Subscribe to Updates

    Get the latest creative news from FooBar about art, design and business.

    What's Hot

    ಸಾಂಪ್ರದಾಯಿಕ ಭಜನಾ ಸ್ಪರ್ಧೆಯಲ್ಲಿ ವಿಶ್ವಕರ್ಮ ಕಲಾ ಪರಿಷತ್ತಿನ ತಂಡ ಪ್ರಥಮ

    June 10, 2026

    ತುಳು ಭವನದಲ್ಲಿ ತುಳುವಿನಲ್ಲಿ ಕನಕದಾಸರ ಕಾವ್ಯ- ಕೀರ್ತನೆ ಸಂವಾದ | ಜೂನ್ 13

    June 10, 2026

    ‘ನಾನೂ ಕಾಫಿರ’ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಜೂನ್ 11

    June 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ‘ಹವ್ಯಕ ವಿಶೇಷ ಪ್ರಶಸ್ತಿ’ ಪ್ರದಾನ
    Awards

    ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ‘ಹವ್ಯಕ ವಿಶೇಷ ಪ್ರಶಸ್ತಿ’ ಪ್ರದಾನ

    April 29, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಶ್ರೀ ಅಖಿಲ ಹವ್ಯಕ ಮಹಾಸಭಾದ ವತಿಯಿಂದ ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ಹಮ್ಮಿಕೊಂಡಿದ್ದ 82ನೇ ವರ್ಷದ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ವಾರ್ಷಿಕ ‘ಹವ್ಯಕ ವಿಶೇಷ ಪ್ರಶಸ್ತಿ’ ಮತ್ತು ಪಲ್ಲವ ಪುರಸ್ಕಾರ ಪ್ರದಾನ ಸಮಾರಂಭವು ದಿನಾಂಕ 27 ಏಪ್ರಿಲ್ 2025ರಂದು ನಡೆಯಿತು.

    ಉದ್ಯಮಿ ಮತ್ತು ಸಮಾಜ ಸೇವಕ ಜಿ.ವಿ. ಭಟ್ ಗೋರೆ ಇವರಿಗೆ ‘ಹವ್ಯಕ ವಿಭೂಷಣ’ ಪ್ರಶಸ್ತಿ, ವಿದ್ವಾಂಸ ಮತ್ತು ಭಾಷಾ ತಜ್ಞರಾದ ಪಾದೇಕಲ್ಲು ವಿಷ್ಣು ಭಟ್ಟ, ಶಿಕ್ಷಣ ಮತ್ತು ಸಂಶೋಧಕ ಎಸ್.ಎನ್. ಹೆಗಡೆ, ಅಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪರಮೇಶ್ವರ ಹೆಗಡೆ ಶಿರಸಿ ಇವರಿಗೆ ‘ಹವ್ಯಕ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾವಿದ ಸಂಜಯ ಬೆಳೆಯೂರು, ನೃತ್ಯ ಕಲಾವಿದೆ ಕಾವ್ಯಾ ಜಿ. ರಾವ್, ಸಂಗೀತ ಕಲಾವಿದ ಕೆ.ಜೆ. ದಿಲೀಪ್ ಇವರಿಗೆ ‘ಹವ್ಯಕ ಶ್ರೀ’ ಪ್ರಶಸ್ತಿ, ಹವ್ಯಕ ಮಾಸ ಪತ್ರಿಕೆಯ ನಿರ್ದೇಶಕ ಹಾಗೂ ಸಂಚಾಲಕ ನಾರಾಯಣ ಭಟ್ ಹುಳೇಗಾರು ‘ಹವ್ಯಕ ಸೇವಾ ಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಸಮ್ಮಾನಿಸಲಾಯಿತು. ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ‘ಪಲ್ಲವ’ ಪ್ರಶಸ್ತಿಯನ್ನು ನೀಡಲಾಯಿತು. ನಿವೃತ್ತ ನ್ಯಾಯಾಧೀಶ ಕುಕ್ಕಾಜೆ ರಾಮಕೃಷ್ಣ ಭಟ್, ಕಿರುತರೆ ನಿರ್ದೇಶಕ ಬ.ಲ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

    award baikady bharatanatyam Literature Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಕಲಾಂಗಣದಲ್ಲಿ ಪ್ರಮಾಣ ಪತ್ರ ವಿತರಣೆ
    Next Article ಕಟೀಲು ಮೇಳದ ಐವತ್ತನೇ ವರ್ಷದ ಗಂಪ ಯಕ್ಷ ಸುವರ್ಣ ಸಂಭ್ರಮ, ಕಲಾವಿದರಿಗೆ ಸಂಮಾನ
    roovari

    Add Comment Cancel Reply


    Related Posts

    ಸಾಂಪ್ರದಾಯಿಕ ಭಜನಾ ಸ್ಪರ್ಧೆಯಲ್ಲಿ ವಿಶ್ವಕರ್ಮ ಕಲಾ ಪರಿಷತ್ತಿನ ತಂಡ ಪ್ರಥಮ

    June 10, 2026

    ತುಳು ಭವನದಲ್ಲಿ ತುಳುವಿನಲ್ಲಿ ಕನಕದಾಸರ ಕಾವ್ಯ- ಕೀರ್ತನೆ ಸಂವಾದ | ಜೂನ್ 13

    June 10, 2026

    ‘ನಾನೂ ಕಾಫಿರ’ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಜೂನ್ 11

    June 10, 2026

    ಕರಾವಳಿ ಮಹಿಳೆಯರಿಗಾಗಿ ಕಥಾ ಸ್ಪರ್ಧೆ | ಕೊನೆಯ ದಿನಾಂಕ ಜುಲೈ 07

    June 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.