Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನೃತ್ಯ ವಿಮರ್ಶೆ | ಸ್ತುತಿಶ್ರೀ ತಿರುಮಲೆ ಅವರ ರಂಜನೀಯ ಅದ್ಭುತ ಭರತನಾಟ್ಯ ರಂಗಪ್ರವೇಶ
    Bharathanatya

    ನೃತ್ಯ ವಿಮರ್ಶೆ | ಸ್ತುತಿಶ್ರೀ ತಿರುಮಲೆ ಅವರ ರಂಜನೀಯ ಅದ್ಭುತ ಭರತನಾಟ್ಯ ರಂಗಪ್ರವೇಶ

    August 16, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ರಂಗಪ್ರವೇಶ ಅಥವಾ ಅರಂಗೇಟ್ರಮ್ ಒಂದು ಕಲಾವಿದನ ಬೆಳವಣಿಗೆಯ ಮೊದಲ ಹೆಜ್ಜೆ. ವರ್ಷಗಳಿಂದ ಸತತವಾಗಿ ಕಲೆಯನ್ನು ಅಭ್ಯಾಸ ಮಾಡಿ ಗುರುಗಳ ಅನುಮತಿ ಪಡೆದು ಕಲಾವಿದರು ಮೊದಲ ಬಾರಿ ವೇದಿಕೆಯನ್ನು ಏರುವ  ಕಾರ್ಯಕ್ರಮವೇ ರಂಗಪ್ರವೇಶ.

    ಉದಯೋನ್ಮುಖ ಕಲಾವಿದೆ ಕು.ಸ್ತುತಿಶ್ರೀ ತಿರುಮಲೆ ‘ನೃತ್ಯ ಕುಸುಮಾಂಜಲಿ’ ಶೀರ್ಷಿಕೆಯಡಿ 06-08-2023ರಂದು ಬೆಂಗಳೂರಿನ ಜಯನಗರ ಬಡಾವಣೆಯ ಜೆ.ಎಸ್.ಎಸ್. ಸಭಾಂಗಣದಲ್ಲಿ ತಮ್ಮ ರಂಗಪ್ರವೇಶ ಪ್ರದರ್ಶನ ನೀಡಿದರು. ಪ್ರಥಮ ಪಿ.ಯು.ಸಿ ವ್ಯಾಸಂಗ ಮಾಡುತ್ತಿರುವ ಕು.ಸ್ತುತಿಶ್ರೀ ಇವರು ವಿದುಷಿ ಶ್ರೀರಂಜಿನಿ ಉಮೇಶ್ ಹಾಗೂ ಹಿರಿಯ ಗುರುಗಳಾದ ಶ್ರೀಮತಿ ರೇವತಿ ನರಸಿಂಹನ್ ಅವರಲ್ಲಿ ನೃತ್ಯಾಭ್ಯಾಸ ಮಾಡಿ ಪ್ರಸ್ತುತ ‘ನಟನತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್‘ನ ವಿದುಷಿ ಶ್ರೀಮತಿ ವೈ.ಜಿ.ಶ್ರೀಲತಾ ನಿಕ್ಷಿತ್ ಅವರಲ್ಲಿ ಕಲಿಕೆಯನ್ನು ಮುಂದುವರಿಸಿ, ಅವರ ಮಾರ್ಗದರ್ಶನದಲ್ಲಿ  ರಂಗಪ್ರವೇಶ ಮಾಡಿದ್ದಾರೆ.

    ಅದ್ಭುತವಾದ ಈ ರಂಗಪ್ರವೇಶವು ಓರ್ವ ನುರಿತ ಕಲಾವಿದೆ ನೀಡುವ ಕಾರ್ಯಕ್ರಮದಂತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ಉತ್ತಮ ಕಲಾವಿದೆಯಾಗುವ ಭರವಸೆ ಮೂಡಿಸಿದೆ.

    ಸ್ತುತಿಶ್ರೀ ತನ್ನ ರಂಗಪ್ರವೇಶದ ಪ್ರಾರಂಭದಲ್ಲಿ ಪುಷ್ಪಾಂಜಲಿ, , ಊತ್ತುಕ್ಕಾಡು ವೆಂಕಟಸುಬ್ಬಯ್ಯ ಕವಿಯ ಗಂಭೀರ ನಾಟ ರಾಗದ ಶ್ರೀವಿಘ್ನರಾಜಂಭಜೆಯ ನಂತರ ಮಿಶ್ರ ಅಲರಿಪು ನರ್ತಿಸಿ, ಈ ಬಂಧಗಳಲ್ಲೇ ತಮ್ಮ ಛಾಪನ್ನು ಮೂಡಿಸಿದರು. ತದನಂತರ ಕೆಲವು ಅಪರೂಪದ ರಚನೆಗಳಿಂದ ಪ್ರೇಕ್ಷಕರ ಮನ ಗೆದ್ದರು. ಇಳಂಗೋ ಅಡಿಗ ವಿರಚಿತ ಚಿಲಪ್ಪತಿಕಾರಮ್ ನಿಂದ ಆಯ್ದ ಒಂದು ಭಾಗ ‘ವಡವರೈ ಮತ್ತಾಕ್ಕಿ ವಾಸುಕಿಯೈ ನಾಣಾಕ್ಕಿ’. ಗುರುಗಳಾದ ವಿದುಷಿ ಶ್ರೀಲತಾ ಅವರ ವಿಶೇಷ ನೃತ್ಯ ಸಂಯೋಜನೆಯಲ್ಲಿ ಭಾವಪೂರ್ಣವಾಗಿ ಅಭಿನಯಿಸಿದರು. ಯಶೋದೆಯು ಮಣ್ಣುತಿನ್ನುತ್ತಿದ್ದ ಕೃಷ್ಣನ ಬಾಯಲ್ಲಿ ಮೂರು ಲೋಕಗಳನ್ನೂ ಕಾಣುತ್ತಾಳಷ್ಟೆ. ಹಾಗೆ ಕಾಣುವ ಆ ಲೋಕಗಳಲ್ಲಿ ಪ್ರಳಯವನ್ನೂ ಕೃಷ್ಣನ ಲೀಲಾ ವಿಶೇಷಗಳನ್ನೂ ಕಾಣುತ್ತಾಳೆ.

    ರಂಗಪ್ರವೇಶದ ಮುಖ್ಯ ಭಾಗವಾಗಿ ಆಯ್ದುಕೊಂಡ ಮತ್ತೊಂದು ಅಪರೂಪದ ರಚನೆ,  ಪದ್ಮಭೂಷಣ ಡಾ.ಎಮ್.ಬಾಲ ಮುರಳೀ ಕೃಷ್ಣ  ಅವರ ‘ಷಣ್ಮುಖಪ್ರಿಯ ರಾಗದ  ಓಂಕಾರ ಪ್ರಣವ ನಾದೋದ್ಭವ  ಶ್ರುತಿ ಲಯ ಸ್ವರ’  ಈ ಅದ್ಭುತ ರಚನೆಯ ಕ್ಲಿಷ್ಟಕರ  ಭಾವನೆಗಳನ್ನು ಗುರು ಶ್ರೀಲತಾ ಇವರು ನೃತ್ಯಕ್ಕೆ ಅಳವಡಿಸಿರುವುದು ಶ್ಲಾಘನೀಯವಾದರೆ, ಆ ಭಾವನೆಗಳನ್ನು ಅಷ್ಟೇ ಸೊಗಸಾಗಿ ನೃತ್ಯದಲ್ಲಿ ಅದ್ಭುತವಾಗಿ ಪ್ರದರ್ಶಿಸಿದ ಕಲಾವಿದೆಯನ್ನೂ ನಿಜಕ್ಕೂ ಮೆಚ್ಚಬೇಕು. ನಂತರದ ಪ್ರಸ್ತುತಿಯಲ್ಲಿ  ಪೆರಿಯಾಳ್ವಾರ್ ಇವರ ಪಲ್ಲಾಂಡು, ಶ್ರೀ ಆಂಡಾಳ್ ಅವರ ನಾಚ್ಚಿಯಾರ್ ತಿರುಮೊಳಿ, ತಿರುಪ್ಪಾವೈಗಳ ಆಯ್ದ ಪಾಶುರಗಳಿಂದ ರಚಿಸಿ ನೃತ್ಯಕ್ಕೆ ಸಂಯೋಜಿಸಿದ ‘ಆಂಡಾಳ್ ಕಲ್ಯಾಣ’ ವೈಭವಯುತವಾಗಿತ್ತು.. ಶ್ರೀ ಪುರಂದರ ದಾಸರ ‘ಹನುಮಂತ ದೇವ ನಮೋ’ ನೃತ್ಯ  ಕಲಾವಿದೆಯ  ಸಾಧನೆಯ ಮೈಲಿಗಲ್ಲೆನ್ನುವಂತೆ ಅತ್ಯಂತ  ಆಕರ್ಷಕವಾಗಿದ್ದು  ಹನುಮಂತನ ‘ಲಂಕಾದಹನ’ ಸನ್ನಿವೇಷವು ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು. ಶ್ರೀ ಲಾಲ್ಗುಡಿ ಜಿ.ಜಯರಾಮನ್ ಅವರ ಮೋಹನ ಕಲ್ಯಾಣಿ ರಾಗದ ತಿಲ್ಲಾನ ಹಾಗೂ ಮಂಗಳದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

    ಈ ಪ್ರದರ್ಶನಕ್ಕೆ ಅತ್ಯಂತ ಉತ್ತಮ ಹಿಮ್ಮೇಳ ಒದಗಿಸಿದ ಪ್ರಖ್ಯಾತ ಕಲಾವಿದರು :  ಸಂಗೀತದಲ್ಲಿ ವಿ.ರೋಹಿತ್ ಭಟ್, ನಟುವಾಂಗದಲ್ಲಿ  ವಿದುಷಿ ಶ್ರೀಲತ ನಿಕ್ಷಿತ್, ಮೃದಂಗ ವಿದ್ವಾನ್ ಹರ್ಷ ಸಾಮಗ, ಕೊಳಲು ಶ್ರೀ ಮಹೇಶ್ ಸ್ವಾಮಿ, ವೈಲಿನ್ ನಲ್ಲಿ   ಶ್ರೀ ಪ್ರಾದೇಶ್ ಆಚಾರ್,  ಹಾಗೂ ರಿದಮ್  ಪ್ಯಾಡ್ ನಲ್ಲಿ ಶ್ರೀ ಕಾರ್ತಿಕ್ ಭಟ್. ಭರತನಾಟ್ಯ ಗುರು ಶ್ರೀಮತಿ  ರೂಪಶ್ರೀ ಮದುಸೂದನ್  ಇವರು ಈ ಅದ್ಭುತ ಕಾರ್ಯಕ್ರಮವನ್ನು ಚೊಕ್ಕವಾಗಿ ನಿರ್ವಹಿಸಿದರು.

    ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರುಗಳನ್ನು ವೇದಘೋಷದಿಂದ ಸ್ವಾಗತಿಸಿ ಪ್ರೀತಿಪೂರ್ವಕ ಗೌರವ ಸಮರ್ಪಣೆ ಮಾಡಲಾಯಿತು. ಮೈಸೂರಿನ  ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರಿನ ಗುರು ಶ್ರೀಮತಿ ಡಾ.ಕೃಪಾ ಪಡ್ಕೆ, ಪುತ್ತೂರಿನ ಮೂಕಾಂಬಿಕ ಕಲ್ಚರಲ್ ಅಕಾಡೆಮಿಯ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ದೀಪಕ್, ಪ್ರವಚನ ರತ್ನ ವಿದ್ವಾನ್ ಜಿ.ಎನ್.ರಾಮಪ್ರಸಾದ್ ಈ ಗಣ್ಯರುಗಳು ಕಾರ್ಯಕ್ರಮದ ಬಗ್ಗೆ ತಮ್ಮ ಹಿತನುಡಿಗಳನ್ನು ವ್ಯಕ್ತಪಡಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಪರಿಚಯ ಲೇಖನ | “ಉತ್ಸಾಹೀ ಯಕ್ಷಸಂಪನ್ನ” ಭಾರ್ಗವ ಭಾಗವತ್
    Next Article ಶಕ್ತಿನಗರದಲ್ಲಿ ‘ಕೊಂಕಣ್ ಭಾರತ್’ ಸಂಗೀತ ಸಂಜೆ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ಡಾ. ಮೋಹನ ಕುಂಟಾರ್ ಇವರ ‘ಪುರಾಣ ಕಥಾಕೋಶ’

    May 28, 2025

    ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ‘ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025’ | ಜೂನ್ 01

    May 28, 2025

    ಕೊಲ್ಯದ ನಾಟ್ಯನಿಕೇತನದ ನೃತ್ಯಾಂಗಣದಲ್ಲಿ ಸರಣಿ-ಮಾಲಿಕೆ 16 ‘ನಾಟ್ಯ ಮೋಹನ ನವತ್ಯುತ್ಸಹ’ | ಮೇ 28

    May 27, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.