Subscribe to Updates
Get the latest creative news from FooBar about art, design and business.
Author: roovari
ಶಿವಮೊಗ್ಗ : ನೀನಾಸಂ ರಂಗಶಿಕ್ಷಣ ಕೇಂದ್ರವು 2026-27ನೇ ಸಾಲಿನ ಒಂದು ವರ್ಷದ ರಂಗಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ರಂಗಭೂಮಿಯಲ್ಲಿ ಆಸಕ್ತಿ ಇದ್ದು, ಸ್ವಲ್ಪಮಟ್ಟಿನ ಅನುಭವ ಅಗತ್ಯ. ಊಟ, ವಸತಿ ವ್ಯವಸ್ಥೆಯ ವೆಚ್ಚ, ಭಾಗಶಃ ವಿದ್ಯಾರ್ಥಿ ವೇತನ ದೊರೆಯುತ್ತದೆ. ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ರಂಗಕಲ್ಪನೆ, ರಂಗ ಇತಿಹಾಸ, ನಾಟಕ ಇತಿಹಾಸ, ರಂಗ ನಟನೆ, ರಂಗ ಸಿದ್ಧತೆ, ರಂಗ ವ್ಯವಸ್ಥೆ ಬಗ್ಗೆ ವಿಸ್ತಾರವಾದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತದೆ. ಹೆಚ್ಚಿನ ವಿವರಗಳು ಮತ್ತು ಅರ್ಜಿ www.ninasam.org ಲಭ್ಯವಿದೆ.
ಉಡುಪಿ : ಕಲಾ ನಿಧಿ (ರಿ.) ಉಡುಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವುಗಳ ಜಂಟಿ ಆಶ್ರಯದಲ್ಲಿ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ದಿನಾಂಕ 05 ಮೇ 2026ರಂದು ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಸಿದ್ಧ ಭರತನಾಟ್ಯ ನೃತ್ಯ ಗುರು ರಾಮಕೃಷ್ಣ ಕೊಡಂಚ ಇವರು “ಬೈಲೂರು ದೇವಸ್ಥಾನದ ಆಡಳಿತ ಮಂಡಳಿಯು ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಕೇವಲ ಲೌಕಿಕ ಮನೋರಂಜನೆಗಿಂತ ಭಿನ್ನವಾಗಿ, ಹರಿಕಥೆ, ಯಕ್ಷಗಾನ, ನೃತ್ಯದಂತಹ ಕಲೆಗಳು ಮನುಷ್ಯನ ಮನಸ್ಸನ್ನು ಅರಳಿಸಲು ಮತ್ತು ಭಗವಂತನ ನಾಮಸ್ಮರಣೆಯ ಮೂಲಕ ಜೀವನವನ್ನು ಸಾರ್ಥಕಗೊಳಿಸಲು ಪೂರಕವಾಗಿವೆ. ಕರಾವಳಿ ಭಾಗದಲ್ಲಿ ಹರಿಕಥೆಯಂತಹ ಕಲೆಗಳು ಸ್ವಲ್ಪ ತಟಸ್ಥವಾಗಿದ್ದ ಸಂದರ್ಭದಲ್ಲಿ, ದಶಮಾನೋತ್ಸವದ ನೆನಪಿನಲ್ಲಿ ಹಂಡೆ ಪ್ರತಿಷ್ಠಾನದ ಸಹಯೋಗದೊಂದಿಗೆ ದೇವಸ್ಥಾನಗಳಲ್ಲಿ ಹರಿಕಥಾ ಸರಣಿಯನ್ನು ಪುನಃ ಪ್ರಾರಂಭಿಸುತ್ತಿರುವುದು ಹೆಮ್ಮೆಯ ವಿಚಾರ” ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಅವರು ಮಾತನಾಡಿ…
ಉಡುಪಿ : ವೃತ್ತಿ ಮೇಳದ ಯುವ ಕಲಾವಿದರಿಗೆ ಯಕ್ಷಗಾನ ಕಲಾರಂಗವು ಆಯೋಜಿಸಿದ್ದ ನಾಲ್ಕು ದಿನಗಳ ಮಾರ್ಗದರ್ಶಿ ಶಿಬಿರದ ಸಮಾರೋಪ ಮತ್ತು ಸಂಸ್ಥೆ ಯಕ್ಷ ವಿದ್ವಾಂಸರಿಗೆ ನೀಡುತ್ತಾ ಬಂದ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ನೆನಪಿನ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಸಮಾರಂಭವು ಸಂಸ್ಥೆಯ ಐವೈಸಿ ಸಭಾಭವನದಲ್ಲಿ ದಿನಾಂಕ 05 ಜೂನ್ 2026ರಂದು ಜರುಗಿತು. ರೂ.60,000/- ನಗದನ್ನೊಳಗೊಂಡ ಈ ಪ್ರಶಸ್ತಿಯನ್ನು ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ ಧರ್ಮಕರ್ತೃ ಡಾ. ಜಿ. ಭೀಮೇಶ್ವರ ಜೋಶಿಯವರು ಪ್ರದಾನ ಮಾಡಿ, “ಕಲಾರಂಗವು ಕಲೆ-ಶಿಕ್ಷಣ-ಸಮಾಜಕ್ಕೆ ಮಾಡುತ್ತಿರುವ ಸೇವೆ ಅನ್ಯಾದೃಶ. ಸಮರ್ಥ ನಾಯಕತ್ವ, ಸಮರ್ಪಣಾ ಭಾವದ ಕಾರ್ಯಕರ್ತರ ತಂಡ ಏನೆಲ್ಲ ಮಾಡಬಹುದು ಎಂಬುದಕ್ಕೆ ಈ ಸಂಸ್ಥೆ ಅತ್ಯುತ್ತಮ ಉದಾಹರಣೆಯಾಗಿದೆ” ಎಂದರು. ಅಭಿನಂದನಾ ನುಡಿಯೊಂದಿಗೆ ಶುಭ ಹಾರೈಸಿದ ಹಿರಿಯ ವಿದ್ವಾಂಸರಾದ ಡಾ. ಬಿ.ಎ. ವಿವೇಕ ರೈ ಅವರು ತಮ್ಮ ನಿಡುಗಾಲದ ಸ್ನೇಹಿತ ಡಾ. ಚಂದ್ರಶೇಖರ ದಾಮ್ಲೆಯವರ ಸಾಧನೆಗಳನ್ನು ಪರಿಚಯಿಸಿದರು. ಶಿಬಿರಾರ್ಥಿಗಳನ್ನು ಉದ್ದೇಶಿಸಿ ಯಕ್ಷಗಾನದ ವಾಚಿಕ ಅತ್ಯಂತ ಸಮೃದ್ಧವಾದುದು.ಶುದ್ಧ ಉಚ್ಚಾರ, ಸ್ಪಷ್ಟ ಮಾತುಗಾರಿಕೆಯಿಂದ…
ಉಡುಪಿ : ಉಡುಪಿಯ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 31 ಮೇ 2026ರಂದು ಉಡುಪಿಯ ‘ರಾಗಧನ’ ಸಂಸ್ಥೆಯು ನಡೆಸುತ್ತಿರುವ ‘ರಾಗರತ್ನ ಮಾಲಿಕೆ’ ಸರಣಿಯ 49ನೆಯ ಕಾರ್ಯಕ್ರಮವಾಗಿ ಒಂದು ಉತ್ಕೃಷ್ಟವಾದ ವೇಣುವಾದನ ಕಚೇರಿ ನಡೆಯಿತು. ಯೋಗಾ ಯೋಗವೆಂಬಂತೆ ಇದೇ ಸಂದರ್ಭದಲ್ಲಿ ಉಡುಪಿಯ ಹಿರಿಯ ಕೊಳಲು ವಿದ್ವಾಂಸರು ಮತ್ತು ಹೆಸರಾಂತ ಸಂಗೀತ ಗುರುಗಳೂ ಆಗಿದ್ದು, ಇತ್ತೀಚೆಗಷ್ಟೇ ನಮ್ಮನ್ನಗಲಿದ ಪ್ರೊ. ಕೆ.ಯು. ರಾಘವೇಂದ್ರ ರಾವ್ ಇವರಿಗೆ ‘ನುಡಿ ನಮನ’ವನ್ನು ಹಮ್ಮಿಕೊಳ್ಳಲಾಗಿತ್ತು. ಸಂಗೀತವನ್ನೇ ಉಸಿರಾಡುತ್ತ, ನೂರಾರು ಉತ್ತಮ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ ಸಾರ್ಥಕ ಜೀವನ ನಡೆಸಿದ್ದ ಶ್ರೀಯುತರಿಗೆ ಉಡುಪಿಯ ಅನೇಕ ಗಣ್ಯರು ಗೌರವಾರ್ಪಣೆಯನ್ನು ಮಾಡಿದರು. ಡಾ. ಮಹೇಶ್ ಭಟ್ ಹಾರ್ಯಾಡಿ ನುಡಿನಮನ ಭಾಷಣದ ಮೂಲಕ ತಾವು ಕಂಡಂತೆ ಅವರ ಜೀವನದ ವಿವಿಧ ಆಯಾಮಗಳನ್ನು ಸ್ಮರಿಸಿಕೊಂಡರು. ಅವರ ಪುತ್ರ ಶ್ರೀ. ಕೆ.ಯು. ಜಯಚಂದ್ರ ರಾವ್ ತಮ್ಮ ತಂದೆಯ ಸಂಗೀತ ಪ್ರೀತಿ, ಶಿಸ್ತಿನ ಅಭ್ಯಾಸ ಕ್ರಮ ಕುರಿತಾಗಿ ಮಾತಾಡುತ್ತಾ ಭಾವುಕರಾದರು. ಆನಂತರ ಯುಗಳ ವೇಣುವಾದನವನ್ನು ನಡೆಸಿಕೊಟ್ಟವರು ಶ್ರೀ ಹೇರಂಭ್ ಮತ್ತು ಶ್ರೀ…
ಮಾಸ್ತಿ ವೆಂಕಟೇಶ ಅಯ್ಯಂಗಾರರ 135ನೇ ಜನ್ಮದಿನದ ಅಂಗವಾಗಿ ಈ ಲೇಖನ. ಕನ್ನಡ ಸಣ್ಣಕತೆಯ ಇತಿಹಾಸದಲ್ಲಿ ಮಹತ್ವದ ಸಾಧನೆಯನ್ನು ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರರು (1891-1986) ಸೃಷ್ಟಿಸಿದ ಕತೆಗಳ ಜಗತ್ತು ಮಾನವೀಯ ಆಶಯಗಳಿಂದ ಕೂಡಿದೆ. ಪಾತ್ರಗಳ ವ್ಯಾಪ್ತಿಯು ದೊಡ್ಡದು. ಅಲ್ಪಜೀವಿಗಳಿಂದ ಹಿಡಿದು ಐತಿಹಾಸಿಕ ವ್ಯಕ್ತಿಗಳವರೆಗೆ ಅವರ ಪಾತ್ರಗಳ ವೈವಿಧ್ಯವಿದೆ. ಮಾಸ್ತಿಯವರ ಕಾದಂಬರಿಗಳಿಗೂ ಈ ಮಾತು ಅನ್ವಯವಾಗುತ್ತದೆ. ಚಾರಿತ್ರಿಕ ಕಾದಂಬರಿಗಳಾದ ‘ಚೆನ್ನಬಸವ ನಾಯಕ’ (1950) ಮತ್ತು ‘ಚಿಕವೀರ ರಾಜೇಂದ್ರ’ (1956) ಅವುಗಳಲ್ಲಿ ಶಿಖರಪ್ರಾಯವಾಗಿವೆ. ಹೆಚ್ಚೇನೂ ಚರ್ಚೆಗೊಳಗಾಗದ ‘ಶೇಷಮ್ಮ’ (1976) ಕಾದಂಬರಿ ತನ್ನದೇ ಆದ ವಿಶೇಷತೆಗಳಿಂದ ಕಂಗೊಳಿಸುತ್ತದೆ. 238 ಪುಟಗಳ ಈ ಕೃತಿಯನ್ನು ಮಾಸ್ತಿಯವರು ‘ಕಥೆ’ ಎಂದು ಕರೆದರೆ ನಿರೂಪಕನು ಅದನ್ನು ‘ಚರಿತ್ರೆ’ ಎನ್ನುತ್ತಾನೆ. ಮೊದಲ 234 ಪುಟಗಳಲ್ಲಿ ಕಥನವು ಪ್ರಥಮ ಪುರುಷ ನಿರೂಪಣೆಯ ಮೂಲಕ ಸಾಗುವುದರಿಂದ ಕಥೆಯ ನಿರೂಪಕನು ಯಾರು ಎಂದು ತಿಳಿಯದಿದ್ದರೂ ಕೊನೆಯ ಪುಟಗಳನ್ನು ಓದುವಾಗ ಶೇಷಮ್ಮನ ಹಿರಿಯ ಮಗ ರಾಜಣ್ಣನ ಸಹಪಾಠಿಯಾದ ರಾಮ ಶೆಟ್ಟಿಯು ಈ ಕಾದಂಬರಿಯ ನಿರೂಪಕನೆಂದು ಗೊತ್ತಾಗುತ್ತದೆ. ಉತ್ತಮ…
ಬೆಂಗಳೂರು : ಸ್ಪಷ್ಟ ಥಿಯೇಟರ್ ಪ್ರಸ್ತುತ ಪಡಿಸುವ ಗಗನ್ ಪ್ರಸಾದ್ ಇವರ ಕಥೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಲೆಕ್ಕಕ್ಕುಂಟು ಆಟಕ್ಕಿಲ್ಲ’ ನಾಟಕ ಪ್ರದರ್ಶನವನ್ನು ದಿನಾಂಕ 07 ಜೂನ್ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರು ಮಲ್ಲೇಶ್ವರದ ಸೇವಾ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಜನಾ ಎಸ್. ಮತ್ತು ಪ್ರಶಾಂತ್ ಹೆಚ್.ಎಸ್. ಸಂಭಾಷಣೆ ಬರೆದಿದ್ದು, ಮಧುರ ಚೆನ್ನಿಗ ಸುಬ್ಬಣ್ಣ ಮತ್ತು ಎಸ್. ಸುಮೇಧ ಕಶ್ಯಪ್ ಇವರು ಸಂಗೀತ ನೀಡಿದ್ದಾರೆ.
ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಸಹಯೋಗದಲ್ಲಿ ಜರ್ನಿ ಥೇಟರ್ ಗ್ರೂಪ್ (ರಿ.) ಮಂಗಳೂರು ಪ್ರಸ್ತುತ ಪಡಿಸುವ ‘ರಾಮಾಂಜನೇಯ ಕಾಳಗ’ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 06 ಜೂನ್ 2026ರಂದು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿ.ವಿ.ಯ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸುನಿಲ್ ಪಲ್ಲಮಜಲು ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳುವ ಯಕ್ಷಗಾನದ ಹಿಮ್ಮೇಳದಲ್ಲಿ ವಿಶ್ವಾಸ್ ಕಾರ್ಬೆಟ್ಟು, ಮಯೂರ ನಾಯಿಗ, ಸಮರ್ಥ ಉಡುಪ, ಶ್ರೀನಾಥ್ ಜ್ಯೋತಿಗುಡ್ಡೆ ಹಾಗೂ ಮುಮ್ಮೇಳದಲ್ಲಿ ರೋಹಿಲ್ ಶೆಟ್ಟಿ, ರಾಹುಲ್ ಕುಡುಪು, ಗೌತಮ್ ಶೆಟ್ಟಿ, ವಸುಂಧರ ಹರೀಶ್, ಸೃಷ್ಟಿ ಸೋಮೇಶ್ವರ, ರೋಹನ್ ಎಸ್. ಉಚ್ಚಿಲ್, ಹರೀಶ್ ಶೆಟ್ಟಿ ನೀಲಿಪಾಲ್, ಮೇಘನಾ ಕುಂದಾಪುರ, ಕೃತಿ ಪೆರ್ಲ, ಶಮಿತಾ, ಜೀವನ ಸೋಮೇಶ್ವರ, ಸುನಿಲ್ ಅತ್ತಾವರ, ಗಗನ, ಅದ್ವಯ ಯಥರ್ವ, ಸತ್ಯ ಜೀವನ್, ಶರಣ್ಯ, ಹರ್ಷಿತ್, ತೃಪ್ತಿ, ಯುಕ್ತ, ರಶ್ಮಿತಾ ಇವರುಗಳು ಭಾಗವಹಿಸಲಿದ್ದಾರೆ.
ಬೆಂಗಳೂರು : ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಇವರ ಜಂಟಿ ಸಹಯೋಗದೊಂದಿಗೆ ‘ಬೆಂಗಳೂರು ಕಿರುನಾಟಕೋತ್ಸವ’ವನ್ನು ಆಯೋಜಿಸುತ್ತಿದ್ದು, ನಿರೂಪಣಾ ವಿಷಯ : ‘ನಾಗರಿಕ ಪ್ರಜ್ಞೆ’ ಆಗಿರುತ್ತದೆ. ದಿನಾಂಕ 26 ಜೂನ್ 2026 ನೋಂದಾವಣೆಗಾಗಿ ಕೊನೆಯ ದಿನಾಂಕವಾಗಿದ್ದು, 28 ಜೂನ್ 2026ರಂದು ಪ್ರಾಥಮಿಕ ಹಂತದ ಸ್ಪರ್ಧೆ ಹಾಗೂ 11 ಜುಲೈ 2025ರಂದು ಅಂತಿಮ ಹಂತದ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 99025 90303 ಮತ್ತು 96868 69676 ಸಂಖ್ಯೆಗಳನ್ನು ಸಂಪರ್ಕಿಸಿರಿ. https://www.pravaratheatre.org/bspf2026 ಪ್ರಶಸ್ತಿಗಳು : 1. ಅತ್ಯುತ್ತಮ ನಾಟಕ (ತೀರ್ಪುಗಾರರ ಆಯ್ಕೆ) – ಫಲಕ & 10,000/- ನಗದು. 2. ಅತ್ಯುತ್ತಮ ನಾಟಕ (ಪ್ರೇಕ್ಷಕರ ಆಯ್ಕೆ) – ಫಲಕ & 10,000/- ನಗದು. 3. ‘ಆರ್ .ನಾಗೇಶ್’ ಗೌರವಾರ್ಥ ಅತ್ಯುತ್ತಮ ನಿರ್ದೇಶನ – ಫಲಕ & 2,500/- ನಗದು. 4. ‘ಸಂಚಾರಿ ವಿಜಯ್’ ಗೌರವಾರ್ಥ ಅತ್ಯುತ್ತಮ ನಟ – ಫಲಕ & 2,500/- ನಗದು. 5. ‘ಉಮಾಶ್ರೀ’ ಗೌರವಾರ್ಥ ಅತ್ಯುತ್ತಮ ನಟಿ…
ಮೈಸೂರು : ರಂಗಬಂಡಿ ಮಳವಳ್ಳಿ (ರಿ.), ದ್ವಿಜೆನ್ ದಿನನಾಥ್ ಆರ್ಟ್ಸ್ ಫೌಂಡೇಷನ್ ಮತ್ತು ಚಾಂದಿನಿ ಫೌಂಡೇಶನ್ ಇವರು ಜಂಟಿಯಾಗಿ ಆಯೋಜಿಸುತ್ತಿರುವ ‘ನನ್ನ ಧ್ವನಿ’ ಎ. ರೇವತಿ ಅಭಿನಯಿಸುವ ಏಕವ್ಯಕ್ತಿ ರಂಗ ಪ್ರಯೋಗವನ್ನು ದಿನಾಂಕ 06 ಜೂನ್ 2026 ರಂದು ಸಂಜೆ 6-30 ಗಂಟೆಗೆ ಮೈಸೂರು ಕಿರು ರಂಗಮಂದಿರ ಕಲಾಮಂದಿರ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಎ. ಮಂಗೈ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಈ ನಾಟಕ ಈಗಾಗಲೇ ಸುಮಾರು 135 ಪ್ರದರ್ಶನಗಳನ್ನು ಕಂಡಿದ್ದು, ಟ್ರಾನ್ಸ್ ಸಮುದಾಯದವಳ ಹಕ್ಕು, ಸಮಾನತೆ, ಸಂಸ್ಕೃತಿ, ಪ್ರೀತಿಯಲ್ಲಿ ದೊರೆತ ಒಪ್ಪಿಗೆಯ ಬಿಡುಗಡೆಯ ನೋವು ಮತ್ತು ಹಿನ್ನಲೆಗಳ ಧ್ವನಿಯನ್ನು ತೋರಿಸುತ್ತದೆ.
ಉಡುಪಿ : ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ ಮತ್ತು ಸುಮನಸಾ ಕೊಡವೂರು ರಜತ ಸಂಭ್ರಮ ಸಮಿತಿಯು ದಿನಾಂಕ 31 ಮೇ 2026ರಂದು ಕುಂಜಿಬೆಟ್ಟು ಐ.ವೈ.ಸಿ. ಸಭಾಂಗಣದಲ್ಲಿ 25ನೇ ಸಂವತ್ಸರ ಸಡಗರದ ಪ್ರಯುಕ್ತ ಹಮ್ಮಿಕೊಂಡಿದ್ದ ‘ರಜತ ಸಂಭ್ರಮ’ ಉದ್ಘಾಟನಾ ಸಮಾರಂಭ ನಡೆಯಿತು. ಈ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಪಡುಬಿದ್ರಿಯ ಯಸ್ಸೆನ್ ಸ್ಪೆಷಲ್ ಎಕಾನೋಮಿಕ್ ಝೋನ್ ಮುಖ್ಯಸ್ಥ ಅಶೋಕ್ ಶೆಟ್ಟಿಯವರು ಮಾತನಾಡಿ “ನಿಸ್ವಾರ್ಥ ಸೇವೆ, ಮಾನವೀಯ ಕಳಕಳಿ ಇಟ್ಟುಕೊಂಡು, ಜನರಿಗೆ ಸಹಾಯ ಮಾಡುತ್ತಾ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬೆಳೆದು ನಿಂತಿರುವ ಸಂಸ್ಥೆ ಸುಮನಸಾ ಕೊಡವೂರು. ಸಂಸ್ಥೆಯು ಜನ್ಮ ತಾಳಿದ್ದೇ ನೆರವಿನ ಹಸ್ತ ಚಾಚುವ ಘಟನೆಯ ಮೂಲಕ ಎಂಬುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಬಡವರೊಬ್ಬರ ಮನೆ ಬೆಂಕಿಗಾಹುತಿಯಾದಾಗ ಅವರಿಗೆ ಮನೆ ಕಟ್ಟಿಕೊಡುವ ಮೂಲಕ ಈ ಸಂಸ್ಥೆ ಆರಂಭವಾಯಿತು. ಅಂದಿನಿಂದ ಇಂದಿನವರೆಗೆ ಸಂಸ್ಥೆ ತನ್ನ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿಂದೆ ನೋಡಿದ್ದೇ ಇಲ್ಲ. ಸಂಸ್ಕೃತಿ, ಕಲೆ ಮತ್ತು ಮಾನವೀಯ ದೃಷ್ಟಿ ಇಟ್ಟುಕೊಂಡು ಸಾಂಸ್ಕೃತಿಕ ಸಂಘಟನೆಯಾಗಿ ಇಂದು ಬೆಳೆದಿದೆ.…