Author: roovari

ಸಂಗೀತಗಾರರ ಮನೆತನದಲ್ಲಿ ಅಗಸ್ತ್ಯ ಗೌಡ ಮತ್ತು ಸುಂದರಮ್ಮ ದಂಪತಿಗಳ ಸುಪುತ್ರನಾಗಿ 1905 ಜುಲೈ 9ರಂದು ತಿರುಮಕೂಡಲು ನರಸೀಪುರದಲ್ಲಿ ಟಿ. ಗುರುರಾಜಪ್ಪ ಎಂದೇ ಪ್ರಸಿದ್ಧರಾದ ತಿರುಮಕೂಡಲು ಗುರುರಾಜಪ್ಪ ಜನಿಸಿದರು. ಪಿಟೀಲುವಾದನದಲ್ಲಿ ಹೆಸರುವಾಸಿಯಾದ ಟಿ. ಚೌಡಯ್ಯ ಇವರ ಹಿರಿಯ ಸಹೋದರ. ಚೌಡಯ್ಯನವರು ಎಷ್ಟು ಪ್ರಸಿದ್ಧರೆಂದರೆ ಬೆಂಗಳೂರಿನ ವೈಯ್ಯಾಲಿಕಾವಲ್ ನಲ್ಲಿ ನಿರ್ಮಾಣವಾದ ಒಂದು ಸ್ಮಾರಕ ಭವನವು ಇವರ ಹೆಸರಿನಲ್ಲಿ ಇರುವುದು ಮಾತ್ರವಲ್ಲದೆ ಅದೂ ಪಿಟೀಲಿನ ಆಕಾರದಲ್ಲಿಯೇ ಇರುವುದು ವಿಶೇಷತೆ. ಇಂತಹ ಪ್ರಸಿದ್ಧ ಸಂಗೀತ ಮನೆತನದಲ್ಲಿ ಜನಿಸಿದ ಟಿ. ಗುರುರಾಜಪ್ಪನವರು ಎಸ್.ಎಸ್.ಎಲ್.ಸಿ.ಯ ನಂತರ ಬಿಡಾರಂ ಕೃಷ್ಣಪ್ಪನವರಲ್ಲಿ ಪಿಟೀಲುವಾದನದ ಅಭ್ಯಾಸ ನಡೆಸಿ, ಅಣ್ಣ ಟಿ. ಚೌಡಯ್ಯನವರ ಜೊತೆಗೆ ದೇಶದಾದ್ಯಂತ ದ್ವಂದ್ವ ಪಿಟೀಲುವಾದನ ಕಚೇರಿ ನಡೆಸಿದ ಖ್ಯಾತರು. ಅನೇಕ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಪಿಟೀಲುವಾದನ ಮಾಡಿದ ಇವರು ಪ್ರಸಿದ್ಧ ಸಂಗೀತಗಾರರಾದ ಅರಿಯಾಕುಡಿ ರಾಮಾನುಜ ಅಯ್ಯರ್, ಚಂಬೈ ವೈದ್ಯನಾಥ ಭಾಗವತರ್, ಅಲತ್ತೂರು ಸಹೋದರರು ಮುಂತಾದವರ ಸಂಗೀತ ಕಚೇರಿಗಳಿಗೆ ಪಿಟೀಲುವಾದನದ ಪಕ್ಕ ವಾದ್ಯ ನೀಡಿದ ಹೆಗ್ಗಳಿಕೆ ಪಡೆದವರು ಮತ್ತು ಪ್ರಸಿದ್ಧ ಸಂಗೀತಗಾರರಾದ ಎಂ.ಎಸ್.…

Read More

ಮಂಗಳೂರು : ಯಕ್ಷನಂದನದ 45ನೇ ವರ್ಷಾಚರಣೆ ದಿನಾಂಕ 10 ಜುಲೈ 2026ರಂದು ಮಧ್ಯಾಹ್ನ ಗಂಟೆ 2-15ಕ್ಕೆ ಪಿ.ಎ. ಐತಾಳರು ಬರೆದ ‘ನರಕಾಸುರ ಮೋಕ್ಷ’ ಮತ್ತು ‘ಬ್ರಹ್ಮಕಪಾಲ’ ಪ್ರಸಂಗಗಳ (ಇಂಗ್ಲೀಷ್ ಸಂಭಾಷಣೆ) ದೃಶ್ಯಾವಳಿಗಳನ್ನು ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ರಾಮರಮಣ ಮಂಟಪದಲ್ಲಿ ಪ್ರದರ್ಶನಗೊಳ್ಳಲಿದೆ. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕಟೀಲು ಕಮಲಾದೇವಿ ಪ್ರಸಾದ ಆಸ್ರಣ್ಣರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಅಧ್ಯಕ್ಷ ಎನ್. ಪ್ರಕಾಶ್ ಕಾರಂತ್ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ ಭಾಗವಹಿಸಲಿದ್ದಾರೆ.

Read More

ಮಂಗಳೂರು : ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದಿಂದ ಕೊಂಕಣಿ ಶಬ್ದ ರತ್ನಾಕರ್ ದಿ. ಮಂದರ್ಕೆ ಮಾಧವ್ ಪೈ ಸ್ಮರಣಾರ್ಥ ‘ಸೋಬಿತ್ ಪಾವ್ಸಾಡಿ’ ಎಂಬ ವಿಷಯದಲ್ಲಿ ಕೊಂಕಣಿ ಸಾಹಿತ್ಯ ಮತ್ತು ಇತರ ಸ್ಪರ್ಧೆಗಳು ದಿನಾಂಕ 12 ಜುಲೈ 2026ರಂದು ಮಂಗಳೂರಿನ ಸುಜೀರ್ ಸಿ.ವಿ. ನಾಯಕ್ ಸಭಾಂಗಣದಲ್ಲಿ ನಡೆಯಲಿದೆ. ಕೊಂಕಣಿ ಭಾಷೆಯನ್ನು ಉತ್ತೇಜಿಸುವ ಮತ್ತು ವಿವಿಧ ವಯೋಮಾನದ ಸಮುದಾಯ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಡಾ. ಜಯವಂತ ನಾಯಕ್ ಉದ್ಘಾಟಿಸಲಿದ್ದಾರೆ. ದಿ. ಮಂದರ್ಕೆ ಮಾಧವ ಪೈ ಅವರ ಪುತ್ರರಾದ ರವೀಂದ ಪೈ, ಸುರೇಂದ್ರ ಪೈಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟನಾ ಸಮಿತಿ ಅಧ್ಯಕ್ಷರಾದ ಡಾ. ಎ. ರಮೇಶ್ ಪೈ ತಿಳಿಸಿದ್ದಾರೆ.

Read More

ಮೂಲ್ಕಿ : ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಕಿನ್ನಿಗೋಳಿಯ ಅನಂತ ಪ್ರಕಾಶನದ ಆಶ್ರಯದಲ್ಲಿ ಶ್ರೀಮತಿ ಗಾಯತ್ರಿ ಸಚ್ಚಿದಾನಂದ ಉಡುಪರ ಸ್ಮರಣಾರ್ಥ ರಾಜ್ಯಮಟ್ಟದ ಉಚಿತ ಕಥಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅನಂತ ಪ್ರಕಾಶನದ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಕಥಾ ಸ್ಪರ್ಧೆಯಲ್ಲಿ ಭಾಗವಹಿಸುವವರು ವಿಷಯ ಆಯ್ಕೆ ಅವರದ್ದು. ಪ್ರಥಮ ಬಹುಮಾನ ರೂ.7,500/- ಮತ್ತು ಅನಂತ ಪ್ರಕಾಶನದ ರೂ.2,500/- ಬೆಲೆಯ ಪುಸ್ತಕಗಳು, ದ್ವಿತೀಯ ಬಹುಮಾನ ರೂ.5,000/- ಮತ್ತು ಅನಂತ ಪ್ರಕಾಶನದ ರೂ.1,500/- ಬೆಲೆಯ ಪುಸ್ತಕಗಳು, ತೃತೀಯ ಬಹುಮಾನ ರೂ.3,000/- ಮತ್ತು ಅನಂತ ಪ್ರಕಾಶನದ ರೂ.1,500/- ಬೆಲೆಯ ಪುಸ್ತಕಗಳು. ಸಮಾಧಾನಕರ ಬಹುಮಾನ ರೂ.1,000/- ಮತ್ತು ಅನಂತ ಪ್ರಕಾಶನದ ರೂ.1,000/- ಬೆಲೆಯ ಪುಸ್ತಕಗಳನ್ನು ವಿತರಿಸಲಾಗುವುದು ಎಂದು ಅನಂತ ಪ್ರಕಾಶನ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾದ ಕೊಡುತ್ತೂರು ಸಚ್ಚಿದಾನಂದ ಉಡುಪರು ತಿಳಿಸಿದ್ದಾರೆ. ಸ್ವಂತ ರಚನೆಯ ಕಥೆ 4,000 ಪದಗಳು, 4-5 ಪುಟಗಳಲ್ಲಿ ಬರೆದು ದಿನಾಂಕ 31 ಆಗಸ್ಟ್ 2026ರೊಳಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ…

Read More

ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಶಿವಮೊಗ್ಗ ಇದರ ವತಿಯಿಂದ ಮತ್ತು ಶಿವಮೊಗ್ಗದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಹಯೋಗದಲ್ಲಿ ದತ್ತಿನಿಧಿ ಕಾರ್ಯಕ್ರಮವನ್ನು ದಿನಾಂಕ 9, 10 ಮತ್ತು 14 ಜುಲೈ 2026ರಂದು ಹಮ್ಮಿಕೊಳ್ಳಲಾಗಿದೆ. ದಿನಾಂಕ 9 ಜುಲೈ 2026ರಂದು ಮಧ್ಯಾಹ್ನ 2-00 ಗಂಟೆಗೆ ಶಿವಮೊಗ್ಗದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಇವರು ಉದ್ಘಾಟನೆ ಮಾಡಲಿದ್ದಾರೆ. ದಿ. ಜಿ.ಬಿ. ಲಲಿತಮ್ಮ ದತ್ತಿ ಉಪನ್ಯಾಸವನ್ನು ಕನ್ನಡ ಅಧ್ಯಾಪಕರಾದ ಡಾ. ಲವ ಜಿ.ಆರ್. ಹಾಗೂ ದಿ. ಸಾಂಗ್ಲಿ ನಾರಾಯಣ್ ರಾವ್ ಸ್ಮಾರಕ ದತ್ತಿ ಉಪನ್ಯಾಸವನ್ನು ಲೇಖಕರಾದ ಡಾ. ವಿನಯ ಶ್ರೀನಿವಾಸ್ ಇವರು ನೀಡಲಿದ್ದಾರೆ. ದಿನಾಂಕ 10 ಜುಲೈ 2026ರಂದು ಮಧ್ಯಾಹ್ನ 3-00 ಗಂಟೆಗೆ ಶಿವಮೊಗ್ಗದ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ…

Read More

ಕಾಸರಗೋಡು : ಕಾಸರಗೋಡಿನ ಬದಿಯಡ್ಕ ಬಳಿಯ ವೀಣಾವಾದಿನಿ ಸಂಗೀತ ಹಾಗೂ ವೈದಿಕ – ತಾಂತ್ರಿಕ ವಿದ್ಯಾಪೀಠದ ವತಿಯಿಂದ ‘ಸತ್ಸಂಗೀತಂ’ ವಿದ್ಯಾರ್ಥಿಗಳಿಂದ ಸರಣಿ ಕಾರ್ಯಕ್ರಮವನ್ನು ದಿನಾಂಕ 11 ಜುಲೈ 2026ರಂದು ಸಂಜೆ 5-30 ಗಂಟೆಗೆ ಬಳ್ಳಪದವು ನಾರಾಯಣೀಯಂ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಆಗಮ ಪೆರ್ಲ ಇವರ ಹಾಡುಗಾರಿಕೆಗೆ ಗೌತಮ್ ಭಟ್ ಪಿ.ಜಿ. ಇವರು ವಯೋಲಿನ್, ಪರಾಶರ ಉಪ್ಪಂಗಳ ಇವರು ಮೃದಂಗ ಹಾಗೂ ಹರಿಪ್ರಸಾದ್ ಉಪ್ಪಂಗಳ ಇವರು ಘಟಂನಲ್ಲಿ ಸಾಥ್ ನೀಡಲಿದ್ದಾರೆ.

Read More

ಮಂಗಳೂರು : ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿ, ಯಕ್ಷಗಾನ ಮತ್ತು ವಿವಿಧ ಸಾಂಸ್ಕೃತಿಕ, ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ವಕ್ವಾಡಿ ಶೇಖರ ಶೆಟ್ಟಿ (86) ಇವರು ದಿನಾಂಕ 09 ಜುಲೈ 2026ರಂದು ನಿಧನರಾದರು. ಕದ್ರಿಯ ಶ್ರೀಕೃಷ್ಣ ಯಕ್ಷ ಸಭಾ ಮತ್ತು ಯಕ್ಷಾಂಗಣ ಮಂಗಳೂರು ಸಂಸ್ಥೆಗಳಲ್ಲಿ ಸುದೀರ್ಘ ಕಾಲ ಸದಸ್ಯರಾಗಿದ್ದು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರು ಸಾರ್ವಜನಿಕ ರಂಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರು. ಬ್ಯಾಂಕಿಂಗ್ ಮತ್ತು ಸಾಮಾಜಿಕ ಸೇವೆಗಾಗಿ ಹಲವು ಸನ್ಮಾನ – ಗೌರವಗಳಿಗೆ ಪಾತ್ರರಾಗಿದ್ದರು. ಮೂಲತಃ ಕುಂದಾಪುರ ತಾಲೂಕಿನ ವಕ್ವಾಡಿಯ ಪ್ರತಿಷ್ಠಿತ ಕೃಷಿಕ ಕುಟುಂಬದಲ್ಲಿ ಜನಿಸಿದ ಶೇಖರ ಶೆಟ್ಟರು ಹಲವು ವರ್ಷಗಳಿಂದ ಮಂಗಳೂರಿನಲ್ಲಿ ನಲೆಸಿದ್ದರು. ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕಿಂಗ್ ಸೇವೆ ಸಲ್ಲಿಸಿ, ತಮ್ಮ ಸ್ನೇಹಶೀಲ ಹಾಗೂ ವಿನೋದ ಭರಿತ ಮಾತುಗಳಿಂದ ಸಾರ್ವಜನಿಕರ ವಿಶ್ವಾಸ ಗಳಿಸಿದ್ದರು. ಪತ್ನಿ ವಸಂತಿ ಶೆಟ್ಟಿ, ಮೂವರು ಗಂಡು ಮಕ್ಕಳು ಡಾ. ವಿದ್ಯಾಧರ್ ಶೆಟ್ಟಿ, ರೂಪೇಶ್ ಕುಮಾರ್ ಶೆಟ್ಟಿ, ಹರ್ಷಿಷ್ ಕುಮಾರ್ ಶೆಟ್ಟಿ, ಕುಟುಂಬಿಕರು ಹಾಗೂ ಅಪಾರ ಬಂಧು -…

Read More

ಬೆಂಗಳೂರು : ಸಮುದಾಯ ಬೆಂಗಳೂರು ಇವರು ಪ್ರಸ್ತುತ ಪಡಿಸುವ ಗಿರೀಶ್ ಕಾರ್ನಾಡ್ ರಚನೆಯ ‘ತುಘಲಕ್’ ನಾಟಕ ಪ್ರದರ್ಶನವನ್ನು ದಿನಾಂಕ 11 ಜುಲೈ 2026ರಂದು ಮಧ್ಯಾಹ್ನ 3-30 ಮತ್ತು 7-30 ಗಂಟೆಗೆ ಬೆಂಗಳೂರಿನ ರಂಗಶಂಕರದಲ್ಲಿ ಆಯೋಜಿಸಲಾಗಿದೆ. ಡಾ. ಸ್ಯಾಮ್ ಕುಟ್ಟಿ ಪಟ್ಟಂಕರಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ 101ನೇ ಪ್ರದರ್ಶನ ಇದಾಗಿದ್ದು, ಹೆಚ್ಚಿನ ಮಾಹಿತಿಗಾಗಿ 74111 72550 ಮತ್ತು 99454 67572 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಉಡುಪಿ : ಯಕ್ಷಗಾನ ಕಲಾರಂಗ (ರಿ.) ಉಡುಪಿ ಇದರ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 11 ಜುಲೈ 2026ರಂದು ಸಂಜೆ 4-00 ಗಂಟೆಗೆ ಉಡುಪಿಯ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ ಮೆಂಟ್ ಟ್ರೈನಿಂಗ್ ಆ್ಯಂಡ್ ರಿಸರ್ಚ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ಮಾನವ ಹಕ್ಕುಗಳ ಆಯೋಗಡ ಸದಸ್ಯರಾದ ಡಾ. ಟಿ. ಶ್ಯಾಮ ಭಟ್ ಇವರು ವಹಿಸಲಿದ್ದು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ತಾಳ್ತಜೆ ವಸಂತಕುಮಾರ ಇವರು ಶುಭಾಶಂಸನೆಗೈಯಿಲಿದ್ದಾರೆ. ಡಿ. ಬಿ. ವೆಂಕಟಸುಬ್ಬಾ ಜೋಯಿಸ್ ಪ್ರಶಸ್ತಿಯನ್ನು ವೆಂಕಟರಾಮ ಭಟ್ಟ ಸುಳ್ಯ, ಮಟ್ಟಿ ಮುರಳೀಧರ ರಾವ್ ಪ್ರಶಸ್ತಿಯನ್ನು ಡಾ. ಜಿ.ಕೆ. ಹೆಗಡೆ ಹೊನ್ನಾವರ ಮತ್ತು ಪೆರ್ಲ ಕೃಷ್ಣ ಭಟ್ ಪ್ರಶಸ್ತಿಯನ್ನು ಕೋಟೆ ರಾಮ ಭಟ್ ಕಾರ್ಕಳ ಇವರಿಗೆ ಪ್ರದಾನ ಮಾಡಲಾಗುವುದು. ಪ್ರಸಿದ್ಧ ಕಲಾವಿದರ ಸಹಯೋಗದೊಂದಿಗೆ ‘ಶ್ರೀರಂಗ ತುಲಾಭಾರ’ ತಾಳಮದ್ದಲೆ’ ಪ್ರಸ್ತುತಗೊಳ್ಳಲಿದೆ.

Read More

ಗೌತಮ ಮತ್ತು ಅಹಲ್ಯೆಯ ಕಥೆ ಯಾರಿಗೆ ತಿಳಿದಿಲ್ಲ. ಆದರೆ ಈ ಯುಗದ ಅಹಲ್ಯೆ ಗೌತಮರದು ಬೇರೆಯದೇ ಕಥೆ. ಅಂದು ಅಹಲ್ಯೆಯನು ಗೌತಮ‌ ಕಲ್ಲಾಗಿಸಿದರೆ ಇಂದು ಕಲ್ಲಾಗಲು ಹೊರಟಿರುವ ಗೌತಮನನ್ನು ಮತ್ತೆ ಮಾನವನನ್ನಗಿಸುವ ಕೆಲಸ ಅಹಲ್ಯೆಯದು. ದೇವರು ನಿಜವಾಗಿಯೂ ಇರುವನೇ? ಇಲ್ಲದಿರೆ ಅವನು ನಮ್ಮೊಂದಿಗೆ ಸದಾ ಇರಲಾಗದೆಂದು ತಾಯಿ, ಹೆಂಡತಿ, ಮಗಳನ್ನು ನೀಡುವನಂತೆ ಎಂದು ಕೇಳಿದ್ದೇವೆ. ಹಾಗಾದರೆ ನಮ್ಮ‌ ಬದುಕಿನ ಆಶಾಕಿರವಾಗಿ ಬರುವ ಅವರು ನಿಜವಾಗಿಯೂ ದೇವರ ಪ್ರತಿರೂಪವೇ? ಹಾಗಾದರೆ ಗಾಡ್ is not ರೀಚಬಲ್ ಅಥವಾ ರೀಚಬಲ್ ಎನ್ನುವುದು ಕಾದಂಬರಿಯ ಶೀರ್ಷಿಕೆಯಂತೆ ಅದ್ಭುತವಾಗಿ ನಮ್ಮನ್ನು ಬೇರೊಂದು‌ ಲೋಕಕ್ಕೆ ಕರೆದೊಯ್ದು ದೇವರ ಅಸ್ಥಿತ್ವ ತೋರಿಸುವ ಕಾರ್ಯವೆನೋ?! ರವೀಂದ್ರ ಮುದ್ದಿಯವರ ಗಾಡ್ is not ರೀಚಬಲ್ ಓದುವ ಖುಷಿ ಈ ಸದ್ಯ ಸಿಕ್ಕಿತು. ಇದುವರೆಗೂ ಕವನ ಸಂಕಲನ, ಎರಡು ಕಥಾ ಸಂಕಲನ ಪ್ರಕಟಿಸಿರುವ ಲೇಖಕರ ಮೊದಲ ಕಾದಂಬರಿ ಇದು. ಗಂಗೊಳ್ಳಿ, ಕುಂದಾಪುರ, ಮುಂಬಯಿ, ಕಾಶಿ ಹೀಗೆ ಕುಳಿತ್ತಲೇ ನಮ್ಮನ್ನು ಸುತ್ತಾಡಿಸಿ ಅಲ್ಲಿಯ ಪ್ರಕೃತಿ ದರ್ಶನ,…

Read More