Subscribe to Updates

    Get the latest creative news from FooBar about art, design and business.

    What's Hot

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮೈಸೂರಿನಲ್ಲಿ ಮಹಿಳಾ ಪ್ರಧಾನ ಏಕವ್ಯಕ್ತಿ ನಾಟಕೋತ್ಸವಕ್ಕೆ ಅರ್ಥಪೂರ್ಣ ತೆರೆ
    Drama

    ಮೈಸೂರಿನಲ್ಲಿ ಮಹಿಳಾ ಪ್ರಧಾನ ಏಕವ್ಯಕ್ತಿ ನಾಟಕೋತ್ಸವಕ್ಕೆ ಅರ್ಥಪೂರ್ಣ ತೆರೆ

    June 29, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ಕರ್ನಾಟಕ ಏಕೀಕರಣ ಟ್ರಸ್ಟ್ ಮೈಸೂರು ಹಾಗೂ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ ಹೋರಾಟಗಾರ ಡಾ. ಸಿದ್ದನಾಥ ಬಳ್ಳಾರಿ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಲೇಖಕಿ, ರಂಗಕರ್ಮಿ ಡಾ. ಸುಜಾತ ಅಕ್ಕಿ ಇವರ ಮೂರು ಏಕವ್ಯಕ್ತಿ ಪ್ರದರ್ಶನಗಳ ಮಹಿಳಾ ನಾಟಕೋತ್ಸವವು ದಿನಾಂಕ 28 ಜೂನ್ 2026ರಂದು ‘ಅಘಲೆ’ ನಾಟಕದ ಮನೋಜ್ಞ ಪ್ರದರ್ಶನದೊಂದಿಗೆ ಯಶಸ್ವಿಯಾಗಿ ಸಮಾರೋಪಗೊಂಡಿತು.

    ನಾಟಕ ಪ್ರದರ್ಶನಕ್ಕೂ ಮುನ್ನ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರೊ. ಭಾಗ್ಯಲಕ್ಷ್ಮಿ, ನಿಸರ್ಗ ಡಾ. ದಿವ್ಯ ಹಾಗೂ ಲೇಖಕಿ ಡಾ. ಸುಜಾತ ಅಕ್ಕಿ ಮಾತನಾಡಿ, ಮಹಿಳಾ ಬದುಕಿನ ಹೋರಾಟ, ಸಮಾನತೆ ಹಾಗೂ ಸಮಾಜದಲ್ಲಿ ಮಹಿಳೆಯ ಪಾತ್ರವನ್ನು ರಂಗಭೂಮಿಯ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಅಗತ್ಯವನ್ನು ಒತ್ತಿ ಹೇಳಿದರು.

    ಈ ವಿಶೇಷ ನಾಟಕೋತ್ಸವದಲ್ಲಿ ಮಹಿಳಾ ಬದುಕಿನ ವಿವಿಧ ಆಯಾಮಗಳನ್ನು ಅನಾವರಣಗೊಳಿಸುವ ಮೂರು ಮಹಿಳಾ ಪ್ರಧಾನ ಏಕವ್ಯಕ್ತಿ ನಾಟಕಗಳು ಪ್ರದರ್ಶನಗೊಂಡವು. ಮೊದಲ ನಾಟಕ ‘ಅಹಲ್ಯೆ’ಯಲ್ಲಿ ಪುರಾಣ ಪ್ರಸಿದ್ಧ ಅಹಲ್ಯೆಯ ಕಥೆಯನ್ನು ಹೊಸ ದೃಷ್ಟಿಕೋನದಲ್ಲಿ ನಿರೂಪಿಸಲಾಗಿದೆ. ಇಂದ್ರನ ಮೋಸದ ಜಾಲದಲ್ಲಿ ಸಿಲುಕಿ ತನ್ನದೇ ಅಲ್ಲದ ತಪ್ಪಿಗೆ ಗೌತಮ ಮುನಿಯ ಶಾಪಕ್ಕೆ ಗುರಿಯಾದ ಅಹಲ್ಯೆಯನ್ನು ಸಾಂಪ್ರದಾಯಿಕ ಕಥೆಯಂತೆ ಕಲ್ಲಾಗಿಸುವ ಬದಲು, ಲೇಖಕಿ ಡಾ. ಸುಜಾತ ಅಕ್ಕಿ ಆಕೆಯನ್ನು ಕಾಡಿಗೆ ಕಳುಹಿಸುವ ಮೂಲಕ ಆತ್ಮಾವಲೋಕನ ಮತ್ತು ಸ್ವಾಭಿಮಾನದ ಪ್ರತೀಕವಾಗಿ ಚಿತ್ರಿಸಿದ್ದಾರೆ.

    ಎರಡನೇ ನಾಟಕದಲ್ಲಿ ಅಕ್ಕನಾಗಲೆಯ ಹೋರಾಟಮಯ ಬದುಕನ್ನು ತೆರೆದಿಡಲಾಗಿದೆ. ಬಾಲ್ಯದಲ್ಲಿಯೇ ತಮ್ಮ ಬಸವಣ್ಣನೊಂದಿಗೆ ಕಲ್ಯಾಣಕ್ಕೆ ತೆರಳಿ, ಸಾಮಾಜಿಕ ಅಸಮಾನತೆ ಹಾಗೂ ಜಾತಿ-ಲಿಂಗ ಭೇದದ ವಿರುದ್ಧ ಹೋರಾಡಿದ ಅಕ್ಕನಾಗಲೆಯ ಧೈರ್ಯ, ಸಂಕಲ್ಪ ಮತ್ತು ಸಾಮಾಜಿಕ ಕಾಳಜಿಯನ್ನು ನಾಟಕ ಪರಿಣಾಮಕಾರಿಯಾಗಿ ಬಿಂಬಿಸಿದೆ.

    ಸಮಾರೋಪದ ‘ಅಘಲೆ’ ನಾಟಕವು ಮಹಿಳೆಯ ಇತಿಹಾಸ, ನಾಗರಿಕತೆಯ ಬೆಳವಣಿಗೆ ಹಾಗೂ ಇಂದಿನ ಸಾಮಾಜಿಕ ವಾಸ್ತವವನ್ನು ಒಟ್ಟುಗೂಡಿಸಿದ ಚಿಂತನಾತ್ಮಕ ಕೃತಿಯಾಗಿದೆ. ಮಾನವ ವಿಕಾಸದ ಪಥದಲ್ಲಿ ಕೃಷಿಯನ್ನು ಕಂಡು ಹಿಡಿದು, ಜೋಗುಳದ ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಿದವಳು ಸ್ತ್ರೀ ಎಂಬ ಸತ್ಯವನ್ನು ನಾಟಕ ನೆನಪಿಸುತ್ತದೆ. ಕುಟುಂಬ ಮತ್ತು ಸಮಾಜವನ್ನು ಪೊರೆಯುವ ಮಹಿಳೆ ಕಾಲಕ್ರಮೇಣ ಪುರುಷಾಧೀನಳಾಗಿ, ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿ, ಕೊಲೆ ಸೇರಿದಂತೆ ಅನೇಕ ರೀತಿಯ ಶೋಷಣೆಗೆ ಒಳಗಾಗುತ್ತಿರುವ ದುರಂತವನ್ನು ಮನಮುಟ್ಟುವ ರೀತಿಯಲ್ಲಿ ಅನಾವರಣಗೊಳಿಸುತ್ತದೆ.

    “ಜೀವನದಲ್ಲಿ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕಾರಗಳ ಮೂಲಕ ಮನಸ್ಸನ್ನು ಸಾಕ್ಷಾತ್ಕರಿಸಿಕೊಳ್ಳಬೇಕು. ಪ್ರಕೃತಿ ನೀಡಿರುವ ಅಮೂಲ್ಯ ಕೊಡುಗೆಗಳನ್ನು ಗೌರವಿಸಿ, ಬದುಕನ್ನು ಸಾರ್ಥಕಗೊಳಿಸಿಕೊಂಡು ನಮ್ಮ ಅನನ್ಯತೆಯನ್ನು ಮೆರೆಯಬೇಕು. ಅಘಲೆಯ ವಿಮೋಚನೆ ಪ್ರತಿಯೊಬ್ಬ ಮಹಿಳೆಯ ಆತ್ಮಗೌರವದ ಸಂಕೇತ. ಹೆಣ್ಣು ಮಾನವ ಬದುಕಿನ ಜೀವಂತ ಕಲೆ; ಆಕೆ ಈ ಭುವಿಯಲ್ಲಿ ಮಾನವೀಯತೆಯ ತೊಟ್ಟಿಲು ತೂಗುವ ಶಕ್ತಿ” ಎಂಬ ಸಂದೇಶವನ್ನು ನಾಟಕ ಅತ್ಯಂತ ಪರಿಣಾಮಕಾರಿಯಾಗಿ ಸಾರಿತು. ‘ಅಘಲೆ’ ಪಾತ್ರದಲ್ಲಿ ಕುಮಾರಿ ಕಾವ್ಯ ಇವರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಭಾವಪೂರ್ಣ ಅಭಿನಯ, ಪರಿಣಾಮಕಾರಿ ಸಂಭಾಷಣೆ, ಸಂಗೀತ ಹಾಗೂ ಬೆಳಕಿನ ವಿನ್ಯಾಸ ನಾಟಕದ ಪರಿಣಾಮವನ್ನು ಮತ್ತಷ್ಟು ಹೆಚ್ಚಿಸಿತು. ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯ, ಶೋಷಣೆ ಹಾಗೂ ಸಾಮಾಜಿಕ ಅಸಮಾನತೆಗಳ ಕುರಿತು ಪ್ರೇಕ್ಷಕರಲ್ಲಿ ಗಂಭೀರ ಚಿಂತನೆ ಮೂಡಿಸುವಲ್ಲಿ ನಾಟಕ ಯಶಸ್ವಿಯಾಯಿತು.

    ಮಹಿಳಾ ಲೇಖಕಿಯೇ ರಚಿಸಿ, ವಿನ್ಯಾಸಗೊಳಿಸಿ, ಮಹಿಳಾ ಕಲಾವಿದೆಯರಿಂದಲೇ ಪ್ರದರ್ಶಿಸಲ್ಪಟ್ಟ ಈ ವಿಶಿಷ್ಟ ನಾಟಕೋತ್ಸವ ಮೈಸೂರಿನ ರಂಗಭೂಮಿಯಲ್ಲಿ ಅಪರೂಪದ ಕಲಾ ಪ್ರಯೋಗವಾಗಿ ಪ್ರಶಂಸೆಗೆ ಪಾತ್ರವಾಯಿತು. ಮೂರು ನಾಟಕಗಳ ರಂಗಪಠ್ಯವನ್ನು ರೂಪಿಸಿ ನಿರ್ದೇಶಕ ಅರಸೀಕೆರೆ ಯೋಗಾನಂದ ಯಶಸ್ವಿಯಾಗಿ ರಂಗದ ಮೇಲೆ ತಂದರು. ಸಂಗೀತವನ್ನು ಸಿದ್ದೇಶ್ವರ ಬದನವಾಳು ಹಾಗೂ ಸುಬ್ರಮಣ್ಯ ಸಂಯೋಜಿಸಿದ್ದು, ಬೆಳಕಿನ ವಿನ್ಯಾಸವನ್ನು ಜೀವನ್ ಕುಮಾರ್ ಬಿ. ಹೆಗ್ಗೋಡು ನಿರ್ವಹಿಸಿದ್ದರು. ಮೂರು ನಾಟಕಗಳ ರಚನೆ ಡಾ. ಸುಜಾತ ಅಕ್ಕಿ ಅವರದ್ದಾಗಿದೆ.

    ಸಮಾರಂಭದಲ್ಲಿ ಹಿರಿಯ ರಂಗಕರ್ಮಿ ಎನ್.ಎಸ್. ಗೋಪಿನಾಥ್, ಪೃಥ್ವಿ ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ಅರಸೀಕೆರೆ ಯೋಗಾನಂದ, ‘ನಿರಂತರ’ದ ನಿರ್ದೇಶಕ ಶ್ರೀನಿವಾಸ್ ಪಾಲಹಳ್ಳಿ ಸೇರಿದಂತೆ ಅನೇಕ ರಂಗಕರ್ಮಿಗಳು, ಸಾಹಿತ್ಯಾಸಕ್ತರು, ಕಲಾಭಿಮಾನಿಗಳು ಹಾಗೂ ಪ್ರೇಕ್ಷಕರು ಉಪಸ್ಥಿತರಿದ್ದು, ನಾಟಕೋತ್ಸವದ ಯಶಸ್ಸಿಗೆ ಸಾಕ್ಷಿಯಾದರು. ಮಹಿಳಾ ಸಂವೇದನೆ, ಸಾಮಾಜಿಕ ಬದ್ಧತೆ ಹಾಗೂ ಕಲಾತ್ಮಕ ಅಭಿವ್ಯಕ್ತಿಯ ಸುಂದರ ಸಂಗಮವಾಗಿ ಮೂಡಿಬಂದ ಈ ಮೂರು ದಿನಗಳ ಮಹಿಳಾ ನಾಟಕೋತ್ಸವವು ಮೈಸೂರಿನ ಸಾಂಸ್ಕೃತಿಕ ವಲಯದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದು, ಮಹಿಳಾ ಕೇಂದ್ರಿತ ರಂಗಪ್ರಯೋಗಗಳಿಗೆ ಹೊಸ ದಿಕ್ಕು ತೋರಿದ ಕಾರ್ಯಕ್ರಮವಾಗಿ ಗಮನ ಸೆಳೆಯಿತು.

    baikady drama Literature roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಹಾಸನ ಜಿಲ್ಲಾ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಗೋಷ್ಠಿ
    Next Article ‘ಏಕದಿನ ಸಾಹಿತ್ಯ ಅಭಿಯಾನ’ದಲ್ಲಿ ವಿದ್ಯಾರ್ಥಿಗಳಿಂದ ಕವನ ವಾಚನ ಹಾಗೂ ರಸ ಪ್ರಶ್ನೆ
    roovari

    Add Comment Cancel Reply


    Related Posts

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026

    ‘ಯಕ್ಷಸಾಧಕ’ ಪ್ರಶಸ್ತಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆ

    July 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.