Subscribe to Updates
Get the latest creative news from FooBar about art, design and business.
Author: roovari
ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಇದರ ವತಿಯಿಂದ 2026ರ ವಿನೂತನ ಕಾರ್ಯಕ್ರಮ ಸರಣಿಯ ಜೂನ್ ತಿಂಗಳ ಕಾರ್ಯಕ್ರಮದಲ್ಲಿ ಹೆಚ್. ಶಂಕರ ನಾಗಪ್ಪ ಬಿಲ್ಲವ ಹೆಮ್ಮಾಡಿ ಇವರಿಂದ ಯಕ್ಷಗಾನ, ಜಾನಪದ ಹಾಗೂ ಸಂಗೀತ ಏಕವ್ಯಕ್ತಿ ಪ್ರದರ್ಶನವನ್ನು ದಿನಾಂಕ 21 ಜೂನ್ 2026ರಂದು ಸಂಜೆ 4-00 ಗಂಟೆಗೆ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸತತ ಹತ್ತನೇ ವರ್ಷದಲ್ಲಿ 120ನೇ ಕಾರ್ಯಕ್ರಮ ಇದಾಗಿದ್ದು, ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಚಂದನ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ಮಂಗಳೂರು : ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ 2026-27ನೇ ಶೈಕ್ಷಣಿಕ ಸಾಲಿನ ಬ್ಯಾಚುಲರ್ ಆಫ್ ವಿಜ್ಯುವಲ್ ಆರ್ಟ್ಸ್ (ಬಿ.ವಿ.ಎ.) ತರಗತಿಗಳ ಪ್ರವೇಶಾತಿಗೆ ದ್ವಿತೀಯ ಪಿ.ಯು.ಸಿ. ಅಥವಾ ಸಮಾನಾಂತರ ಕೋರ್ಸುಗಳಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಜೂನ್ 2026. ಪದವಿಯಲ್ಲಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅನ್ವಯಕಲೆ, ಕಲಾ ಇತಿಹಾಸ ಹಾಗೂ ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಷಯಗಳಲ್ಲಿ ವಿಶೇಷ ಅಧ್ಯಯನ ಒಳಗೊಂಡಿರುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಹತಾ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವನ್ನು ಜೂನ್ 23ರಂದು ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2438931 ಸಂಪರ್ಕಿಸಬಹುದು ಎಂದು ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಡೀನ್ ತಿಳಿಸಿದ್ದಾರೆ.
ಮೈಸೂರು : ಕರ್ನಾಟಕದ ಪ್ರಮುಖ ರಂಗಸಂಸ್ಥೆಗಳಲ್ಲಿ ಒಂದಾದ ರಂಗಾಯಣ ಮೈಸೂರಿನ ಸಹಯೋಗದಲ್ಲಿ, ಶಿವಮೊಗ್ಗ ರಂಗಾಯಣವು ದಿನಾಂಕ 20 ಮತ್ತು 21 ಜೂನ್ 2026ರಂದು ಸಂಜೆ 6-30 ಗಂಟೆಗೆ ಮೈಸೂರಿನ ಭೂಮಿಗೀತ ರಂಗಮಂದಿರದಲ್ಲಿ ಪ್ರದರ್ಶಿಸುತ್ತಿರುವ ‘ಸ್ವಾತಂತ್ರ್ಯದ ಓಟ’ ನಾಟಕವು ಕನ್ನಡ ರಂಗಭೂಮಿಯ ಗಮನಾರ್ಹ ಪ್ರದರ್ಶನಗಳಲ್ಲಿ ಒಂದಾಗಿದೆ. ಬೋಳ್ವಾರ್ ಮಹಮ್ಮದ್ ಕುಂಞಿ ಇವರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕಾದಂಬರಿಯನ್ನು ಆಧರಿಸಿ ರೂಪುಗೊಂಡಿರುವ ಈ ನಾಟಕವು ಭಾರತದ ಸ್ವಾತಂತ್ರ್ಯ, ದೇಶ ವಿಭಜನೆ ಮತ್ತು ಮಾನವೀಯ ಮೌಲ್ಯಗಳ ಸುತ್ತ ಹೆಣೆಯಲ್ಪಟ್ಟಿರುವ ಅಪೂರ್ವ ರಂಗಕೃತಿಯಾಗಿದೆ. ರಂಗಾಯಣ ಮೈಸೂರು ಆಯೋಜಿಸಿರುವ ಈ ನಾಟಕವನ್ನು ಖ್ಯಾತ ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಇವರು ನಿರ್ದೇಶಿಸಿದ್ದಾರೆ. ನಾಟಕ ರೂಪಾಂತರವನ್ನು ಮಂಜುನಾಥ್ ಗೋಣಿಮರದಹಳ್ಳಿ ಮಾಡಿದ್ದಾರೆ. ರಂಗ ಸಜ್ಜಿಕೆಯನ್ನು ಮಧುಸೂದನ್, ರಮೇಶ್ ಎಸ್. ಹಾಗೂ ಶಂಕರ್ ಕೆ. ಬೆಟ್ಟಲಕೆರೆ ಇವರು ನಿರ್ವಹಿಸಿದ್ದು, ಸಂಗೀತ ನಿರ್ದೇಶನವನ್ನು ರಾಘವ ಕಮ್ಮಾರ್ ನೀಡಿದ್ದಾರೆ. ವಸ್ತ್ರ ವಿನ್ಯಾಸ ಸಹನಾ ಪಿಂಜಾರ್ ಅವರದು. ನಾಟಕವು ಚರಕವನ್ನು ಎಳೆಯುವ ಬಾಲಕನ ದೃಶ್ಯದೊಂದಿಗೆ ಆರಂಭವಾಗುತ್ತದೆ.…
ಬಾಗಲಕೋಟೆ : ಪಿ.ಬಿ. ದುತ್ತರಗಿ ಟ್ರಸ್ಟಿನ ಮೂರು ವರ್ಷಗಳ ವಾರ್ಷಿಕ ಗೌರವ ಮತ್ತು ರಂಗ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ವಾರ್ಷಿಕ ಗೌರವ ಪ್ರಶಸ್ತಿಯು ರೂ.25,000/- ನಗದು ಮತ್ತು ರಂಗಗೌರವ ಪ್ರಶಸ್ತಿಯು ತಲಾ ರೂ.10,000/- ನಗದು ಒಳಗೊಂಡಿದೆ ಎಂದು ಟ್ರಸ್ಟಿನ ಸಮಸ್ಯ ಕಾರ್ಯದರ್ಶಿ ಸಂತೋಷ ಭೋವಿ ತಿಳಿಸಿದ್ದಾರೆ. 2022-23ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ವಿರೂಪಾಕ್ಷಪ್ಪ ಗಾಯದ, ರಂಗಗೌರವ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಕುಸುಮಾ ಕಂದಗಲ್ಲ ಮತ್ತು ಅರುಣ ಕೃಷ್ಣಾಜಿ ಥೋರತ ಆಯ್ಕೆಯಾಗಿದ್ದಾರೆ. 2023-24ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಬೇಬಿಜಾನ್ ಕಂದಗಲ್ಲ, ರಂಗಗೌರವ ಪ್ರಶಸ್ತಿಗೆ ರಾಯಚೂರು ಜಿಲ್ಲೆಯ ಭೀಮರಾಯ ಭಂಡಾರಿ ಮತ್ತು ಗದಗ ಜಿಲ್ಲೆಯ ವೀರಭದ್ರಪ್ಪ ಬಡಿಗೇರ ಆಯ್ಕೆಯಾಗಿದ್ದಾರೆ. 2024-25ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಅನಂತ ಬಬಲೇಶ್ವರ, ರಂಗಗೌರವ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯವರಾದ ಬಸವರಾಜ ಮಠ ಮತ್ತು ಬಂಗಾರೆವ್ವ ಚಿಮಲ ಆಯ್ಕೆಯಾಗಿದ್ದಾರೆ.
ಬೆಂಗಳೂರು : ಬಿಂಕ ಬಿನ್ನಾಣರು ರಂಗ ತಂಡ (ರಿ.) ಅಭಿನಯಿಸುವ ಗಿರೀಶ್ ಕಾರ್ನಾಡ್ ರಚಿಸಿರುವ ‘ತಲೆದಂಡ’ ನಾಟಕ ಪ್ರದರ್ಶನವನ್ನು ದಿನಾಂಕ 21 ಜೂನ್ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ. ಶಿವು ಹೊನ್ನಿಗನಹಳ್ಳಿ ಇವರ ನಿರ್ದೇಶನದಲ್ಲಿ ಪ್ರದರ್ಶನ ಗೊಳ್ಳುವ ಈ ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆಯಲಿದೆ. ಅಂಬಕ್ಕ : ಸುಷ್ಮಾರಾಣಿ, ಜಗದೇವ : ನಾಗರಾಜ್ ಪಾಟೀಲ್, ಶಾಸ್ತ್ರಿ : ಪರಮೇಶ್ವರ್, ಮಲ್ಲಿಬೊಮ್ಮ : ಅಯ್ಯಣ್ಣ, ಭಾಗೀರಥಿ : ಸರಿತಾ, ಸಾವಿತ್ರಿ : ಸೃಜನ, ಬಿಜ್ಜಳ : ಶಿವು ಹೊನ್ನಿಗನಹಳ್ಳಿ, ರಂಭಾವತಿ : ಸೌಮ್ಯ ಹೆಚ್.ಎನ್., ಸೋವಿದೇವ : ಪ್ರಜ್ವಲ್ ಡಿ.ಆರ್., ದಾಮೋಧರಾಭಟ್ಟ : ರಾಘವೇಂದ್ರ ಎಸ್., ಕಲ್ಲಪ್ಪ : ಮಂಜುನಾಥ ಪಾಟೀಲ್, ಬಸವಣ್ಣ : ನಂದನ್ ಎಸ್., ಮಂಚ್ಯಣಕ್ರಮಿತ : ಕಿರಣ್, ರಂಗವ್ವ : ಚೈತ್ರ, ಗಂಗಾಬಿಕೆ : ಪೂರ್ವಿಕಾ ರಾವ್, ಇಂದ್ರಾಣಿ : ಭೂಮಿಕಾ ರಾವ್, ಹೆಂಗಸು : ಮೋಹನ್, ಕಾಳಯ್ಯ…
ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ (ಮಾಹೆ) ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಚೇಳ್ಯಾರು ಗುತ್ತು ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ.) ಇವರ ಸಹಯೋಗದಲ್ಲಿ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 20 ಜೂನ್ 2026ರ ಶನಿವಾರದಂದು ಬೆಳಿಗ್ಗೆ 10-00 ಗಂಟೆಗೆ ಉಡುಪಿ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಶಸ್ತಿಯನ್ನು ಹಿರಿಯ ಲೇಖಕ, ಸಂಶೋಧಕರಾದ ಡಾ. ಬಿ. ಶಿವರಾಮ ಶೆಟ್ಟಿ ಇವರಿಗೆ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಪ್ರೊ. ಬಿ.ಎ. ವಿವೇಕ ರೈ ಇವರು ವಹಿಸಲಿದ್ದು, ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಚೇತನ್ ಮುಂಡಾಜೆ ಇವರು ಪ್ರಶಸ್ತಿ ಪುರಸ್ಕೃತರನ್ನು ಕುರಿತು ಅಭಿನಂದನಾ ಮಾತುಗಳನ್ನಾಡಲಿರುವರು. ಪ್ರಶಸ್ತಿ ಪುರಸ್ಕೃತರಾದ ಡಾ. ಬಿ. ಶಿವರಾಮ ಶೆಟ್ಟಿಯವರು ವಿಶೇಷ ಉಪನ್ಯಾಸ ನೀಡಲಿರುವರು. ಮುಖ್ಯ…
ನರೇಂದ್ರ ಎಸ್. ಗಂಗೊಳ್ಳಿಯವರು ಈಗಾಗಲೇ ತಮ್ಮ ಸಣ್ಣಕಥೆ, ಕಾದಂಬರಿ ಮತ್ತು ವೈಚಾರಿಕ ಪ್ರಬಂಧ ಸಂಕಲನಗಳ ಮೂಲಕ ಸಶಕ್ತ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಇತ್ತೀಚಿನ ಪ್ರಬಂಧ ಸಂಕಲನ ‘ಅವಳ ನಿಟ್ಟುಸಿರು’ ಅವರ ಸ್ತ್ರೀಪರ ಚಿಂತನೆಯನ್ನು ಸಶಕ್ತವಾಗಿ ಪ್ರಕಟಪಡಿಸಿದೆ. ಈಗಷ್ಟೇ ಹೊರಗಿಳಿದಿರುವ ಅವರ ‘ರೂಮಿನೊಳಗಿಂದ’ ಎಂಬ ಕಥಾಸಂಕಲನವು ಅವರ ಮಹಿಳಾ ಚಿಂತನೆ ಮತ್ತು ದಮನಿತರ ಪರವಾದ ಧ್ವನಿಗಳಿಂದ ಇನ್ನಷ್ಟು ಕಳೆಗಟ್ಟಿದೆ. ಮೊದಲನೆಯದೇ ಶೀರ್ಷಿಕೆಯ ಕಥೆ ‘ರೂಮಿನೊಳಗಿಂದ’. ಇದರಲ್ಲಿ ರಮ್ಯಾ ಎನ್ನುವ ಕೆಳವರ್ಗದ ಹೆಣ್ಣುಮಗಳೊಬ್ಬಳು ತನ್ನ ಬದುಕಿನುದ್ದಕ್ಕೂ ಎದುರಿಸುವ ಕಷ್ಟಕೋಟಲೆಗಳ ಚಿತ್ರಣವಿದೆ. ಅವಳ ಬಡ ತಾಯ್ತಂದೆಯರು ಮಗಳು ಬುದ್ಧಿವಂತಳೂ ಪ್ರತಿಭಾನ್ವಿತೆಯೂ ಆಗಿದ್ದಾಳೆಂದು ತಿಳಿದಿದ್ದರೂ ಅವಳನ್ನು ತೀರಾ ಎಳೆಯ ವಯಸ್ಸಿನಲ್ಲಿ ಮಧ್ಯವಯಸ್ಕನಾದ ಕುಡುಕ ಗಂಡಸಿಗೆ ಕಟ್ಟುವುದರೊಂದಿಗೆ ಅವಳ ಕಷ್ಟಪರಂಪರೆಗಳು ಆರಂಭವಾಗಿ ಅವನು ಅವಳನ್ನು ವೇಶ್ಯಾಗೃಹಕ್ಕೆ ಮಾರುತ್ತಾನೆ. ಅಲ್ಲಿನ ನರಕವಾಸದಿಂದ ಹೇಗೋ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದು ವ್ಯಾಪಾರದಲ್ಲಿ ತೊಡಗಿಸಿಕೊಂಡು ಹಂತಹಂತವಾಗಿ ಮೇಲೇರುವ ಅವಳಿಗೆ ಕೊನೆಗೆ ತನಗೆ ಹೆಚ್.ಐ.ವಿ. ಸೋಂಕು ತಗುಲಿರುವುದು ಗೊತ್ತಾಗುತ್ತದೆ. ಆದರೂ ಧೃತಿಗೆಡದೆ ಅವಳು ತನ್ನ ಎಲ್ಲಾ…
ಮಂಗಳೂರು : ಗಿಳಿವಿಂಡು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ, ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮಂಗಳೂರು, ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಉಮ್ಮಕ್ಕೆ ನೆಂಪು ಕೂಟ ಚಾರಿಟೇಬಲ್ ಟ್ರಸ್ಟ್ ಕುಡ್ಲ (ರಿ.) ಇವರ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ‘ನಾನು ಕಾರಂತ’ ಕನ್ನಡ ನಾಟಕ ಪ್ರದರ್ಶನವನ್ನು ದಿನಾಂಕ 19 ಜೂನ್ 2026ರಂದು ಸಂಜೆ ಗಂಟೆ 6-30ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಎಲ್.ಸಿ.ಆರ್.ಐ ಬ್ಲಾಕ್ ಎಲ್.ಎಫ್. ರಸ್ಕಿನ್ಹ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 4ನೇ ಪ್ರದರ್ಶನ ಕಾಣುತ್ತಿರುವ ಈ ನಾಟಕವನ್ನು ಜಗನ್ ಪವಾರ್ ನಿರ್ದೇಶನ ಮಾಡಿದ್ದಾರೆ.
ನವದೆಹಲಿ : ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಅತ್ಯುನ್ನತ ಫೆಲೋಶಿಪ್ ಕೇಂದ್ರ ಸಂಗೀತ ನಾಟಕ (ಅಕಾಡೆಮಿ ರತ್ನ), ಕೇಂದ್ರ ಸಂಗೀತ ನಾಟಕ ಅಕಾಡೆಮಿಯ 2024 ಮತ್ತು 2025ನೇ ಸಾಲಿನ ಪ್ರತಿಷ್ಠಿತ ‘ಅಕಾಡೆಮಿ ಪ್ರಶಸ್ತಿಗಳು’ ಹಾಗೂ 2024 ಮತ್ತು 2025ನೇ ಸಾಲಿನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಗಳನ್ನು ಪ್ರಕಟಿಸಲಾಗಿದೆ. ಒಟ್ಟು ಏಳು ಸಾಧಕರನ್ನು ಅಕಾಡೆಮಿ ಫೆಲೋಶಿಪ್ ಗೌರವಕ್ಕೆ ಭಾಜನರಾಗಿದ್ದಾರೆ. 108 ಸಾಧಕರನ್ನು ಅಕಾಡೆಮಿ ಪ್ರಶಸ್ತಿಗೆ ಹಾಗೂ 106 ಮಂದಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕದಿಂದ ಮೃದಂಗ ವಾದಕ ಅನೂರು ಅನಂತಕೃಷ್ಣ ಶರ್ಮ, ಯಕ್ಷಗಾನ ಕಲಾವಿದರಾದ ಕೆರೆಮನೆ ಶಿವಾನಂದ ಹೆಗಡೆ, ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ, ಕರ್ನಾಟಕಿ ವಿದ್ವಾಂಸರಾದ ಟಿ.ಎಸ್. ಸತ್ಯವತಿ, ಮೃದಂಗ ವಾದಕ ಎ.ವಿ. ಆನಂದ್, ವೀಣಾ ವಾದಕಿ ಜ್ಯೋತಿ ಹೆಗಡೆ ಹಾಗೂ ಜಾನಪದ ಕಲಾ ಸಾಧಕ ಎಸ್.ಸಿ. ಶರ್ಮಾ ಇವರು ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. ಫೆಲೋಶಿಪ್ (ಅಕಾಡೆಮಿ ರತ್ನ) ಪಟ್ಟಿ :…
ಬೆಂಗಳೂರು : ಎಸ್.ವಿ.ಎನ್. ಮ್ಯೂಜಿಕ್ ಅಕಾಡೆಮಿ ಮತ್ತು ಎಂ.ಡಿ.ಎನ್.ಡಿ. ಇವರ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ವಿಶ್ವ ಸಂಗೀತ ದಿನಾಚರಣೆಯನ್ನು ದಿನಾಂಕ 20 ಮತ್ತು 21 ಜೂನ್ 2026ರಂದು ಸಂಜೆ 4-15 ಗಂಟೆಗೆ ಬೆಂಗಳೂರಿನ ಸಂಜಯ್ ನಗರದ ರಮಣ ಮಹರ್ಷಿ ಹೆರಿಟೇಜ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 20 ಜೂನ್ 2026ರಂದು ವಿದುಷಿ ಪದ್ಮ ಅಡಿಗ ಇವರ ಹಾಡುಗಾರಿಕೆಗೆ ವಿದ್ವಾನ್ ಕುಶಾಲ್ ಬಿ.ಆರ್. ವಯೋಲಿನ್ ಹಾಗೂ ವಿದ್ವಾನ್ ನರಸಿಂಹನ್ ರಾಮಸ್ವಾಮಿ ಅಯೆಂಗಾರ್ ಇವರ ಮೃದಂಗಂನಲ್ಲಿ ಸಹಕರಿಸಲಿದ್ದಾರೆ. ವಿದ್ವಾನ್ ಸಿಕ್ಕಿಲ್ ಗುರುಚರಣ್ ಇವರ ಹಾಡುಗಾರಿಕೆಗೆ ವಿದುಷಿ ಎಚ್.ಎಂ. ಸ್ಮಿತಾ ವಯೋಲಿನ್, ವಿದ್ವಾನ್ ತುಮ್ ಕೂರ್ ಬಿ. ರವಿಶಂಕರ್ ಮೃದಂಗಂ ಮತ್ತು ವಿದ್ವಾನ್ ಜಿ. ಗುರುಪ್ರಸನ್ನ ಇವರು ಕಾಂಜೀರದಲ್ಲಿ ಸಾಥ್ ನೀಡಲಿದ್ದಾರೆ. ದಿನಾಂಕ 21 ಜೂನ್ 2026ರಂದು ‘ಸಪ’ ಮೇಳದವರಿಂದ ವಾದ್ಯ ಸಂಗೀತ ಹಾಗೂ ಕರ್ನಾಟಿಕ್ ಕ್ವಾರ್ಟೆಟ್ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ಶ್ರೇಯ ದೇವನಾಥ್ ಎಲೆಕ್ಟ್ರಿಕ್ ವಯೋಲಿನ್, ವಿದ್ವಾನ್ ಮೈಲೈ ಎಂ. ಕಾರ್ತಿಕೇಯನ್ ನಾದಸ್ವರಂ, ವಿದ್ವಾನ್ ಪ್ರವೀಣ…