Author: roovari

ಕಾಸರಗೋಡು : ಪೆರಿಯ ಕೇಂದ್ರ ವಿಶ್ವವಿದ್ಯಾಲಯದ ಸಮೀಪವಿರುವ ಬೇಕಲ್ ಗೋಕುಲಂ ಗೋಶಾಲಾ ಪರಂಪರಾ ವಿದ್ಯಾಪೀಠ ಇದರ ಆಶ್ರಯದಲ್ಲಿ ದಿನಾಂಕ 01 ಮೇ 2026ರಿಂದ ‘ವೈಶಾಖ ನಟನಂ 2026’ ರಾಷ್ಟ್ರೀಯ ನೃತ್ಯೋತ್ಸವವು ಪೆರಿಯದ ಬೇಕಲ್ ಗೋಕುಲಂ ಗೋಶಾಲೆಯಲ್ಲಿ ಪ್ರಾರಂಭವಾಗಿದೆ. ಪ್ರತಿದಿನ ಬೆಳಿಗ್ಗೆ 8-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಗೋಶಾಲೆಯ ‘ಧೇನು ಮಂಟಪಂ’ ಹಾಗೂ ‘ನಂದಿ ಮಂಟಪಂ’ ಎಂಬ ಎರಡು ವೇದಿಕೆಗಳಲ್ಲಿ ನಿರಂತರವಾಗಿ ನೃತ್ಯೋತ್ಸವ ನಡೆಯಲಿದ್ದು, ಭರತನಾಟ್ಯ, ಮೋಹಿನಿಯಾಟ್ಟಂ, ಕುಚಿಪುಡಿ, ಕಥಕ್ ಮತ್ತು ಕೇರಳ ನಟನಂ ಸೇರಿದಂತೆ ಭಾರತದ ವೈವಿಧ್ಯಮಯ ಶಾಸ್ತ್ರೀಯ ನೃತ್ಯ ಪ್ರಕಾರಗಳು ಅನಾವರಣಗೊಳ್ಳಲಿವೆ. ದಿನಾಂಕ 10 ಮೇ 2026ರಂದು ಅಪರ್ಣ ಮೋಹನ್ ಇವರಿಂದ ಭರತನಾಟ್ಯ, ಶರತ್ ಆರ್. ಇವರಿಂದ ಕೂಚಿಪುಡಿ, ಅಜಿತಾ ಮತ್ತು ತಂಡದವರಿಂದ ಭರತನಾಟ್ಯ, ಶ್ರೀಮಲ್ಲಿ ಇವರಿಂದ ಭರತನಾಟ್ಯ, ಶ್ರೀನಿಧಿ ಎಲ್. ಇವರಿಂದ ಭರತನಾಟ್ಯ, ಮಾನಸ ನಾಗೇಂದ್ರ ಇವರಿಂದ ಭರತನಾಟ್ಯ, ಆರ್. ಜೈವಂತಿ ಇವರಿಂದ ಭರತನಾಟ್ಯ, ಶ್ವೇತಾ ಗಣೇಶ್ ಇವರಿಂದ ಭರತನಾಟ್ಯ,ತುಷಾರ್ ಯು. ಇವರಿಂದ ತ್ರಿನಾಟ್ಯಾಂ, ವೈಷ್ಣವಿ ನಾಟ್ಯಶಾಲ್…

Read More

ಮಂಗಳೂರು : ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಕಲ್ಲಚ್ಚು ಪ್ರಕಾಶನವು ದಿನಾಂಕ 29 ಏಪ್ರಿಲ್ 2026ರಂದು ಏರ್ಪಡಿಸಿದ್ದ ಸಾಹಿತ್ಯ ಸಂವಾದ ಮತ್ತು ಅಭಿನಂದನೆ ಸಮಾರಂಭವು ಮಂಗಳೂರಿನ ವುಡ್ ಲ್ಯಾಂಡ್ ಹೊಟೇಲಿನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರ ಎಂ.ಜಿ. ಹೆಗ್ಡೆ “ಗಾಂಧಿ ತತ್ವಗಳು ಅಮರವಾಗಿದ್ದು ಜನ ಮಾನಸದಲ್ಲಿ ಅದು ನೆಲೆಯೂರಿದೆ. ಇಂದಿನ ಕಾಲಘಟ್ಟದಲ್ಲಿ ಗಾಂಧೀಜಿಯವರ ಚಿಂತನೆ ಹೆಚ್ಚು ಪ್ರಸ್ತುತವಾಗುತ್ತಿದೆ” ಎಂದು ನುಡಿದಿದ್ದಾರೆ. ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಹಾವೇರಿಯ ಯುವ ಕಥೆಗಾರ ಲಿಂಗರಾಜ ಸೊಟ್ಟಪ್ಪನವರ್ ತನ್ನ ಸಾಹಿತ್ಯದ ಪಯಣವನ್ನು ತಿಳಿಸಿ ಶಿಕ್ಷಕನಾಗಿ ತಾನು ಪಡೆದ ಅನುಭವಗಳು ತನ್ನನ್ನು ಕಥೆಗಾರನನ್ನಾಗಿ ರೂಪಿಸಿದೆ. ಸ್ಪರ್ಧೆಗಳನ್ನು ಮೀರಿ ಕಥೆಗಾರ ಬೆಳೆಯುವ ಅಗತ್ಯವಿದೆ ಎಂದರು. ಕಲ್ಲಚ್ಚು ಪ್ರಕಾಶನದ ಮಹೇಶ್ ನಾಯಕ್ ಮಾತನಾಡಿ “ಸಾಹಿತ್ಯ ಕೃತಿಗಳ ಕುರಿತಾಗಿ ಅರ್ಥಪೂರ್ಣ ಚರ್ಚೆಗಳು ನಡೆಯುವ ಅಗತ್ಯವಿದೆ” ಎಂದರು. ಲೇಖಕ ಕೃಷ್ಣಮೂರ್ತಿ ಪಿ. ಮಾತನಾಡಿ “ಎಂ.ಜಿ. ಹೆಗ್ಡೆಯವರ ಆತ್ಮಕಥನ ಒಂದು ತಲೆಮಾರಿನ ತಲ್ಲಣಗಳನ್ನು…

Read More

ಬೆಂಗಳೂರು : ಸಾಂಸ್ಕೃತಿಕ ಸಂಘಟನೆಯಾದ ರಂಗಚಂದಿರ (ರಿ.) ಇದರ ವತಿಯಿಂದ ಹಾಗೂ ಶಾರದಾ ಪ್ರತಿಷ್ಠಾನ ಮಾಗಡಿ – ರಂಗನಾಯಕ (ರಿ.) ಬೆಂಗಳೂರು ಇವರ ಸಹಯೋದದಲ್ಲಿ ಲೇಖಕರಾದ ರವಿ ಅಂಬೋಜಿಯವರ ‘ಗುಲಾಬಿ ಸೇನೆ’ ಕಾದಂಬರಿ ಕೃತಿ ಬಿಡುಗಡೆ ಸಮಾರಂಭವನ್ನು ದಿನಾಂಕ 15 ಮೇ 2026ರಂದು ಬೆಳಗ್ಗೆ ಗಂಟೆ 11-00ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷರಾದ ಡಾ. ಹೆಚ್.ಎಲ್. ಪುಷ್ಪ ಇವರು ವಹಿಸಲಿದ್ದು, ಅಂತರಾಷ್ಟ್ರೀಯ ಜಾನಪದ ಗಾಯಕರಾದ ಶ್ರೀಮತಿ ಸವಿತಕ್ಕ ಇವರು ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಲ್.ಎನ್. ಮುಕುಂದರಾಜ್ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ನಾಟಕಕಾರ, ರಂಗ ನಿರ್ದೇಶಕರಾದ ಡಾ. ಬೇಲೂರು ರಘುನಂದನ್ ಇವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸವಿಗಾನ ಮಂಜು ಇವರಿಂದ ಹೋರಾಟದ ಗೀತೆಗಳ ಗಾಯನ ಮತ್ತು ಸ್ವರಾಮೃತ ಸಂಗೀತ ಶಾಲೆ ಮಕ್ಕಳಿಂದ ಜಾನಪದ ಗೀತೆಗಳ ಗಾಯನ ನಡೆಯಲಿದೆ.…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಸಮೂಹ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ 09ರ ಕಾರ್ಯಕ್ರಮವನ್ನು ದಿನಾಂಕ 11 ಮೇ 2026ರಂದು ಸಂಜೆ ಗಂಟೆ 6-25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ಆಯೋಜಿಸಲಾಗಿದೆ. ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದೊಂದಿಗೆ ನಡೆಯುವ ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಂದಾಪುರದ ನೃತ್ಯ ವಸಂತ ನಾಟ್ಯಾಲಯ (ರಿ.) ಇದರ ಕಿರಿಯ ವಿದ್ಯಾರ್ಥಿಗಳಿಂದ ಸಂಸ್ಥೆಯ ನಿರ್ದೇಶಕರಾದ ವಿದುಷಿ ಶ್ರೀಮತಿ ಪ್ರವಿತ ಅಶೋಕ್ ಇವರ ನಿರ್ದೇಶನದಲ್ಲಿ ನೃತ್ಯಪ್ರದರ್ಶನ ನಡೆಯಲಿದೆ.

Read More

ಪೆರಿಯ : ಬೇಕಲ್ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ವೈಶಾಖ ನೃತ್ಯ ರಾಷ್ಟ್ರೀಯ ನೃತ್ಯೋತ್ಸವದ ಒಂಬತ್ತನೇ ದಿನದ ಅಂಗವಾಗಿ, ದಿನಾಂಕ 09 ಮೇ 2026ರಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆಯೂ, ಅಕಾಡೆಮಿ ಸದಸ್ಯೆಯೂ ಆಗಿರುವ ವೈಜಯಂತಿ ಕಾಶಿ ಇವರು, ತಮ್ಮ ಪುತ್ರಿ ಪ್ರತೀಕ್ಷಾ ಕಾಶಿ ಇವರೊಂದಿಗೆ, ಧೇನುಮಂಟಪದಲ್ಲಿ ನೃತ್ಯಾರ್ಚನೆ ನಡೆಸಲಿದ್ದಾರೆ. ಕರ್ನಾಟಕ ಚಲನಚಿತ್ರ ಹಾಗೂ ರಂಗಭೂಮಿ ಕ್ಷೇತ್ರದ ಖ್ಯಾತ ಕಲಾವಿದ ಗುಬ್ಬಿ ವೀರಣ್ಣ ಇವರ ಮೊಮ್ಮಗಳಾದ ವೈಜಯಂತಿ ಕಾಶಿ, ಭಾರತೀಯ ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿ ಅಪ್ರತಿಮ ಸ್ಥಾನವನ್ನು ಹೊಂದಿರುವ ಪ್ರಮುಖ ನೃತ್ಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ, ಪ್ರಸಿದ್ಧ ನೃತ್ಯ ಕಲಾವಿದೆ ದಿವ್ಯ ಪ್ರಭಾತ್, ಆರು ವರ್ಷದ ಆದ್ಯ, ಮೈಸೂರಿನ ಡಾ. ಕೆ. ಕುಮಾರ್, ಶಾರ್ವರಿ ಮಯ್ಯ ಸೇರಿದಂತೆ, ಸುಮಾರು ಎರಡು ನೂರು ಕಲಾವಿದರು, ಗೋಶಾಲೆಯ ಧೇನುಮಂಟಪ ಮತ್ತು ನಂದಿಮಂಟಪಗಳಲ್ಲಿ ವಿವಿಧ ನೃತ್ಯ ಪ್ರದರ್ಶನಗಳನ್ನು ನೀಡಲಿದ್ದಾರೆ.

Read More

ಮಂಗಳೂರು : ಮಾಂಡ್‌ ಸೊಭಾಣ್‌ ಆಯೋಜಿಸಿದ 25ನೇ ವರ್ಷದ ಮಕ್ಕಳ ವಸತಿಯುತ ರಜಾ ಶಿಬಿರ ʻರುಪ್ಯಾ ರುಪಾಂʼ ಇದರ ಸಮಾರೋಪ ಸಮಾರಂಭವು ದಿನಾಂಕ 03 ಮೇ 2026ರಂದು ಕಲಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿ ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜಿನ ಆಡಳಿತದಾರ ವಂ. ಡಾ. ಮೈಕಲ್‌ ಸಾಂತ್‌ ಮಾಯೋರ್ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಸಂದೇಶ ನೀಡಿದರು. “ಕಲೆಯು ವ್ಯಕ್ತಿಯನ್ನು ವಿಶಿಷ್ಟವಾಗಿಸುತ್ತದೆ. ಮಾಂಡ್‌ ಸೊಭಾಣ್‌ ರಜತ ಶಿಬಿರದಲ್ಲಿ ಕಲಿಯುವ ಅವಕಾಶ ಪಡೆದಿದ್ದಿರಿ. ಇಂತಹ ಭಾಷಿಕ, ಸಾಂಸ್ಕೃತಿಕ ಶಿಬಿರಕ್ಕೆ ತಮ್ಮ ಮಕ್ಕಳನ್ನು ಕಳುಹಿಸಿದ ಪೋಷಕರು ಅಭಿನಂದನಾರ್ಹರು. ಇಲ್ಲಿ ಮಕ್ಕಳು ಮೊಬೈಲ್‌ ಇಲ್ಲದೇ, ಇತರರೊಡನೆ ಹೊಂದಿಕೊಂಡು ಜೀವಿಸಲು ಕಲಿತಿದ್ದಾರೆ. ಕಲೆ ಸಾಹಿತ್ಯದತ್ತ ಒಲವು ತೋರಿಸಿದ್ದಾರೆ. ಅದನ್ನು ಬೆಳೆಸಿಕೊಳ್ಳಿ. ನೀವು ಕಲಿತದನ್ನು ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ” ಎಂದು ಕರೆ ಕೊಟ್ಟರು. ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಕ್ಕಳನ್ನು ಗೌರವಿಸಲಾಯಿತು. ನೃತ್ಯ ಶ್ರೇಷ್ಟ – ಕ್ರಿಶಾ ವಿಯಾನ್ನಾ ಡಾಯಸ್ ಬೊರಿಮಾರ್, ನಾಟಕ ಶ್ರೇಷ್ಟ – ಆಲೋಮಾ ಲೋಬೊ ಕಟೀಲ್,…

Read More

ಬೆಂಗಳೂರು : ಗುರು ವೀರಭದ್ರ ನಾಯಕರ ಪರಂಪರೆಯ ಗುರು ಬನ್ನಂಜೆ ಸಂಜೀವ ಸುವರ್ಣರ ಶಿಷ್ಯ ಐರೋಡಿ ಮಂಜುನಾಥ ಕುಲಾಲ್ ಯಡ್ತಾಡಿ ಇವರ ದಿಟ್ಟ ಮಾರ್ಗದರ್ಶನದಲ್ಲಿ ಸಪ್ತ ದಿನಗಳ ‘ತಿತ್ತಿತೈ ಯಕ್ಷಗಾನ ಶಿಬಿರ’ವನ್ನು ದಿನಾಂಕ 13 ಮೇ 2026ರಿಂದ ಬೆಂಗಳೂರಿನ ಕನಕಪುರ ರೋಡ್ ಮೆಟ್ರೋ ಸ್ಟೇಷನ್ ಹತ್ತಿರ ವಾಜರಹಳ್ಳಿ ತಿತ್ತಿತೈ ಇಲ್ಲಿ ಆಯೋಜಿಲಾಗಿದೆ. ಯಕ್ಷಗಾನದಲ್ಲಿ ಬರುವಂತಹ ಸಪ್ತ ತಾಳಗಳು, ರಂಗ ನಡೆಗಳು, ಪುರಾಣ ಸಾಹಿತ್ಯದ ಜ್ಞಾನ, ಪೌರಾಣಿಕ ಪ್ರಸಂಗದ ಪಾತ್ರ ಚಿತ್ರಣ, ಯಕ್ಷಗಾನದ ವೇಷಭೂಷಣ ಮತ್ತು ಬಣ್ಣಗಾರಿಗೆ ಕುರಿತಾಗಿ ಮಾಹಿತಿ ಮತ್ತು ತರಬೇತಿ ಶಿಬಿರ ಇದಾಗಿದೆ. ಹೆಚ್ಚಿನ ಮಾಹಿತಿಗಾಗಿ 6362673283 ಸಂಖ್ಯೆಯನ್ನು ಸಂಪರ್ಕಿಸಿರಿ. ಈ ಯಕ್ಷಗಾನ ಶಿಬಿರದ ಪ್ರಯೋಜನವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಆಶಯ ನಮ್ಮದು.

Read More

ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಶ್ರೀ ಶನೀಶ್ವರ ಪೂಜಾ ಪ್ರಸಂಗವೆಂದೇ ಪ್ರಸಿದ್ದಿ ಪಡೆದ ಚಿನ್ನಯ ದಾಸರ ‘ಶ್ರೀ ಶನೀಶ್ವರ ಮಹಾತ್ಮೆ’ಯು ಇದೀಗ ಮಂಗಳೂರು ಆಕಾಶವಾಣಿಯಿಂದ ಯಕ್ಷಗಾನ ತಾಳಮದ್ದಳೆಯಾಗಿ ಪ್ರಸಾರಗೊಳ್ಳಲಿದೆ. ಕರ್ನಾಟಕ ಯಕ್ಷ ಭಾರತಿ ಪುತ್ತೂರು ತಂಡದ ಕಲಾವಿದರು ಇದನ್ನು ಎರಡು ಕಂತುಗಳಾಗಿ ಪ್ರಸ್ತುತಪಡಿಸುವರು. ಭರತವರ್ಷದ ಚಕ್ರವರ್ತಿ ರಾಜಾ ವಿಕ್ರಮಾದಿತ್ಯನ ಜನ್ಮ ರಾಶಿಗೆ ಶನಿ ಪ್ರವೇಶವಾಗುವ ಸಂದರ್ಭದ ತಾಳಮದ್ದಳೆಯ ಮೊದಲನೇ ಭಾಗ ‘ಶನಿ ಪ್ರಭಾವ’ ದಿನಾಂಕ 08 ಮೇ 2026ರಂದು ಶುಕ್ರವಾರ ರಾತ್ರಿ ಗಂಟೆ 9-30ಕ್ಕೆ ಪ್ರಸಾರವಾಗಲಿದೆ. ಅರ್ಥಧಾರಿಗಳಾಗಿ ಭಾಸ್ಕರ ರೈ ಕುಕ್ಕುವಳ್ಳಿ (ವಿಕ್ರಮಾದಿತ್ಯ), ಗಣರಾಜ ಕುಂಬ್ಳೆ (ಶನೈಶ್ಚರ), ಎಂ.ಕೆ. ರಮೇಶ ಆಚಾರ್ಯ (ಆಲೋಲಿಕೆ), ರಮೇಶ ಸಾಲ್ವಣ್ಕರ್ (ನಂದಿ ಶ್ರೇಷ್ಟಿ), ಉಮೇಶಾಚಾರ್ಯ ಗೇರುಕಟ್ಟೆ (ಸುಶೀಲೆ) ಮತ್ತು ಹರಿಶ್ಚಂದ್ರ ನಾಯಗ ಮಾಡೂರು (ಚಂದ್ರಶಯನ) ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾಗವತರಾಗಿ ಪ್ರಶಾಂತ ರೈ ಪುತ್ತೂರು; ಹಿಮ್ಮೇಳದಲ್ಲಿ ಪಿ.ಟಿ. ಜಯರಾಮ ಭಟ್, ಕೋಳ್ಯಾರು ಭಾಸ್ಕರ ಭಾಗವಹಿಸಿದ್ದಾರೆ. ಪ್ರಸಂಗದ ಎರಡನೇ ಭಾಗ ‘ವಿಕ್ರಮಾದಿತ್ಯ ವಿಜಯ’ದಲ್ಲಿ ಏಳೂವರೆ ವರ್ಷಗಳ ಶನಿಪೀಡೆಯಿಂದ…

Read More

ಮೈಸೂರು : ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಘಟಕ ಮತ್ತು ಶ್ರೀ ಅನಂತೇಶ್ವರ ಟ್ರಸ್ಟ್ (ರಿ.) ಮೈಸೂರು ಇವರ ಆಯೋಜನೆಯಲ್ಲಿ ಎರಡು ದಿನದ ‘ಸುಗಮ ಸಂಗೀತ ಕಾರ್ಯಾಗಾರ’ವನ್ನು ದಿನಾಂಕ 16 ಮತ್ತು 17 ಮೇ 2026ರಂದು ಬೆಳಿಗ್ಗೆ 9-30ರಿಂದ ಸಂಜೆ 6-00 ಗಂಟೆ ತನಕ ಮೈಸೂರಿನ ಕೆ.ಕೆ.ಹೆಚ್.ಬಿ. ಕಾಲೋನಿಯಲ್ಲಿರುವ ಶ್ರೀ ಅನಂತೇಶ್ವರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ನಾಡಿನ ಖ್ಯಾತ ಸಂಗೀತ ನಿರ್ದೇಶಕರಾದ ಎನ್.ಎಸ್. ಪ್ರಸಾದ್ (ಮ್ಯಾಂಡೋಲಿನ್ ಪ್ರಸಾದ್) ಇವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಸಂಗೀತದ ಒಳಗೆ, ಸುಗಮ ಸಂಗೀತದ ಬಗ್ಗೆ ಮತ್ತು ಧ್ವನಿ ಸಂಸ್ಕರಣೆ ಇವುಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಾಂಕೇತಿಕ ನೋಂದಣಿ ಫೀ ರೂ.100/- ಆಗಿದ್ದು, ಸಂಚಾಲಕರಾದ ಸುಜಾತ ಜಯಕುಮಾರ್ 94836 38973 ಮತ್ತು ಗೀತಾಲಕ್ಷ್ಮಿ ಕಿಣಿ 98861 27640 ಇವರನ್ನು ಹೆಚ್ಚಿನ ಮಾಹಿತಿಗೆ ಸಂಪರ್ಕಿಸ ಬಹುದು.

Read More

ಮೂಡುಬಿದಿರೆ : ಕನ್ನಡದ ಅಭಿವೃದ್ದಿಗೆ ಮಹತ್ತರ ಕೊಡುಗೆ ನೀಡಿರುವ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಮೂಡಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಆಶ್ರಯದಲ್ಲಿ ದಿನಾಂಕ 05 ಮೇ 2026ರಂದು ಆಳ್ವಾಸ್ ಪದವಿ ಸ್ವಾಯತ್ತ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಪ್ರಾಧ್ಯಾಪಕ ರಾಮಪ್ರಸಾದ ಕಾಂಚೋಡು ಮಾತನಾಡಿ “ಕನ್ನಡದ ಕಟ್ಟಾಳುಗಳ ಬೆವರಿನ ಫಲವೇ ಕನ್ನಡ ಸಾಹಿತ್ಯ ಪರಿಷತ್ತು. ಅದರ ಹುಟ್ಟುಹಬ್ಬವನ್ನು ಆಚರಿಸುವುದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ವಿಷಯ. ಇಂದಿನ ಕನ್ನಡದ ವೈಭವದ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡ ಅನೇಕ ಕಾರ್ಯಗಳಿವೆ. ಕನ್ನಡ ಭಾಷೆಯ ಅಭಿವೃದ್ಧಿಗೆ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತೀರುವ ಸಾಹಿತ್ಯ ಪರಿಷತ್ತು, ಗ್ರಂಥ ಪ್ರಕಾಶನ, ಸಂಶೋಧನೆ, ಸಾಹಿತ್ಯ ಸಮ್ಮೇಳನಗಳು ಹಾಗೂ ಸಂಸ್ಕೃತಿ ಸಂರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿದೆ. ಮಹಾಕಾವ್ಯಗಳು, ಶಾಸನಗಳು ಮತ್ತು ಮೌಖಿಕ ಸಾಹಿತ್ಯವನ್ನು ಸಂಗ್ರಹಿಸಿ ಗ್ರಂಥರೂಪದಲ್ಲಿ ಉಳಿಸುವ ಮೂಲಕ ಕನ್ನಡದ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಪರಿಚಯಿಸುವ ಕಾರ್ಯವನ್ನು ಇದು ನಿರಂತರವಾಗಿ ಮಾಡುತ್ತಿದೆ.…

Read More