Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಸೈಯ್ಯದ ನಜೀರೊದ್ದಿನ ಮುತವಲ್ಲಿ ನಾಮ ನಿರ್ದೇಶನ

    August 11, 2025

    ಕಾಸರಗೋಡಿನಲ್ಲಿ “ಗುರುದಕ್ಷಿಣೆ” ಯಕ್ಷಗಾನ ತಾಳಮದ್ದಳೆ

    August 11, 2025

    ಕೊಡವೂರು ಶ್ರೀ ದೇವಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    August 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿಯ ಬಡಗುಪೇಟೆಯಲ್ಲಿ ‘ಸಾಂಝಿ’ ಮತ್ತು ‘ಜಲ ಸಾಂಝಿ’ ಕಲೆಯ ಕಾರ್ಯಾಗಾರ
    Drawing

    ಉಡುಪಿಯ ಬಡಗುಪೇಟೆಯಲ್ಲಿ ‘ಸಾಂಝಿ’ ಮತ್ತು ‘ಜಲ ಸಾಂಝಿ’ ಕಲೆಯ ಕಾರ್ಯಾಗಾರ

    January 27, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸಗ್ಯಾಲರಿ ಮತ್ತು ಸ್ಟುಡಿಯೋ ವತಿಯಿಂದ ಉಡುಪಿಯ ಮಧುರಂ ವೈಟ್ ಲೋಟಸ್ ಹೋಟೇಲ್‌ನ ಸಹಯೋಗದಲ್ಲಿ ಆಯೋಜಿಸುತ್ತಿರುವ ಜನಪದ ದೇಶೀಯ ಕಲೆಗಳ ಸರಣಿ ಕಾರ್ಯಕ್ರಮದಲ್ಲಿ ‘ಸಾಂಝಿ ಕಲೆ’ಯ ಕಾರ್ಯಾಗಾರವು ದಿನಾಂಕ 25 ಜನವರಿ 2025ರಂದು ಉಡುಪಿಯ ಬಡಗುಪೇಟೆಯಲ್ಲಿ ಉದ್ಘಾಟನೆಗೊಂಡಿತು.

    ಈ ಕಾರ್ಯಾಗಾರವನ್ನು ಕಲಾಶಿಕ್ಷಕರಾದ ರಾಘವೇಂದ್ರ ಅಮೀನ್ ಉದ್ಘಾಟಿಸಿ “ದೇಶೀಯ ಕಲೆಗಳು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಅನುಭವಿಸುವುದಕ್ಕಲ್ಲದೇ ಅದರ ತಾಂತ್ರಿಕತೆ, ಇತಿಹಾಸ ಇನ್ನಿತರ ವಿಷಯಗಳನ್ನು ಅದಕ್ಕೆ ಸಂಬಂಧಪಟ್ಟ ತಜ್ಞರಿಂದಲೇ ತಿಳಿದುಕೊಳ್ಳುವುದು ಬಹು ಮಹತ್ವದ್ದು. ಇದೊಂದು ಉಡುಪಿಯಂತಹ ಪುಟ್ಟ ಪಟ್ಟಣಕ್ಕೆ ರಾಷ್ಟ್ರಮಟ್ಟದಲ್ಲಿ ಮಾದರಿಯಾಗಬಹುದಾದ ಕಾರ್ಯಕ್ರಮ” ಎಂಬುದಾಗಿ ಅಭಿಪ್ರಾಯವಿತ್ತರು.

    ಇನ್ನೋರ್ವ ಅತಿಥಿ ವಿದುಷಿ ಅಕ್ಷತಾ ವಿಶು ರಾವ್ “ಭಾವನಾ ಕಲಾ ಶಾಲೆಯ ವಿಂಶತಿಯ ಸಂಭ್ರಮದಲ್ಲಿ ರೂಪಿಸಲಾದ ಈ ಕಾರ್ಯಕ್ರಮದಲ್ಲಿ ಇಂದಿಗೆ ನಾಲ್ಕುನೂರಕ್ಕೂ ಮಿಕ್ಕಿ ಕಲಿಕಾಸಕ್ತರು ಭಾಗವಹಿಸಿ ಪರಿಣತರಿಂದ ದೇಶೀಯ ಕಲೆಗಳ ಬಗೆಗೆ ಉಡುಪಿಯಲ್ಲಿಯೇ ಕಲಿತಿರುವುದು ಸಂತಸದ ಸಂಗತಿ, ಇದು ಹೀಗೆಯೇ ಮುಂದುವರೆದು ದೇಶೀಯ ಕಲೆಗಳೆಲ್ಲ ಉಡುಪಿಯಲ್ಲಿ ಪಸರಿಸುವಂತಾಗಲಿ” ಎಂಬುದಾಗಿ ಹಾರೈಸಿದರು.

    ಭಾವನಾ ಫೌಂಡೇಶನ್‌ನ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಯೋಜಕರಾದ ಜನಾರ್ದನ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು. ಈ ಸರಣಿ ಕಲಾ ಕಾರ್ಯಾಗಾರದ ಭಾಗವಾಗಿ ‘ಸಾಂಝಿ ಕಲೆ’ ಹಾಗೂ ನೀರಿನ ಮೇಲೆ ರಂಗೋಲಿಯನ್ನು ಹಾಕಿ ಕೃಷ್ಣನನ್ನು ಆರಾಧಿಸುವ ‘ಜಲ ಸಾಂಝಿ ಕಲೆ’ಯನ್ನು ಈ ಬಾರಿ ಪರಿಚಯಿಸುತ್ತಿದ್ದು, ಮಥುರಾದ ಶ್ರೀರಾಮ ಸೋನಿಯವರು ಈ ಕಾರ್ಯಾಗಾರವನ್ನು ನಡೆಸಿಕೊಟ್ಟರು.

     

    Share. Facebook Twitter Pinterest LinkedIn Tumblr WhatsApp Email
    Previous Articleಕೊಡಗು ಜಿಲ್ಲಾ ಪ್ರೌಢಶಾಲಾ ಮಕ್ಕಳಿಗೆ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆ
    Next Article ಕುಂಬಳೆಯ ಶ್ರೀ ಗೋಪಾಲಕೃಷ್ಣ ಸನ್ನಿಧಿಯಲ್ಲಿ ‘ದೀಪದ ಬೆಳಕಿನಲ್ಲಿ ಯಕ್ಷಗಾನ’
    roovari

    Add Comment Cancel Reply


    Related Posts

    ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ

    August 8, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿ ಪ್ರಸ್ತುತ ಪಡಿಸುವ ಗಾಯನ ಸಂಗೀತ ಕಾರ್ಯಾಗಾರ | ಆಗಸ್ಟ್ 16, 17, 23 ಮತ್ತು 24

    August 7, 2025

    ನಾಪೋಕ್ಲುವಿನಲ್ಲಿ ಒಂದು ದಿನದ ಅರೆಭಾಷೆ ಕಥೆ ರಚನೆ ಕಾರ್ಯಾಗಾರ

    August 2, 2025

    ಯಶಸ್ವಿಯಾಗಿ ನಡೆದ ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ

    July 31, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.