Subscribe to Updates

    Get the latest creative news from FooBar about art, design and business.

    What's Hot

    ಮೈಸೂರು ನಟನ ರಂಗಶಾಲೆಯಲ್ಲಿ ‘ಸಂಜೆ ಹಾಡು’ ನಾಟಕ | ಜೂನ್ 14

    June 12, 2026

    ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಯುಜಿ ಡಿಪ್ಲೋಮಾ – ಡ್ರಾಮಾ ಕೋರ್ಸ್

    June 12, 2026

    ನಾಟಕ ವಿಮರ್ಶೆ | ‘ಸ್ವಾತಂತ್ರ್ಯದ ಓಟ’ ಇತಿಹಾಸ, ಮಾನವೀಯತೆ ಮತ್ತು ರಂಗಸೌಂದರ್ಯದ ಅಪೂರ್ವ ಸಂಗಮ

    June 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮಕ್ಕಳಿಗಾಗಿ ‘ಕಾದಂಬರಿ ರಸಪ್ರಶ್ನೆ ಸ್ಪರ್ಧೆ’ | ಏಪ್ರಿಲ್ 30
    Competition

    ಮಕ್ಕಳಿಗಾಗಿ ‘ಕಾದಂಬರಿ ರಸಪ್ರಶ್ನೆ ಸ್ಪರ್ಧೆ’ | ಏಪ್ರಿಲ್ 30

    March 24, 2026Updated:March 25, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಂಚುಗಾರನಹಳ್ಳಿ ಸತೀಶ್ ಅವರು ರಚಿಸಿದ ‘ಭೈರ’ ಮಕ್ಕಳ ಕಾದಂಬರಿಯು ಮನೆ ಮಾತಾಗಿದೆ. ಈ ಕಾದಂಬರಿಯು ವಿಶೇಷ ಕಥಾವಸ್ತುವನ್ನುಳ್ಳ ಕಾದಂಬರಿಯಾಗಿದೆ. ಬಳಸಿದ ಭಾಷೆ ಸರಳವಾಗಿದ್ದು, ಎಲ್ಲ ವಯೋಮಾನದ ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ. 74 ಪುಟಗಳ ಕತೆಯನ್ನು ಹೊಂದಿದ್ದು, ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಜೊತೆಗೆ ಇನ್ನೊಂದು ವಿಶೇಷ ಏನೆಂದರೆ ಈಗಾಗಲೇ ಈ ‘ಭೈರ’ ಕಾದಂಬರಿಯು ಪ್ರತಿಷ್ಠಿತ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಶಿವಮೊಗ್ಗದ ಕರ್ನಾಟಕ ಸಂಘದಿಂದ 2024ನೇ ಸಾಲಿನ ‘ನಾ. ಡಿಸೋಜ ಮಕ್ಕಳ ಸಾಹಿತ್ಯ ಪ್ರಶಸ್ತಿ’, ಬೆಳಗಾವಿಯ ಹೊಂಬೆಳಕು ಪ್ರತಿಷ್ಠಾನದಿಂದ ‘ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ’ ಮತ್ತು ಬೆಂಗಳೂರಿನ ಕರ್ನಾಟಕ ಸಾಹಿತ್ಯ ಪರಿಷತ್ತು ವತಿಯಿಂದ 2024ನೇ ಸಾಲಿನ ‘ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸ ರಾವ್ ಪುಸ್ತಕ ದತ್ತಿ ಪ್ರಶಸ್ತಿ’.

    ರಸಪ್ರಶ್ನೆ ಸ್ಪರ್ಧೆಯ ನಿಯಮಗಳು :
    * ಸ್ಪರ್ಧೆಯಲ್ಲಿ ಭಾಗವಹಿಸಲು ಮಕ್ಕಳ ವಯಸ್ಸಿನ ಮಿತಿ 6ರಿಂದ 16 ವರ್ಷ ಮಾತ್ರ.
    * 120-00 ಹಣ ಸಂದಾಯ ಮಾಡಿ ‘ಭೈರ’ ಮಕ್ಕಳ ಕಾದಂಬರಿ ಪುಸ್ತಕವನ್ನು ಪಡೆಯಬೇಕು.
    * ಪುಸ್ತಕ ಓದಲು 15ರಿಂದ 20 ದಿನಗಳ ಸಮಯದ ಅವಕಾಶ ಇರುತ್ತದೆ.
    * ಪುಸ್ತಕಗಳನ್ನು ತೆಗೆದುಕೊಳ್ಳಲು ಕೊನೆಯ ದಿನಾಂಕ 20 ಏಪ್ರಿಲ್ 2026.
    * ಸ್ಪರ್ಧೆ ನಡೆಯುವ ದಿನಾಂಕ 30 ಏಪ್ರಿಲ್ 2026.
    * ಮೊಬೈಲ್ ಆಪ್ ಮೂಲಕ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರಶ್ನೆಗಳು ಭೈರ ಕಾದಂಬರಿಯನ್ನು ಕುರಿತಾಗಿಯೇ ಇರುತ್ತವೆ. ನೀವು ಉತ್ತರಿಸುವಾಗ ಸಮಯ ಕೂಡ ರೆಕಾರ್ಡ್ ಆಗುವುದರಿಂದ ಸ್ಪರ್ಧೆ ಪ್ರಾಮಾಣಿಕವಾಗಿಯೇ ನಡೆಯುತ್ತದೆ.
    * ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಎಂದು ನಾಲ್ಕು ಬಹುಮಾನಗಳನ್ನು ನೀಡಲಾಗುತ್ತದೆ.
    * ಪ್ರಥಮ ಬಹುಮಾನ ರೂ.750=00, ದ್ವಿತೀಯ ಬಹುಮಾನ ರೂ.600=00, ತೃತೀಯ ಬಹುಮಾನ ರೂ.450=00, ಸಮಾಧಾನಕರ ರೂ.300=00.
    * ಭಾಗವಹಿಸುವ ಸ್ಪರ್ಧಿಯು ಮೊದಲೇ ನಮಗೆ ತಿಳಿಸಿದಂತಹ ಫೋನ್ ನಂಬರ್ ದಿಂದ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸುವುದು.
    * ಒಂದು ಸಾರಿ ಉತ್ತರಗಳನ್ನು ಸಲ್ಲಿಸಿದ ನಂತರ ಮತ್ತೊಮ್ಮೆ ಅವಕಾಶವಿಲ್ಲ.
    * ಪ್ರಶ್ನೆಗಳು ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಸರಳವಾಗಿರುತ್ತವೆ.
    * ಫಲಿತಾಂಶ ಘೋಷಣೆ ದಿನಾಂಕ 05 ಮೇ 2026.
    * ಬಹುಮಾನದ ಹಣವನ್ನು ಫೋನ್ ಪೇ ಮಾಡಲಾಗುವುದು. ಜೊತೆಗೆ ಆಕರ್ಷಕ ಪ್ರಮಾಣ ಪತ್ರ ನೀಡಲಾಗುವುದು.
    * ರಸಪ್ರಶ್ನೆಯ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಕೊಡಲಾಗುವುದು.
    * ಸಂಪರ್ಕಿಸಿರಿ : 9945095539 ಮತ್ತು 9972932126.

    ಆದಕಾರಣ ತಾವುಗಳು ತಮ್ಮ ಮನೆಯ ಮಕ್ಕಳಿಗೆ ಕಾದಂಬರಿ ಓದಿಸಿ. ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ. ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ದೂರವಾಣಿಯ ಮೂಲಕ ಸಂಪರ್ಕಿಸಿ. ಸ್ಪರ್ಧೆಯ ಆಯೋಜಕರು ಭುವನೇಶ್ವರಿ ರು. ಅಂಗಡಿ ನರಗುಂದ (9945095539)

    baikady competition Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೇಷ್ಠ ನಟ ನಿರ್ದೇಶಕ ಹಾರಾಡಿ ಬಿ.ಎಸ್. ರಾಮ್ ಶೆಟ್ಟಿಯವರಿಗೆ ‘ಮಲಬಾರ್ ವಿಶ್ವ ರಂಗ ಪುರಸ್ಕಾರ – 2026’
    Next Article ಕುದ್ರೋಳಿಯಲ್ಲಿ ‘ಬಳ್ಕೂರು ಯಕ್ಷ ಕುಸುಮ’ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ
    roovari

    Add Comment Cancel Reply


    Related Posts

    ಮೈಸೂರು ನಟನ ರಂಗಶಾಲೆಯಲ್ಲಿ ‘ಸಂಜೆ ಹಾಡು’ ನಾಟಕ | ಜೂನ್ 14

    June 12, 2026

    ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಯುಜಿ ಡಿಪ್ಲೋಮಾ – ಡ್ರಾಮಾ ಕೋರ್ಸ್

    June 12, 2026

    ನಾಟಕ ವಿಮರ್ಶೆ | ‘ಸ್ವಾತಂತ್ರ್ಯದ ಓಟ’ ಇತಿಹಾಸ, ಮಾನವೀಯತೆ ಮತ್ತು ರಂಗಸೌಂದರ್ಯದ ಅಪೂರ್ವ ಸಂಗಮ

    June 12, 2026

    ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್ ಪ್ರಶಸ್ತಿಗೆ ಲೇಖಕಿಯ ಆಯ್ಕೆ

    June 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.