Subscribe to Updates

    Get the latest creative news from FooBar about art, design and business.

    What's Hot

    ಕೊಲ್ಯದ ನಾಟ್ಯನಿಕೇತನದಲ್ಲಿ ‘ನಾಟ್ಯಮೋಹನ ನವತ್ಯುತ್ಸವ’ – 18 | ಜೂನ್ 18

    June 17, 2025

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ‘ಪೆನ್ ಟು ಪ್ರೀಮಿಯರ್’ನಿಂದ ಮಹಿಳೆಯರಿಗಾಗಿ ಸಣ್ಣ ಕಥೆಗಳ ಸ್ಪರ್ಧೆ | ಆಗಸ್ಟ್ 31 ಕೊನೆಯ ದಿನ

    June 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪಂಡಿತ್ ಓಂಕಾರ ಗುಲ್ವಾಡಿಯವರಿಗೆ ‘ಸಂಗೀತ್ ಸಮ್ಮಾನ್’ ಅಭಿಮಾನಪಡುವ ಅಭಿನಂದನೆ
    Felicitation

    ಪಂಡಿತ್ ಓಂಕಾರ ಗುಲ್ವಾಡಿಯವರಿಗೆ ‘ಸಂಗೀತ್ ಸಮ್ಮಾನ್’ ಅಭಿಮಾನಪಡುವ ಅಭಿನಂದನೆ

    April 26, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸಪ್ತಕ ಬೆಂಗಳೂರಿನ ನೇತೃತ್ವದಲ್ಲಿ ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಹಾಗೂ ರಾಮಕೃಷ್ಣ ಮಠ ಮಂಗಳೂರು ಇವರ ಸಹಯೋಗ ಹಾಗೂ ಮಂಗಳೂರಿನ ಹತ್ತಾರು ಹಿಂದೂಸ್ಥಾನಿ ಸಂಗೀತ ಸಂಸ್ಥೆಗಳ ಸಹಕಾರದಲ್ಲಿ ದಿನಾಂಕ 13 ಏಪ್ರಿಲ್ 2025ರಂದು ಮಂಗಳೂರಿನ ರಾಮಕೃಷ್ಣ ಮಠದ ಸಭಾಭವನದಲ್ಲಿ ದೇಶ ವಿದೇಶಗಳಲ್ಲಿ ತಮ್ಮ ವಿಶಿಷ್ಟ, ವಿಶೇಷ ತಬಲಾ ವಾದನದಿಂದ ಪ್ರಖ್ಯಾತರಾದ ತಮ್ಮ ಉದಾತ್ತ ನಡೆನುಡಿಯಿಂದ ಅಜಾತ ಶತ್ರುವಾಗಿಯೂ ಅಪಾರ ಅಭಿಮಾನಿಗಳನ್ನು ಪಡೆದಿರುವ ಮಂಗಳೂರಿನವರೇ ಆದ ಪಂಡಿತ ಓಂಕಾರ ಗುಲ್ವಾಡಿ ಇವರನ್ನ ಪ್ರೀತಿ, ವಿಶ್ವಾಸ, ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

    ಪ್ರಾರಂಭದಲ್ಲಿ ಪ್ರತಿಭಾವಂತ ಯುವ ಕಲಾವಿದರಾದ ಅಂಕುಶ ನಾಯಕ ಇವರ ಸಿತಾರ್ ಹಾಗೂ ಕಾರ್ತಿಕ ಭಟ್ಟ ಇವರ ಕೊಳಲು ವಾದನ ಜುಗಲ್ಬಂದಿಗೆ ಹೇಮಂತ ಜೋಶಿಯವರ ತಬಲಾ ವಾದನ ಹಾಲು ಜೇನಿನಂತೆ ಸೇರಿ ಶೋತೃಗಳ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

    ನಂತರ ಧಾರವಾಡದ ಪಂಡಿತ ವೆಂಕಟೇಶಕುಮಾರ ಇವರ ಅಧ್ಯಕ್ಷತೆಯಲ್ಲಿ ಓಂಕಾರ ಗುಲ್ವಾಡಿ ಇವರನ್ನು ಹುಟ್ಟೂರಿನ ಸಮಸ್ತ ಕಲಾಭಿಮಾನಿಗಳ ಪರವಾಗಿ ಒಂದು ಅಭೂತಪೂರ್ವವಾದ ಸನ್ಮಾನ ಕಾರ್ಯಕ್ರಮ ಜರುಗಿತು. ಸನ್ಮಾನಿತರಾದ ಗುಲ್ವಾಡಿಯವರು ಅತ್ಯಂತ ಭಾವುಕರಾಗಿ ಇದೆಲ್ಲವೂ ನನ್ನಿಂದ ಸಾಧ್ಯ ಆದದ್ದು, ವಿದ್ಯಾ ಗುರುಗಳಾದ ಪಂಡಿತ ತಾರಾನಾಥ ಹಾಗೂ ಆಧ್ಯಾತ್ಮ ಗುರುಗಳಾದ ಪಂಡಿತ ಚಿದಾನಂದ ನಗರಕರ ಇವರು ಕಲಿಸಿದ, ಆಡಿದ ಕಿವಿಮಾತಿನಿಂದ, ತೋರಿದ ಸನ್ಮಾರ್ಗದಿಂದ ಸಾಧ್ಯ ಆಯಿತು ಎಂದು ವಿನಂಬ್ರಭಾವದಿಂದ ನುಡಿದರು.

    ಸಪ್ತಕದ ಜಿ.ಎಸ್. ಹೆಗಡೆಯವರು ಈ ಕಾರ್ಯಕ್ರಮವನ್ನು ಹೀಗೆ ಏರ್ಪಡಿಸಬೇಕು ಎಂಬ ಬಹು ದಿನದ ಆಸೆ ಕೈಗೂಡಿದ್ದು ದೈವ ಕೃಪೆ ಹಾಗೂ ಸಹೃದಯದರ ಸಹಕಾರದಿಂದ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ವೆಂಕಟೇಶ ಕುಮಾರ ಇವರು ಓಂಕಾರ ಗುಲ್ವಾಡಿಯರ ತಬಲಾ ನುಡಿಸಾಣಿಕೆಯ ವಿಶೇಷತೆಯನ್ನು ವಿಶ್ಲೇಷಿಸಿ, ಯಾಕೆ ಗಾಯಕರಾಗಲಿ, ವಾದಕರಾಗಲಿ ಇವರನ್ನೇ ಸಾಥ್ ಸಂಗತ್ ಗಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು ಎಂದು ವಿವರಿಸಿದರು. ಅಷ್ಟೇ ಸಮರ್ಥವಾಗಿ ಸ್ವತಂತ್ರ ತಬಲಾ ವಾದನದಲ್ಲಿಯೂ, ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡುತ್ತಿರುವ ಗುರುವಾಗಿಯೂ ಗುಲ್ವಾಡಿ ಅವರು ಅಭಿನಂದನಾರ್ಹರು, ಅನುಕರಣೀಯರು ಹೌದು ಅಂತ ಹೇಳಿದರು. ಓಂಕಾರ ಗುಲ್ವಾಡಿ ಅವರ ಕುರಿತ ಚಿಕ್ಕದಾದ ಸಾಕ್ಷ್ಯಚಿತ್ರ ಪ್ರದರ್ಶನವು ನಡೆಯಿತು.

    ನಂತರ ಸುಮಾರು ಎರಡು ಘಂಟೆಗಳ ಕಾಲ ನಡೆದ ಪಂಡಿತ್ ವೆಂಕಟೇಶ ಕುಮಾರ ಅವರ ಅಮೋಘ ಗಾಯನಕ್ಕೆ ಪಂಡಿತ್ ಓಂಕಾರ ಗುಲ್ವಾಡಿ ಇವರ ತಬಲಾ ಹಾಗೂ ಪಂಡಿತ್ ಸುಧೀರ ನಾಯಕ ಅವರ ಹಾರ್ಮೋನಿಯಂ ವಾದನ ಶ್ರೋತುಗಳಿಗೆ ದಿವ್ಯಾನಂದ ನೀಡಿತು. ಜೂನಿಯರ್ ಶಂಕರ ಇಂದ್ರಜಾಲ ಪ್ರವೀಣ ತೇಜಸ್ವಿ ಶಂಕರ ಇವರು ಕಾರ್ಯಕ್ರಮವನ್ನು ಆಕರ್ಷಕವಾಗಿ ನಿರ್ವಹಿಸಿ ವಂದನಾರ್ಪಣೆಯನ್ನೂ ಮಾಡಿದರು.

    – ಸಂಗೀತ ಪ್ರಿಯ

    baikady felicitation Music roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ನಯನ ಸಭಾಂಗಣದಲ್ಲಿ ಮಕ್ಕಳ ಕಾರ್ಯಕ್ರಮ | ಏಪ್ರಿಲ್ 27
    Next Article ರವೀಂದ್ರ ಕಲಾಕ್ಷೇತ್ರದ ಪಡಸಾಲೆ ಆರ್ಟ್ ಗ್ಯಾಲರಿಯಲ್ಲಿ ವಿಶ್ವ ಕಲಾ ದಿನದ ಅರಿವು
    roovari

    Add Comment Cancel Reply


    Related Posts

    ಕೊಲ್ಯದ ನಾಟ್ಯನಿಕೇತನದಲ್ಲಿ ‘ನಾಟ್ಯಮೋಹನ ನವತ್ಯುತ್ಸವ’ – 18 | ಜೂನ್ 18

    June 17, 2025

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇದರ ಗೌರವ ಸಲಹೆಗಾರರಾಗಿ ದೀಪಕ್ ಪೆರ್ಮುದೆ ಆಯ್ಕೆ

    June 17, 2025

    ಕವನ | ಅನುಬಂಧ

    June 17, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.