Subscribe to Updates

    Get the latest creative news from FooBar about art, design and business.

    What's Hot

    ‘ಸಂಶೋಧನಾ ಮತ್ತು ಕಾದಂಬರಿ’ ಪ್ರಶಸ್ತಿ ಪ್ರಕಟ

    July 29, 2026

    ಕಾಂತಾವರದಲ್ಲಿ ಯಕ್ಷದೇಗುಲದ ವಾರ್ಷಿಕ ಯಕ್ಷೋಲ್ಲಾಸ, ಪ್ರಶಸ್ತಿ ಪ್ರದಾನ

    July 29, 2026

    ಸಂದೇಶ ಪ್ರತಿಷ್ಠಾನ ಸಭಾಂಗಣದಲ್ಲಿ ‘ಕೊಂಕಣಿ ಸಾಹಿತ್ಯ ಸಂವಾದ’

    July 29, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುತ್ತೂರಿನ ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ‘ಯಕ್ಷಾಷಾಢ -6’ ತಾಳಮದ್ದಳೆ
    Music

    ಪುತ್ತೂರಿನ ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ‘ಯಕ್ಷಾಷಾಢ -6’ ತಾಳಮದ್ದಳೆ

    July 27, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಹಾಗೂ ಶ್ರವಣರಂಗ ಸವಣೂರು ಹಮ್ಮಿಕೊಂಡಿರುವ ‘ಯಕ್ಷಾಷಾಢ -6’ ತಾಳಮದ್ದಳೆ ಕಾರ್ಯಕ್ರಮ ಶ್ರೀ ಮಹಾಮಾಯಾ ದೇವಸ್ಥಾನ ಪುತ್ತೂರು ಇಲ್ಲಿನ ಶ್ರೀ ದೇವಿಯ ಸನ್ನಿಧಿಯಲ್ಲಿ ದಿನಾಂಕ 26 ಜುಲೈ 2026ರಂದು ‘ಶಾಂಭವಿ ವಿಲಾಸ’ ಎಂಬ ಆಖ್ಯಾನದೊಂದಿಗೆ ನಡೆಯಿತು.

    ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಇರ್ದೆ, ನಿತೀಶ್ ಎಂಕಣ್ಣಮೂಲೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ ತಾರಾನಾಥ ಸವಣೂರು, ಅನೀಶ್ ಕೃಷ್ಣ ಪುಣಚ, ಸಮರ್ಥ ವಿಷ್ಣು ಕಡಂಬಳಿಕೆ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ ಮತ್ತು ಸಾವಿತ್ರಿ ಶಾಸ್ತ್ರಿ ಶಿರಂಕಲ್ಲು (ಕೌಶಿಕೆ), ಗುಂಡ್ಯಡ್ಕ ಈಶ್ವರ ಭಟ್ (ರಕ್ತಬೀಜ), ಹರಿಣಾಕ್ಷಿ ಜೆ. ಶೆಟ್ಟಿ (ಶುಂಭ), ತಾರಾನಾಥ ಸವಣೂರು (ನಿಶುಂಭ), ಸುಬ್ಬಪ್ಪ ಕೈಕಂಬ (ಚಂಡ), ದುಗ್ಗಪ್ಪ ನಡುಗಲ್ಲು (ಮುಂಡ), ಗುಡ್ಡಪ್ಪ ಬಲ್ಯ (ಸುಗ್ರೀವ), ಅಚ್ಯುತ ಪಾಂಗಣ್ಣಾಯ (ದೂಮ್ರಾಕ್ಷ), ಕಿಶೋರಿ ದುಗ್ಗಪ್ಪ ನಡುಗಲ್ಲು (ದೇವೇಂದ್ರ) ಸಹಕರಿಸಿದರು. ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ತಾರಾನಾಥ ಸವಣೂರು ವಂದಿಸಿದರು. ಶ್ರೀ ದೇವಳದ ಆಡಳಿತ ಮೊಕ್ತೇಸರ ಬಂಗಾರದ ಕಟ್ಟೆ ಜ್ಯುವೆಲ್ಲರಿ ಮಾಲೀಕ ಸತೀಶ್ ನಾಯಕ್ ಹಾಗೂ ಸದಸ್ಯ ಪ್ರಕಾಶ್ ಪೈ ಇವರನ್ನು ಉಭಯ ಸಂಘಗಳ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. ದೇವಳದ ಅರ್ಚಕ ಕಲಾವಿದರಿಗೆ ಶ್ರೀ ದೇವರ ಪ್ರಸಾದವನ್ನಿತ್ತು ಗೌರವಿಸಿದರು.

    baikady Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ | ಸ್ತ್ರೀಪರ ಚಿಂತಕಿ, ಮಹತ್ವದ ಬರಹಗಾರ್ತಿ ಡಾ. ಶೈಲಜಾ ಉಡಚಣ
    Next Article ಡಾ. ವಸಂತಕುಮಾರ ಪೆರ್ಲ ಇವರ ಅನುವಾದಿತ ತುಳು ಕಾದಂಬರಿ ‘ಯಾತ್ರೆ’ ಬಿಡುಗಡೆ
    roovari

    Add Comment Cancel Reply


    Related Posts

    ‘ಸಂಶೋಧನಾ ಮತ್ತು ಕಾದಂಬರಿ’ ಪ್ರಶಸ್ತಿ ಪ್ರಕಟ

    July 29, 2026

    ಕಾಂತಾವರದಲ್ಲಿ ಯಕ್ಷದೇಗುಲದ ವಾರ್ಷಿಕ ಯಕ್ಷೋಲ್ಲಾಸ, ಪ್ರಶಸ್ತಿ ಪ್ರದಾನ

    July 29, 2026

    ಸಂದೇಶ ಪ್ರತಿಷ್ಠಾನ ಸಭಾಂಗಣದಲ್ಲಿ ‘ಕೊಂಕಣಿ ಸಾಹಿತ್ಯ ಸಂವಾದ’

    July 29, 2026

    ಕೊಂಕಣಿ ಸಾಹಿತ್ಯ ಅಕಾಡೆಮಿಯ ‘ಕಾವ್ಯಾಂ ವ್ಹಾಳೊ -17’ ಕವಿಗೋಷ್ಠಿ

    July 29, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.