ಕುರಿಯ : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಹಾಗೂ ಶ್ರವಣ ರಂಗ ಪ್ರತಿಷ್ಠಾನ ಸವಣೂರು ಇವುಗಳ ಸಂಯೋಜನೆಯಲ್ಲಿ ನಡೆಯುವ ಪವಿತ್ರ ಅಧಿಕ ಮಾಸದಲ್ಲಿ ‘ಶ್ರೀ ಹರಿ ದರ್ಶನ’ ತಾಳಮದ್ದಳೆ ಅಭಿಯಾನ ‘ಯಕ್ಷ ಪುರುಷೋತ್ತಮ’ದ ನಾಲ್ಕನೇ ತಾಳಮದ್ದಳೆ ಕೂಟವು ಕುರಿಯ ಶ್ರೀ ಮಹಾ ವಿಷ್ಣುದೇವಳದಲ್ಲಿ ‘ಜಾಂಬವತಿ ಕಲ್ಯಾಣ’ ಎಂಬ ಆಖ್ಯಾನದೊಂದಿಗೆ ದಿನಾಂಕ 30 ಮೇ 2026ರಂದು ನಡೆಯಿತು.
ಕೂಟದ ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಅಚ್ಯುತ ಪಾಂಗಣ್ಣಾಯ, ಸಮರ್ಥ ವಿಷ್ಣು ಕಡಂಬಳಿಕೆ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ ಮತ್ತು ಗುಡ್ಡಪ್ಪ ಬಲ್ಯ (ಶ್ರೀ ಕೃಷ್ಣ), ಗುಂಡ್ಯಡ್ಕ ಈಶ್ವರ ಭಟ್ (ಜಾಂಬವಂತ), ತಾರಾನಾಥ ಸವಣೂರು (ಬಲರಾಮ) ಸಹಕರಿಸಿದರು. ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ತಾರಾನಾಥ ಸವಣೂರು ವಂದಿಸಿದರು. ಶ್ರೀ ದೇವಳದ ಅರ್ಚಕ ಪ್ರಕಾಶ್ ಕೊಡಿಂಕಿರಿ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ರೈ ಕುರಿಯ ಮತ್ತು ಸದಸ್ಯರು ಸಹಕರಿಸಿದರು.
