Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಹಸ್ತಪ್ರತಿ ಶಾಸ್ತ್ರದ ಭೀಷ್ಮ – ಬಿ. ಎಸ್. ಸಣ್ಣಯ್ಯ

    June 18, 2025

    ಮುಂಡಾಜೆಯಲ್ಲಿ ‘ದರ್ಪಣ’ ಕವನ ಸಂಕಲನದ ಲೋಕಾರ್ಪಣೆ | ಜೂನ್ 19

    June 18, 2025

    ಪ್ರೊ. ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 21

    June 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಜನಮನ ರಂಜಿಸಿದ ‘ಉದಯರಾಗ – 55’ ಕಾರ್ಯಕ್ರಮ  
    Music

    ಜನಮನ ರಂಜಿಸಿದ ‘ಉದಯರಾಗ – 55’ ಕಾರ್ಯಕ್ರಮ  

    September 2, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಸುರತ್ಕಲ್:  ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಮತ್ತು ನಾಗರಿಕ ಸಲಹಾ ಸಮಿತಿ (ರಿ), ಸುರತ್ಕಲ್  ಆಯೋಜಿಸುತ್ತಿರುವ ಸರಣಿ ಕಾರ್ಯಕ್ರಮ ‘ಉದಯರಾಗ – 55’ ದಿನಾಂಕ 01 ಸೆಪ್ಟೆಂಬರ್ 2024ರಂದು ಸುರತ್ಕಲ್ ಮೇಲು ಸೇತುವೆಯ ತಳಭಾಗದಲ್ಲಿ ನಡೆಯಿತು.
    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಬ್ಯಾಂಕ್ ಪ್ರಬಂಧಕ ಮತ್ತು ರೋಟರಿ ಕ್ಲಬ್ ಸುರತ್ಕಲ್‌ ಇದರ  ಸಾಮಾಜಿಕ ಸೇವಾ ವಿಭಾಗದ ನಿರ್ದೇಶಕ ರಾಮಚಂದ್ರ ಬಿ. ಕುಂದರ್ ಮಾತನಾಡಿ “ಸಂಗೀತವನ್ನು ಆಲಿಸಿದಾಗ ಮನಸ್ಸಿಗೆ ಸಂತೋಷವಾಗುವುದರೊಂದಿಗೆ ಮಾನಸಿಕ ಸಮಸ್ಯೆಗಳನ್ನು ಹೋಗಲಾಡಿಸಲೂ ಸಾಧ್ಯವಿದೆ. ಔದ್ಯೋಗಿಕ ಒತ್ತಡ ನಿವಾರಣೆಗೆ ಸಂಗೀತ ಅತ್ಯಂತ ಉಪಯುಕ್ತವಾದದ್ದು. ಸಂಗೀತದ ಆಸ್ವಾದಿಸುವಿಕೆಯಿಂದ ಕಾರ್ಯಕ್ಷಮತೆಯನ್ನು ವರ್ಧಿಸಲು ಸಾಧ್ಯ.” ಎಂದು ನುಡಿದರು.
    ಕಾರ್ತಿಕ್ ರಾವ್ ಇಡ್ಯಾ ಇವರ ನಿರ್ದೇಶನದಲ್ಲಿ  ‘ಗಾಯನ ಮಿತ್ರರು ಸುರತ್ಕಲ್’ ಇವರಿಂದ ನಾಮ ಸಂಕೀರ್ತನ ಕಾರ್ಯಕ್ರಮ ನಡೆಯಿತು. ಹಾಡುಗಾರಿಕೆಯಲ್ಲಿ ಸಂಪತ್ ಎಸ್. ಬಿ. ಮತ್ತು ಶ್ರೀನಿಧಿ ರಾವ್, ಸಹಗಾಯನದಲ್ಲಿ ಸೌರವ್ ಶ್ರೀಯಾನ್, ಶೈಲೇಶ್ ಬೈಕಂಪಾಡಿ ಮತ್ತು ಲಕ್ಷ್ಮೀಶ ಸೂರಿಂಜೆ,  ಹಾರ್ಮೋನಿಯಂನಲ್ಲಿ ವಿಜಯ್ ಆಚಾರ್ಯ ಕುಳಾಯಿ, ತಬಲಾದಲ್ಲಿ ಪ್ರಥಮ್ ಚೇಳಾಯ್ರು ಸಹಕರಿಸಿದರು.
    ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಇದರ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್  ಸ್ವಾಗತಿಸಿದರು. ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್ ಸುರತ್ಕಲ್, ರೋಟರಿ ಕ್ಲಬ್‌ ಇದರ ಸದಸ್ಯರಾದ ಸಚ್ಚಿದಾನಂದ ರಾವ್, ಪ್ರೊ. ಪಿ. ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ- ಬಹುಮುಖ ವ್ಯಕ್ತಿತ್ವದ ಧೃತಿ ಪಿ. ಶೆಟ್ಟಿಯ ‘ನೃತ್ಯ ದ್ಯುತಿ’
    Next Article ಸಾಹಿತ್ಯ ಸದನದಲ್ಲಿ ಡಾ. ಕೆ.ವಿ. ಜಲಜಾಕ್ಷಿ ಸಂಸ್ಮರಣ ಕಾರ್ಯಕ್ರಮ 
    roovari

    Comments are closed.

    Related Posts

    ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ‘ಯಕ್ಷ ಸಿಂಧೂರ’ | ಜೂನ್ 21 

    June 18, 2025

    ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ‘ಲಂಕಾ ದಹನ’ ಯಕ್ಷಗಾನ | ಜೂನ್ 21

    June 18, 2025

    ಪಯ್ಯನೂರಿನಲ್ಲಿ ತುರೀಯಮ್ ಮ್ಯೂಜಿಕ್ ಫೆಸ್ಟಿವಲ್ | ಜೂನ್ 19  

    June 18, 2025

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ “ಭಜನ್ ಸಂಧ್ಯಾ” 

    June 18, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.