Subscribe to Updates

    Get the latest creative news from FooBar about art, design and business.

    What's Hot

    ಚೆಂಬೂರು ಚೆಡ್ಡಾ ನಗರ ಸುಬ್ರಹ್ಮಣ್ಯ ಮಠದಲ್ಲಿ ‘ಶ್ರೀರಾಮ ನಿರ್ಯಾಣ’ ಯಕ್ಷಗಾನ ತಾಳಮದ್ದಳೆ

    August 19, 2025

    ಸಿರಿಬಾಗಿಲು ಪ್ರತಿಷ್ಠಾನಕ್ಕೆ ಉಜಿರೆ ಯಸ್. ಡಿ. ಯಂ. ವಿದ್ಯಾರ್ಥಿಗಳ ಭೇಟಿ

    August 19, 2025

    ಚೇಳಾರು ಗುತ್ತಿನಲ್ಲಿ ಆಗೋಳಿ ಮಂಜಣ್ಣ ನೆಂಪು ಹಾಗೂ ಪ್ರತಿಭಾ ಪುರಸ್ಕಾರ

    August 19, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನೃತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ.ಕೆ.ರಾಮಮೂರ್ತಿ ರಾವ್ ಆಯ್ಕೆ 
    Bharathanatya

    ನೃತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ.ಕೆ.ರಾಮಮೂರ್ತಿ ರಾವ್ ಆಯ್ಕೆ 

    September 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಇದರ ವತಿಯಿಂದ ದಿನಾಂಕ 24-12-2023 ಹಾಗೂ 25-12-2023ರಂದು ಉಡುಪಿ ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಹಮ್ಮಿಕೊಳ್ಳಲಿರುವ ಎರಡು ದಿನಗಳ ಶಾಸ್ತ್ರೀಯ ನೃತ್ಯ ಕಲಾವಿದರ ನೃತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕರಾವಳಿಯ ಮೂಲದ ನೃತ್ಯ ವಿದ್ವಾಂಸ ನಾಟ್ಯಾಚಾರ್ಯ ಪ್ರೊಫೆಸರ್ ಕೆ.ರಾಮಮೂರ್ತಿ ರಾವ್ ಇವರನ್ನು ಸರ್ವಾನುಮತಿಯಿಂದ ಆಯ್ಕೆ ಮಾಡಲಾಯಿತು.

    ಪ್ರೊ.ಕೆ.ರಾಮಮೂರ್ತಿಯವರು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದು ನೂಪುರ ಎಂಬ ನೃತ್ಯ ಸಂಸ್ಥೆಯ ಮೂಲಕ ಕಲಾ ಸೇವೆಯನ್ನು ಮಾಡುತ್ತಿದ್ದಾರೆ. ಒರ್ವ ಕಲಾವಿದರಾಗಿ, ಗುರುವಾಗಿ, ನೃತ್ಯ ನಿರ್ದೇಶಕರಾಗಿ, ಕಲಾ ವಿಮರ್ಶಕರಾಗಿ ಮತ್ತು ಬರಹಗಾರರಾಗಿ ನೃತ್ಯಕ್ಷೇತ್ರದಲ್ಲಿ ಅವರದ್ದು ವೈವಿಧ್ಯಮಯ ವ್ಯಕ್ತಿತ್ವ. ನಾಟ್ಯಾಚಾರ್ಯ ದಿ.ವಿಷ್ಣುದಾದಾಸ್ ಇವರಲ್ಲಿ ನೃತ್ಯಭ್ಯಾಸ ಮೈಸೂರಿನ ಆಸ್ಥಾನ ವಿದ್ವಾನ್ ಎಸ್.ಎನ್.ಮರಿಯಪ್ಪ ಮತ್ತು ಲಕ್ಷ್ಮೀಪತಿ ಭಾಗವತರಿಂದ ಸಂಗೀತಭ್ಯಾಸ ಮಾಡಿರುವರು. ನಟುವಾಂಗದಲ್ಲಿ. ವಿಶೇಷ ಪರಿಣತಿ ಹೊಂದಿರುವ ಇವರು ಭರತನಾಟ್ಯದ ಜೂನಿಯರ್ ಸೀನಿಯರ್ ವಿದ್ವತ್ ಈ ಎಲ್ಲಾ ಪರೀಕ್ಷೆಗಳಲ್ಲೂ ರಾಂಕ್ ವಿಜೇತರು. ನೃತ್ಯಕ್ಕೆ ಸಂಬಂಧಿಸಿದ ನೂರಾರು ಲೇಖನಗಳನ್ನು ಪ್ರಕಟಿಸಿರುವ ಇವರು ವಿಶೇಷವಾಗಿ ಇವರ ಸಂಪಾದಕತ್ವದ ‘ನೃತ್ಯ  ದರ್ಪಣಂ ಎಂಬ ಪುಸ್ತಕವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಪ್ರಕಟಿಸಿರುತ್ತದೆ. ಅಲ್ಲದೆ ‘ನಾಟ್ಯ ಶಾಸ್ತ್ರ ಮಂಜರಿ’ ಎಂಬ ಪುಸ್ತಕವು ಅಕಾಡೆಮಿಯಿಂದ ವಿಶೇಷ ಬಹುಮಾನ ಪಡೆದಿರುತ್ತದೆ. ಅಕಾಡೆಮಿಯ ಪುರಸ್ಕಾರ ಅಲ್ಲದೆ ನಾಡಿನ ಹಲವಾರು ಸಂಘ-ಸಂಸ್ಥೆಗಳಿಂದ ಇವರು ಗೌರವಿಸಲ್ಪಟ್ಟಿರುತ್ತಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಪರಿಚಯ ಲೇಖನ | ಗಗನ್ ರಾಮ್ – ಪ್ರತಿಭಾವಂತ ರಂಗ ವಿದ್ಯಾರ್ಥಿ
    Next Article ವಿಶೇಷ ಲೇಖನ | ರಂಗಭೂಮಿಯ ಜಂಗಮ ಬಿ.ವಿ. ಕಾರಂತ
    roovari

    Add Comment Cancel Reply


    Related Posts

    ಪುರಭವನದಲ್ಲಿ ಕಮಲಾಂಜಲಿ 2025 ಕೀರ್ತಿ ಶೇಷ ಕಮಲ ಭಟ್ ಸಂಸ್ಕರಣೆ – ಅಭಿನಂದನಾ ಕಾರ್ಯಕ್ರಮ.

    August 18, 2025

    ಭರತಾಂಜಲಿಯ ತ್ರಿಂಶತ್ ಪ್ರಯುಕ್ತ ‘ನೃತ್ಯ ರತ್ನ ಶೋಧ’ ಭರತನಾಟ್ಯ ಸ್ಪರ್ಧೆ | ಕೊನೆಯ ದಿನಾಂಕ ಆಗಸ್ಟ್ 31

    August 18, 2025

    ಸಂಸ್ಕಾರ ಭಾರತೀ ವತಿಯಿಂದ ‘ನಟರಾಜ ಪೂಜನ್’ | ಆಗಸ್ಟ್ 19

    August 18, 2025

    ಶ್ರೀ ಎಡನೀರು ಮಠದಲ್ಲಿ ‘ನೃತ್ಯ ರೂಪಕ’ ಮತ್ತು ‘ನೃತ್ಯಾರ್ಪಣಂ’ ಶಾಸ್ತ್ರೀಯ ನೃತ್ಯ ಪ್ರದರ್ಶನ | ಆಗಸ್ಟ್ 16

    August 14, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.