ಮಂಗಳೂರು : ಸಾಯಿ ವಿಹಾರ್ ಮಕ್ಕಳ ವ್ಯಕ್ತಿತ್ವ ವಿಕಸನ ಕೇಂದ್ರ, ಶ್ರೀ ಕೃಷ್ಣ ಕೃಪಾ ಅಶೋಕ ನಗರ ಮಂಗಳೂರು ಇದರ ವತಿಯಿಂದ ಸಾಯಿ ವಿಹಾರದಲ್ಲಿ ಯಕ್ಷಗಾನ ತರಬೇತಿ ಪಡೆದ ಮಕ್ಕಳಿಂದ ಶ್ರೀ ಸದ್ಗುರು ಸಾಯಿನಾಥರ ಸೇವಾ ಪ್ರಯುಕ್ತ ಯಕ್ಷಗುರು ಜಯಕರ ಪಂಡಿತ್ ಬಜಾಲ್ ಇವರ ನಿರ್ದೇಶನದಲ್ಲಿ ‘ಶ್ರೀ ಕೃಷ್ಣ ಲೀಲೆ ಕಂಸ ವಧೆ’ ಎಂಬ ಕನ್ನಡ ಯಕ್ಷಗಾನ ಬಯಲಾಟವು ದಿನಾಂಕ 05 ಏಪ್ರಿಲ್ 2026ರಂದು ಸಂಜೆ 5-30 ಗಂಟೆಗೆ ಸಾಯಿ ವಿಹಾರ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಭಾಗವತರು ದಯಾನಂದ ಕೋಡಿಕಲ್ ಹಾಗೂ ದಿಲೀಪ್ ಆಚಾರ್ಯ ಮತ್ತು ಚಂಡೆ ಮದ್ದಲೆಯಲ್ಲಿ ರಾಜೇಶ್ ಕುಡುಪಾಡಿ ಹಾಗೂ ಅತಿಶಯ್ ರಾವ್ ಸಹಕರಿಸಲಿದ್ದಾರೆ.

