Subscribe to Updates

    Get the latest creative news from FooBar about art, design and business.

    What's Hot

    ಶಿಕ್ಷಣ ಶಿಕ್ಷಕ ಹಾಗೂ ಕಲಾವಿದ ಶಿವಣ್ಣ ಎಸ್. ಇವರಿಗೆ ಅವಳಿ ಪ್ರಶಸ್ತಿ

    June 27, 2025

    ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ‘ಸಾಹಿತ್ಯ ಮತ್ತು ಕಲಾ ಉತ್ಸವ – 2025’ | ಜೂನ್ 28

    June 27, 2025

    ಉಪನ್ಯಾಸಕ, ಸಾಹಿತಿ ಡಾ. ಜಮೀರ್ ಅಹಮದ್ ಇವರಿಗೆ 2025ನೇ ಸಾಲಿನ ‘ನಾಡೋಜ ಕರೀಂ ಖಾನ್ ರಾಜ್ಯ ಪ್ರಶಸ್ತಿ’

    June 27, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಸರಗೋಡಿನ ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಕ.ಚು.ಸಾ.ಪ. ಅಂತರ ರಾಜ್ಯಮಟ್ಟದ 5ನೇ ಸಮ್ಮೇಳನ | ಜೂನ್ 29
    Awards

    ಕಾಸರಗೋಡಿನ ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಕ.ಚು.ಸಾ.ಪ. ಅಂತರ ರಾಜ್ಯಮಟ್ಟದ 5ನೇ ಸಮ್ಮೇಳನ | ಜೂನ್ 29

    June 27, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಇದರ ಸಹಕಾರದೊಂದಿಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ.) ಕೇಂದ್ರ ಸಮಿತಿ ಹುಬ್ಬಳ್ಳಿ, ಕ.ಚು.ಸಾ.ಪ. ಕಾಸರಗೋಡು ಘಟಕ, ಅಭಿರುಚಿ ಬಳಗ ಮೈಸೂರು ಇವುಗಳ ವತಿಯಿಂದ ಕ.ಚು.ಸಾ.ಪ. ಅಂತರ ರಾಜ್ಯಮಟ್ಟದ 5ನೇ ಸಮ್ಮೇಳನವನ್ನು ದಿನಾಂಕ 29 ಜೂನ್ 2025ರ ಆದಿತ್ಯವಾರ ಪೂರ್ವಾಹ್ನ ಗಂಟೆ 10-00ಕ್ಕೆ ಕಾಸರಗೋಡು ಸಿರಿಬಾಗಿಲು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

    ಹಿರಿಯ ಕವಿ ಪತ್ರಕರ್ತರಾದ ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರು ದೀಪ ಪ್ರಜ್ವಲನೆ ಮಾಡಿ ಸಮ್ಮೇಳನವನ್ನು ಉದ್ಘಾಟನೆ ಮಾಡಲಿದ್ದು, ಕಾಸರಗೋಡಿನ ಹಿರಿಯ ಚಿಂತಕರಾದ ಶ್ರೀ ವಿ.ಬಿ.ಕುಳಮರ್ವ ಇವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿರುವರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರಿಂದ ಚುಟುಕು ಸಾಹಿತ್ಯ ಪುಸ್ತಕಗಳ ಅನಾವರಣ ಮತ್ತು ‘ಚುಟುಕು ಚೇತನ ಗೌರವ ಪ್ರಶಸ್ತಿ’ ಪುರಸ್ಕಾರ ಪ್ರದಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕುಮಾರಿ ಅವನೀಶ ಎಸ್. ನೀಲಗುಂದ ಉಣಕಲ್ ಇವರಿಂದ ‘ಮಯೂರಶರ್ಮನ’ ಏಕಪಾತ್ರ ಅಭಿನಯ ಪ್ರಸ್ತುತಗೊಳ್ಳಲಿದೆ.

    ಮಧ್ಯಾಹ್ನ 11-30 ಗಂಟೆಗೆ ನಡೆಯಲಿರುವ ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಶಿರಸಿಯ ಯಕ್ಷಗಾನ ತಜ್ಞರಾದ ಶ್ರೀ ಗಣಪತಿ ಭಟ್ಟ ವರ್ಗಾಸರ ಇವರು ವಹಿಸಲಿದ್ದು, ಉತ್ತರ ಕನ್ನಡದ ಹಿರಿಯ ಚಿಂತಕರಾದ ಡಾ. ವಸಂತ ನಾಯಕ ಇವರು ಆಶಯ ನುಡಿಗಳನ್ನಾಡಲಿದ್ದಾರೆ. ಮೈಸೂರಿನ ಬಾನುಲಿ ನಿವೃತ್ತಿ ಅಧಿಕಾರಿ ಶ್ರೀ ಎನ್.ವಿ. ರಮೇಶ್ ಇವರು ‘ಚುಟುಕು ಸಾಹಿತ್ಯ’, ಗದಗದ ಶ್ರೀ ವೀರನಗೌಡ ಮರಿಗೌಡ ಇವರು ‘ವಚನ – ಚುಟುಕು ಸಾಹಿತ್ಯ ಅನುಬಂಧ’, ಮೈಸೂರಿನ ಕವಯಿತ್ರಿ ಶ್ರೀಮತಿ ಲತಾ ಮೋಹನ್ ಇವರು ‘ಇತ್ತೀಚಿನ ಚುಟುಕು ಸಾಹಿತ್ಯ’ ಎಂಬ ವಿಷಯಗಳ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ.

    ಮಧ್ಯಾಹ್ನ 12-30 ಗಂಟೆಗೆ ಕವಿಗೋಷ್ಠಿ – ಸಮಾರೋಪ ಮಂಗಳೂರಿನ ಹಿರಿಯ ಕವಿಗಳಾದ ಡಾ.ಸುರೇಶ್ ನೆಗಲಗುಳಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮಂಗಳೂರಿನ ಹಿರಿಯ ಚಿಂತಕರು ಡಾ. ಕೆ. ಗೋವಿಂದ ಭಟ್ಟರು ಆಶಯ ನುಡಿಗಳನ್ನಾಡಲಿದ್ದಾರೆ. ಕ.ಚು.ಸಾ.ಪ. ಶ್ರೀ ಶೇಖರಗೌಡ ಪಾಟೀಲ ಇವರು ನಿರ್ಣಯ ಮಂಡನೆ ಮಾಡಲಿದ್ದಾರೆ. 1-30 ಗಂಟೆಗೆ ಕಾಸರಗೋಡಿನ ಗಡಿನಾಡು ಕನ್ನಡ ಸಾಂಸ್ಕೃತಿಕ ಸಂಸ್ಥೆಯ ಕಲಾವಿದರಿಂದ ನೃತ್ಯ-ಸಂಗೀತ ವೈಭವ ಪ್ರಸ್ತುತಗೊಳ್ಳಲಿದೆ. ಮದ್ಯಾಹ್ನ 2-30 ಗಂಟೆಗೆ ‘ಹರಿಸರ್ವೋತ್ತಮ’ ಎಂಬ ಪ್ರಸಂಗ ಯಕ್ಷಗಾನ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಬಲಿಪ ಶಿವಶಂಕರ ಭಾಗವತ, ಗೋಪಾಲಕೃಷ್ಣ ನಾವಡ ಮಧೂರು, ಮುರಲೀ ಮಾಧವ ಮಧೂರು ಹಾಗೂ ಮುಮ್ಮೇಳದಲ್ಲಿ ವಾದಿರಾಜ ಕಲ್ಲೂರಾಯ, ಗಣೇಶ ಶೆಟ್ಟಿ ಕನ್ನಡಿಕಟ್ಟೆ ಸದಾಶಿವ ಆಳ್ವ ತಲಪಾಡಿ ಇವರು ಸಹಕರಿಸಲಿದ್ದಾರೆ.

    award baikady dance felicitation Literature Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ | ರಂಗ ಗಾರುಡಿಗ ಸಿ.ಜಿ.ಕೆ.
    Next Article ನಲ್ಲೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಯಕ್ಷಗಾನ ಶಿಕ್ಷಣ ಅಭಿಯಾನ ಉದ್ಘಾಟನೆ
    roovari

    Add Comment Cancel Reply


    Related Posts

    ಶಿಕ್ಷಣ ಶಿಕ್ಷಕ ಹಾಗೂ ಕಲಾವಿದ ಶಿವಣ್ಣ ಎಸ್. ಇವರಿಗೆ ಅವಳಿ ಪ್ರಶಸ್ತಿ

    June 27, 2025

    ಉಪನ್ಯಾಸಕ, ಸಾಹಿತಿ ಡಾ. ಜಮೀರ್ ಅಹಮದ್ ಇವರಿಗೆ 2025ನೇ ಸಾಲಿನ ‘ನಾಡೋಜ ಕರೀಂ ಖಾನ್ ರಾಜ್ಯ ಪ್ರಶಸ್ತಿ’

    June 27, 2025

    ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ಪ್ರದಾನ ಸಮಾರಂಭ | ಜೂನ್ 28

    June 27, 2025

    ಡಿವಿಜಿ ಪ್ರಶಸ್ತಿ ಪ್ರದಾನ ಸಮಾರಂಭ – 2025

    June 27, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.