Subscribe to Updates

    Get the latest creative news from FooBar about art, design and business.

    What's Hot

    ಸುಸಂಪನ್ನಗೊಂಡ ವೀಣಾವಾದಿನಿಯ ವಾರ್ಷಿಕೋತ್ಸವ ‘ವೇದ ನಾದ ಯೋಗ ತರಂಗಿಣಿ’

    January 1, 2026

    ಕವನ | ಅಮ್ಮ ನೆನಪಾಗುತ್ತಾಳೆ

    January 1, 2026

    ಬೆಂಗಳೂರಿನ ವೆಂಕಟಗಿರಿ ಸಭಾಂಗಣದಲ್ಲಿ ‘ಪಂಚಮ ಪದ’ ನಾಟಕ ಪ್ರದರ್ಶನ | ಜನವರಿ 02 

    January 1, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಾಗರದ ಭೂಮಿ ರಂಗಮನೆಯಲ್ಲಿ ‘ಪಯಣ’ ರಂಗ ತರಬೇತಿ ಶಿಬಿರ
    Drama

    ಸಾಗರದ ಭೂಮಿ ರಂಗಮನೆಯಲ್ಲಿ ‘ಪಯಣ’ ರಂಗ ತರಬೇತಿ ಶಿಬಿರ

    November 22, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸಾಗರ: ಸಾಗರದ ಎನ್.ಎಸ್ ಬಡಾವಣೆಯ ಭೂಮಿ ರಂಗಮನೆಯಲ್ಲಿ ‘ಸ್ಪಂದನ’ ರಂಗ ತಂಡ ರಂಗಕರ್ಮಿ ಎಸ್. ಮಾಲತಿ ಇವರ ಸ್ಮರಣಾರ್ಥ ಆಯೋಜಿಸಿರುವ ‘ಪಯಣ’ ರಂಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 18-11-2023ರಂದು ನಡೆಯಿತು.
    ಶಿಬಿರವನ್ನು ಉದ್ಘಾಟಿಸಿದ ಪ್ರಸಾದನ ಕಲಾವಿದ ಪುರುಷೋತ್ತಮ ತಲವಾಟಿ ಮಾತನಾಡಿ “ರಂಗಭೂಮಿ, ಸಿನಿಮಾ, ಧಾರವಾಹಿ ಹಾಗೂ ಸಾಹಿತ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಎಸ್. ಮಾಲತಿ ಅವರು ಮಹಿಳೆಯರು ಸಂಸ್ಕೃತಿಕವಾಗಿ ಕ್ರಿಯಾಶೀಲರಾಗಿರಬೇಕು ಎಂದು ಬಯಸಿದ್ದರು. ಇಂತಹ ಶಿಬಿರಗಳ ಮೂಲಕ ಅವರ ಆಶಯ ಈಡೇರಲಿದೆ.” ಎಂದರು.

    ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಂಗ ನಿರ್ದೇಶಕ ಬಿ.ಆರ್.ವಿಜಯವಾಮನ್ ಶಿವಿರವನ್ನು ಉದ್ದೇಶಿಸಿ “ರಂಗ ಭೂಮಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೆ ಈ ಮಾಧ್ಯಮದಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂಬ ನಂಬಿಕೆ ಇರಬೇಕಾದದ್ದು ಮುಖ್ಯವಾದ ಸಂಗತಿಯಾಗಿದೆ. ರಂಗಭೂಮಿ ಎಂಬುದು ಕೇವಲ ಮನೋರಂಜನೆಗೆ ಸೀಮಿತವಾದ ಮಾಧ್ಯಮವಲ್ಲ, ರಂಜನೆಯ ಜೊತೆಗೆ ಸಾಮಾಜಿಕ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ವ್ಯಕ್ತಿತ್ವ ವಿಕಸನದ ಮೂಲಕ ಸಮುದಾಯದ ಬೆಳವಣಿಗೆಯನ್ನು ಬಯಸುವುದು ಈ ಮಾಧ್ಯಮದ ಉದ್ದೇಶವಾಗಿದೆ. ಹೆಣ್ಣು ಮಕ್ಕಳು ರಂಗಭೂಮಿ ಪ್ರವೇಶಿಸಲು ಹಿಂಜರಿಯುತ್ತಿದ್ದ ಕಾಲದಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ರಂಗಭೂಮಿಯಲ್ಲಿ ಪದವಿ ಪಡೆದ ಹೆಗ್ಗಳಿಕೆ ಎಸ್.ಮಾಲತಿ ಅವರದ್ದು. 70ರ ದಶಕದಲ್ಲಿ ಕರ್ನಾಟಕದಲ್ಲಿ ರಂಗಭೂಮಿ ಮೂಲಕ ನಡೆದ ಚಳವಳಿಯನ್ನು ಹುಟ್ಟು ಹಾಕಿದವರಲ್ಲಿ ಮಾಲತಿ ಕೂಡ ಪ್ರಮುಖರಾಗಿದ್ದಾರೆ.” ಎಂದು ಎಸ್.ಮಾಲತಿ ಅವರನ್ನು ನೆನಪಿಸಿಕೊಂಡು ಮಾತನಾಡಿದರು. ಸ್ಪಂದನ ರಂಗ ತಂಡದ ಎಂ. ವಿ. ಪ್ರತಿಭಾ, ಶಿವಕುಮಾರ್ ಉಳವಿ, ಉದಯ್ ಸೊರಬ ಹಾಗೂ ಪವನ್ ಉಪಸ್ಥಿತರಿದ್ದರು.
    ಈ ಶಿಬಿರವು ದಿನಾಂಕ 18-11-2023 ರಿಂದ 02-12-2023ರ ವರೆಗೆ ನಡೆಯಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleನಾ ಧಿನ್ ಧಿನ್ ನಾ ಹಿಂದೂಸ್ಥಾನೀ ತಬಲಾ ವಿದ್ಯಾಲಯದ ವಾರ್ಷಿಕೋತ್ಸವ ‘ಲಯವತ್ಸರ -2’ | ಡಿಸೆಂಬರ್ 3
    Next Article ಲಕ್ಷ್ಮೇಶ್ವರದಲ್ಲಿ ನೂತನ ಭರತನಾಟ್ಯ ಶಾಖೆಯ ಉದ್ಘಾಟನಾ ಸಮಾರಂಭ
    roovari

    Add Comment Cancel Reply


    Related Posts

    ಬೆಂಗಳೂರಿನ ವೆಂಕಟಗಿರಿ ಸಭಾಂಗಣದಲ್ಲಿ ‘ಪಂಚಮ ಪದ’ ನಾಟಕ ಪ್ರದರ್ಶನ | ಜನವರಿ 02 

    January 1, 2026

    ಟಿ.ಎನ್. ಸೀತಾರಾಂ ಇವರಿಗೆ ‘ಪಂಚಮಿ ಪುರಸ್ಕಾರ 2026’

    December 29, 2025

    ಚೊಕ್ಕಾಡಿ ವಿದ್ಯಾಸಂಸ್ಥೆಯಲ್ಲಿ ಸುಳ್ಯ ತಾಲೂಕು 28ನೇ ‘ಕನ್ನಡ ಸಾಹಿತ್ಯ ಸಮ್ಮೇಳನ’ | ಡಿಸೆಂಬರ್ 30

    December 29, 2025

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಾಭಾರತ ನಾಟಕಗಳ ಆಧಾರಿತ ರಂಗರೂಪ | ಡಿಸೆಂಬರ್ 29

    December 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.