Subscribe to Updates

    Get the latest creative news from FooBar about art, design and business.

    What's Hot

    ಆನ್ಲೈನ್ ರಾಜ್ಯಮಟ್ಟದ ಹಿಂದೂಸ್ತಾನಿ ಸಂಗೀತ ಸ್ಪರ್ಧೆ | 03 ಆಗಸ್ಟ್

    July 4, 2025

    ಕೊಪ್ಪಳದಲ್ಲಿ ‘ವಚನ ಸಂರಕ್ಷಣಾ ದಿನಾಚರಣೆ’

    July 4, 2025

    ಕೋಲ್ಕತಾದಲ್ಲಿ ‘ಸಮ’ ಸಂಗೀತ ಕಛೇರಿ | ಜುಲೈ 06

    July 4, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೂಡುಬಿದಿರೆಯ ತುಳುಕೂಟದ ಕಛೇರಿಯಲ್ಲಿ ತಿಂಗಳ ಸಭೆ ಹಾಗೂ ಸರಣಿ ಉಪನ್ಯಾಸ ಮಾಲಿಕೆ
    Literature

    ಮೂಡುಬಿದಿರೆಯ ತುಳುಕೂಟದ ಕಛೇರಿಯಲ್ಲಿ ತಿಂಗಳ ಸಭೆ ಹಾಗೂ ಸರಣಿ ಉಪನ್ಯಾಸ ಮಾಲಿಕೆ

    October 21, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ: ಮೂಡುಬಿದಿರೆಯ ಕನ್ನಡ ಭವನದ ತುಳುಕೂಟದ ಕಛೇರಿಯಲ್ಲಿ ತಿಂಗಳ ಸಭೆ ಹಾಗೂ ಸರಣಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ದಿನಾಂಕ 07-10-2023ರಂದು ನಡೆಯಿತು.
    ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ಸಂಘಟಕರೂ ಆಗಿರುವ ಎಂ. ದೇವಾನಂದ ಭಟ್ “ ತುಳುನಾಡಿನ ಯಕ್ಷಗಾನ” ಕುರಿತು ಮಾತನಾಡುತ್ತಾ ರಂಗ ಪ್ರವೇಶಕ್ಕೆ ಮುನ್ನ ಯಕ್ಷಗಾನ ಕಲೆಯಲ್ಲಿರುವ ವಿವಿಧ ಹಂತಗಳನ್ನು ಅವರು ಸಮಗ್ರವಾಗಿ ವಿವರಿಸಿದರು. ಕಲಾವಿದನಿಗೆ ನಾಟ್ಯ, ಮಾತುಗಾರಿಕೆ ಮತ್ತು ಪುರಾಣ ಜ್ಞಾನದ ಜೊತೆ ಬಣ್ಣಗಾರಿಕೆಯ ಬಗ್ಗೆಯೂ ಸಂಪೂರ್ಣ ತಿಳುವಳಿಕೆ ಇರಬೇಕಾಗುತ್ತದೆ. “ಯಕ್ಷಗಾನವು ಸಮೃದ್ಧ ಹಾಗೂ ಪರಿಪೂರ್ಣವಾದ ಕಲೆಯಾಗಿದ್ದು ತುಳು ಭಾಷೆಗೂ ಯಕ್ಷಗಾನದ ಕೊಡುಗೆ ಗಣನೀಯವಾಗಿದೆ.”ಎನ್ನುತ್ತಾ ಬೇರೆ ಬೇರೆ ಪಾತ್ರಗಳಿಗೆ ಬಳಸುವ ಬಣ್ಣಗಾರಿಕೆ ಮತ್ತು ವಸ್ತ್ರ ವಿನ್ಯಾಸದ ಬಗ್ಗೆ ವಿವರಣೆ ನೀಡಿದರು. ವಿಶೇಷವಾಗಿ ಬಣ್ಣಗಾರಿಕೆ ಮತ್ತು ವೇಷ ಭೂಷಣಗಳ ಬಗ್ಗೆ ವಿವರಿಸಿದರು.
    ಕೆಲವು ಪ್ರಸಂಗಗಳ ಆಯ್ದ ತುಳು, ಕನ್ನಡ ಪದ್ಯಗಳನ್ನು ಭಾಗವತರಾದ ಶಿವಪ್ರಸಾದ್ ಭಟ್ ಅವರು ಪ್ರಸ್ತುತಪಡಿಸಿದರು. ಇವರಿಗೆ ತಬಲಾದಲ್ಲಿ ದೇವಾನಂದ ಭಟ್ ಸಹಕರಿಸಿದರು. ಸಂವಾದ ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕರಾದ ಗುರು ಎಂ.ಪಿ.ಯವರು ಯಕ್ಷಗಾನ ಧಾಟಿಯ ಆಶು ಕವಿತೆಯನ್ನು ಪ್ರಸ್ತುತ ಪಡಿಸಿದರು.
    ತುಳುಕೂಟದ ಅಧ್ಯಕ್ಷರಾದ ಧನಕೀರ್ತಿ ಬಲಿಪ, ಕಾರ್ಯಾಧ್ಯಕ್ಷರಾದ ಚಂದ್ರಹಾಸ ದೇವಾಡಿಗ ಪ್ರಧಾನ ಕಾರ್ಯದರ್ಶಿ ಕೆ.ವೇಣುಗೋಪಾಲ ಶೆಟ್ಟಿ, ಕೋಶಾಧಿಕಾರಿ ಸುಭಾಶ್ಚಂದ್ರ ಚೌಟ ಮುಂತಾದವರು ಉಪಸ್ಥಿತರಿದ್ದರು. ಹೆರಾಲ್ಡ್ ತಾವ್ರೋ ಪ್ರಾರ್ಥಿಸಿ, ಸದಾನಂದ ನಾರಾವಿ ಸ್ವಾಗತಿಸಿ ನಿರೂಪಿಸಿದರು. ವೇಣುಗೋಪಾಲ ಶೆಟ್ಟಿ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನಲ್ಲಿ ಕಾರಂತರ ಜನ್ಮದಿನೋತ್ಸವ ಮತ್ತು ‘ಕಾರಂತ ಬಾಲವನ ಪ್ರಶಸ್ತಿ’ ಪ್ರದಾನ ಸಮಾರಂಭ
    Next Article ಬೆಂಗಳೂರಿನ ‘ಕಲಾವಿಲಾಸಿ’ ಆಯೋಜಿಸುವ ರಂಗ ನಟನಾ ಕಾರ್ಯಗಾರ | ನವಂಬರ್ 5ರಿಂದ
    roovari

    Add Comment Cancel Reply


    Related Posts

    ಕೊಪ್ಪಳದಲ್ಲಿ ‘ವಚನ ಸಂರಕ್ಷಣಾ ದಿನಾಚರಣೆ’

    July 4, 2025

    ಕೊ. ಅ. ಉಡುಪ ಪ್ರಶಸ್ತಿಗೆ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲ ಆಯ್ಕೆ

    July 4, 2025

    ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಕಮ್ಮಟ ಮತ್ತು ಪ್ರಶಸ್ತಿ ಪ್ರದಾನ | ಜುಲೈ 06

    July 4, 2025

    ಪುಸ್ತಕ ವಿಮರ್ಶೆ | ವಿಭಿನ್ನ ದೃಷ್ಟಿಯ ಪ್ರವಾಸಕಥನ ಶಿವಾನಂದ ಕರ್ಕಿಯವರ ‘ಗಿರಗಿಟ್ಲೆ’

    July 4, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.