Subscribe to Updates

    Get the latest creative news from FooBar about art, design and business.

    What's Hot

    ನಾಮ ಸಂಕೀರ್ತನ (ಭಜನೆ) ಕಾರ್ಯಾಗಾರ, ಸ್ಪರ್ಧೆ ಮತ್ತು ಸಂಗೀತ ಕಛೇರಿ | ಜೂನ್ 18ರಿಂದ

    June 15, 2026

    ಡಾ. ಟಿ.ಎಂ.ಎ. ಪೈ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರಕ್ಕೆ ಆಯ್ಕೆ

    June 15, 2026

    ಕನಕದಾಸ ಸಾಹಿತ್ಯದ ತುಳು ಅನುವಾದ ಕೃತಿಗಳ ಅವಲೋಕನ

    June 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕವನ | ತೊರೆದು ಜೀವಿಸಬಹುದೇ ?
    Literature

    ಕವನ | ತೊರೆದು ಜೀವಿಸಬಹುದೇ ?

    October 18, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಧುರ ಸ್ವರಾಲಾಪನೆಯ ಏರಿಳಿತಗಳು
    ಜೀವ ಜಂಜಾಟಗಳ ನಿನ್ನೆ ನಾಳೆಗಳಂತೆ
    ಮೀಟುವ ತಂತಿಗೆ ನಾದ ಮಿಡಿಯುವ ಹಾಗೆ
    ಎದೆಯ ತುಡಿತಕೆ ನಾಡಿ ಮಿಡಿಯುತ್ತದೆ ;

    ನಾದ ತಂತುಗಳಿಗೆ ಸ್ಪಂದಿಸದ ತಾಳ
    ಸ್ವರಕೀರ್ತನೆಯ ದಿಕ್ಕು ತಪ್ಪಿಸುವ ಹಾಗೆ
    ಸ್ಪರ್ಶಾನುಭವ ಸೂಕ್ಷ್ಮವರಿಯದ ಮನಸು
    ಅಂತರ್ಭಾವದ ಹರಿವಿಗೆ ಮುಳುವಾಗುತ್ತದೆ ;

    ಸ,ರಿ,ಗ,ಮ,,,,ನಾದ ತರಂಗಿಣಿಯ ಸುರಭಿ
    ಶ್ರೋತೃಗಳ ಹೃನ್ಮನಗಳ ತಣಿಸುವ ಹಾಗೆ
    ಸ್ನೇಹ ವಾತ್ಸಲ್ಯದೊಲುಮೆಯ ನುಡಿಗಳು
    ಬೆಸೆದ ಸಂಬಂಧಗಳಿಗೆ ಮುದ ನೀಡುತ್ತವೆ ;

    ಲಯ ತಪ್ಪಿದ ರಾಗ ಭಾವಗಳ ಹಿಮ್ಮೇಳದಲಿ
    ಸ್ವರ ಸಂಕುಲಗಳ ಕ್ಷಣ ಭಂಗುರವಾದ ಹಾಗೆ
    ಸದ್ಭಾವನೆಯಿಲ್ಲದ ಆಡಂಬರದ ಮಾತುಗಳು
    ಹಸಿರು ಹೊದಿಕೆಯ ಹಾದಿಯನು ಬರಡಾಗಿಸುತ್ತವೆ ;

    ಉಚ್ಛ ಸ್ಥಾಯಿಯ ಮಧುರ ಗಾನ ಸುರಭಿಗೆ
    ಮಧ್ಯ ಸ್ಥಾಯಿಯ ವಾದ್ಯ ಇಂಪುಣಿಸುವ ಹಾಗೆ
    ಉತ್ಸಾಹದ ಹೆಜ್ಜೆಗಳಿಗೆ ಸ್ಫೂರ್ತಿಯ ಹೆಗಲು
    ಸುಪ್ತ ಸಂವೇದನೆಗಳನು ಚುರುಕಾಗಿಸುತ್ತವೆ ;

    ಬದುಕು ಸಂಗೀತವಾದಾಗ ಹೆಜ್ಜೆ ಪಲ್ಲವಿಸುತ್ತದೆ
    ಮಿಡಿವ ನಾಡಿಯ ಶೃತಿಲಯಗಳು ನರ್ತಿಸುತ್ತವೆ
    ತಾಳ ತಪ್ಪಿದ ಜೀವನದ ಹೆಗ್ಗುರುತುಗಳ ಆಳ
    ಸುಶ್ರಾವ್ಯ ನಾದತರಂಗಗಳನು ಅಳಿಸಿಹಾಕುತ್ತವೆ ;

    ದಿಗಂತದೆಡೆ ಸಾಗುವ ದೀರ್ಘ ಪಯಣದಲಿ
    ವೈರುಧ್ಯಗಳ ಮೈಲಿಗಲ್ಲುಗಳು ಸಾವಿರ
    ತೊರೆದು ಜೀವಿಸಬಹುದೇ ರಾಗ ಸಂಗಮದಲ್ಲಿ ?

    ನಾ ದಿವಾಕರ

    baikady Literature poem roovari
    Share. Facebook Twitter Pinterest LinkedIn Tumblr WhatsApp Email
    Previous Articleಬೇಕಲ್ ಗೋಕುಲಂ ಗೋಶಾಲೆಯಿಂದ ಸಂಗೀತಜ್ಞರಿಗೆ ಪ್ರಶಸ್ತಿ ಪ್ರದಾನ | ನವೆಂಬರ್ 01
    Next Article ಆಳ್ವಾಸ್ ಕಾಲೇಜಿನಲ್ಲಿ ಡಾ. ಎಸ್.ಎಲ್. ಭೈರಪ್ಪರವರಿಗೆ ‘ನುಡಿನಮನ’ ಕಾರ್ಯಕ್ರಮ
    roovari

    Add Comment Cancel Reply


    Related Posts

    ನಾಮ ಸಂಕೀರ್ತನ (ಭಜನೆ) ಕಾರ್ಯಾಗಾರ, ಸ್ಪರ್ಧೆ ಮತ್ತು ಸಂಗೀತ ಕಛೇರಿ | ಜೂನ್ 18ರಿಂದ

    June 15, 2026

    ಡಾ. ಟಿ.ಎಂ.ಎ. ಪೈ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರಕ್ಕೆ ಆಯ್ಕೆ

    June 15, 2026

    ಕನಕದಾಸ ಸಾಹಿತ್ಯದ ತುಳು ಅನುವಾದ ಕೃತಿಗಳ ಅವಲೋಕನ

    June 15, 2026

    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ರಾಗರತ್ನ ಮಾಲಿಕೆ- 50 ಸರಣಿ ಸಂಗೀತ ಕಾರ್ಯಕ್ರಮ | ಜೂನ್ 21

    June 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.