Subscribe to Updates
Get the latest creative news from FooBar about art, design and business.
Author: roovari
ಪೆರ್ಲ : ಸಾಹಿತ್ಯ ಮತ್ತು ಕಾವ್ಯ ಪ್ರೇಮಿಗಳ ಒಕ್ಕೂಟವಾದ ‘ಸವಿಹೃದಯದ ಕವಿಬುತ್ತರು ಪೆರ್ಲ’ ನೇತೃತ್ವದಲ್ಲಿ ಬೆದ್ರಂಪಳ್ಳದ ಪರಿಶ್ರಮ ಗಾರ್ಡನ್ಸ್ ಇಲ್ಲಿ ಆಷಾಢ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ದಿನಾಂಕ 26 ಜುಲೈ 2026ರಂದು ಜರುಗಿತು. ಆಟಿ ಕಳೆಂಜನ ಕುಣಿತ ಹಾಗೂ ಕಾಣಿಕೆ ಅರ್ಪಿಸುವ ಮೂಲಕ ಸಾಂಪ್ರದಾಯಿಕ ಶೈಲಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಹಾಗೂ ಅಡ್ಯನಡ್ಕ ಜನತಾ ಶಿಕ್ಷಣ ಸೊಸೈಟಿಯ ಆಡಳಿತಾಧಿಕಾರಿ ರಮೇಶ್ ಬಾಯಾರು ಅವರು ಆಟ ಕಳೆಜನಿಗೆ ಅಕ್ಕಿ, ತೆಂಗಿನಕಾಯಿ, ಪೀಳ್ಯ ಮತ್ತು ನಗದು ಮೊದಲಾದ ಸುವಸ್ತುಗಳನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪುಷ್ಪಾ ಅಮೆಕ್ಕಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ವ್ಯಂಗ್ಯ ಚಿತ್ರಕಾರ ವೆಂಕಟ ಭಟ್ ಎಡನೀರು ಇವರ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನು ಬಾಲಕೃಷ್ಣ ನಾಯ್ಕ್ ಏಳ್ಕಾನ ಉದ್ಘಾಟಿಸಿದರು. ಧಾರ್ಮಿಕ ಮುಂದಾಳು ಹಾಗೂ ಉಪ್ಪೇರಿ ಶ್ರೀ ಮಂತ್ರಮೂರ್ತಿ ಗುಳಿಗೆ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ವಾಂತಿಚ್ಚಾಲು ಅವರು…
ಜಗತ್ತಿನ ಶ್ರೇಷ್ಠ ಭಾವಕವಿಗಳಲ್ಲಿ ಒಬ್ಬರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಇವರ ಮಗ ಡಾ. ದತ್ತಾತ್ರೇಯ ವಾಮನ ಬೇಂದ್ರೆ. ತಂದೆಯ ಸಾಹಿತ್ಯ ಮತ್ತು ಶ್ರೇಷ್ಠತೆಯ ಪ್ರಭಾವದಿಂದ ಹೊರಗೆ ಬಂದು ಸ್ವಂತಿಕೆಯ ಆತ್ಮಬಲದ ಮೇಲೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸಿದವರು. ‘ಸಂ.ವಾ.ದ’ ಇದು ತಂದೆ ವರ ಕವಿ ಅಂಬಿಕಾತನಯದತ್ತರು ವಾಮನ ಬೇಂದ್ರೆಯವರಿಗೆ ನೀಡಿದ ಕಾವ್ಯನಾಮ. ಕವಿ, ಲೇಖಕ, ಬಾನುಲಿ ನಾಟಕಕಾರ, ವಿಮರ್ಶಕ, ಭಾಷಾಂತರಕಾರರಾದ ಡಾ. ವಾಮನ ಬೇಂದ್ರೆಯವರಿಗೆ ಅಧ್ಯಯನ ಮತ್ತು ಅಧ್ಯಾಪನ ಒಂದು ತಪಸ್ಸಿನಂತೆ. ಅತ್ಯುತ್ತಮ ಪ್ರಾಧ್ಯಾಪಕರೂ ಮತ್ತು ಕನ್ನಡ ಸಾಹಿತ್ಯ – ಸಾಂಸ್ಕೃತಿಕ ಲೋಕದಲ್ಲಿ ಗಣ್ಯರಾದ ಡಾ. ವಾಮನ ಬೇಂದ್ರೆಯವರು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ 28 ಜುಲೈ 1935ರಂದು ತಂದೆ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮತ್ತು ತಾಯಿ ಲಕ್ಷ್ಮೀಬಾಯಿಯವರ ಸುಪುತ್ರನಾಗಿ ಜನಿಸಿದರು. ಇವರ ಪ್ರಾರಂಭಿಕ ಶಿಕ್ಷಣ ಗದಗದಲ್ಲಿ, ಕನ್ನಡವನ್ನು ಪ್ರಧಾನ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಗಳಿಸಿದರು. ಡಾ. ರಂ.ಶ್ರೀ.…
ಕಿನ್ನಿಗೋಳಿ : ‘ಯುಗಪುರುಷ’ದ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ, ಕೊ. ಅ. ಉಡುಪ ಪ್ರಶಸ್ತಿ ಪ್ರದಾನ, ವೇದವಿದ್ವಾಂಸರ ಸಂಮಾನ, ಕೃತಿ ಬಿಡುಗಡೆ ಸಮಾರಂಭ, ವಿದ್ಯಾರ್ಥಿವೇತನ ವಿತರಣೆಯು ದಿನಾಂಕ 24 ಜುಲೈ 2026ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ “ಯುಗಪುರುಷ ಸಂಸ್ಥೆಯು ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿರುವ ಸೇವಾ ಕಾರ್ಯಕ್ರಮಗಳು ಅಭಿನಂದನೀಯ” ಎಂದರು. ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ದ. ಕ. ಜಿಲ್ಲಾ ಕ.ಸಾ.ಪ. ಮಾಜೀ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರರವರು ಸಂಸ್ಮರಣ ಭಾಷಣ ಮಾಡಿದರು. ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಪಿ.ವಿ. ಪ್ರದೀಪ್ಕುಮಾರ್ ಕಥಾಬಿಂದು ರಚಿತ ‘ಅದಿತಿ’ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರುರವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಚಿದಂಬರ ಬೈಕಂಪಾಡಿಯವರಿಗೆ ಕೊ. ಅ. ಉಡುಪ ಪ್ರಶಸ್ತಿ ನೀಡಿ ಹಾಗೂ…
ಬೆಂಗಳೂರು : ಖ್ಯಾತ ನಾಟ್ಯಗುರು ವಿದುಷಿ ಜ್ಯೋತಿ ಪಟ್ಟಾಭಿರಾಮ್ ಇವರು ನೃತ್ಯಕ್ಷೇತ್ರದಲ್ಲಿ ಮಾಡಿರುವ ಹಲವು ದಶಕಗಳ ಸಾಧನೆ ಅನುಪಮ. ಇವರ ನೇತೃತ್ವದಲ್ಲಿ ‘ಸಾಧನ ಸಂಗಮ ಟ್ರಸ್ಟ್’ ನೃತ್ಯಸಂಸ್ಥೆಯು ನೃತ್ಯಕ್ಷೇತ್ರದಲ್ಲಿ ಸಾಧಿಸುತ್ತಿರುವ ಹೊಸ ಮೈಲಿಗಲ್ಲುಗಳ ಈವರೆಗಿನ ಸೃಜನಾತ್ಮಕ ಚಟುವಟಿಕೆಗಳು ಗಮನಾರ್ಹ. ಈ ನೃತ್ಯ ಶಾಲೆಯು ವರ್ಷ ಪೂರ್ತಿ ಒಂದಲ್ಲ ಒಂದು ಪ್ರಯೋಗಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುತ್ತದೆ, ಸದ್ದಿಲ್ಲದೆ ವಿಶಿಷ್ಟವಾಗಿ ಕಾರ್ಯೋನ್ಮುಖವಾಗಿರುವುದು ಸರ್ವ ವಿದಿತ. ಹೊಸದೇನನ್ನಾದರೂ ಸಾಧಿಸುವ ಪ್ರಯೋಗಾತ್ಮಕ ನಿಟ್ಟಿನಲ್ಲಿ ಪ್ರತಿವರ್ಷ ಗುರು ಡಾ. ಸಾಧನಶ್ರೀ ನವರೂಪಕಗಳನ್ನು ದಿಗ್ದರ್ಶಿಸಿ- ಸಂಯೋಜಿಸಿ ರಂಗದ ಮೇಲೆ ತರುವುದು ಪರಿಪಾಠ. ಅದರಂತೆ ಯಶಸ್ವೀ ನಾಲ್ಕು ದಶಕಗಳನ್ನು ದಾಟಿರುವ ಖ್ಯಾತ ‘ಸಾಧನ ಸಂಗಮ ಡ್ಯಾನ್ಸ್ ಸೆಂಟರಿ’ನ ನಲವತ್ತನೆಯ ವಾರ್ಷಿಕೋತ್ಸವದ ಸಾರ್ಥಕ ಸಮಾರಂಭವು ದಿನಾಂಕ 01 ಆಗಸ್ಟ್ 2026ರಂದು ಶನಿವಾರ ಸಂಜೆ 5-00 ಗಂಟೆಗೆ ಬೆಂಗಳೂರಿನ ಶ್ರೀ ಪುಟ್ಟಣ್ಣ ಚೆಟ್ಟಿ ಟೌನ್ ಹಾಲಿನಲ್ಲಿ ವೈವಿಧ್ಯಪೂರ್ಣ ನೃತ್ಯ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಜರುಗಲಿದೆ. ‘ನೃತ್ಯ ಸಮಾಗಮ- 2026’ ಶೀರ್ಷಿಕೆಯಲ್ಲಿ ನಡೆಯುವ ಈ ನೃತ್ಯ ರಸರಂಜನೆಯ ಕಣ್ಮನ…
ಬೆಳ್ತಂಗಡಿ : ಯಕ್ಷಗಾನ ಕಲಾಭಿಮಾನಿಗಳ ವಲಯದಲ್ಲಿ ‘ಕುಟ್ಟಿ’ ಎಂದೇ ಪ್ರಸಿದ್ಧಿಯಾಗಿರುವ ತೆಂಕಣ ಯಕ್ಷಗಾನದ ಆಗ್ರಪಂಕ್ತಿಯ ಪುಂಡು ವೇಷಧಾರಿಗಳಲ್ಲಿ ಒಬ್ಬರಾದ ಮುಂಡೂರು ಕೃಷ್ಣ ಶೆಟ್ಟಿ (80 ವರ್ಷ) ಇವರು ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಎಕ್ಕಳ ನಿವಾಸದಲ್ಲಿ ದಿನಾಂಕ 28 ಜುಲೈ 2026ರಂದು ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಮುಂಡ್ಯೂರು ನಡಿಗುತ್ತು ಪಾದೆಮನೆಯಲ್ಲಿ 1946ರ ಜೂನ್ 19ರಂದು ಜನಿಸಿದ ಕೃಷ್ಣ ಶೆಟ್ಟರು ಐದನೆಯ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣ ಪೂರೈಸಿ ಬಳಿಕ ಯಕ್ಷಗಾನದಿಂದ ಆಕರ್ಷಿತರಾಗಿದ್ದರು. ವಿಶೇಷವಾಗಿ ಕ್ರಿಶ್ಚಿಯನ್ ಬಾಬುರವರಿಂದ ಸ್ಪೂರ್ತಿಗೊಂಡು ಅವರ ಗುರುತ್ವದಲ್ಲಿಯೇ ನಾಟ್ಯವನ್ನು ಸಿದ್ದಿಸಿಕೊಂಡವರಾಗಿದ್ದಾರೆ. ಉದ್ಯೋಗ ನಿಮಿತ್ತ ಮುಂಬಯಿಗೆ ತೆರಳಿ ಗುರು ನಾರಾಯಣ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ವೇಷಧಾರಿಯಾಗಿದ್ದ ಅವರು ಊರಿಗಾಗಮಿಸಿದ ಬಳಿಕ ಕಲ್ಲಾಡಿ ವಿಠಲ ಶೆಟ್ಟರ ಯಜಮಾನಿಕೆಯ ಕಟೀಲು ಮೇಳ ಸೇರಿದ್ದರು, ಇಪ್ಪತ್ತಾರು ವರ್ಷಗಳ ಕಾಲ ಕಟೀಲು ಮೇಳದಲ್ಲಿ ಹಾಗೂ ಕೊಲ್ಲೂರು, ಬಪ್ಪನಾಡು, ಮಧೂರು, ತಲಕಳ ಮೇಳಗಳ ತಿರುಗಾಟ ಮಾಡಿದ್ದ ಮುಂಡೂರು ಕೃಷ್ಣ…
ಕೆನಡಾ : ಭಾರತೀಯ ಸಂಜಾತ ಲೇಖಕ ಡಾ. ಕೃಷ್ಣಪ್ರಸಾದ್ ಬಾಳಿಕೆ ಇವರ ‘ಕೆನಡಾ ಕಥನ’ ಎಂಬ ಲೇಖನ ಸಂಕಲನವು ದಿನಾಂಕ 25 ಜುಲೈ 2026ರಂದು ಟೊರಾಂಟೋ ಇಲ್ಲಿನ ಶೃಂಗೇರಿ ಶಾರದಾಂಬಾ ದೇವಸ್ಥಾನದ ಸಾಂಸ್ಕೃತಿಕ ಕೇಂದ್ರದಲ್ಲಿ ಲೋಕಾರ್ಪಣೆಗೊಂಡಿತು. ಕೃತಿ ಲೋಕಾರ್ಪಣೆಗೊಳಿಸಿದ ಶೃಂಗೇರಿ ವಿದ್ಯಾ ಭಾರತಿ ಫೌಂಡೇಶನ್ ಉಪಾಧ್ಯಕ್ಷರಾದ ಡಾ. ಡಿ. ಪರಮೇಶ್ವರ ಭಟ್ ಇವರು ಮಾತನಾಡಿ “ಒಬ್ಬ ಲೇಖಕನಿಗೆ, ಅದರಲ್ಲೂ ಅನುಭವ ಕಥನಗಳನ್ನು ಬರೆಯುವವನಿಗೆ ಅವಲೋಕನಾಶಕ್ತಿ ಮತ್ತು ಭಾಷಾಭಿಯಾನದಲ್ಲಿ ಆಸಕ್ತಿಗಳು ಅತಿ ಅಗತ್ಯವಾಗಿ ಇರಬೇಕಾದ ಗುಣಗಳು. ಭಾರತದಿಂದ ಕೆನಡಾಕ್ಕೆ ವಲಸೆ ಬಂದವರೆಲ್ಲರೂ ಅನುಭವ ಕಥನಗಳನ್ನು ಬರೆಯುವುದಿಲ್ಲ. ಡಾ. ಕೃಷ್ಣಪ್ರಸಾದ್ ಬಾಳಿಕೆಯವರು ಈ ಕೃತಿಯಲ್ಲಿ ಬರೆದಿರುವುದು ಅವರೊಬ್ಬರ ಅನುಭವವಲ್ಲ. ಬದಲಾಗಿ ಎಲ್ಲ ವಲಸಿಗರದ್ದೂ ಹೌದು. ನೆಲೆಯೂರಿದ ನಾಡಿನಲ್ಲಿ ಕನ್ನಡ ಭಾಷೆಯನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ಅವರು ಮಾಡಿರುವ ಪ್ರಯತ್ನ ಅತ್ಯಂತ ಶ್ಲಾಘನೀಯ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಲೇಖಕಿ ಧರ್ಮಶ್ರೀ ಅಯ್ಯಂಗಾರ್ ಮಾತನಾಡಿ “ಪ್ರತಿಯೊಬ್ಬ ವಲಸಿಗನೂ ತನ್ನ ಅನುಭವಗಳನ್ನು ಈ ರೀತಿ ದಾಖಲಿಸುವುದು ಬಹಳ…
ಕಡಬ : ರಾಮಕುಂಜದ ಶ್ರೀ ರಾಮಕುಂಜೇಶ್ವರ ವಸತಿ ಶಾಲಾ ಸಭಾಂಗಣದಲ್ಲಿ ಮುಂದಿನ ತಿಂಗಳು ನಡೆಯಲಿರುವ ಕಡಬ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಡಬ ತಾಲೂಕಿನ ವಿದ್ಯಾರ್ಥಿಗಳಿಂದ ಕವನ ಹಾಗೂ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ. ಕಿರಿಯ ಪ್ರಾಥಮಿಕ ವಿಭಾಗ (1ರಿಂದ 5ನೇ ತರಗತಿ), ಹಿರಿಯ ಪ್ರಾಥಮಿಕ ವಿಭಾಗ (6 ಮತ್ತು 7ನೇ ತರಗತಿ), ಪ್ರೌಢ ಶಾಲಾ ವಿಭಾಗ (8, 9, 10ನೇ ತರಗತಿ), ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಒಟ್ಟು 5 ವಿಭಾಗಗಳಲ್ಲಿ ಪ್ರತ್ಯೇಕವಾಗಿ ಕವನ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಶಾಲಾ ಮುಖ್ಯಸ್ಥರ ದೃಢೀಕರಣದೊಂದಿಗೆ ತಮ್ಮ ಬರಹಗಳನ್ನು ದಿನಾಂಕ 05 ಆಗಸ್ಟ್ 2026ರ ಒಳಗಾಗಿ ಕಳುಹಿಸಿಕೊಡಬೇಕು. 5 ವಿಭಾಗಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡಲಾಗುವುದು. ವಿದ್ಯಾರ್ಥಿಗಳು ಪ್ರಬಂಧ ಕವನದ ಜೊತೆಗೆ ತಮ್ಮ ಹೆಸರು, ಶಾಲೆ ಅಥವಾ ಕಾಲೇಜಿನ ಹೆಸರು, ಮೊಬೈಲ್ ನಂಬರ್ ನಮೂದಿಸಬೇಕು. ಪ್ರಬಂಧ ಸ್ಪರ್ಧೆಯ…
ಕೋಟೇಶ್ವರ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಇವರ ಜಂಟಿ ಸಹಯೋಗದಲ್ಲಿ ‘ಸರಣಿ ಕಾರ್ಯಕ್ರಮ-4’ ‘ಅರ್ಥಾಂಕುರ-25’ ದಿನಾಂಕ 26 ಜುಲೈ 2026ರಂದು ಕೋಟೇಶ್ವರದ ಕೋಟಿಲಿಂಗೇಶ್ವರ ದೇಗುಲದಲ್ಲಿ ನಡೆಯಿತು. ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಇದರ ಅಧ್ಯಕ್ಷ ಡಾ. ಜಗದೀಶ ಶೆಟ್ಟಿ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿ “ತಾಳಮದ್ದಳೆಯನ್ನು ನಿರಂತರವಾಗಿ ಸಂಯೋಜಿಸುವುದು ಬಹಳ ಕಷ್ಟದ ಸಂಗತಿ. ಆದರೂ ‘ಅರ್ಥಾಂಕುರ-25’ ತಲುಪಿದ್ದು ನಿಜಕ್ಕೂ ನಮಗೆ ಹೆಮ್ಮೆ ಎನಿಸಿದೆ. ಈಗಾಗಲೇ ಮೂರು ದೇಗುಲಗಳಲ್ಲಿ ಪ್ರತೀ ತಿಂಗಳಿಗೊಂದರಂತೆ ಆಯೋಜಿಸುತ್ತಿದ್ದು ಬೇಡಿಕೆ ಹೆಚ್ಚಿದೆ. ಹೊಸ ತಲೆಮಾರಿನ ಅರ್ಥದಾರಿಗಳನ್ನು ಬೆಳೆಸುವ ಕಾಯಕಕ್ಕೆ ಸರ್ವರ ಸಹಕಾರ ಲಭಿಸಿದ್ದು ನಮಗೆ ಸಂತಸ ತಂದಿದೆ” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರಸಿದ್ಧ ಅರ್ಥದಾರಿ ಮಹೇಂದ್ರ ಆಚಾರ್ಯ ಹೇರಂಜೆ ಇವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ ಕೋಟೇಶ್ವರ, ಗುರುಪ್ರಸಾದ್ ಇಂಜಿನಿಯರ್, ಡಾ. ರಾಜೇಶ್, ಅಬ್ದುಲ್ ರವೂಫ್, ಪ್ರಶಾಂತ್ ಪಡುಕೆರೆ, ಶಂಕರನಾರಾಯಣ ಉಪಾಧ್ಯಾಯ, ವಾಗ್ವಿಲಾಸ ಭಟ್,…
ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ಸನಾತನ ಗುರುಪರಂಪರ ಕಾರ್ಯಕ್ರಮವು ದಿನಾಂಕ 25 ಜುಲೈ 2026ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಗುರುನಮನ ಸ್ವೀಕರಿಸಿ ಮಾತನಾಡಿದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಎಂ.ಬಿ. ಪುರಾಣಿಕ್ “ಮನುಷ್ಯ ಎಷ್ಟೇ ದೊಡ್ಡವನಾದರೂ ಕಿರಿಯರು ನಮಸ್ಕರಿಸಿದಾಗ ಆತ ತನ್ನ ಪುಣ್ಯ ಸಂಪಾದನೆಯನ್ಕು ಆಶೀರ್ವಾದ ರೂಪದಲ್ಲಿ ಕೊಡಬೇಕು. ಅಂತಹ ಅಪರೂಪದ ಗುರುಪರಂಪರೆಯನ್ನು ಸನಾತನ ನಾಟ್ಯಾಲಯ ಮುಂದುವರೆಸಿಕೊಂಡು ಬರುತ್ತಿದೆ. ಇಂದು ಸನಾತನ ಧರ್ಮ ಅಳಿಸುವ ಪ್ರಯತ್ನ ನಡೆಯುತ್ತಿದೆ. ಅಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ನಮ್ಮ ಸಾಧನೆಯನ್ನು ಸಾಧಕರನ್ನು ಅವಮಾನಿಸುವ ಪ್ರಯತ್ನ ನಡೆಯುತ್ತಿರುವುದು ಕಂಡು ಬೇಸರ ಆಗ್ತಿದೆ. ಅಂತಹ ವಾತಾವಣರದಲ್ಲಿ ಈ ರೀತಿ ನಮ್ಮ ಮಕ್ಳಳಿಗೆ ಸಂಸ್ಕಾರದ ಕೊಡುತ್ತಿರುವುದು ಶ್ಲಾಘನೀಯ” ಎಂದರು. ಶ್ರೀ ಕ್ಷೇತ್ರ ಕದ್ರಿಯ ಮಲ್ಲಿಕಾ ಕಲಾವೃಂದದ ಕಾರ್ಯಾಧ್ಯಕ್ಷರಾದ ಸುಧಾಕರ ರಾವ್ ಪೇಜಾವರ ಅವರು, ಲಲಿತ ಕಲಾಸದನದ ಸ್ಥಾಪಕ, ಹಿರಿಯ ನೃತ್ಯಗುರು, ನಾಟ್ಯಾಚಾರ್ಯ ಬಿ. ಪ್ರೇಮ್ನಾಥ್ ಇವರ ಸಂಸ್ಮರಣೆ ಮಾಡಿದರು. ಪ್ರೇಮ್ ನಾಥ್ ಮಾಷ್ಟರ್…
ತೆಕ್ಕಟ್ಟೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಉಡುಪಿ ಜಿಲ್ಲೆ ಸಹಯೋಗದಲ್ಲಿ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಆಶ್ರಯದಲ್ಲಿ ‘ಮಹಾಭಾರತ’ ಸರಣಿ ತಾಳಮದ್ದಲೆ ಕಾರ್ಯಕ್ರಮವನ್ನು ದಿನಾಂಕ 25 ಜುಲೈ 2026ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ಉದ್ಘಾಟಿಸಲಾಯಿತು. ಭಾಗವತ ವಿಠ್ಠಲ ಆಚಾರ್ ಬಸ್ರೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಕಲಿಕೆಯೊಂದಿಗೆ ಪ್ರದರ್ಶನವು ಇದ್ದಲ್ಲಿ ಅತೀ ತೀವ್ರ ಗತಿಯ ಕಲಿಕೆಯಾಗಿ ನಿರಂತರತೆಯನ್ನು ಸಾಧಿಸುವುದಕ್ಕೆ ಸಾಧ್ಯ. ಕಲಾವಿದರಿಗೆ ರಂಗವು ಅತೀ ಹೆಚ್ಚು ಹೆಚ್ಚು ದೊರಕಿದಾಗ ಪ್ರಬುದ್ಧತೆಯನ್ನು ಸಾಧಿಸುವುದಕ್ಕೆ ಕಾರಣವಾಗುತ್ತದೆ. ನಿರಂತರ ವೇದಿಕೆಯ ಪರಿಕಲ್ಪನೆ ಕೈಲಾಸ ಕಲಾಕ್ಷೇತ್ರದ ಯೋಜನೆ ನಿಜಕ್ಕೂ ಅರ್ಥಪೂರ್ಣ” ಎಂದು ಹೇಳಿದರು. ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಕಲಾಪೋಷಕ ಅ್ಯಂಡ್ರ್ಯು ಡಿ’ಸಿಲ್ವಾ, ಉಪನ್ಯಾಸಕ ಶಶಾಂಕ್ ಪಟೇಲ್ ಉಪಸ್ಥಿತರಿದ್ದರು. ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ ಕೊರ್ಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ‘ಭೀಷ್ಮ ವಿಜಯ’ ತಾಳಮದ್ದಲೆ ರಂಗದಲ್ಲಿ ಸಂಪನ್ನಗೊಂಡಿತು.