Subscribe to Updates
Get the latest creative news from FooBar about art, design and business.
Author: roovari
ತುಮಕೂರು : ಹಾವೇರಿಯ ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನ ಕೊಡಮಾಡುವ 2024ನೇ ಸಾಲಿನ ‘ನಾ.ಶ್ರೀ.ರಾಜಪುರೋಹಿತ ಸಂಶೋಧನಾ’ ಪ್ರಶಸ್ತಿಗೆ ಸಂಶೋಧಕ ಆರ್ಾ. ಶೇಷಶಾಸ್ತ್ರಿ ಹಾಗೂ ‘ಗಳಗನಾಥ ಕಾದಂಬರಿ’ ಪ್ರಶಸ್ತಿಗೆ ಕೃಷಿ ವಿಜ್ಞಾನಿ, ಲೇಖಕ ಕೆ.ಎನ್. ಗಣೇಶಯ್ಯ ಭಾಜನರಾಗಿದ್ದಾರೆ. ಪ್ರಶಸ್ತಿಯು ರೂ.50,000/- ನಗದು, ಫಲಕ ಒಳಗೊಂಡಿದ್ದು, ದಿನಾಂಕ 30 ಜುಲೈ 2026ರಂದು ತುಮಕೂರಿನ ಶ್ರೀದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಕೆ.ಆರ್ೊ. ಕಮಲೇಶ್ ತಿಳಿಸಿದ್ದಾರೆ. ‘ಗಳಗನಾಥರನ್ನು ಕಾದಂಬರಿಯ ಪಿತಾಮಹ ಎಂದು ಗುರುತಿಸಲಾಗುತ್ತಿದೆ. ಕೇವಲ ಪದ್ಯ ರೂಪದಲ್ಲಿದ್ದ ಸಾಹಿತ್ಯಕ್ಕೆ ಗದ್ಯ ರೂಪ ಕೊಟ್ಟರು. ರಾಜಪುರೋಹಿತರು ಶಿಕ್ಷಕರಾಗಿ ಕೆಲಸ ಮಾಡುತ್ತಾ ಅನೇಕ ಸಂಶೋಧನೆ ಕೈಗೊಂಡಿದ್ದರು. ಇವರ ಹೆಸರಿನಲ್ಲಿ 2016ರಿಂದ ಪ್ರತಿ ವರ್ಷ ಒಬ್ಬರು ಕಾದಂಬರಿಕಾರರು ಮತ್ತು ಸಂಶೋಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಕಾಂತಾವರ : ಶ್ರೀ ಕ್ಷೇತ್ರ ಕಾಂತಾವರದಲ್ಲಿ ಶ್ರೀ ಯಕ್ಷದೇಗುಲದ ‘ಯಕ್ಷೋಲ್ಲಾಸ ಸಂಭ್ರಮ’ ವಾರ್ಷಿಕ ಕಾರ್ಯಕ್ರಮವು ದಿನಾಂಕ 26 ಜುಲೈ 2026ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಂತಾವರ ಕ್ಷೇತ್ರದ ಧರ್ಮದರ್ಶಿ ಜೀವಂಧರ ಬಲ್ಲಾಳ್ ಇವರು ಮಾತನಾಡಿ “ಯಾವುದೇ ಸಂಘಟನೆ ನಿರಂತರ ಚಟುವಟಿಕೆಗಳನ್ನು ಮಾಡಬೇಕಾದರೆ ಸಂಘಟನೆಯ ಸದಸ್ಯರ ಶ್ರಧ್ದೆ, ಭಕ್ತಿ, ಪರಿಶ್ರಮ ಮುಖ್ಯ ಸಾಧನೆಯೇ ಕಾರಣ” ಎಂದು ಹೇಳಿದರು. ಮೂಡಬಿದ್ರೆಯ ಧನಲಕ್ಷ್ಮೀ ಸಮೂಹ ಸಂಸ್ಥೆಯ ಶ್ರೀಪತಿ ಭಟ್ ಇವರು ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಇಪ್ಪತ್ನಾಲ್ಕು ಯಕ್ಷೋಲ್ಲಾಸ ಪೂರೈಸಿ ಬೆಳ್ಳಿ ಸಂಭ್ರಮದತ್ತ ಸಾಗುವ ಸಂಸ್ಥೆಯ ಕಲಾಸೇವೆಗೆ ಶುಭಹಾರೈಸಿದರು. “ಕಲೆಯನ್ನೇ ಆರಾದಿಸುವ ಕಲಾವಿದನನ್ನು ಸರಸ್ವತಿ ಎಂದೂ ಕೈ ಬಿಡುವುದಿಲ್ಲ ಎಂದರೆ ಕಾಂತಾವರದ ಯಕ್ಷದೇಗುಲ ಸಂಸ್ಥೆ ಉದಾಹರಣೆ” ಎಂದು ಕಾರ್ಕಳದ ಉದ್ಯಮಿ ವಿಜಯ ಶೆಟ್ಟಿಯವರು ಹೇಳಿದರು. ಯಕ್ಷಗಾನದ ಹಿರಿಯ ಕಲಾವಿದರಾದ ಪೂಕಳ ಲಕ್ಷ್ಮೀನಾರಾಯಣ ಭಟ್ ಇವರಿಗೆ ಪುತ್ತೂರು ದಿ. ಶ್ರೀಧರ ಭಂಡಾರಿ ಸಂಸ್ಮರಣಾರ್ಥ ಹಾಗೂ ಬಾಯಾರು ರಮೇಶ್ ಶೆಟ್ಟಿ ಇವರಿಗೆ ಬಾಯಾರು ಪ್ರಕಾಶ್ಚಂದ್ರ ರಾವ್ ಇವರ…
ಮಂಗಳೂರು : ಕೊಂಕಣಿ ಲೇಖಕರ ಸಂಘ ಕರ್ನಾಟಕ ವತಿಯಿಂದ ನಂತೂರಿನ ಸಂದೇಶ ಪ್ರತಿಷ್ಠಾನ ಸಭಾಂಗಣದಲ್ಲಿ ದಿನಾಂಕ 26 ಜುಲೈ 2026ರಂದು ಕೊಂಕಣಿ ಸಾಹಿತ್ಯ ಸಂವಾದ ಕಾರ್ಯಕ್ರಮ ಆಯೋಜಿಸಲಾಯಿತು. ಕೊಂಕಣಿ ಸಾಹಿತಿ ಮತ್ತು ಲೇಖಕ ಮಾಚ್ಚಾ ಮಿಲಾರ್ (ಮಾರ್ಸೆಲ್ ಡಿ’ಸೋಜಾ) ಇವರೊಂದಿಗೆ ಸಂವಾದ ನಡೆಯಿತು. ಖ್ಯಾತ ಲೇಖಕ ಲಾಯ್ಡ್ ತಾಕೋಡೆ ಅವರು ಸಂವಾದ ನಡೆಸಿಕೊಟ್ಟರು. ಹಿರಿಯ ಕೊಂಕಣಿ ಸಾಹಿತಿ ದಿ. ಮನು ಬಹರೈನ್ ಅವರಿಗೆ ಪುಷ್ಪಾಂಜಲಿ ಸಮರ್ಪಿಸಲಾಯಿತು. ಸಾಹಿತಿ ಡೊಲ್ಫಿ ಲೋಬೊ ಕಾಸ್ಸಿಯಾ ಇವರು ಮನು ಅವರ ಅಮೂಲ್ಯ ಸಾಹಿತ್ಯ ಸೇವೆಯನ್ನು ಸ್ಮರಿಸಿದರು. ಸಂಘದ ಸಂಚಾಲಕ ರಿಚರ್ಡ್ ಮೊರಾಸ್, ಸಮಿತಿ ಸದಸ್ಯರಾದ ಡಾ. ಎಡ್ವರ್ಡ್ ನಜರತ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟಾನಿ ಅಲ್ವಾರಿಸ್, ದಿ. ಮನು ಬಾಹ್ರಯ್ನ್ ಇವರ ಪತ್ನಿ ರೋಸಿ ಲೋಬೋ, ಪುತ್ರ ಸ್ಟೀವನ್ ಲೋಬೋ ಹಾಗೂ ಕೊಂಕಣಿ ಲೇಖಕರು ಮತ್ತು ಸಾಹಿತ್ಯಾಸಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜೋಕಿಂ ಸ್ಟಾನಿ ಅಲ್ವಾರಿಸ್ ಇವರು ಮಾತನಾಡಿ, “ಕೊಂಕಣಿ ಭಾಷೆ…
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 01 ಆಗಸ್ಟ್ 2026ರಂದು ಸಂಜೆ 4-00 ಗಂಟೆಗೆ ‘ಕಾವ್ಯಾಂ ವ್ಹಾಳೊ-17’ ಶೀರ್ಷಿಕೆಯಡಿ ಕವಿಗೋಷ್ಠಿಯನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ವಹಿಸಿಕೊಳ್ಳಲಿದ್ದಾರೆ. ಜನಪ್ರಿಯ ಮಿಮಿಕ್ರಿ ಕಲಾವಿದರಾಗಿರುವಂತಹ ಡಾ. ವಸಂತ್ ಎಸ್. ಬಾಂದೇಕರ್ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಹಿರಿಯ ಪ್ರೆಸ್ ಫೋಟೋಗ್ರಾಫರ್ ಆಗಿರುವ ಶ್ರೀ ರಾಮಚಂದ್ರ ಭಟ್ ಉಳ್ಳಾಲ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಖ್ಯಾತ ಕವಿಯಾದ ವಿಲ್ಫ್ರೆಡ್ ಲೋಬೊ ಪಡೀಲ್ರವರು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ಜೊಸ್ಸಿ ಪಿಂಟೊ ಕಿನ್ನಿಗೋಳಿ, ಶೈಲಾ ಮಂಗ್ಳೂರ್ಕರ್, ಚೆಲ್ಸಿಯಾ ಪರ್ಲ್ ಕ್ಯಾಸ್ತೆಲಿನೊ, ರಿಚ್ಚಿ ಪಿರೇರಾ, ಮಾರ್ಸೆಲ್ ಡಿಸೋಜ (ಮಾಚ್ಚಾ ಮಿಲಾರ್), ಅಸುಂತಾ ಡಿಸೋಜ, ಜಗದೀಶ್ ಭಂಡಾರಿ, ರೋನ್ ಮಾಯ್ಕಲ್ ವಾಸ್, ಜೋಯ್ಸ್ ಪಿಂಟೊ ಕಿನ್ನಿಗೋಳಿ ಮತ್ತು ಲೊರೆನ್ಸ್ ಬ್ಯಾಪ್ಟಿಸ್ಟ್ ಜೆಪ್ಪು ಇವರು ತಮ್ಮ ಕವಿತೆಗಳನ್ನು ವಾಚಿಸುವರು. ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2026ರ ವರ್ಷಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸ ಮಾಲೆಯ ಸಪ್ತಮ ಸೋಪಾನ ಉಪನ್ಯಾಸ ಕಾರ್ಯಕ್ರಮವು ದಿನಾಂಕ 25 ಜುಲೈ 2026ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ಇದರ ‘ಸಂಭ್ರಮ’ ಸಭಾಂಗಣದಲ್ಲಿ ನಡೆಯಿತು. ಈ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆಯವರು ‘ಕೃಷ್ಣ ಮತ್ತು ಕೃಷ್ಣೆ’ ಎಂಬ ಕುರಿತಾಗಿ ಮಾತನಾಡಿ “ಏಕಚಕ್ರಾ ನಗರದಲ್ಲಿ ಕುಂತಿ ತನ್ನ ಐವರು ಮಕ್ಕಳೊಂದಿಗೆ ಒಂದು ಬ್ರಾಹ್ಮಣರ ಮನೆಯಲ್ಲಿ ವಾಸವಿದ್ದ ಸಂದರ್ಭ. ಆ ಊರಿನಲ್ಲಿರುವ ಬಕಾಸುರನೆಂಬ ರಾಕ್ಷಸನಿಗೆ ಆಹಾರವಾಗುವುದಕ್ಕಾಗಿ ಮನೆಯಲ್ಲಿ ಪೈಪೋಟಿ ಮತ್ತು ರೋದನ ನಡೆಯುತ್ತಿರುವುದನ್ನು ಗಮನಿಸಿದ ಕುಂತಿ ಅವರ ಕೂಗು ಅರಣ್ಯರೋದನವಾಗದಂತೆ ಆಕೆ ಅಲ್ಲಿ ನಿರ್ವಹಿಸಿದ ಪಾತ್ರ ನಿರ್ಣಾಯಕವಾಗಿತ್ತು. ಕುಂತಿ ಅವರನ್ನು ಯಾರನ್ನೂ ಕಳಿಸದೆ ಆಕೆ ಅವರಿಗೆ ಅಭಯ ನೀಡಿ ತನ್ನ ಮಗ ಭೀಮನನ್ನು ಕಳಿಸುತ್ತಾಳೆ.…
ಮಂಗಳೂರು : ಕಲಾಭಿ ಥಿಯೇಟರ್ ವತಿಯಿಂದ ಬೋಂದೆಲ್ನ ಕಲಾಗ್ರಾಮದಲ್ಲಿ ದಿನಾಂಕ 26 ಜುಲೈ 2026ರಂದು ಆಯೋಜಿಸಲಾದ ಒಂದು ದಿನದ ‘ನವರಸ’ ಮಕ್ಕಳ ರಂಗಭೂಮಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. 6ರಿಂದ 18 ವರ್ಷದೊಳಗಿನ 22 ಮಕ್ಕಳು ಕಾರ್ಯಾಗಾರದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಖ್ಯಾತ ರಂಗ ನಿರ್ದೇಶಕ ಹಾಗೂ ರಂಗಕರ್ಮಿ ಭುವನ್ ಮಣಿಪಾಲ್ ಕಾರ್ಯಾಗಾರವನ್ನು ನಡೆಸಿಕೊಟ್ಟರು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ರಂಗೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಅವರ ಅನುಭವದ ಆಧಾರದ ಮೇಲೆ ನವರಸಗಳ ಮೂಲತತ್ವ, ಭಾವನೆಗಳ ಅಭಿವ್ಯಕ್ತಿ, ರಂಗಭೂಮಿಯ ಮೂಲಭೂತ ಅಂಶಗಳು ಹಾಗೂ ದೈನಂದಿನ ಬದುಕಿನಲ್ಲಿ ಭಾವನೆಗಳನ್ನು ಹೇಗೆ ಅರ್ಥಮಾಡಿಕೊಳ್ಳಬಹುದು ಎಂಬುದನ್ನು ವಿವಿಧ ರಂಗಾಭ್ಯಾಸಗಳು, ಆಟಗಳು ಹಾಗೂ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಪರಿಚಯಿಸಿದರು. ಕಾರ್ಯಾಗಾರದ ಸಮನ್ವಯವನ್ನು ಕಲಾಭಿಯ ಸಂಸ್ಥಾಪಕ ಉಜ್ವಲ್ ಯು.ವಿ. ವಹಿಸಿಕೊಂಡಿದ್ದು, ಶಿಕ್ಷಣದ ಜೊತೆಗೆ ಕಲೆಯ ಮಹತ್ವ, ಕಲೆ ಹವ್ಯಾಸವಾಗಿಯೂ ವೃತ್ತಿಯಾಗಿಯೂ ಬೆಳೆಯುವ ಸಾಧ್ಯತೆಗಳು ಹಾಗೂ ಮಕ್ಕಳ ಸೃಜನಶೀಲತೆಯನ್ನು ಬೆಳೆಸುವಲ್ಲಿ ಪೋಷಕರ ಪಾತ್ರದ ಕುರಿತು ಸಂವಾದ ನಡೆಸಿದರು. ಕಾರ್ಯಾಗಾರದ ಸಮಾರೋಪವಾಗಿ ಕಲಾಭಿ ತಂಡವು ‘ಕಲಾಭಿ ಥಿಯೇಟರ್…
ಬೆಂಗಳೂರು : ನೃತ್ಯಾಂಗಣ ಪ್ರಸ್ತುತ ಪಡಿಸುವ ಗುರು ರಾಧಿಕಾ ಶೆಟ್ಟಿ ಇವರ ಶಿಷ್ಯೆ ಕುಮಾರಿ ದಿಶಾ ಕಾರ್ತಿಕ್ ಇವರ ‘ಭರತನಾಟ್ಯ ರಂಗಪ್ರವೇಶ’ ಕಾರ್ಯಕ್ರಮವನ್ನು ದಿನಾಂಕ 02 ಆಗಸ್ಟ್ 2026ರಂದು ಸಂಜೆ ಗಂಟೆ 4-30ಕ್ಕೆ ಬೆಂಗಳೂರಿನ ಜೆ.ಸಿ. ರೋಡ್ ಎ.ಡಿ.ಎ. ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಶಿವಗಂಗಾ ಡಾನ್ಸ್ ಅಕಾಡೆಮಿಯ ನಿರ್ದೇಶಕರಾದ ಶ್ರೀಮತಿ ಆಶಾ ಕುಮಾರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭರತನಾಟ್ಯ ಕಾರ್ಯಕ್ರಮಕ್ಕೆ ನಟುವಾಂಗಂನಲ್ಲಿ ಗುರು ರಾಧಿಕಾ ಶೆಟ್ಟಿ, ಹಾಡುಗಾರಿಕೆಯಲ್ಲಿ ಶ್ರೀಮತಿ ವಿದ್ಯಾಶ್ರೀ ರಾಧಕೃಷ್ಣನ್, ಮೃದಂಗದಲ್ಲಿ ಶ್ರೀ ಬಾಲಚಂದ್ರ ಭಾಗವತ್ ಮತ್ತು ಕೊಳಲು ಶ್ರೀ ರಾಜ ಗೋಪಾಲನ್ ವಿ.ಪಿ. ಇವರುಗಳು ಸಹಕರಿಸಲಿದ್ದಾರೆ.
ಕನ್ನಡ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಸಂವರ್ಧನೆಗೆ ಮುಂಬಯಿ ಕನ್ನಡ ಸಂಘಟನೆಗಳು ನೀಡುತ್ತಿರುವ ಉತ್ತೇಜನ ನಿಜಕ್ಕೂ ಅಮೋಘವಾದುದು. ಮುಂಬಯಿ ವಿ.ವಿ. ಕನ್ನಡ ವಿಭಾಗವಂತು ಕನ್ನಡ ಶಿಕ್ಷಣ, ಅಧ್ಯಯನ, ಸಂಶೋಧನೆ, ಪುಸ್ತಕ ಪ್ರಕಟಣೆಗೆ ನಿರಂತರ ಪ್ರೋತ್ಸಾಹ ನೀಡುತ್ತ ಬಂದಿದೆ. ಸದ್ಯದ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್. ಉಪಾಧ್ಯರಂತೂ ಅಕ್ಷರ ಕ್ರಾಂತಿಯನ್ನೇ ಮಾಡಿದ್ದಾರೆ. ಇತ್ತೀಚೆಗೆ ಇವರ ರಚನೆಯ ನೂರ ಒಂದನೆಯ ಕೃತಿ ಪ್ರಕಟವಾದುದು ಒಂದು ದಾಖಲೆ. ಮುಂಬಯಿ, ಮಹಾರಾಷ್ಟ್ರದಲ್ಲಿ ಇಷ್ಟೊಂದು ಸಂಖ್ಯೆಯ ಸಾಹಿತ್ಯ ಕೃಷಿ ಮಾಡಿ ಕೃತಿ ರಚಿಸಿದ ಸಾಹಿತಿ, ಲೇಖಕರು ಇನ್ನೊಬ್ಬರಿಲ್ಲ. ಅದು ಕೂಡ ಕಳೆದ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಈ ವಿಕ್ರಮವನ್ನು ಅವರು ಪೂರ್ಣವಿಸಿದ್ದಾರೆ. ಇದಲ್ಲದೆ ತಮ್ಮದೇ ಅಭಿಜಿತ್ ಪ್ರಕಾಶನದ ಮೂಲಕ 130ಕ್ಕೂ ಹೆಚ್ಚು ಕೃತಿಗಳು ಹಾಗೂ ಕನ್ನಡ ವಿಭಾಗ ಮುಂಬಯಿ ವಿವಿ ಮೂಲಕ 120 ಕೃತಿಗಳು ಹೊರಬರುವಲ್ಲಿ ಇವರ ಶ್ರಮ ಕೂಡ ಅಡಕವಾಗಿದೆ. ಸತತ ಓದು, ಬರಹ, ಅಧ್ಯಯನ, ಸಂಶೋಧನೆ ಮೂಲಕ ಡಾ. ಜಿ.ಎನ್. ಉಪಾಧ್ಯರು ಈ ಸಾಹಸವನ್ನು ಸಾಧ್ಯವಾಗಿಸಿದ್ದಾರೆ. ವಿದ್ಯಾರ್ಥಿಗಳಿಗೆ…
ತೆಕ್ಕಟ್ಟೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಉಡುಪಿ ಜಿಲ್ಲೆ ಧನ ಸಹಾಯ ಯೋಜನೆಯಡಿಯಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇವರು ದಿನಾಂಕ 27 ಜುಲೈ 2026ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ‘ಪ್ರಸಂಗ ಪದ್ಯ ಕಥಾ ಸಾರ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು ಮಾತನಾಡಿ “ಕಲಿಕೆಯ ಹಂತದಲ್ಲಿರುವ ಕಲಾವಿದರಿಗೆ ಆಗಾಗ ವೇದಿಕೆಯು ಸಿಕ್ಕಾಗ ಮಾತ್ರ ಕಲಿಕೆಯ ಹಾದಿ ಸುಗಮವಾಗುತ್ತದೆ. ರಂಗವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದರಿಂದಲೇ ಇನ್ನಷ್ಟು ಕಲಿಯುವ ತವಕ ವೃದ್ಧಿಸುತ್ತದೆ. ಗುರುಮುಖೇನ ಕಲಿತ ವಿದ್ಯೆ ನಿರರ್ತಕವಾಗಬಾರದು. ತಪ್ಪು ಒಪ್ಪುಗಳನ್ನು ಬದಿಗಿರಿಸಿ ನಮ್ಮೊಳಗಿನ ಚಿಕ್ಕ ವೇದಿಕೆಯಲ್ಲಿ ಪ್ರತಿಭೆ ತೋರಿಸಿ ಬೆಳೆದರೆ ಮತ್ತಷ್ಟು ಆತ್ಮಸ್ಥೈರ್ಯ ಬರುವುದಕ್ಕೆ ಸಾಧ್ಯ” ಎಂದು ಹೇಳಿದರು. ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಆ್ಯಂಡ್ರ್ಯು ಡಿಸಿಲ್ವ, ಸುಧಾ ಮಣೂರು, ಡಾ. ಗಣೇಶ್ ಉಳ್ತೂರು, ಡಾ. ರಾಜೇಶ್, ಆದಿತ್ಯ ಹೆಗಡೆ, ಗಣಪತಿ ಭಟ್, ಭಾಗ್ಯಲಕ್ಷ್ಮೀ ವೈದ್ಯ, ಪಾರ್ವತಿ ಮೈಯ್ಯ, ಆದಿತ್ಯ ಕೋಣಿ ಉಪಸ್ಥಿತರಿದ್ದರು. ಬಳಿಕ ‘ಪ್ರಸಂಗ…
ಮುಂಬೈ : ಮುಂಬೈ ವಿಶ್ವವಿದ್ಯಾಲಯ ತನ್ನ 170ರ ಸಂಭ್ರಮದ ಅಂಗವಾಗಿ ಪ್ರಕಟಿಸಿದ ಭಾರತೀಯ ಜ್ಞಾನ ಪರಂಪರೆ ಮಾಲಿಕೆ ಕನ್ನಡವೂ ಸೇರಿದಂತೆ ಹನ್ನೊಂದು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 29 ಜುಲೈ 2026ರ ಬುಧವಾರದಂದು ಮಧ್ಯಾಹ್ನ 3-00 ಗಂಟೆಗೆ ಆಯೋಜಿಸಿದೆ. ಕಲಿನಾ ಕ್ಯಾಂಪಸ್ ನ ಮರಾಠಿ ಭಾಷಾ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬೈ ವಿವಿ ಉಪಕುಲಪತಿ ಪ್ರೊ. ರವೀಂದ್ರ ಕುಲಕರ್ಣಿ ಇವರು ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್, ಆರ್ಕಿಟೆಕ್ಟರ್ ಆಂಡ್ ಡಿಸೈನ್ ಇದರ ಕುಲಪತಿಗಳಾದ ಡಾ. ಎ.ಪಿ. ಜಮ್ಖೇಡ್ಕರ್, ಭಾರತೀಯ ಜ್ಞಾನ ಪರಂಪರೆ (IKS) ವಿಭಾಗ, ಶಿಕ್ಷಣ ಸಚಿವಾಲಯ ಭಾರತ ಸರ್ಕಾರ ಐಐಟಿ, ಇಂದೋರ್, ರಾಷ್ಟ್ರೀಯ ಸಂಯೋಜಕರು ಪ್ರೊ. ಗಂಟಿ ಎಸ್. ಮೂರ್ತಿ, ಏಷಿಯಾಟಿಕ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷರು ಡಾ. ವಿನಯ್ ಸಹಸ್ರಬುದ್ಧೆ ಇವರು ಪಾಲ್ಗೊಳ್ಳಲಿದ್ದಾರೆ. ಭಾರತೀಯ ಜ್ಞಾನಪರಂಪರೆ ಮೊದಲು ಇಂಗ್ಲೀಷ್ನಲ್ಲಿ ಪ್ರಕಟವಾಗಿದ್ದು, ಆ ಬಳಿಕ ಮರಾಠಿ ಆವೃತ್ತಿಯ ಕೃತಿ…