Subscribe to Updates

    Get the latest creative news from FooBar about art, design and business.

    What's Hot

    ಅಂಬುರುಹ ಯಕ್ಷ ಕಲಾ ಕೇಂದ್ರದ ಅಷ್ಟಮ ಸಂಭ್ರಮ | ಜುಲೈ 19

    July 18, 2026

    ಪ್ರೇಕ್ಷಕರ ಮನಮುದಗೊಳಿಸಿದ ‘ಮಾರಿಕಾಡು’ ನಾಟಕ ಪ್ರದರ್ಶನ

    July 18, 2026

    ಮಂಗಳೂರಿನ ಡಾನ್‌ಬಾಸ್ಕೊ ಹಾಲ್‌ನಲ್ಲಿ ‘ಅಂಕುರಾ’ 2ನೇ ಆವೃತ್ತಿ ಪ್ರಸ್ತುತಿ | ಜುಲೈ 26

    July 18, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ‘ರಂಗಶ್ರೀ-ರಂಗಹಬ್ಬ’ | ಮಾರ್ಚ್ 04ರಿಂದ 08
    Commemoration

    ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ‘ರಂಗಶ್ರೀ-ರಂಗಹಬ್ಬ’ | ಮಾರ್ಚ್ 04ರಿಂದ 08

    March 3, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೈಂದೂರು : ಲಾವಣ್ಯ (ರಿ.) ಬೈಂದೂರು ಇದರ 49ನೇ ವಾರ್ಷಿಕೋತ್ಸವ ಹಾಗೂ ದಿ. ಉಪ್ಪುಂದ ಶ್ರೀನಿವಾಸ ಪ್ರಭು ಸ್ಮರಣಾರ್ಥ ‘ರಂಗಶ್ರೀ-ರಂಗಹಬ್ಬ’ ಕಾರ್ಯಕ್ರಮವನ್ನು ದಿನಾಂಕ 04ರಿಂದ 08 ಮಾರ್ಚ್ 2026ರವರೆಗೆ ಪ್ರತಿ ದಿನ ಸಂಜೆ 6-30 ಗಂಟೆಗೆ ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಆಯೋಜಿಸಲಾಗಿದೆ.

    ದಿನಾಂಕ 04 ಮಾರ್ಚ್ 2026ರಂದು ‘ರಂಗಶ್ರೀ-ರಂಗಹಬ್ಬ’ದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಲಾವಣ್ಯ (ರಿ.) ಇದರ ಅಧ್ಯಕ್ಷರಾದ ನರಸಿಂಹ ಬಿ. ನಾಯಕ್ ಇವರು ಅಧ್ಯಕ್ಷತೆ ವಹಿಸಲಿರುವರು. ಇದೇ ಸಂದರ್ಭದಲ್ಲಿ ಬೈಂದೂರು ರಿಥಂ ನೃತ್ಯ ಹಾಗೂ ಕಲಾ ಶಾಲೆ ಇವರ ಸ್ಥಾಪಕರಾದ ನಾಗೇಂದ್ರ ಕುಮಾರ್ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಬಿ. ಗಣೇಶ ಕಾರಂತ ಇವರ ನಿರ್ದೇಶನದಲ್ಲಿ ಲಾವಣ್ಯ (ರಿ.) ಬೈಂದೂರು ಇವರಿಂದ ‘ಸಂಜೆ ಹಾಡು’ ನಾಟಕ ಪ್ರದರ್ಶನಗೊಳ್ಳಲಿದೆ.

    ದಿನಾಂಕ 05 ಮಾರ್ಚ್ 2026ರಂದು ನಡೆಯುವ ‘ರಂಗಶ್ರೀ-ರಂಗಹಬ್ಬ’ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಧರ ಪಿ. ಇವರು ವಹಿಸಲಿದ್ದು, ಹವ್ಯಾಸಿ ರಂಗಭೂಮಿ ಕಲಾವಿದರಾದ ಶ್ರೀಶ ಭಟ್ ನಾಯ್ಕನಕಟ್ಟೆ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಪುನೀತ್ ರಂಗಾಯಣ ಇವರ ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಬೆಂಗಳೂರಿನ ನೆನಪು ಕಲ್ಚರಲ್ ಮತ್ತು ಎಜ್ಯುಕೇಷನಲ್ ಚಾರಿಟೇಬಲ್ ಟ್ರಸ್ಟ್ ತಂಡದವರಿಂದ ‘ಮಾಯಾದ್ವೀಪ’ ನಾಟಕ ಪ್ರದರ್ಶನ ನಡೆಯಲಿದೆ.

    ದಿನಾಂಕ 06 ಮಾರ್ಚ್ 2026ರಂದು ನಡೆಯುವ ‘ರಂಗಶ್ರೀ-ರಂಗಹಬ್ಬ’ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೂರು ರಾಮಕೃಷ್ಣ ಶೇರುಗಾರ್ ಇವರು ವಹಿಸಲಿದ್ದು, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಸಿ.ಎನ್. ಬಿಲ್ಲವ ಶಿರೂರು ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಮಂಗಳೂರು ಮೀನನಾಥ ಇವರ ನಿರ್ದೇಶನದಲ್ಲಿ ಶ್ರೀ ನಂದಿಕೇಶ್ವರ ನಾಟಕ ಸಂಘ ಮಂಗಳೂರು ಇವರಿಂದ ‘ಭಂಡ ನನ್ನ ಗಂಡ’ ನಾಟಕ ಪ್ರದರ್ಶನಗೊಳ್ಳಲಿದೆ.

    ದಿನಾಂಕ 07 ಮಾರ್ಚ್ 2026ರಂದು ನಡೆಯುವ ‘ರಂಗಶ್ರೀ-ರಂಗಹಬ್ಬ’ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಂದ್ರ ಹೆಜ್ಜಾಲು ಇವರು ವಹಿಸಲಿದ್ದು, ಯಕ್ಷಗಾನ ಭಾಗವತರಾದ ಸುಧಾಕರ ಕೊಠಾರಿ ವಸ್ರೆ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಗಣೇಶ ದೇವಾಡಿಗ ಉಪ್ಪುಂದ ಇವರ ನಿರ್ದೇಶನದಲ್ಲಿ ಲಾವಣ್ಯ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತಂಡ ಇವರಿಂದ ‘ಜ್ವಾಲಾಪ್ರತಾಪ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

    ದಿನಾಂಕ 08 ಮಾರ್ಚ್ 2026ರಂದು ನಡೆಯುವ ‘ರಂಗಶ್ರೀ-ರಂಗಹಬ್ಬ’ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಗೋವಿಂದ ಬಾಬು ಪೂಜಾರಿ ಇವರು ವಹಿಸಲಿದ್ದು, ಹವ್ಯಾಸಿ ಯಕ್ಷಗಾನ ಕಲಾವಿದರಾದ ಉಮೇಶ ಶ್ಯಾನ್ ಭಾಗ್ ಬಿಜೂರು ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಹುಲುಗಪ್ಪ ಕಟ್ಟೀಮನಿ ಇವರ ನಿರ್ದೇಶನದಲ್ಲಿ ನಟಮಿತ್ರರು ಹವ್ಯಾಸಿ ಕಲಾಸಂಘ ಇವರಿಂದ ‘ಆ ಊರು ಈ ಊರು’ ನಾಟಕ ಪ್ರದರ್ಶನ ನಡೆಯಲಿದೆ.

    baikady commemoration drama felicitation roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಕಲಾತಪಸ್ವಿ ಸಾಂಸ್ಕೃತಿಕ ತಂಡ: ಮಕ್ಕಳ ಆನ್‌ಲೈನ್ ಭಾವಚಿತ್ರ ಸ್ಪರ್ಧೆಗೆ ಆಹ್ವಾನ
    Next Article ಮಾಣಿಕ್ಯ ಪ್ರಕಾಶನದ 2026ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ
    roovari

    Add Comment Cancel Reply


    Related Posts

    ಅಂಬುರುಹ ಯಕ್ಷ ಕಲಾ ಕೇಂದ್ರದ ಅಷ್ಟಮ ಸಂಭ್ರಮ | ಜುಲೈ 19

    July 18, 2026

    ಪ್ರೇಕ್ಷಕರ ಮನಮುದಗೊಳಿಸಿದ ‘ಮಾರಿಕಾಡು’ ನಾಟಕ ಪ್ರದರ್ಶನ

    July 18, 2026

    ಮಂಗಳೂರಿನ ಡಾನ್‌ಬಾಸ್ಕೊ ಹಾಲ್‌ನಲ್ಲಿ ‘ಅಂಕುರಾ’ 2ನೇ ಆವೃತ್ತಿ ಪ್ರಸ್ತುತಿ | ಜುಲೈ 26

    July 18, 2026

    ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಪೌರಾಣಿಕ ನೃತ್ಯ ನಾಟಕ ಪ್ರಸ್ತುತಿ

    July 18, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.