Subscribe to Updates

    Get the latest creative news from FooBar about art, design and business.

    What's Hot

    ಸಾಹಿತಿ ಸವಿತಾ ನಾಗಭೂಷಣ ಇವರ ಕೃತಿ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ

    May 24, 2025

    ಕೊಡಗು ಕಲಾವಿದರ ಸಂಘದಿಂದ ಹಿರಿಯ ಕಲಾವಿದ ಚೆಕ್ಕೆರ ತ್ಯಾಗರಾಜರಿಗೆ ಸನ್ಮಾನ

    May 24, 2025

    ಮಂಗಳೂರು ವಿಶ್ವವಿದ್ಯಾನಿಲಯದ ‘ಯಕ್ಷಮಂಗಳ ಪ್ರಶಸ್ತಿ’ ಪ್ರಕಟ

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ಯಕ್ಷನಿಧಿ (ರಿ) ಸಂಸ್ಥೆಯ ‘ದಶಮಾನೋತ್ಸವ ಸಂಭ್ರಮ’
    Yakshagana

    ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ಯಕ್ಷನಿಧಿ (ರಿ) ಸಂಸ್ಥೆಯ ‘ದಶಮಾನೋತ್ಸವ ಸಂಭ್ರಮ’

    October 18, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಪೇಜಾವರ ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ಯಕ್ಷನಿಧಿ (ರಿ) ಸಂಸ್ಥೆಯ ‘ದಶಮಾನೋತ್ಸವ ಸಂಭ್ರಮ’ವು ದಿನಾಂಕ 14-10-2023ರಂದು ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡಬಿದ್ರೆ ಶಾಸಕ ಶೀ ಉಮಾನಾಥ ಕೋಟ್ಯಾನ್ ಇವರು ಮಾತನಾಡುತ್ತಾ “ಯುಕ್ಷರಂಗವು ಇಂದು ಸಮೃದ್ಧವಾಗಿ ಬೆಳೆದು ನಿಲ್ಲಲು ಹವ್ಯಾಸಿ ರಂಗಭೂಮಿಯೂ ಕಾರಣ. ಎಷ್ಟೋ ಹವ್ಯಾಸಿ ಕಲಾವಿದರು ಪ್ರಬುದ್ಧತೆ ಮೆರೆದು ಯಕ್ಷರಂಗ ಭೂಮಿಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ರವಿ ಅಲೆವೂರಾಯರಂತಹಾ ಯಕ್ಷಗುರುಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನೇಕ ಕಡೆಗಳಲ್ಲಿ ಯಕ್ಷ ತರಗತಿಗಳನ್ನು ನಡೆಸುತ್ತಾ ಮುಂದಿನ ಯಕ್ಷ ಪೀಳಿಗೆಗಳನ್ನು ಈ ರಂಗಕ್ಕೆ ಕೊಡುಗೆಯಾಗಿ ನೀಡಿ ಯಕ್ಷಮಾತೆಯ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಇಂದು ಶ್ರೀ ಸೋಮನಾಥೇಶ್ವರ ಯಕ್ಷ ನಿಧಿ ಸಂಸ್ಥೆ ಅವರಿಗೆ ಗೌರವ ಸನ್ಮಾನವನ್ನು ನೀಡಿದೆ. ಅವರಿಂದ ಇನ್ನೂ ಸ್ಫೂರ್ತಿಯುತವಾಗಿ ಯಕ್ಷ ಸೇವೆ ಜರಗಲಿ” ಎ೦ದು ಹೇಳಿದರು.

    ಸನ್ಮಾನಕ್ಕೆ ಉತ್ತರಿಸುತ್ತಾ ಯಕ್ಷಗುರು ಶ್ರೀ ರವಿ ಅಲೆವೂರಾಯರು “ತನ್ನ ಹತ್ತು ವರ್ಷಗಳ ಸಾರ್ಥಕ ಸೇವೆ ಇಂದು ಫಲ ಕೊಟ್ಟಿದೆ. ಒಂದು ಸಂಸ್ಥೆ ತನ್ನ ದಶಮಾನೋತ್ಸವವನ್ನು ಆಚರಿಸುತ್ತಿದೆ ಎಂದರೆ ಅದರ ಹಿಂದೆ ಅನೇಕರ ಪರಿಶ್ರಮವಿದೆ. ಹತ್ತು ಕೈಗಳು ಸೇರಿ ಒಂದು ಉದ್ದೇಶಕ್ಕಾಗಿ ಅರ್ಹಿನಿಶಿ ದುಡಿದ ಪರಿಣಾಮವೇ ಇಂದಿನ ಯಶಸ್ಸಿಗೆ ಕಾರಣವಾಗಿದೆ. ಹಾಗಾಗಿ, ನನ್ನನ್ನು ಸನ್ಮಾನಿಸಿದ್ದಕ್ಕಾಗಿ ಯುಕ್ಷನಿಧಿ ಸಂಸ್ಥೆಗೆ ನಾನು ಆಭಾರಿ ಸಂಸ್ಥೆ ಬೆಳೆಯಲಿ, ಸಂಘಟನೆ ಉಳಿಯಲಿ” ಎಂದರು.

    ಕೆಂಜಾರು ಕಾನದ ಶ್ರೀಕೃಷ್ಣಪ್ಪ, ಅರ್ಥದಾರಿ ಶ್ರೀಮಹಾಬಲ ಶೆಟ್ಟಿ, ಶ್ರೀ ನಾರಾಯಣ ಕೋಟ್ಯಾನ್, ರಾಜೇಶ್ ಅಮೀನ್, ದಿನೇಶ್ ಶೆಟ್ಟಿ, ಸಂಸ್ಥೆಯ ಅಧ್ಯಕ್ಷರಾದ ಸುಂದರ ಕೋಟ್ಯಾನ್, ಭಾಸ್ಕರಣ್ಣ, ಕರುಣಾಕರ್, ಶಂಕರ್ ಸಾಲ್ಯಾನ್, ಪ್ರವೀಣ್ ಉಪಸ್ಥಿತರಿದ್ದರು. ಪ್ರಜ್ವಲಿತಾ ವರದಿ ವಾಚಿಸಿ ಹತ್ತು ವರ್ಷ ಸಂಸ್ಥೆ ಹಾದು ಬಂದ ದಾರಿಯನ್ನು ವಿವರಿಸಿದರು. ಕಟೀಲು ಶೇಖರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಸ್ಥೆಯ ಕಲಾವಿದರಿಂದ ‘ಸಂಪೂರ್ಣದೇವಿ ಮಹಾತ್ಮೆ’ ಎಂಬ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.

    Share. Facebook Twitter Pinterest LinkedIn Tumblr WhatsApp Email
    Previous Articleತುಮಕೂರಿನಲ್ಲಿ ‘ಸುಧನ್ವ ಕಾಳಗ’ | ಅಕ್ಟೋಬರ್ 28ಕ್ಕೆ
    Next Article ಜನಪದರು ರಂಗಮಂದಿರದಲ್ಲಿ ‘ಜನಪದರು ಸಾಂಸ್ಕೃತಿಕ ವೇದಿಕೆ’ಯ ಅಮೃತ ಮಹೋತ್ಸವ
    roovari

    Add Comment Cancel Reply


    Related Posts

    ಮಂಗಳೂರು ವಿಶ್ವವಿದ್ಯಾನಿಲಯದ ‘ಯಕ್ಷಮಂಗಳ ಪ್ರಶಸ್ತಿ’ ಪ್ರಕಟ

    May 24, 2025

    ಕರ್ನಾಟಕ ಯಕ್ಷ ಭಾರತಿಯಿಂದ ಸೂರ್ಯನಾರಾಯಣ ಭಟ್ ಸನ್ಮಾನ

    May 23, 2025

    ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್ ಇವರಿಗೆ ಗೃಹ ಸನ್ಮಾನ, ಯಕ್ಷ ಸಹಾಯನಿಧಿ ಮತ್ತು ಪ್ರಶಸ್ತಿ ಪ್ರದಾನ

    May 22, 2025

    ಹರಿಹರಪುರದಲ್ಲಿ ‘ಭಾಗವತರ ಸಂಸ್ಮರಣೆ ಗಾನಾರಾಧನೆ’ | ಮೇ 25

    May 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.