Subscribe to Updates

    Get the latest creative news from FooBar about art, design and business.

    What's Hot

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

    May 28, 2025

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸದ್ಭೋಧ ಗುರುಕುಲದಲ್ಲಿ ಲೋಕಾರ್ಪಣೆಗೊಂಡ ‘108 ಚೈತನ್ಯದಾಯಿನೀ – ಕಥಾ ಮಾಲಾ’
    Book Release

    ಸದ್ಭೋಧ ಗುರುಕುಲದಲ್ಲಿ ಲೋಕಾರ್ಪಣೆಗೊಂಡ ‘108 ಚೈತನ್ಯದಾಯಿನೀ – ಕಥಾ ಮಾಲಾ’

    January 26, 2025Updated:January 25, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಡಾ. ವಾಗೀಶ್ವರಿ ಶಿವರಾಮರ 35ನೇ ಕೃತಿ ‘108 ಚೈತನ್ಯದಾಯಿನೀ – ಕಥಾ ಮಾಲಾ’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 22 ಜನವರಿ 2025ರಂದು ಮಂಗಳೂರಿನ ಚಿಲಿಂಬಿಯ ಕೋಟೆಕಣಿ ರಸ್ತೆಯಲ್ಲಿರುವ ಸದ್ಭೋಧ ಗುರುಕುಲದಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀ ಎಸ್. ಎಸ್. ನಾಯಕ್ ಮಾತನಾಡಿ “ಜ್ಞಾನ ನೀಡುವ ಪುಸ್ತಕ ಒಬ್ಬ ಒಳ್ಳೆಯ ಗೆಳೆಯ. ದೇಶ, ಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಜ್ಞಾನ ನೀಡುವ ಪುಸ್ತಕಗಳನ್ನು ಬಾಲ್ಯದಲ್ಲಿಯೇ ಓದುವ ಹವ್ಯಾಸ ಬೆಳೆಸಿಕೊಂಡಾಗಲೇ ಸತ್ಪ್ರಜೆಗಳಾಗಬಹುದು. ಡಾ. ವಾಗೀಶ್ವರಿ ಶಿವರಾಮರ 35ನೇ ಕೃತಿ ‘108 ಚೈತನ್ಯದಾಯಿನೀ ಕಥಾ ಮಾಲಾ’ ಕೃತಿಯಲ್ಲಿರುವ 108 ಕಥೆಗಳು, ಸುಭಾಷಿತಗಳು ಎಲ್ಲರಲ್ಲೂ ಚೈತನ್ಯವನ್ನು ಅರಳಿಸುವ ಟಾನಿಕ್ (ರಸಾಯನ )ಆಗಿದೆ” ಎಂದರು.ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಎನ್. ಐ. ಟಿ. ಕೆ. ನಿರ್ಮಿತ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿ ಮಾತನಾಡಿ “ಹಿರಿಯರು ಮನೆಯಲ್ಲಿ ಸ್ತೋತ್ರ ಮಂತ್ರಗಳನ್ನು ಗಟ್ಟಿಯಾಗಿ ಉಚ್ಚರಿಸುತ್ತಾ, ಉತ್ತಮ ಕೃತಿಗಳನ್ನು ಓದುತ್ತಾ, ಒಳ್ಳೆಯ ವಿಚಾರಗಳನ್ನು ಮಕ್ಕಳಿಗೆ ತಿಳಿಸಬೇಕು. ಅವಾಗಲೇ ಮಕ್ಕಳು ಸಂಸ್ಕಾರವಂತರಾಗುತ್ತಾರೆ” ಎಂದು ತಿಳಿಸಿದರು.

    ಕೃತಿಯ ಲೇಖಕ ಡಾಕ್ಟರ್ ವಾಗೀಶ್ವರಿ ಶಿವರಾಮ್ ಮಾತನಾಡಿ “ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠೆಗೊಂಡ ದಿನವೇ ಕೃತಿಯು ಲೋಕಾರ್ಪಣೆಯಾಗಿದೆ. ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಕೃತಿಯು ಪ್ರೇರಣೆ ನೀಡಲಿ ಹಾಗೂ ಎಲ್ಲರಲ್ಲೂ ಚೈತನ್ಯ ಅರಳಲಿ” ಎಂದು ಶುಭ ಹಾರೈಸಿದರು.
    ಸಭಾ ಕಾರ್ಯಕ್ರಮದ ಬಳಿಕ ಶ್ರೀಯುತರಿಂದ ‘ಸುಂದರಕಾಂಡ’ದ ಪ್ರವಚನ ನಡೆಯಿತು. ಗುರುಕುಲದ ಸಂಚಾಲಕರಾದ ಕೃಷ್ಣದೇವ ನಾವಡರು ವಂದನಾರ್ಪಣೆ ಸಲ್ಲಿಸಿದರು.

    Book release kannada Literature
    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ – ಪತ್ರಿಕೋದ್ಯಮ ಶಿಕ್ಷಣದ ಭೀಷ್ಮ ಡಾ. ನಾಡಿಗ ಕೃಷ್ಣಮೂರ್ತಿ
    Next Article ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಸದಾನಂದ ರಂಗಮಂಟಪದಲ್ಲಿ ‘ಶ್ರೀ ಗೋಪಾಲಕೃಷ್ಣ ನಾಯರಿ ರಂಗ ಪ್ರಶಸ್ತಿ’ ಪ್ರದಾನ ಸಮಾರಂಭ
    roovari

    Add Comment Cancel Reply


    Related Posts

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025

    ಕಾವೇರಿ ಕಾಲೇಜಿನಲ್ಲಿ ಮೂರು ಪುಸ್ತಕಗಳ ಲೋಕಾರ್ಪಣೆ ಹಾಗೂ ದತ್ತಿನಿಧಿ ಕಾರ್ಯಕ್ರಮ | ಮೇ 31

    May 28, 2025

    ಉತ್ತರ ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ ಪ್ರಕಟ

    May 28, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.