Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಾನಿಧ್ಯ ಸಂಸ್ಥೆಯಿಂದ ‘ವಿಷನ್ -2024’ ಹಾಗೂ ‘ಸಾನಿಧ್ಯ ಉತ್ಸವ’ | ಮಾರ್ಚ್ 9 ಮತ್ತು 10  
    Cultural

    ಸಾನಿಧ್ಯ ಸಂಸ್ಥೆಯಿಂದ ‘ವಿಷನ್ -2024’ ಹಾಗೂ ‘ಸಾನಿಧ್ಯ ಉತ್ಸವ’ | ಮಾರ್ಚ್ 9 ಮತ್ತು 10  

    February 28, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮಂಗಳೂರು : ಭಿನ್ನ ಸಾಮರ್ಥ್ಯದ ಮಕ್ಕಳ ಸಂಸ್ಥೆಯಾದ ‘ಸಾನಿಧ್ಯ’ ಆಯೋಜಿಸುತ್ತಿರುವ ಎರಡು ದಿನಗಳ ‘ವಿಷನ್ -2024’ ಹಾಗೂ ‘ಸಾನಿಧ್ಯ ಉತ್ಸವ’ ಕಾರ್ಯಕ್ರಮವು ದಿನಾಂಕ 09-03-2024 ಮತ್ತು 10-03-2024 ರಂದು ಮಂಗಳೂರಿನ ಕದ್ರಿ ಉದ್ಯಾನದ ವೇದಿಕೆಯಲ್ಲಿ ನಡೆಯಲಿದೆ.
    ದಿನಾಂಕ 09-03-2024ರ ಶನಿವಾರದಂದು ಸಂಜೆ ಘಂಟೆ 05.30ಕ್ಕೆ ಸರಿಯಾಗಿ ಸಾನಿಧ್ಯ ವಿಶೇಷ ಮಕ್ಕಳು ತರಬೇತಿದಾರರ ನೆರವಿನಿಂದ ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ‘ವಿಷನ್ -2024’ ಉದ್ಘಾಟನೆಗೊಳ್ಳಲಿದ್ದು,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲೆಯ ಉಪನಿರ್ದೇಶಕರಾಗಿರುವ ಶ್ರೀಯುತ ಎ. ಉಸ್ಮಾನ್ ಹಾಗೂ ಸಮಾಜ ಸೇವಕಿ ಶ್ರೀಮತಿ ರೂಪಕಲಾ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
    ದಿನಾಂಕ 10-03-2024ರ ಆದಿತ್ಯವಾರದಂದು ನಡೆಯಲಿರುವ ‘ಸಾನಿಧ್ಯ ಉತ್ಸವ’ವನ್ನು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾಗಿರುವ ವೇದಮೂರ್ತಿ ಶ್ರೀ ಕೆ. ಕಮಲಾದೇವಿ ಪ್ರಸಾದ ಅಸ್ರಣ್ಣನವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎನ್. ಎಸ್. ಶೆಟ್ಟಿ ಆಂಡ್ ಕಂ. ಮುಂಬೈ ಇದರ ಆಡಳಿತ ನಿರ್ದೇಶಕ ಹಾಗೂ  ಲೆಕ್ಕ ಪರಿಶೋಧಕರಾಗಿರುವ ಶ್ರೀ ಎನ್. ಸುಧೀರ್ ಶೆಟ್ಟಿ, ‘ಆಶಾ ಸದನ’ ವಿಶೇಷ ಶಾಲೆ ಮಂಡ್ಯ ಇದರ ಪ್ರಾಂಶುಪಾಲರಾಗಿರುವ ವಂದನೀಯ ಗುರು ಜೋಯ್ಸನ್ ಜೋನ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ‘ಅಕ್ಕರೆಯ ಬೆಳಕು’ ವಿಶೇಷ ಶಾಲೆಯ ಆಡಳಿತಾಧಿಕಾರಿಯಾಗಿರುವ ಶ್ರೀ ಕರೆಪ್ಪ ಬಿ.ಹೆಚ್. ಹಾಗೂ  ಸೈಂಟ್ ಮೇರಿಸ್ ವಿಶೇಷ ಶಾಲೆ ಕಿನ್ನಿಗೋಳಿ ಇಲ್ಲಿ ಪ್ರಾಂಶುಪಾಲೆಯಾಗಿರುವ ಶ್ರೀಮತಿ ರೇಷ್ಮ ಮರಿಯಾ ಮಾರ್ಟಿಸ್ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ವಿಶೇಷ ಮಕ್ಕಳು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು.
     ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ, ವಿಧಾನ ಸೌಧದ ಒಳಗೆ ಹಾಗೂ ದುಬೈ ಮತ್ತು ಕತಾರ್‌ನಲ್ಲಿ ತಮ್ಮ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸಿದ ‘ಸಾನಿಧ್ಯ’ದ ವಿಶೇಷ ಮಕ್ಕಳು, ಹವ್ಯಾಸಿ ಬಳಗ ಕದ್ರಿ ಇದರ ನಿರ್ದೇಶಕರರಾಗಿರುವ ಶರತ್ ಕದ್ರಿ ಇವರ ನಿರ್ದೇಶನದಲ್ಲಿ ‘ಭಸ್ಮಾಸುರ ಮೋಹಿನಿ’ ಪ್ರಸಂಗದ ಯಕ್ಷಗಾನವನ್ನು ಹಾಗೂ ಡಾ. ವಸಂತ್ ಕುಮಾರ್ ಶೆಟ್ಟಿ ರಚಿಸಿ ನಿರ್ದೇಶಿಸಿರುವ ಸಾಮ್ರಾಟ್ ಅಶೋಕನ ಜೀವನ ಚರಿತ್ರೆಯನ್ನು ಪ್ರತಿಬಿಂಬಿಸಬಲ್ಲ ‘ಬುದ್ಧಂ ಶರಣಂ ಗಚ್ಛಾಮಿ’ ಎಂಬ ನಾಟಕವನ್ನು ಪ್ರದರ್ಶಿಸಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಐವರು ಹಿರಿಯ ರಂಗಕರ್ಮಿಗಳಿಗೆ ‘ಮಲಬಾರ್ ವಿಶ್ವರಂಗ ಪುರಸ್ಕಾರ-2024’
    Next Article ಪುತ್ತೂರಿನಲ್ಲಿ ಪ್ರಿಯಾ ಸುಳ್ಯರವರ ‘ಬಾಳಿಗೆ ಬೆಳಕು’ ಕೃತಿ ಬಿಡುಗಡೆ
    roovari

    Add Comment Cancel Reply


    Related Posts

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025

    ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಾಳಮದ್ದಳೆ

    May 7, 2025

    ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಪಾರ್ತಿಸುಬ್ಬ ವಿರಚಿತ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.