ಮಂಗಳೂರು : ಇತ್ತೀಚಿಗೆ ನಿಧನರಾದ ಹಿರಿಯ ತಾಳಮದ್ದಳೆ ಅರ್ಥಧಾರಿ ಹವ್ಯಾಸಿ ಯಕ್ಷಗಾನ ಕಲಾವಿದ ಪಿ. ಪ್ರಭಾಕರ ಕಾಮತರ ನುಡಿ ನಮನ ಕಾರ್ಯಕ್ರಮವು ದಿನಾಂಕ 04 ಮೇ 2026ರಂದು ಮಂಗಳೂರು ವಿಠೋಬಾ ದೇವಸ್ಥಾನ ರಸ್ತೆಯಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಶ್ರೀ ವಾಗೀಶ್ವರೀ ಕಲಾವರ್ಧಕ ಸಂಘ ಸಂಘದ ಗೌರವಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಇವರು ಮಾತನಾಡಿ “ಯಕ್ಷಗಾನ ಸೇವೆಯಿಂದ ಭಗವಂತನ ಸಾಕ್ಷಾತ್ಕಾರ ಪಡೆದ ಪ್ರಭಾಕರ ಕಾಮತ್ ಇವರು ವಾರದ ಕೂಟ ನಡೆಸುವ ಹಲವು ಯಕ್ಷಗಾನ ಸಂಘಗಳಲ್ಲಿ ಹಲವು ದಶಕಗಳಿಂದ ನಿರಂತರವಾಗಿ ತೊಡಗಿಸಿಕೊಂಡು ಸಾರ್ಥಕ ಜೀವನವನ್ನು ನಡೆಸಿದವರು” ಎಂದು ನುಡಿದರು.


‘ಪ್ರಭಾಕರ ಯಕ್ಷ ನಮನ’ ಶೀರ್ಷಿಕೆಯಲ್ಲಿ ಶ್ರೀ ಜಗದಂಬಾ ಯಕ್ಷಗಾನ ಮಂಡಳಿಯವರಿಂದ ‘ವಾಲಿ ಮೋಕ್ಷ’, ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ವತಿಯಿಂದ ‘ಅತಿಕಾಯ ಮೋಕ್ಷ’ ಹಾಗೂ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯವರಿಂದ ‘ಸುಧನ್ವ ಮೋಕ್ಷ’ ಯಕ್ಷಗಾನ ತಾಳಮದ್ದಳೆ ಕೂಟಗಳು ಜರಗಿದವು.

ಸಂಜಯ ರಾವ್, ಶ್ರೀನಾಥ ಪ್ರಭು, ಸಿ.ಎಸ್. ಭಂಡಾರಿ, ಪ್ರಫುಲ್ಲಾ ನಾಯಕ್, ಅರ್ಚಕ ವೇದಮೂರ್ತಿ ವಾಸುದೇವ ಭಟ್, ಶಿವಪ್ರಸಾದ ಪ್ರಭು, ಶೋಭಾ ಐತಾಳ, ಅಶೋಕ ಬೋಳೂರು, ಯೋಗೀಶ ಕುಮಾರ್ ಜೆಪ್ಪು, ಜಯರಾಮ ಅಂಚನ್, ಶಿವರಾಮ ಪಣಂಬೂರು, ಸಂಘದ ಕಲಾವಿದರು ಹಾಗೂ ಪ್ರಭಾಕರ ಕಾಮತ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.


