ಬೆಂಗಳೂರು : ಪ್ರಸ್ತುತ ದಿನಮಾನದಲ್ಲಿ ಪೇಸ್ಬುಕ್ ಒಂದು ಪ್ರಬಲ ಸಾಮಾಜಿಕ ಮಾಧ್ಯಮವಾಗಿದೆ. ಜಗತ್ತಿನ ನಾನಾ ಮೂಲೆಯ ಜನರಿಗೆ ಬಹುಬೇಗ ಮತ್ತು ಏಕಕಾಲದಲ್ಲಿ ವಿಷಯ ತಲುಪಿಸುವ ಹಾಗೂ ಪ್ರಚಾರ ನೀಡುವ ಪ್ರಬಲ ಸಾಮಾಜಿಕ ತಂತ್ರಜ್ಞಾನವೇ ಆಗಿದೆ. ಆದರೆ ನಾನಾರೀತಿಯಲ್ಲಿ ಬಳಕೆಯಾಗುತ್ತಿರುವ ಈ ಮಾಧ್ಯಮವನ್ನು ಸದಭಿರುಚಿಯ, ಸಾಹಿತ್ಯ, ಸಂಸ್ಕೃತಿಯ ವಿಚಾರಗಳ ತಲುಪಿಸುವ ವೇದಿಕೆಯಾಗಿ ಸದ್ಭಳಕೆ ಮಾಡಿಕೊಂಡು ಸಾಧಕರನ್ನು ಪರಿಚಯಿಸುತ್ತಾ ಸಾಹಿತ್ಯ-ಸಂಸ್ಕೃತಿಯ ವಿಚಾರವನ್ನು ಬಿತ್ತುವ ನಿಟ್ಟಿನಲ್ಲಿ ಖ್ಯಾತ ರಂಗಸಂಘಟಕರಾದ ಶ್ರೀ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಇವರ ‘ರಂಗಮಂಡಲ’ ಮತ್ತು ಗುಂಡೀಗೆರೆ ವಿಶ್ವನಾಥ ಇವರ ಸಂಸ್ಥೆಯಾದ ‘ಜ್ಞಾನ ಸಂಬುದ್ಧ ಪ್ರಕಾಶನ’ ಜಂಟಿಯಾಗಿ ಪ್ರತಿ ತಿಂಗಳಿನ ಮೂರನೇ ಶನಿವಾರ ಸಂಜೆ ಗಂಟೆ 6-00ರಿಂದ 7-00ರವರೆಗೆ ‘ಪೇಸ್ಬುಕ್ ಲೈವ್ ಕಾವ್ಯಸಂವಾದ’ ಸಾಹಿತ್ಯ ಸಂಸ್ಕೃತಿ ಚಿಂತನೆ ಕಾರ್ಯಕ್ರಮವನ್ನು ಆಯೋಜಿಸಿತ್ತಿದೆ.
ದಿನಾಂಕ 20 ಜೂನ್ 2026ರಂದು ಬೆಂಗಳೂರು ಕೆಂಗೇರಿ ಉಪನಗರ ಒಂದನೇ ಹಂತ, ಸರ್.ಎಂ.ವಿ. ಬಡಾವಣೆ, ಶಿವಗಂಗ ರಂಗಮಂದಿರದಲ್ಲಿ ನಡೆಯುವ ಈ ಬಾರಿಯ ಉದ್ಘಾಟನಾ ಸಂಚಿಕೆಯ ಅತಿಥಿಗಳಾಗಿ ಖ್ಯಾತ ಚಿಂತಕರು ಹಾಗೂ ವಿಮರ್ಶಕರಾದ ಡಾ. ಭೈರಮಂಗಲ ರಾಮೇಗೌಡ ರವರು ಭಾಗವಹಿಸುತ್ತಿದ್ದು ಅವರೊಟ್ಟಿಗೆ ಸಂವಾದ ನಡೆಯಲಿದೆ.

