Subscribe to Updates
Get the latest creative news from FooBar about art, design and business.
Author: roovari
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆ ದಿನಾಂಕ 09 ಮೇ 2026ರಂದು ‘ಸುಧನ್ವ ಮೋಕ್ಷ’ ಎಂಬ ಆಖ್ಯಾನದೊಂದಿಗೆ ಬೊಳುವಾರು ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಸತೀಶ್ ಇರ್ದೆ, ಆನಂದ ಸವಣೂರು, ಚೆಂಡೆ ಮದ್ದಳೆಗಳಲ್ಲಿ ಅಚ್ಯುತ ಪಾಂಗಣ್ಣಾಯ, ತಾರಾನಾಥ ಸವಣೂರು, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಗುಡ್ಡಪ್ಪ ಬಲ್ಯ (ಸುಧನ್ವ), ದುಗ್ಗಪ್ಪ ನಡುಗಲ್ಲು (ಶ್ರೀ ಕೃಷ್ಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಅರ್ಜುನ) ಸಹಕರಿಸಿದರು. ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಗೌರವ ಕಾರ್ಯದರ್ಶಿ ರಂಗನಾಥ ರಾವ್ ಸಹಕರಿಸಿದರು.
“ದೇಶ ಸುತ್ತಿ ನೋಡು, ಕೋಶ ಓದಿ ನೋಡು” ಎಂದು ಹಿರಿಯರು ಹೇಳಿದಂತೆ ನಾಲ್ಕು ಕಡೆ ಓಡಾಡಿ ಅಲ್ಲಿನ ಅನುಭವ ಪಡೆದುಕೊಂಡರೆ ಆ ಅನುಭೂತಿಯೇ ಬೇರೆ. ಪ್ರವಾಸದಲ್ಲಿ ಹಲವು ವಿಧ, ಅಚಾನಕ್ಕಾಗಿ ಪ್ರವಾಸಕ್ಕೆ ಹೊರಡುವವರು ಕೆಲವರು, ಮುಂಚೆಯೇ ಪ್ಲಾನ್ ಮಾಡಿಕೊಂಡು, ಟಿಕೆಟ್ ಕಾದಿರಿಸಿ, ಹೊಟೆಲ್ ಕಾದಿರಿಸಿಕೊಂಡು ತಮ್ಮಷ್ಟಕ್ಕೆ ಹೊರಟು ಹೋಗುವವರು ಕೆಲವರು, ಸುತ್ತಾಟಕ್ಕೆ ಕರೆದುಕೊಂಡು ಹೋಗಲು ಇರುವ ಟ್ರಾವೆಲ್ ಏಜೆನ್ಸಿಯ ಸಹಾಯ ಪಡೆದು ಹೋಗುವವರು ಇನ್ನು ಕೆಲವರು. ಲೇಖಕಿ ಪಾರ್ವತಿ ಜಿ. ಐತಾಳ್ ಇವರು ಪತಿಯೊಂದಿಗೆ ಮಧುಚಂದ್ರದ ನೆಪದಲ್ಲಿ ತಿರುಗಾಟಕ್ಕೆ ಹೋದ ಸ್ಥಳಗಳು, ವಿದೇಶಕ್ಕೆ ಏಜೆನ್ಸಿಯವರೊಂದಿಗೆ ಹೋದ ಪ್ರವಾಸಗಳು- ಹೀಗೆ ತಮ್ಮ ವಿವಿಧ ಪ್ರವಾಸಗಳ ಕುರಿತು ನಮ್ಮೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ‘ಸಂಚಾರಿ ಭಾವ’ ಈಗ ಸದ್ಯ ಬಿಡುಗಡೆಯಾಗಿದ್ದು, ಅದನ್ನು ಓದುವ ಭಾಗ್ಯ ನನ್ನದಾಯಿತು. 1988ರಲ್ಲಿ ಅವರು ಮದುವೆಯಾದ ನಂತರ ಯಜಮಾನರು ಅವರಿಗೆ ಸರ್ಪ್ರೈಸ್ ನೀಡಲೆಂದು ಪ್ಲಾನ್ ಮಾಡಿದ ಕನ್ಯಾಕುಮಾರಿ-ರಾಮೇಶ್ವರ-ಮಧುರೈ ಪ್ರವಾಸದ ಕಥನವನ್ನು ನಮ್ಮ ಮುಂದೆ ತೆರೆದಿಡುತ್ತಾರೆ. ಕನ್ಯಾಕುಮಾರಿಯ ಹಿನ್ನೆಲೆ, ಅಲ್ಲಿನ ದೇವಸ್ಥಾನದ…
ಕಾಸರಗೋಡು : ಪೆರಿಯ ಕೇಂದ್ರ ವಿಶ್ವವಿದ್ಯಾಲಯದ ಸಮೀಪವಿರುವ ಬೇಕಲ್ ಗೋಕುಲಂ ಗೋಶಾಲಾ ಪರಂಪರಾ ವಿದ್ಯಾಪೀಠ ಇದರ ಆಶ್ರಯದಲ್ಲಿ ದಿನಾಂಕ 01 ಮೇ 2026ರಿಂದ ‘ವೈಶಾಖ ನಟನಂ 2026’ ರಾಷ್ಟ್ರೀಯ ನೃತ್ಯೋತ್ಸವವು ಪೆರಿಯದ ಬೇಕಲ್ ಗೋಕುಲಂ ಗೋಶಾಲೆಯಲ್ಲಿ ಪ್ರಾರಂಭವಾಗಿದೆ. ಪ್ರತಿದಿನ ಬೆಳಿಗ್ಗೆ 8-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಗೋಶಾಲೆಯ ‘ಧೇನು ಮಂಟಪಂ’ ಹಾಗೂ ‘ನಂದಿ ಮಂಟಪಂ’ ಎಂಬ ಎರಡು ವೇದಿಕೆಗಳಲ್ಲಿ ನಿರಂತರವಾಗಿ ನೃತ್ಯೋತ್ಸವ ನಡೆಯಲಿದ್ದು, ಭರತನಾಟ್ಯ, ಮೋಹಿನಿಯಾಟ್ಟಂ, ಕುಚಿಪುಡಿ, ಕಥಕ್ ಮತ್ತು ಕೇರಳ ನಟನಂ ಸೇರಿದಂತೆ ಭಾರತದ ವೈವಿಧ್ಯಮಯ ಶಾಸ್ತ್ರೀಯ ನೃತ್ಯ ಪ್ರಕಾರಗಳು ಅನಾವರಣಗೊಳ್ಳಲಿವೆ. ದಿನಾಂಕ 10 ಮೇ 2026ರಂದು ಅಪರ್ಣ ಮೋಹನ್ ಇವರಿಂದ ಭರತನಾಟ್ಯ, ಶರತ್ ಆರ್. ಇವರಿಂದ ಕೂಚಿಪುಡಿ, ಅಜಿತಾ ಮತ್ತು ತಂಡದವರಿಂದ ಭರತನಾಟ್ಯ, ಶ್ರೀಮಲ್ಲಿ ಇವರಿಂದ ಭರತನಾಟ್ಯ, ಶ್ರೀನಿಧಿ ಎಲ್. ಇವರಿಂದ ಭರತನಾಟ್ಯ, ಮಾನಸ ನಾಗೇಂದ್ರ ಇವರಿಂದ ಭರತನಾಟ್ಯ, ಆರ್. ಜೈವಂತಿ ಇವರಿಂದ ಭರತನಾಟ್ಯ, ಶ್ವೇತಾ ಗಣೇಶ್ ಇವರಿಂದ ಭರತನಾಟ್ಯ,ತುಷಾರ್ ಯು. ಇವರಿಂದ ತ್ರಿನಾಟ್ಯಾಂ, ವೈಷ್ಣವಿ ನಾಟ್ಯಶಾಲ್…
ಮಂಗಳೂರು : ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಕಲ್ಲಚ್ಚು ಪ್ರಕಾಶನವು ದಿನಾಂಕ 29 ಏಪ್ರಿಲ್ 2026ರಂದು ಏರ್ಪಡಿಸಿದ್ದ ಸಾಹಿತ್ಯ ಸಂವಾದ ಮತ್ತು ಅಭಿನಂದನೆ ಸಮಾರಂಭವು ಮಂಗಳೂರಿನ ವುಡ್ ಲ್ಯಾಂಡ್ ಹೊಟೇಲಿನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರ ಎಂ.ಜಿ. ಹೆಗ್ಡೆ “ಗಾಂಧಿ ತತ್ವಗಳು ಅಮರವಾಗಿದ್ದು ಜನ ಮಾನಸದಲ್ಲಿ ಅದು ನೆಲೆಯೂರಿದೆ. ಇಂದಿನ ಕಾಲಘಟ್ಟದಲ್ಲಿ ಗಾಂಧೀಜಿಯವರ ಚಿಂತನೆ ಹೆಚ್ಚು ಪ್ರಸ್ತುತವಾಗುತ್ತಿದೆ” ಎಂದು ನುಡಿದಿದ್ದಾರೆ. ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಹಾವೇರಿಯ ಯುವ ಕಥೆಗಾರ ಲಿಂಗರಾಜ ಸೊಟ್ಟಪ್ಪನವರ್ ತನ್ನ ಸಾಹಿತ್ಯದ ಪಯಣವನ್ನು ತಿಳಿಸಿ ಶಿಕ್ಷಕನಾಗಿ ತಾನು ಪಡೆದ ಅನುಭವಗಳು ತನ್ನನ್ನು ಕಥೆಗಾರನನ್ನಾಗಿ ರೂಪಿಸಿದೆ. ಸ್ಪರ್ಧೆಗಳನ್ನು ಮೀರಿ ಕಥೆಗಾರ ಬೆಳೆಯುವ ಅಗತ್ಯವಿದೆ ಎಂದರು. ಕಲ್ಲಚ್ಚು ಪ್ರಕಾಶನದ ಮಹೇಶ್ ನಾಯಕ್ ಮಾತನಾಡಿ “ಸಾಹಿತ್ಯ ಕೃತಿಗಳ ಕುರಿತಾಗಿ ಅರ್ಥಪೂರ್ಣ ಚರ್ಚೆಗಳು ನಡೆಯುವ ಅಗತ್ಯವಿದೆ” ಎಂದರು. ಲೇಖಕ ಕೃಷ್ಣಮೂರ್ತಿ ಪಿ. ಮಾತನಾಡಿ “ಎಂ.ಜಿ. ಹೆಗ್ಡೆಯವರ ಆತ್ಮಕಥನ ಒಂದು ತಲೆಮಾರಿನ ತಲ್ಲಣಗಳನ್ನು…
ಮಂಗಳೂರು : ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಏಕದಿನ ಸಾಹಿತ್ಯ ಅಭಿಯಾನದ ಅಂಗವಾಗಿ ಕನ್ನಡದ ನಡಿಗೆ ಶಾಲೆಯ ಕಡೆಗೆ ಅಡಿಯಲ್ಲಿ ದಿನಾಂಕ 11 ಮೇ 2026ರಂದು ಬೆಳಗ್ಗೆ 11-00 ಗಂಟೆಗೆ ಮಂಗಳೂರಿನ ಜೆಪ್ಪು ಮೋರ್ಗನ್ ಗೇಟ್ ರಾಮ ಕ್ಷತ್ರಿಯ ಮಂದಿರದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಜೆಪ್ಪು ರಾಮ ಕ್ಷತ್ರಿಯ ಸಂಘದ ಅಧ್ಯಕ್ಷರಾದ ಮುರಳೀಧರ್ ಸಿ.ಎಚ್. ಇವರು ಉದ್ಘಾಟನೆ ಮಾಡಲಿದ್ದು, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಡಾ. ರವೀಂದ್ರ ಜೆಪ್ಪು ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಕವನ ವಾಚನ ಮತ್ತು ರಸ ಪ್ರಶ್ನೆ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರು : ಸಾಂಸ್ಕೃತಿಕ ಸಂಘಟನೆಯಾದ ರಂಗಚಂದಿರ (ರಿ.) ಇದರ ವತಿಯಿಂದ ಹಾಗೂ ಶಾರದಾ ಪ್ರತಿಷ್ಠಾನ ಮಾಗಡಿ – ರಂಗನಾಯಕ (ರಿ.) ಬೆಂಗಳೂರು ಇವರ ಸಹಯೋದದಲ್ಲಿ ಲೇಖಕರಾದ ರವಿ ಅಂಬೋಜಿಯವರ ‘ಗುಲಾಬಿ ಸೇನೆ’ ಕಾದಂಬರಿ ಕೃತಿ ಬಿಡುಗಡೆ ಸಮಾರಂಭವನ್ನು ದಿನಾಂಕ 15 ಮೇ 2026ರಂದು ಬೆಳಗ್ಗೆ ಗಂಟೆ 11-00ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷರಾದ ಡಾ. ಹೆಚ್.ಎಲ್. ಪುಷ್ಪ ಇವರು ವಹಿಸಲಿದ್ದು, ಅಂತರಾಷ್ಟ್ರೀಯ ಜಾನಪದ ಗಾಯಕರಾದ ಶ್ರೀಮತಿ ಸವಿತಕ್ಕ ಇವರು ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಲ್.ಎನ್. ಮುಕುಂದರಾಜ್ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ನಾಟಕಕಾರ, ರಂಗ ನಿರ್ದೇಶಕರಾದ ಡಾ. ಬೇಲೂರು ರಘುನಂದನ್ ಇವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸವಿಗಾನ ಮಂಜು ಇವರಿಂದ ಹೋರಾಟದ ಗೀತೆಗಳ ಗಾಯನ ಮತ್ತು ಸ್ವರಾಮೃತ ಸಂಗೀತ ಶಾಲೆ ಮಕ್ಕಳಿಂದ ಜಾನಪದ ಗೀತೆಗಳ ಗಾಯನ ನಡೆಯಲಿದೆ.…
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಸಮೂಹ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ 09ರ ಕಾರ್ಯಕ್ರಮವನ್ನು ದಿನಾಂಕ 11 ಮೇ 2026ರಂದು ಸಂಜೆ ಗಂಟೆ 6-25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ಆಯೋಜಿಸಲಾಗಿದೆ. ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದೊಂದಿಗೆ ನಡೆಯುವ ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಂದಾಪುರದ ನೃತ್ಯ ವಸಂತ ನಾಟ್ಯಾಲಯ (ರಿ.) ಇದರ ಕಿರಿಯ ವಿದ್ಯಾರ್ಥಿಗಳಿಂದ ಸಂಸ್ಥೆಯ ನಿರ್ದೇಶಕರಾದ ವಿದುಷಿ ಶ್ರೀಮತಿ ಪ್ರವಿತ ಅಶೋಕ್ ಇವರ ನಿರ್ದೇಶನದಲ್ಲಿ ನೃತ್ಯಪ್ರದರ್ಶನ ನಡೆಯಲಿದೆ.
ಪೆರಿಯ : ಬೇಕಲ್ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ವೈಶಾಖ ನೃತ್ಯ ರಾಷ್ಟ್ರೀಯ ನೃತ್ಯೋತ್ಸವದ ಒಂಬತ್ತನೇ ದಿನದ ಅಂಗವಾಗಿ, ದಿನಾಂಕ 09 ಮೇ 2026ರಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆಯೂ, ಅಕಾಡೆಮಿ ಸದಸ್ಯೆಯೂ ಆಗಿರುವ ವೈಜಯಂತಿ ಕಾಶಿ ಇವರು, ತಮ್ಮ ಪುತ್ರಿ ಪ್ರತೀಕ್ಷಾ ಕಾಶಿ ಇವರೊಂದಿಗೆ, ಧೇನುಮಂಟಪದಲ್ಲಿ ನೃತ್ಯಾರ್ಚನೆ ನಡೆಸಲಿದ್ದಾರೆ. ಕರ್ನಾಟಕ ಚಲನಚಿತ್ರ ಹಾಗೂ ರಂಗಭೂಮಿ ಕ್ಷೇತ್ರದ ಖ್ಯಾತ ಕಲಾವಿದ ಗುಬ್ಬಿ ವೀರಣ್ಣ ಇವರ ಮೊಮ್ಮಗಳಾದ ವೈಜಯಂತಿ ಕಾಶಿ, ಭಾರತೀಯ ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿ ಅಪ್ರತಿಮ ಸ್ಥಾನವನ್ನು ಹೊಂದಿರುವ ಪ್ರಮುಖ ನೃತ್ಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ, ಪ್ರಸಿದ್ಧ ನೃತ್ಯ ಕಲಾವಿದೆ ದಿವ್ಯ ಪ್ರಭಾತ್, ಆರು ವರ್ಷದ ಆದ್ಯ, ಮೈಸೂರಿನ ಡಾ. ಕೆ. ಕುಮಾರ್, ಶಾರ್ವರಿ ಮಯ್ಯ ಸೇರಿದಂತೆ, ಸುಮಾರು ಎರಡು ನೂರು ಕಲಾವಿದರು, ಗೋಶಾಲೆಯ ಧೇನುಮಂಟಪ ಮತ್ತು ನಂದಿಮಂಟಪಗಳಲ್ಲಿ ವಿವಿಧ ನೃತ್ಯ ಪ್ರದರ್ಶನಗಳನ್ನು ನೀಡಲಿದ್ದಾರೆ.
ಮಂಗಳೂರು : ಮಾಂಡ್ ಸೊಭಾಣ್ ಆಯೋಜಿಸಿದ 25ನೇ ವರ್ಷದ ಮಕ್ಕಳ ವಸತಿಯುತ ರಜಾ ಶಿಬಿರ ʻರುಪ್ಯಾ ರುಪಾಂʼ ಇದರ ಸಮಾರೋಪ ಸಮಾರಂಭವು ದಿನಾಂಕ 03 ಮೇ 2026ರಂದು ಕಲಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತದಾರ ವಂ. ಡಾ. ಮೈಕಲ್ ಸಾಂತ್ ಮಾಯೋರ್ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಸಂದೇಶ ನೀಡಿದರು. “ಕಲೆಯು ವ್ಯಕ್ತಿಯನ್ನು ವಿಶಿಷ್ಟವಾಗಿಸುತ್ತದೆ. ಮಾಂಡ್ ಸೊಭಾಣ್ ರಜತ ಶಿಬಿರದಲ್ಲಿ ಕಲಿಯುವ ಅವಕಾಶ ಪಡೆದಿದ್ದಿರಿ. ಇಂತಹ ಭಾಷಿಕ, ಸಾಂಸ್ಕೃತಿಕ ಶಿಬಿರಕ್ಕೆ ತಮ್ಮ ಮಕ್ಕಳನ್ನು ಕಳುಹಿಸಿದ ಪೋಷಕರು ಅಭಿನಂದನಾರ್ಹರು. ಇಲ್ಲಿ ಮಕ್ಕಳು ಮೊಬೈಲ್ ಇಲ್ಲದೇ, ಇತರರೊಡನೆ ಹೊಂದಿಕೊಂಡು ಜೀವಿಸಲು ಕಲಿತಿದ್ದಾರೆ. ಕಲೆ ಸಾಹಿತ್ಯದತ್ತ ಒಲವು ತೋರಿಸಿದ್ದಾರೆ. ಅದನ್ನು ಬೆಳೆಸಿಕೊಳ್ಳಿ. ನೀವು ಕಲಿತದನ್ನು ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ” ಎಂದು ಕರೆ ಕೊಟ್ಟರು. ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಕ್ಕಳನ್ನು ಗೌರವಿಸಲಾಯಿತು. ನೃತ್ಯ ಶ್ರೇಷ್ಟ – ಕ್ರಿಶಾ ವಿಯಾನ್ನಾ ಡಾಯಸ್ ಬೊರಿಮಾರ್, ನಾಟಕ ಶ್ರೇಷ್ಟ – ಆಲೋಮಾ ಲೋಬೊ ಕಟೀಲ್,…
ಬೆಂಗಳೂರು : ಗುರು ವೀರಭದ್ರ ನಾಯಕರ ಪರಂಪರೆಯ ಗುರು ಬನ್ನಂಜೆ ಸಂಜೀವ ಸುವರ್ಣರ ಶಿಷ್ಯ ಐರೋಡಿ ಮಂಜುನಾಥ ಕುಲಾಲ್ ಯಡ್ತಾಡಿ ಇವರ ದಿಟ್ಟ ಮಾರ್ಗದರ್ಶನದಲ್ಲಿ ಸಪ್ತ ದಿನಗಳ ‘ತಿತ್ತಿತೈ ಯಕ್ಷಗಾನ ಶಿಬಿರ’ವನ್ನು ದಿನಾಂಕ 13 ಮೇ 2026ರಿಂದ ಬೆಂಗಳೂರಿನ ಕನಕಪುರ ರೋಡ್ ಮೆಟ್ರೋ ಸ್ಟೇಷನ್ ಹತ್ತಿರ ವಾಜರಹಳ್ಳಿ ತಿತ್ತಿತೈ ಇಲ್ಲಿ ಆಯೋಜಿಲಾಗಿದೆ. ಯಕ್ಷಗಾನದಲ್ಲಿ ಬರುವಂತಹ ಸಪ್ತ ತಾಳಗಳು, ರಂಗ ನಡೆಗಳು, ಪುರಾಣ ಸಾಹಿತ್ಯದ ಜ್ಞಾನ, ಪೌರಾಣಿಕ ಪ್ರಸಂಗದ ಪಾತ್ರ ಚಿತ್ರಣ, ಯಕ್ಷಗಾನದ ವೇಷಭೂಷಣ ಮತ್ತು ಬಣ್ಣಗಾರಿಗೆ ಕುರಿತಾಗಿ ಮಾಹಿತಿ ಮತ್ತು ತರಬೇತಿ ಶಿಬಿರ ಇದಾಗಿದೆ. ಹೆಚ್ಚಿನ ಮಾಹಿತಿಗಾಗಿ 6362673283 ಸಂಖ್ಯೆಯನ್ನು ಸಂಪರ್ಕಿಸಿರಿ. ಈ ಯಕ್ಷಗಾನ ಶಿಬಿರದ ಪ್ರಯೋಜನವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಆಶಯ ನಮ್ಮದು.