Subscribe to Updates

    Get the latest creative news from FooBar about art, design and business.

    What's Hot

    ಕಟೀಲಿನಲ್ಲಿ ಐನ್‌ಕೈ ಅಜ್ಜಿಕತೆ ಕೃತಿ ಲೋಕಾರ್ಪಣೆ | ಸೆಪ್ಟೆಂಬರ್ 20

    September 18, 2025

    ದಸರಾ ಬಹುಭಾಷಾ ಕವಿಗೋಷ್ಠಿ | ಸೆಪ್ಟೆಂಬರ್ 20

    September 18, 2025

    ಬೇಳ ಸಂತ ಬರ್ತಲೋಮೆಯ ಹಿರಿಯ ಬುನಾದಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಅಭಿಯಾನ -6 | ಸೆಪ್ಟೆಂಬರ್ 20

    September 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುತ್ತೂರಿನ ವಿವೇಕಾನಂದ ಕನ್ನಡ ಶಾಲಾ ಸಭಾಂಗಣದಲ್ಲಿ ಸಂಪನ್ನಗೊಂಡ ‘ನೃತ್ಯ ಹರ್ಷ’
    Bharathanatya

    ಪುತ್ತೂರಿನ ವಿವೇಕಾನಂದ ಕನ್ನಡ ಶಾಲಾ ಸಭಾಂಗಣದಲ್ಲಿ ಸಂಪನ್ನಗೊಂಡ ‘ನೃತ್ಯ ಹರ್ಷ’

    November 22, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ನಾಟ್ಯರಂಗ ಪುತ್ತೂರು ಪ್ರಸ್ತುತ ಪಡಿಸಿದ ‘ನೃತ್ಯ ಹರ್ಷ’ ಕಾರ್ಯಕ್ರಮವು ವಿವೇಕಾನಂದ ಕನ್ನಡ ಶಾಲಾ ಸಭಾಂಗಣದಲ್ಲಿ ದಿನಾಂಕ 19-11-2023ರಂದು ಸಂಪನ್ನಗೊಂಡಿತು. ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್ ಅವರು ದೀಪ ಪ್ರಜ್ವಲಿಸಿ ಮಾತನಾಡಿ “ಕಲೆ ವ್ಯಕ್ತಿತ್ವವನ್ನು ಅರಳಿಸುತ್ತದೆ. ಬಾಲ್ಯದಿಂದಲೇ ಮಕ್ಕಳಿಗೆ ಹೆತ್ತವರಾದ ನಾವು ನೀಡುವ ಪ್ರೋತ್ಸಾಹ, ಪ್ರೇರಣೆ ಮಕ್ಕಳಲ್ಲಿ ಕಲಾಸಕ್ತಿಯನ್ನು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ನೃತ್ಯ, ರಂಗಕಲೆಯಲ್ಲಿ ಸ್ವ-ಸಾಮರ್ಥ್ಯ ಹಾಗೂ ನಿರಂತರ ಶ್ರಮಗಳಿಂದ ವಿಭಿನ್ನ ಆಲೋಚನೆ ಹಾಗೂ ಅನುಷ್ಠಾನಗಳಿಂದ ಗುರುತಿಸಿಕೊಂಡಿರುವ ನೃತ್ಯ ಗುರುಗಳಾದ ಮಂಜುಳಾ ಸುಬ್ರಹ್ಮಣ್ಯ ಇವರ ಸಾರಥ್ಯದಲ್ಲಿ ಮಕ್ಕಳ ಕಲಾ ಪ್ರಜ್ಞೆ ಅರಳಿ ಬೆಳಗಲಿ” ಎಂದು ಶುಭ ಹಾರೈಸಿದರು.

    ಅಭ್ಯಾಗತರಾಗಿ ಉಪಸ್ಥಿತರಿದ್ದ ಶಾಲಾ ಆಡಳಿತ ಸಮಿತಿಯ ಸದಸ್ಯರೂ, ದಂತ ವೈದ್ಯರೂ ಆದ ಡಾಕ್ಟರ್ ಆಶಾ ಇವರು “ಭಾರತೀಯ ಶ್ರೇಷ್ಠ ಕಲಾ ಪ್ರಕಾರವಾದ ಶಾಸ್ತ್ರೀಯ ನೃತ್ಯ ಅಭಿನಯಕ್ಕೆ ಇಂದು ಸಾಕ್ಷಿಯಾದ ವಿವೇಕಾನಂದ ಕನ್ನಡ ಶಾಲೆ ಸದಾ ಈ ಬಗೆಯ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಲೇ ಬಂದಿದೆ. ಇಂದಿಗ ಇಲ್ಲಿ ಪ್ರದರ್ಶನ ನೀಡುತ್ತಿರುವ ಎಲ್ಲಾ ಮಕ್ಕಳಿಗೂ, ನೃತ್ಯ ಗುರುಗಳಿಗೂ ಶುಭವಾಗಲಿ” ಎಂದರು.

    ನಾಟ್ಯರಂಗದ ನೃತ್ಯ ಗುರುಗಳಾದ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರ ನಿರ್ದೇಶನದಲ್ಲಿ ಮೂಡಿ ಬಂದ ‘ನೃತ್ಯ- ಹರ್ಷ’ದ ಹಾಡುಗಾರಿಕೆಯಲ್ಲಿ ಪವಿತ್ರ ವಿನಯ, ಮೃದಂಗದಲ್ಲಿ ಚಂದ್ರಶೇಖರ ಗುರುವಾಯನಕೆರೆ, ಕೊಳಲು ವಾದನದಲ್ಲಿ ಕೃಷ್ಣ ಗೋಪಾಲ ಪುಂಜಾಲಕಟ್ಟೆ ಸಹಕರಿಸಿದರು. ವಿಭಿನ್ನವಾದ ವೇದಿಕೆಯ ಬೆಳಕಿನ ನಿರ್ವಹಣೆಯಲ್ಲಿ ಸಹಕರಿಸಿದವರು ಪೃಥ್ವಿನ್ ಉಡುಪಿ ಇವರು. ಪ್ರಸಾಧನ ಸಹಕಾರ ಶಿವರಾಮ ಕಲ್ಮಡ್ಕ ಹಾಗೂ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಅಶ್ವತ್ ಸೌಂಡ್ಸ್ ಮತ್ತು ಲೈಟ್ಸ್ ಪುತ್ತೂರು. ನಾಟ್ಯರಂಗದ ಪೋಷಕರಾದ ಶ್ರೀಮತಿ ಕವಿತಾ ಅಡೂರು ಹಾಗೂ ಕುಮಾರಿ ರುದ್ದಿ ವಿಜಯಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.

    ಆಗಮಿಸಿದಂತಹ ಅಭ್ಯಾಗತರಿಗೆ, ಕಲಾ ಪೋಷಕ-ಪ್ರೇಕ್ಷಕರಿಗೆ, ಕಲಾ ಶಾಲೆಯ ಕಲಾವಿದರಿಗೆ ನೃತ್ಯ ಗುರುಗಳಾದ ಮಂಜುಳಾ ಸುಬ್ರಹ್ಮಣ್ಯ ಧನ್ಯವಾದ ಸಮರ್ಪಿಸಿದರು. ನೃತ್ಯ ಹರ್ಷದಲ್ಲಿ ಪ್ರದರ್ಶನ ನೀಡಿದವರು ಸೀನಿಯರ್ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಅವನಿ ಬೆಳ್ಳಾರೆ ಹಾಗೂ ಜೂನಿಯರ್ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಕೀರ್ತನ ವರ್ಮ, ಶರ್ವಿನ ಶೆಟ್ಟಿ, ಮೇಧಾ ಭಟ್, ಪ್ರಜ್ಞ ಇವರು ನೃತ್ಯ ಪ್ರಸ್ತುತಿಯ ರೂವಾರಿಗಳಾಗಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಕ.ಸಾ.ಪ. ಪುತ್ತೂರು – ಬಜತ್ತೂರಿನಲ್ಲಿ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮ 10 | ನವೆಂಬರ್ 25
    Next Article ಸ್ವರ ಚಿನ್ನಾರಿ ಪ್ರಸ್ತುತ ಪಡಿಸುವ ‘ಕನಕ ಸ್ಮರಣೆ’ | ನವೆಂಬರ್ 28
    roovari

    Add Comment Cancel Reply


    Related Posts

    ‘ಕಲಾಭವ’ ಸರಣಿಯ ಉದ್ಘಾಟನೆಯಲ್ಲಿ ರಂಜಿಸಿದ ಕಲಾದೀಪ ದಂಪತಿಯರ ಭರತನಾಟ್ಯ

    September 18, 2025

    ಮಂಚಿ ಲಯನ್ಸ್ ಕ್ಲಬ್ ನಲ್ಲಿ ನೃತ್ಯಸರಣಿ ಮಾಲಿಕೆ ‘ಕಲಾಧಾರಾ’

    September 16, 2025

    ಕಲಾಸೂರ್ಯ ನೃತ್ಯಾಲಯ ಪ್ರಸ್ತುತ ಪಡಿಸುವ ‘ಕಲಾಭವ -02’ | ಸೆಪ್ಟೆಂಬರ್ 13

    September 12, 2025

    ನೃತ್ಯ ವಿಮರ್ಶೆ | ಸಾತ್ವಿಕಾಭಿನಯದ ಸೊಗಡು ಸೌಮ್ಯಶ್ರೀ ನೃತ್ಯದ ಸೊಬಗು

    September 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.