಗೂ ಲಯನ್ಸ್ ಕ್ಲಬ್ ಕೊಳ್ನಾಡು – ಸಾಲೆತ್ತೂರು ಇವರ ಸಹಯೋಗದಲ್ಲಿ ವಸುಧಾರಾ ಕಲಾಕೇಂದ್ರ ಬೋಳಂತೂರು – ಮಂಚಿ ವತಿಯಿಂದ ಏರ್ಪಡಿಸಲಾದ ‘ಕಲಾಧಾರಾ – 8’ ನೃತ್ಯ ಕಾರ್ಯಕ್ರಮವು ದಿನಾಂಕ 19 ಏಪ್ರಿಲ್ 2026ರಂದು ಮಂಚಿಯ ಲಯನ್ಸ್ ಸೇವಾ ಮಂದಿರದಲ್ಲಿ ಯಶಸ್ವಿಯಾಗಿ ನೆರವೇರಿತು.

    ಕಾರ್ಯಕ್ರಮದಲ್ಲಿ ವಿದುಷಿ ವಸುಧಾ ಜಿ.ಎನ್. ಇವರ ಶಿಷ್ಯೆ ಹಾಗೂ ಗುರು ವಿದ್ವಾನ್ ಬಿ. ದೀಪಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿಯೂ ತರಬೇತಿ ಪಡೆದ ಕುಮಾರಿ ಸಂಗೀತಾ ಇವರು ತಮ್ಮ ಮೊದಲ ಏಕ ನೃತ್ಯ ಕಾರ್ಯಕ್ರಮವನ್ನು ನೀಡುವ ಮೂಲಕ ಗಮನ ಸೆಳೆದರು. ಇದೇ ಸಂದರ್ಭದಲ್ಲಿ, ವಸುಧಾರಾ ಕಲಾಕೇಂದ್ರದಿಂದ ಈ ಸರಣಿಯಲ್ಲಿ ವೇದಿಕೆಯೇರಿದ ಮೊದಲ ಕಲಾವಿದೆ ಎಂಬ ವಿಶೇಷತೆಯನ್ನೂ ಅವರು ಪಡೆದುಕೊಂಡರು. ಈ ಮೂಲಕ ‘ಕಲಾಧಾರಾ’ ಸರಣಿಯನ್ನು ಆರಂಭಿಸಿದ ಉದ್ದೇಶವೂ ಸಾರ್ಥಕಗೊಂಡಿತು.

    ಪುಷ್ಪಾಂಜಲಿ (ಅಮೃತವರ್ಷಿಣಿ ರಾಗ), ವಸಂತ ರಾಗದ ಆದಿತಾಳದಲ್ಲಿ ಜತಿಸ್ವರಂ, ಕಲ್ಯಾಣಿ ರಾಗದ ಆದಿತಾಳದಲ್ಲಿ ದೇವಿ ಪಾರ್ವತಿ ಕುರಿತ ಕೃತಿ, ಖಮಾಚ್ ರಾಗದ ಮಿಶ್ರ ಛಾಪು ತಾಳದ ಜಾವಳಿ ಹಾಗೂ ರಾಗಮಾಲಿಕೆಯ ಆದಿತಾಳದ ತಿಲ್ಲಾನ ಇತ್ಯಾದಿ ವಿನ್ಯಾಸಬದ್ಧ ಪ್ರದರ್ಶನಗಳ ಮೂಲಕ ತಮ್ಮ ನೃತ್ಯ ಕೌಶಲ್ಯವನ್ನು ಸಮರ್ಥವಾಗಿ ಪ್ರದರ್ಶಿಸಿದರು. ಅವರ ಲಯಬದ್ಧತೆ, ಅಂಗಿಕಾಭಿನಯ ಹಾಗೂ ಭಾವವ್ಯಕ್ತತೆ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.

    ಅಭ್ಯಾಗತರಾಗಿ ಆಗಮಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿ ಶ್ರೀಮತಿ ಶಾರದಾ ಎಸ್. ರಾವ್ ಇವರು ಕಲಾವಿದೆಯ ಸಾಧನೆಯನ್ನು ಪ್ರಶಂಸಿಸಿ, ಇಂತಹ ವೇದಿಕೆಗಳು ಯುವ ಪ್ರತಿಭೆಗಳಿಗೆ ಪ್ರೇರಣೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಬೆಂಗಳೂರು ಮೂಲದ ಫ್ರೀಲಾನ್ಸರ್ ಶ್ರೀಮತಿ ವಿಜೇತಾ ಎಂ. ಕಾರ್ತಿಕ್ ಇವರು ನೃತ್ಯ ಪ್ರದರ್ಶನದ ಶೈಲಿ, ನೃತ್ಯದ ಆಹಾರ್ಯ ಹಾಗೂ ಶಿಸ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟುವಾಂಗವನ್ನು ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು ನಿರ್ವಹಿಸಿದರೆ, ಹಾಡುಗಾರಿಕೆಯನ್ನು ವಿದುಷಿ ಪ್ರೀತಿಕಲಾ ಪುತ್ತೂರು, ಮೃದಂಗವನ್ನು ಶ್ರೀಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಹಾಗೂ ಪಿಟೀಲನ್ನು ವಿದ್ವಾನ್ ಪ್ರಣೀತ್ ಬಳ್ಳಕುರಾಯ ಉಡುಪಿ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಕಲಾರಸಿಕರು ನೃತ್ಯ ಪ್ರದರ್ಶನವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.

    baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleರಾಮಕೃಷ್ಣ ಮಠದಲ್ಲಿ ‘ದಾಸಲಹರಿ’ ಹರಿದಾಸರ ಕೃತಿ ಕೀರ್ತನೆಗಳ ಗಾಯನ | ಏಪ್ರಿಲ್ 26
    Next Article ಕನ್ನಡ ಭವನ ಪ್ರಕಾಶನ ವಾರ್ಷಿಕೋತ್ಸವದಲ್ಲಿ ಕೃತಿ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ
    roovari

    Add Comment Cancel Reply


    Related Posts

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026

    ಉತ್ಕೃಷ್ಟವಾದ ವೇಣುವಾದನ ಕಚೇರಿ ‘ರಾಗರತ್ನ ಮಾಲಿಕೆ-49’

    June 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.