Subscribe to Updates

    Get the latest creative news from FooBar about art, design and business.

    What's Hot

    ಅಂಬುರುಹ ಯಕ್ಷ ಕಲಾ ಕೇಂದ್ರದ ಅಷ್ಟಮ ಸಂಭ್ರಮ | ಜುಲೈ 19

    July 18, 2026

    ಪ್ರೇಕ್ಷಕರ ಮನಮುದಗೊಳಿಸಿದ ‘ಮಾರಿಕಾಡು’ ನಾಟಕ ಪ್ರದರ್ಶನ

    July 18, 2026

    ಮಂಗಳೂರಿನ ಡಾನ್‌ಬಾಸ್ಕೊ ಹಾಲ್‌ನಲ್ಲಿ ‘ಅಂಕುರಾ’ 2ನೇ ಆವೃತ್ತಿ ಪ್ರಸ್ತುತಿ | ಜುಲೈ 26

    July 18, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮಲ್ಪೆ ವಾಸುದೇವ ಸಾಮಗ ಸಂಸ್ಮರಣೆಯಲ್ಲಿ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ 
    Yakshagana

    ಮಲ್ಪೆ ವಾಸುದೇವ ಸಾಮಗ ಸಂಸ್ಮರಣೆಯಲ್ಲಿ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ 

    November 14, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತೆಕ್ಕಟ್ಟೆ ಹಯಗ್ರೀವದಲ್ಲಿ ‘ಸಂಯಮಂ ಯಕ್ಷ ಮಹಿಳಾ ಬಳಗ’ ಕೋಟೇಶ್ವರ ಇವರ ನೇತೃತ್ವದಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇವರ ಸಹಯೋಗದೊಂದಿಗೆ ದಿನಾಂಕ 08-11-2023ರಂದು ನಡೆದ ‘ಮಲ್ಪೆ ವಾಸುದೇವ ಸಾಮಗರ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ದೇವದಾಸ ರಾವ್ ಕೂಡ್ಲಿ ಹಾಗೂ ಭರತನಾಟ್ಯ ಹಾಗೂ ಯಕ್ಷ ಕಲಾವಿದೆ ಭಾಗೀರಥಿ ರಾವ್ ಅವರನ್ನು ಸಮ್ಮಾನಿಸಲಾಯಿತು.

    ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಯಕ್ಷಗಾನ ಕಲಾವಿದ ಗೋಪಾಲಕೃಷ್ಣ ಶೆಟ್ಟಿ ಕೋಟೇಶ್ವರ “ತಾಳಮದ್ದಳೆ ಕ್ಷೇತ್ರದಲ್ಲಿ ಮೇಳ ಕಟ್ಟಿ ಮುನ್ನಡೆಸಿ ಸಾಧಿಸಿದ ಮೇರು ಕಲಾವಿದರು ಸಾಮಗರು. ಕಲೆ ಉಳಿಯುವುದು ಕಲಾವಿದರಿಂದ. ನಲಿದಾಡುವ ಜ್ಙಾನಕೋಶದಂತಿದ್ದ ವಾಸುದೇವ ಸಾಮಗರಿಗೆ ವಿದ್ವತ್ತು, ಅಭಿವ್ಯಕ್ತಿ ಮೂಲ ಬಂಡವಾಳ. ಪರಂಪರೆಗೆ ಅಂಟಿಕೊಂಡವರಲ್ಲ ಸಾಮಗರು. ಸಂಪ್ರದಾಯದ ಜೊತೆಗೆ ಹೊಸ ಹೊಸ ಆಯಾಮಗಳನ್ನು ಹುಡುಕಿ ಅನುಷ್ಠಾನಕ್ಕೆ ತಂದ ಮೇರು ಕಲಾವಿದರು. ಯಕ್ಷರಂಗದ ಪರಿಪೂರ್ಣ ಕಲಾವಿದರಾದ ಸಾಮಗರು ವ್ಯಾಕರಣ ಜ್ಙಾನ ಹೊಂದಿ, ಅನೇಕಾನೇಕ ಕಲಾವಿದರಿಗೆ ದಿಗ್ದರ್ಶನ ನೀಡಿ ಉಳಿದ ಕಲಾವಿದರನ್ನೂ ಅತ್ಯಂತ ಎತ್ತರಕ್ಕೆ ಏರಿಸಬಲ್ಲ ಶ್ರೇಷ್ಠ ಕಲಾವಿದರು. ಯಕ್ಷಗಾನ ಕ್ಷೇತ್ರ ಒಂದರ್ಥದಲ್ಲಿ ಅವರನ್ನು ಕಳೆದುಕೊಂಡು ಬಡವಾಗಿದೆ” ಎಂದು ಸಂಸ್ಮರಣಾ ಮಾತನ್ನಾಡಿದರು.

    ಸಮ್ಮಾನಿತರಾದ ಪ್ರಾಚಾರ್ಯ ದೇವದಾಸ ರಾವ್ ಕೂಡ್ಲಿ ಮಾತನ್ನಾಡಿ, “ಮಲ್ಪೆ ವಾಸುದೇವ ಸಾಮಗರು ಪ್ರತೀ ನಿತ್ಯವೆಂಬಂತೆ ಕೇಂದ್ರಕ್ಕೆ ಭೇಟಿ ನೀಡಿ ನಮ್ಮ ತರಗತಿಯನ್ನು ಗಮನಿಸುತ್ತಾ ಇದ್ದವರು. ಇಂದು ಅವರ ಸಂಸ್ಮರಣೆಯಂದು ನಮ್ಮನ್ನು ಗೌರವಿಸುವಾಗ ಅವರೇ ಬಂದು ಸಂಮಾನಿಸಿದಷ್ಟು ಸಂತೋಷ ತಂದಿದೆ. ಜವಾಬ್ದಾರಿಯನ್ನು ಹೆಚ್ಚಿಸಿದ ಗೌರವಕ್ಕೆ ಬದ್ಧನಾಗಿದ್ದೇನೆ” ಎಂದು ಹೇಳಿದರು.

    ಗುರುಗಳಾದ ಲಂಬೋದರ ಹೆಗಡೆ, ಭಾಗ್ಯಲಕ್ಷ್ಮೀ, ಧನ್ಯ, ಮೀರಾ ವಿ. ಸಾಮಗ, ನಾಗರತ್ನ ಹೇರ್ಳೆ ಇನ್ನಿತರರು ಉಪಸ್ಥಿತರಿದ್ದರು. ಕು. ಆರಬಿ ಸಾಮಗ ಪ್ರಾರ್ಥಿಸಿ, ಚಂದ್ರಿಕಾ ಧನ್ಯ ಸ್ವಾಗತಿಸಿ, ಶ್ಯಾಮಲಾ ವರ್ಣ ಸಮ್ಮಾನ ಪತ್ರ ವಾಚಿಸಿದರು. ಸುಪ್ರಿತಾ ಎಸ್. ಪುರಾಣಿಕ ಧನ್ಯವಾದಗೈದರು. ದೀಪಿಕಾ ಪಿ. ಸಾಮಗ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಳಿಕ ಮಹಿಳಾ ಕಲಾವಿದರಿಂದ ಯುಗಳ ಸಂವಾದ “ಸ್ನೇಹ ಬಂಧ” ಹಾಗೂ ಯಶಸ್ವೀ ಕಲಾವೃಂದದ ಚಿಣ್ಣರಿಂದ ಯಕ್ಷಗಾನ “ದ್ರೌಪದಿ ಪ್ರತಾಪ” ರಂಗದಲ್ಲಿ ಪ್ರಸ್ತುತಿಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರದಲ್ಲಿ ‘ವರ್ಷ ಸಂಭ್ರಮ-19’
    Next Article ಕಾಲೇಜು ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆಯ ‘ಬಹುಮಾನ ವಿತರಣಾ ಸಮಾರಂಭ’ | ನವೆಂಬರ್ 17ರಂದು
    roovari

    Add Comment Cancel Reply


    Related Posts

    ಅಂಬುರುಹ ಯಕ್ಷ ಕಲಾ ಕೇಂದ್ರದ ಅಷ್ಟಮ ಸಂಭ್ರಮ | ಜುಲೈ 19

    July 18, 2026

    ‘ಯಕ್ಷಾಷಾಡ’ ಯಕ್ಷಗಾನ ತಾಳಮದ್ದಲೆ ಸರಣಿ ಕಾರ್ಯಕ್ರಮದ ಪ್ರಾರಂಭೋತ್ಸವ

    July 18, 2026

    ಮಲ್ಲ ಕ್ಷೇತ್ರದಲ್ಲಿ ‘ಬಲಿಪ ಭಾಗವತ ಪ್ರಶಸ್ತಿ’ ಪ್ರದಾನ ಸಮಾರಂಭ | ಜುಲೈ 19

    July 17, 2026

    ‘ಯಕ್ಷಸಾಧಕ’ ಪ್ರಶಸ್ತಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆ

    July 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.