ಉಜಿರೆ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯ ಗೋಪುರ ಲೋಕಾರ್ಪಣೆ, ನೂತನ ಬ್ರಹ್ಮರಥ, ಪುಷ್ಪರಥ ಸಮರ್ಪಣೆ ಸಮಾರಂಭದ ಅಂಗವಾಗಿ ತಾಳಮದ್ದಳೆ ಕೂಟ ‘ಜಾಂಬವತಿ ಕಲ್ಯಾಣ’ ಎಂಬ ಆಖ್ಯಾನದೊಂದಿಗೆ ದಿನಾಂಕ 09 ಮಾರ್ಚ್ 2026ರಂದು ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ವೆಂಕಟರಮಣ ರಾವ್ ಬನ್ನೆಂಗಳ, ಚೆಂಡೆ ಮದ್ದಳೆಗಳಲ್ಲಿ ಗುರುಪ್ರಸಾದ್ ಬೊಳಿಂಜಡ್ಕ, ಶಿತಿಕಂಠ ಭಟ್ ಉಜಿರೆ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಗಣೇಶ್ (ಬಲರಾಮ), ಪ್ರೇಮಲತಾ ರಾವ್ (ನಾರದ), ಕಿಶೋರಿ ದುಗ್ಗಪ್ಪ ನಡುಗಲ್ಲು (ಶ್ರೀ ಕೃಷ್ಣ), ಹರಿಣಾಕ್ಷಿ ಜೆ. ಶೆಟ್ಟಿ (ಜಾಂಬವ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು. ಆಶಾ ಅಡೂರು ಹಾಗೂ ವಿದ್ಯಾ ಅಡೂರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ದೇವಳದ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಸಂಘದ ಗುರುಗಳೂ, ನಿರ್ದೇಶಕರೂ ಆದ ಭಾಸ್ಕರ ಬಾರ್ಯರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಕಲಾವಿದರಿಗೆ ಶ್ರೀ ದೇವರ ಪಂಚಲೋಹದ ಮೂರ್ತಿಯನ್ನು ಇತ್ತು ಗೌರವಿಸಲಾಯಿತು. ಶ್ರೀಮತಿ ಮತ್ತು ಶ್ರೀ ಪ್ರೇಮಲತಾ ರಂಗನಾಥ ರಾವ್ ಸಹಕರಿಸಿ, ಶ್ರೀಮತಿ ವಿದ್ಯಾ ಶಶಿಕಿರಣ್ ಪೆಜತ್ತಾಯ ಉಜಿರೆ ಪ್ರಾಯೋಜಿಸಿದರು.

