Author: roovari

ಇವರು ಮಡಿಕೇರಿ ತಾಲೂಕು ಚೇರಂಬಾಣೆ-ಕೋಪಟ್ಟಿ ಗ್ರಾಮದ ಕೊಟ್ಟು ಕತ್ತೀರಾ ಕಾರ್ಯಪ್ಪ ಮತ್ತು ರಾಗಿಣಿ ದಂಪತಿಯರ ಪುತ್ರ. ತಮ್ಮ ವಿದ್ಯಾಭ್ಯಾಸವನ್ನು ಕಾಲೂರು ಹಾಗೂ ಗಾಳಿಬೀಡು ಶಾಲೆಯಲ್ಲಿ ಮುಗಿಸಿ 1983ರಲ್ಲಿ ಭಾರತೀಯ ಸೇನೆಗೆ ಸೇರಿ ಜಮ್ಮು, ಕಾಶ್ಮೀರ, ಪಂಜಾಬ್ ಬ್ಲೂ ಸ್ಟಾರ್, ಗ್ವಾಲಿಯರ್, ಐ. ಪಿ. ಕೆ. ಎಫ್, ಶ್ರೀಲಂಕಾ ಮತ್ತು ನಾರ್ತ್ ಈಸ್ಟ್ ಸೆಕ್ಟರ್, ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಗ್ರಿಪ್ ಲ್ ಡೆಪ್ಯೂಟೇಷನ್ ಮತ್ತು ರಾಜಸ್ತಾನ್, ಪಂಜಾಬ್ ಬಾರ್ಡರ್, ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಅಟ್ಯಾಚ್ಮೆಂಟ್ ಆಗಿ ಕೆಲಸ ಮಾಡಿರುತ್ತಾರೆ. 2000ರಲ್ಲಿ ಸೇನಾ ನಿವೃತ್ತಿ ಹೊಂದಿ ಬೆಂಗಳೂರಿನ ಜಾಲಹಳ್ಳಿಯಲ್ಲಿ ‘ಸ್ವಸ್ತಿಕ್ ಕನ್ಸ್ಟ್ರಕ್ಷನ್ ಮತ್ತು ಸ್ವಸ್ತಿಕ್ ಕಾಂಕ್ರೀಟ್ ಪ್ರಾಡಕ್ಟ್‌’ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಕನ್ನಡ ಭಾಷೆಯಲ್ಲಿ ‘ಬೈಸಿಕಲ್’, ‘ವೀರ ಚಕ್ರ’, ‘ಮೋಹ ಪಾಶ’ ಹಾಗೂ ‘ಕರಗಿದ ಬದುಕು’  ಎನ್ನುವ 4 ಕೃತಿಗಳನ್ನು ರಚಿಸಿ ಲೋಕಾರ್ಪಣೆ ಮಾಡಿದ್ದಾರೆ. ಇವರು ಕೊಡವ ಭಾಷೆಯಲ್ಲಿ ಬರೆದ ‘ವಿಧಿರ ಕಳಿಲ್’ ಎನ್ನುವ ಕಾದಂಬರಿಯು ‘ಪೋಮ್ಮಲೆ ಕೊಡಗ್’ ಎನ್ನುವ ಕೊಡವ…

Read More

ಜಗತ್ತಿನ ಅಂಧಕಾರವನ್ನು ಕಳೆಯುವ ಬೆಳಕಾಗಿ ಹಬ್ಬಗಳು ಬರಬೇಕು ಎಂಬುವುದು ದೀಪಾವಳಿಯ ಕಲ್ಪನೆ. ಮನುಕುಲವನ್ನು ಕಾಡುವ ಅನಿಷ್ಟಗಳು, ಸಾಂಕ್ರಾಮಿಕ ರೋಗಗಳು, ನೋವು, ದುಮ್ಮಾನಗಳು ಇವುಗಳಿಗೆ ಪರಿಹಾರವಾಗಿ ಪ್ರತಿಯೊಬ್ಬರ ಬದುಕಿನಲ್ಲಿ ನಲಿವಿನ ಜತೆಗಿನ ನೆಮ್ಮದಿಯ ಬೆಳಕು ಬೇಕು. ಇದರ ನಿರೀಕ್ಷೆಯಲ್ಲಿ ಜಗತ್ತಿನ ಪ್ರತೀ ಮನಸ್ಸುಗಳೂ ಇರುತ್ತಿವೆ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ತವಕದ ಪಯಣದಲ್ಲಿ ಸಾವಿರಾರು ಕನಸುಗಳಿವೆ, ಯೋಜನೆಗಳಿವೆ. ಇವೆಲ್ಲವೂ ಸಾಕಾರಗೊಳ್ಳಬೇಕು. ಮನುಜ ಸಂಕುಲವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸಲು ಜ್ಞಾನದೀವಿಗೆಯ ಅಗತ್ಯವೂ ಇದೆ. ಮಾನವನ ಎಲ್ಲಾ ಪ್ರಗತಿಯಲ್ಲು ಕೂಡಾ ಜ್ಞಾನದ ಬೆಳಕಿನ ಸ್ಥಾನ ದೊಡ್ಡದು. ಅದು ಗಟ್ಟಿಯಾದ ಅಡಿಪಾಯ. ಮಾನವನ ಮನದೊಳಗೆ ಜ್ಞಾನವನ್ನು, ಬದುಕಿನ ರೀತಿಯನ್ನು ನಾಗರಿಕತೆಯ ಪಥವನ್ನು ಮಹತ್ವದ ಗ್ರಂಥಗಳು ನೀಡುತ್ತವೆ. ಪ್ರತೀ ಗ್ರಂಥಗಳೂ ಕೂಡಾ ಸನಾತನ ಸತ್ವಗಳ ಪೂರಣ. ಅದು ಮನಮುಟ್ಟಿದಾಗ ಮನಸ್ಸಿನಲ್ಲು ಪಕ್ವತೆ, ಕೃತಿಯಲ್ಲಿ ದೃಢತೆ, ವ್ಯವಹಾರದಲ್ಲಿ ಸಾತ್ವಿಕತೆ ದೊರೆಯುತ್ತದೆ. ಮನಸ್ಸಿನ ತಾಮಸ ಗುಣವನ್ನು ಕಳೆಯುವುದಕ್ಕೆ ಜ್ಞಾನವು ಬೆಳಕಿನ ರೂಪದಲ್ಲಿ ಆವಾಹನೆಯಾಗಬೇಕು. ಆದ್ದರಿಂದ ನಮ್ಮ ಸುತ್ತಲಿನ ಪ್ರಬುದ್ಧ ಗ್ರಂಥಗಳು ಸತ್ಯದರ್ಶನದ ಮೂಲಬಿಂದುಗಳು.…

Read More

ಮಂಗಳೂರು : ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ‘ತುಲುವೆರೆ ಕಲ ವರ್ಸೊಚ್ಚಯ’ ಕಾರ್ಯಕ್ರಮವು ದಿನಾಂಕ 01-05-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಹಿರಿಯ ಸಾಹಿತಿ ಸದಾನಂದ ನಾರಾವಿ “ಇಂದು ವ್ಯಾವಹಾರಿಕ ಅಗತ್ಯಕ್ಕೆ ಇತರ ಭಾಷೆಗಳ ಕಲಿಕೆ ಅನಿವಾರ್ಯವಾದರೂ, ಮಾತೃಭಾಷೆ ಮೇಲಿನ ಅಭಿಮಾನ ಎಂದಿಗೂ ಮರೆಯಾಗಬಾರದು. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಮಾತೃಭಾಷೆಯಲ್ಲಿದೆ. ಶೈಕ್ಷಣಿಕ ದೃಷ್ಟಿಯಿಂದಲೂ ಭಾಷೆಯ ಕಲಿಕೆ ಹೆಚ್ಚಿದಷ್ಟೂ ಜ್ಞಾನದ ಮಟ್ಟ ವೃದ್ಧಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಸಕಾರಾತ್ಮಕ ಚಿಂತನೆ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಬಹುಭಾಷಾ ಕಲಿಕೆ ಮಹತ್ವದ ಪಾತ್ರ ವಹಿಸುತ್ತದೆ. ಭಾಷೆಯನ್ನು ದ್ವೇಷಿಸುವ ಮನೋಭಾವ ಸಲ್ಲದು. ವರ್ಷದ ಅವಧಿಯಲ್ಲಿ ಸಂಘಟನೆ ಸದಸ್ಯರ ಕವನ, ಬರಹಗಳ ಸಂಗ್ರಹದ ಆರು ಪುಸ್ತಕಗಳನ್ನು ಹೊರತರುವ ಕೆಲಸ ಸುಲಭಸಾಧ್ಯವಾಗಿಸಿದ ಸಂಘಟನೆಯ ಪದಾಧಿಕಾರಿಗಳು ಅಭಿನಂದನಾರ್ಹರು, ಸಾಹಿತಿ, ಕವಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಸಂಘಟನೆ ಕಾರ್ಯ ನಿರಂತರವಾಗಿರಲಿ, ಇನ್ನಷ್ಟು ಕೃತಿಗಳು ಹೊರಬರಲಿ” ಎಂದು ಆಶಿಸಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಅಕ್ಷಯಾ ಆರ್.ಶೆಟ್ಟಿ ಮಾತನಾಡಿ “ಕೃತಿ ರೂಪದಲ್ಲಿ ಸಾಹಿತ್ಯದ ದಾಖಲೀಕರಣ…

Read More

ಕಯ್ಯಾರು : ಮಹಿಳಾ ಯಕ್ಷಕೂಟ (ರಿ.) ಪೊನ್ನೆತ್ತೋಡು ಕಯ್ಯಾರು ಹಾಗೂ ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ (ರಿ.) ಭಗವತೀ ನಗರ ಅಡ್ಕ ಇವರ ಸಹಯೋಗದೊಂದಿಗೆ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆಯಲ್ಲಿ ನಾಲ್ಕನೆಯ ವರ್ಷದ ತಾಳಮದ್ದಳೆ ಸಪ್ತಾಹವು ದಿನಾಂಕ 15-04-2024ರಿಂದ 21-04-204ರವರೆಗೆ ಅಡ್ಕ ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲಾ ಸಭಾಂಗಣದಲ್ಲಿ ಜರಗಿತು. ಪ್ರತೀ ದಿನ ಮಧ್ಯಾಹ್ನ 3ರಿಂದ 4ರವರೆಗೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು 4ರಿಂದ 4.45ರವರೆಗೆ ಸಭಾ ಕಾರ್ಯಕ್ರಮ ಹಾಗೂ 5ರಿಂದ 7.30ರವರೆಗೆ ವಿವಿಧ ಮಹಿಳಾ ತಂಡಗಳಿಂದ ತಾಳಮದ್ದಳೆ ಕಾರ್ಯಕ್ರಮ ನೆರವೇರಿತು. ದಿನಾಂಕ 15-04-2024ನೇ ಸೋಮವಾರ ಸಪ್ತಾಹದ ಉದ್ಘಾಟನೆಯನ್ನು ಶ್ರೀ ಗೋಪಾಲ ಕೃಷ್ಣ ಮಾಸ್ಟರ್ ಪಂಜತ್ತೊಟ್ಟಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಶ್ರೀ ಚಂದ್ರಹಾಸ ಭಗವತೀ ನಗರ ವಹಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಶಂಕರ ಕಾಮತ್ ಚೇವಾರು ಪಾಲ್ಗೊಂಡರು. ಬಳಿಕ ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ಕಯ್ಯಾರು ಇವರಿಂದ ‘ದೇವಯಾನಿ ಕಲ್ಯಾಣ’ ಎಂಬ ತಾಳಮದ್ದಳೆ ಪ್ರಸ್ತುತಿಗೊಂಡಿತು. ದಿನಾಂಕ 16-04-2024ನೇ ಮಂಗಳವಾರ ಸಭಾ…

Read More

ಕಾಸರಗೋಡು : ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಕಾಸರಗೋಡು ಮಾನ್ಯದ ಶ್ರೀ ಅಯ್ಯಪ್ಪ ಮಂದಿರದಲ್ಲಿ ನಡೆಸಿದ ಗ್ರಾಮ ಪರ್ಯಟನೆಯ ಎಂಟನೇ ಕಾರ್ಯಕ್ರಮವು ದಿನಾಂಕ 29-04-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ಮಾನ್ಯ ಸುಂದರಶೆಟ್ಟಿ “ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಊರೂರುಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಈ ಮಣ್ಣಿನ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಕಾರ್ಯ ಶ್ಲಾಘನೀಯ” ಎಂದು ಹೇಳಿದರು. ಮಾನ್ಯ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಎಂ., ಪದಾಧಿಕಾರಿ ರಾಮ ಮಾನ್ಯ, ರಂಗಸಿರಿಯ ಸಂಗೀತ ಶಿಕ್ಷಕಿ ಸಂಗೀತ ವಿದುಷಿ ಗೀತಾ ಸಾರಡ್ಕ ಶುಭ ಹಾರೈಸಿದರು. ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ಕೆದಿಲಾಯ ಪುಂಡೂರು ಅಧ್ಯಕ್ಷತೆ ವಹಿಸಿದ್ದರು. ಅನ್ವಿತ ಟಿ. ಹಾಗೂ ಸುಮೇಧ ಕೆ. ಪ್ರಾರ್ಥಿಸಿ, ಅಭಿಜ್ಞಾ ಭಟ್ ಬೊಳುಂಬು ಸ್ವಾಗತಿಸಿದರು. ಬಳಿಕ ಸಂಗೀತ ವಿದುಷಿ ಗೀತಾ ಸಾರಡ್ಕ ಅವರ ನಿರ್ದೇಶನದಲ್ಲಿ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.…

Read More

ಕಾಸರಗೋಡು : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಆಯೋಜಿಸಿದ ಸಾಹಿತ್ಯ ಪರಿಷತ್‌ ನಡಿಗೆ, ಹಿರಿಯ ಸಾಧಕರ ಎಡೆಗೆ’ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಕಲಾವಿದ, ಪ್ರಸಂಗಕರ್ತ, ಭಾಗವತ, ತಾಳಮದ್ದಲೆ ಅರ್ಥಧಾರಿ ಮಧೂರು ವೆಂಕಟಕೃಷ್ಣ ಅವರನ್ನು ಮಧೂರಿನ ಅವರ ನಿವಾಸದಲ್ಲಿ ದಿನಾಂಕ 30-04=2024ರಂದು ಅಭಿನಂದಿಸಲಾಯಿತು. ಅಭಿನಂದನಾ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ ಅಧ್ಯಕ್ಷತೆಯಲ್ಲಿ ವೆಂಕಟಕೃಷ್ಣ ದಂಪತಿಯನ್ನು ಅಭಿನಂದಿಸಲಾಯಿತು . ಅಭಿನಂದನಾ ಭಾಷಣ ಮಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಮಾತನಾಡಿ “ಹವ್ಯಾಸಿ ಯಕ್ಷಗಾನ ಕಲಾವಿದರಾಗಿ, ಪ್ರಸಂಗಕರ್ತರಾಗಿ, ತಾಳಮದ್ದಲೆ ಅರ್ಥಧಾರಿಯಾಗಿ, ಕನ್ನಡ ತುಳು ಭಕ್ತಿ ಗೀತೆಗಳ ಗೀತ ರಚನಕಾರರಾಗಿ, ತಾಳಮದ್ದಲೆ ಸಂಘಟಕನಾಗಿ, ಮಧೂರು ವೆಂಕಟಕೃಷ್ಣರು ನೀಡಿದ ಕೊಡುಗೆ ಅನನ್ಯವಾದುದು.” ಎಂದು ಹೇಳಿದರು. ನಿವೃತ್ತ ಪ್ರಿನ್ಸಿಪಾಲ್ ಡಾ.ಕೆ. ಕಮಲಾಕ್ಷ ಮಾತನಾಡಿ “ಯಕ್ಷಗಾನದ ಪ್ರತಿಯೊಂದು ವಿಷಯದ ಪರಿಜ್ಞಾನ ವೆಂಕಟಕೃಷ್ಣರಿಗಿದೆ. ಭಾಗವತರಾಗಿ ಅರ್ಥಧಾರಿಗಳಲ್ಲಿ ಸ್ಫೂರ್ತಿ ತುಂಬಬಲ್ಲ ಇವರು ಅರ್ಥಧಾರಿಯಾಗಿ ಸಹ…

Read More

ಶಿರ್ವ: ಸಂತ ಮೇರಿ ಕಾಲೇಜು ಶಿರ್ವ ಇಲ್ಲಿನ ಗ್ರಂಥಾಲಯ ವಿಭಾಗ ಮತ್ತು IQAC ಇವರ ಸಹಯೋಗದೊಂದಿಗೆ “ವಿಶ್ವ ಪುಸ್ತಕ ದಿನಾಚರಣೆ”ಯನ್ನು ದಿನಾಂಕ 23-04-2024ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾರ್ವಜನಿಕ ಗ್ರಂಥಾಲಯ ಕಾಪು ಪುರಸಭೆ ಇದರ ಗ್ರಂಥಾಲಯ ಮೇಲ್ವಿಚಾರಕಿಯಾದ ಶ್ರೀಮತಿ ಪೂರ್ಣಿಮಾ ಮಾತನಾಡಿ “ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು. ಇಂದು ಯಾರು ಕದಿಯಲು ಸಾಧ್ಯವಿಲ್ಲದ ಸಂಪತ್ತು ಇದ್ದರೆ ಅದು ಜ್ಞಾನ ಮಾತ್ರ. ‘ಮೈಯಲ್ಲಿ ಹರಿದ ಬಟ್ಟೆ ಇದ್ದರೂ ಚಿಂತೆಯಿಲ್ಲ, ಆದರೆ ಕೈಯಲ್ಲಿ ಒಂದು ಪುಸ್ತಕವಿರಲಿ’ ಎಂಬ ಅಂಬೇಡ್ಕರ್ ಅವರ ಇದೊಂದೇ ಮಾತು ಪುಸ್ತಕದ ಮಹತ್ವವನ್ನು ತಿಳಿಸಿಕೊಡುತ್ತದೆ.” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅತ್ಯುತ್ತಮ ಗ್ರಂಥಾಲಯ ಬಳಕೆದಾರರಿಗೆ ಬಹುಮಾನವನ್ನು ನೀಡಲಾಯಿತು. ತೃತೀಯ ಬಿ.ಎ ವಿದ್ಯಾರ್ಥಿನಿಯಾದ ಕುಮಾರಿ ಕೌಶಲ್ಯ, ತೃತೀಯ ಬಿ. ಸಿ. ಎ. ವಿದ್ಯಾರ್ಥಿನಿಯಾದ ಕುಮಾರಿ ಹೇಮಶ್ರೀ ಮತ್ತು ತೃತೀಯ ಬಿ. ಕಾಂ. ವಿದ್ಯಾರ್ಥಿನಿಯಾದ ಕುಮಾರಿ ಅಫ್ಸಾನ ಬಹುಮಾನವನ್ನು ಪಡೆದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೊನಿಸ್‌…

Read More

ಮಂಗಳೂರು : ಮಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾದ ‘ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ’ ಕಾರ್ಯಕ್ರಮವು ಪತ್ರಿಕಾ ಭವನದಲ್ಲಿ ದಿನಾಂಕ 30-04-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟಿನ ಸ್ಥಾಪಕಾಧ್ಯಕ್ಷ, ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ “ಸಾಂಸ್ಕೃತಿಕ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿರುವ ಕರಾವಳಿಯ ಹೆಮ್ಮೆಯ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಯಕ್ಷ ಶಿಕ್ಷಣ ನೀಡಲು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ ಮುಂದಾಗಿದೆ. ಈಗಾಗಲೇ 4 ಸಾವಿರಕ್ಕೂ ಅಧಿಕ ಮಕ್ಕಳಿಗೆ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ವೇದಿಕೆ ಒದಗಿಸುವ ಪ್ರಯತ್ನವೂ ನಡೆಯಲಿದೆ. ಈಗಾಗಲೇ ಆಳ್ವಾಸ್ ಶಿಕ್ಷಣ ಫೌಂಡೇಶನ್ ಸಹಯೋಗದಲ್ಲಿ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ ಯಶಸ್ವಿಯಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಹೆಚ್ಚಿನ ಸೌಲಭ್ಯಗಳು ಇರುವುದಿಲ್ಲ. ಅವರಿಗೆ ಬಾಲ್ಯದಲ್ಲೇ ಯಕ್ಷಗಾನದ ಬಗ್ಗೆ ಜ್ಞಾನ ಹಾಗೂ ಅಭಿರುಚಿ ಮೂಡಿಸುವುದು ಟ್ರಸ್ಟಿನ ಉದ್ದೇಶವಾಗಿದೆ. ಹಿರಿಯ ಕಲಾವಿದರ…

Read More

ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡವು ನಾಡೋಜ ಚೆನ್ನವೀರ ಕಣವಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ದತ್ತಿನಿಧಿಯ ಅಂಗವಾಗಿ ಕನ್ನಡದ ಯುವ ಲೇಖಕರಿಗಾಗಿ ನಾಡೋಜ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಸೂಚನೆಗಳು : * ಸ್ಪರ್ಧೆಯಲ್ಲಿ ಭಾಗವಹಿಸುವವರ ವಯೋಮಿತಿ: 18 ರಿಂದ 35 ವರ್ಷ * ಬರಹಗಳನ್ನು ಕಳಿಸಲು ಕೊನೆಯ ದಿನಾಂಕ 20-05-2024 * ಕಡ್ಡಾಯವಾಗಿ ಆಧಾರ ಕಾರ್ಡ್ ಝರಾಕ್ಸ್ ಪ್ರತಿ ಕಳಿಸಬೇಕು. * ಕಥೆ ಮತ್ತು ಕವನಗಳು ಸ್ವತಂತ್ರವಾಗಿರಬೇಕು. * ವಿಷಯದ ಆಯ್ಕೆಯ ಸ್ವಾತಂತ್ರ್ಯವಿರುತ್ತದೆ. * ಈ ವರೆಗೆ ಎಲ್ಲಿಯೂ ಪ್ರಕಟವಾಗಿರಬಾರದು. * ನುಡಿ ತಂತ್ರಾಂಶದೊಂದಿಗೆ ವರ್ಡ್ ಫೈಲ್ ನಲ್ಲಿ ಟೈಪ್ ಮಾಡಿ ಮೇಲ್ ಮೂಲಕ ಕಳುಹಿಸಬೇಕು. * ನಿರ್ಣಾಯಕರ ನಿರ್ಣಯವೇ ಅಂತಿಮ.. * ಎರಡೂ ವಿಭಾಗಗಳಲ್ಲಿ ಆಯ್ಕೆಯಾದ ಮೊದಲ ಮೂರು ಕವನಗಳಿಗೆ/ಬರಹಗಳಿಗೆ ಜೂನ್ 28 ರಂದು ಡಾ. ಚನ್ನವೀರ ಕಣವಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು. *…

Read More

ಮಂಗಳೂರು : ರಂಗ ಸ್ವರೂಪ ಮಂಗಳೂರು ಸಂಘಟನೆ ಆಯೋಜಸಿದ ‘ರಂಗೋತ್ಸವ- 2024’ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 01-05-2024 ರಂದು ಮರಕಡದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಮೂಡಂಬೈಲು ಶಾಲೆಯ ಮುಖ್ಯ ಶಿಕ್ಷಕರಾದ ಅರವಿಂದ ಕುಡ್ಲ ಜಾನಪದ ಹಾಡು ಹಾಡುವುದರೊಂದಿಗೆ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಪೊರೇಟರ್ ಶರತ್ ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ನೇತ್ರಾವತಿ, ರಂಗ ಸ್ವರೂಪದ ಪ್ರಮುಖರಾದ ಸುಬ್ರಹ್ಮಣ್ಯ ಕಾಸರಗೋಡು, ನವೀನ್ ಸ್ವರೂಪ, ಹುಸೈನ್ ರಿಯಾಝ್ ಉಪಸ್ಥಿತರಿದ್ದರು. ಜ್ಯೋತಿ ಸುಬ್ರಹ್ಮಣ್ಯ ಸ್ವಾಗತಿಸಿ, ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿ, ಕಲಾವಿದ ಝುಬೇರ್ ಕುಡ್ಲ ವಂದಿಸಿದರು.

Read More