ಮಂಗಳೂರು : ಯುವವಾಹಿನಿ (ರಿ.) ಕೊಲ್ಯ ಘಟಕ ಇದರ ಆಶ್ರಯದಲ್ಲಿ ಜನಪದ ವಿದ್ವಾಂಸ ಲೇಖಕ ಕರಾವಳಿ ತೀರದ ಹೆಮ್ಮೆಯ ಸಾಹಿತಿ ಅನರ್ಘ್ಯ ರತ್ನ ವಿದ್ವಾನ್ ದಿ. ಬಿ. ರಮಾನಾಥ ಕೋಟೆಕಾರ್ ಇವರ ಜನುಮ ದಿನದ ಪ್ರಯುಕ್ತ ರಾಜ್ಯ ಮಟ್ಟದ ಕಥೆ, ಕವನ ಆನ್ಲೈನ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕಥೆ, ಕವನ ಕಳುಹಿಸಲು ಕೊನೆಯ ದಿನಾಂಕ 05 ಜುಲೈ 2026 ಆಗಿರುತ್ತದೆ.
ಕವನ ಸ್ಪರ್ಧೆ:
ಯಾವುದೇ ವಿಷಯಕ್ಕೆ ಸಂಬಂಧಪಟ್ಟಿರಬಹುದು.
ಕವನ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಇರಬೇಕು.
ಕವನದ ಗರಿಷ್ಠ ಸಾಲು ಮಿತಿ: 16 ಸಾಲುಗಳು.
ಸ್ವ-ರಚಿತ ಕವನವಾಗಿರಬೇಕು.
ಕವನವು ಬೇರೆ ಎಲ್ಲೂ ಪ್ರಕಟವಾಗಿರಕೂಡದು.
ಭಾಷಾ ಶುದ್ಧತೆ, ಅಕ್ಷರ ದೋಷದ ಬಗ್ಗೆ ಗಮನವಿರಲಿ.
ಭಾಗವಹಿಸುವವರಿಗೆ ಯಾವುದೇ ವಯಸ್ಸಿನ ನಿರ್ಬಂಧವಿರುವುದಿಲ್ಲ.
ಕವನದ ಕೆಳಗೆ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಸ್ಪಷ್ಟವಾಗಿ ನಮೂದಿಸಿರಬೇಕು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಗೌರವಿಸಲಾಗುವುದು.
ಕಥಾ ಸ್ಪರ್ಧೆ:
ಕಥಾ ಸ್ಪರ್ಧೆಗೆ ಯಾವುದೇ ವಿಷಯ ನಿರ್ಬಂಧವಿಲ್ಲ.
ಕಥೆಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೆ ಇರಬೇಕು.
ಗರಿಷ್ಠ ಪದ ಮಿತಿ 1500 ಪದಗಳು.
ಕಥೆಯು ಸ್ವಂತ ರಚನೆಯಾಗಿರಬೇಕು.
ಸ್ಪರ್ಧೆಗೆ ಕಳುಹಿಸುವ ಕಥೆಯು ಯಾವುದೇ ಪತ್ರಿಕೆ, ನಿಯತಕಾಲಿಕೆ ಅಥವ ಜಾಲತಾಣಗಳಲ್ಲಿ ಪ್ರಕಟವಾಗಿರಕೂಡದು.
ಕಥೆಯನ್ನು ನುಡಿ ಅಥವ ಬರಹ ಯುನಿಕೋಡ್ ತಂತ್ರಾಂಶ ಬಳಸಿ ಕಳುಹಿಸಬೇಕು.
ಭಾಷಾ ಶುದ್ಧತೆ, ಅಕ್ಷರ ತಪ್ಪುಗಳ ಬಗ್ಗೆ ಹೆಚ್ಚಿನ ಗಮನ ಇರಲಿ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಗೌರವಿಸಲಾಗುವುದು.
ನಿಮ್ಮ ಸ್ವ-ರಚಿತ ಕಥೆ ಅಥವಾ ಕವನವನ್ನು ವಾಟ್ಸಾಪ್ ಸಂಖ್ಯೆ 9449954168ಕ್ಕೆ ಕಳುಹಿಸಿ. ಹೆಚ್ಚಿನ ಮಾಹಿತಿಗಾಗಿ : 8792506776, 7204489618 ಸಂಖ್ಯೆಗಳನ್ನು ಸಂಪರ್ಕಿಸಿರಿ.

