ಉಡುಪಿ : ಸಂಗಮ ಕಲಾವಿದೆರ್ ಮಣಿಪಾಲ (ರಿ.), ಮಣಿಪಾಲ ಪದವಿ ಪೂರ್ವ ಕಾಲೇಜು, ರೋಟರಿ ಕ್ಲಬ್ ಮಣಿಪಾಲ ಮತ್ತು ಯುವಕ ಮಂಡಲ (ರಿ.) ಪೆರಂಪಳ್ಳಿ ಸುವರ್ಣ ಮಹೋತ್ಸವ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಹಾಗೂ ಕರಾವಳಿಯ ನಿರ್ದಿಗಂತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಹಮ್ಮಿಕೊಂಡಿರುವ ‘ಕಾಮನಬಿಲ್ಲು’ ಹತ್ತು ದಿನಗಳ ಮಕ್ಕಳ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ದಿನಾಂಕ 20 ಮೇ 2026ರಂದು ಸಂಜೆ 5-30 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಲೇಖಕರು ಮತ್ತು ರಂಗಭೂಮಿ ಕಲಾವಿದರಾದ ಸಚಿನ್ ಅಂಕೋಲ ಇವರು ಸಮಾರೋಪದ ಮಾತುಗಳನ್ನಾಡಲಿದ್ದು, ಮಣಿಪಾಲ ಹೈಸ್ಕೂಲ್ ಟ್ರಸ್ಟ್ ಇದರ ಅಧ್ಯಕ್ಷರು ಹಾಗೂ ಸಂಚಾಲಕರಾದ ಕೆ. ಪ್ರಕಾಶ್ ಶೆಟ್ಟಿ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ‘ರಾಂ ರೀಂ ರೂಂ’ ತಂಡದವರು ರಂಜಿತ್ ಶೆಟ್ಟಿ ಕುಕ್ಕುಡೆ ಇವರ ವಿನ್ಯಾಸ ಮತ್ತು ನಿರ್ದೇಶನ ಹಾಗೂ ಪೂರ್ವಿ ಎಸ್. ಕೋಟ್ಯಾನ್ ಇವರ ಸಹ ನಿರ್ದೇಶನದಲ್ಲಿ ‘ಕೋಟು ಗುಮ್ಮ’, ‘ಮಾಯ’ ತಂಡದವರು ರೋಹಿತ್ ಎಸ್. ಬೈಕಾಡಿ ಇವರ ವಿನ್ಯಾಸ ಮತ್ತು ನಿರ್ದೇಶನ ಹಾಗೂ ಸನ್ನಿದಿ ಎನ್. ಬೋರ್ಕರ್ ಇವರ ಸಹ ನಿರ್ದೇಶನದಲ್ಲಿ ‘ಜೈ ಬೇತಾಳ’, ‘ರೋಹಂತರು’ ತಂಡದವರು ರಮೇಶ್ ಬೆಣಕಲ್ ಇವರ ವಿನ್ಯಾಸ ಮತ್ತು ನಿರ್ದೇಶನ ಹಾಗೂ ಸಮೃದಿ ಎನ್. ಬೋರ್ಕರ್ ಇವರ ಸಹ ನಿರ್ದೇಶನದಲ್ಲಿ ‘ದುರ್ಬಲರ ದಂಗೆ’, ‘ಜಟಾಪಟಿ’ ತಂಡದವರು ಭುವನ್ ಮಣಿಪಾಲ್ ಇವರ ವಿನ್ಯಾಸ ಮತ್ತು ನಿರ್ದೇಶನ ಹಾಗೂ ರೋಶಿನಿ ಆರ್. ಇವರ ಸಹ ನಿರ್ದೇಶನದಲ್ಲಿ ‘Race’ ನಾಟಕಗಳ ಪ್ರದರ್ಶನ ನಡೆಯಲಿದೆ.

