Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಚಿಂತನಶೀಲ, ಸ್ತ್ರೀವಾದಿ ಸಾಹಿತಿ ಡಾ. ಎಸ್. ವಿ. ಪ್ರಭಾವತಿ

    July 25, 2025

    ‘ಅಂತರಂಗ ಬಹಿರಂಗ’ ದಿಂದ ಒಂದೇದಿನ 2 ನಾಟಕಗಳ ಪ್ರದರ್ಶನ | ಜುಲೈ 27

    July 25, 2025

    ‘ಕನ್ನಡ ನುಡಿ ರತ್ನ’ ರಾಜ್ಯ ಮಟ್ಟದ ಕವನ ಸಂಕಲನಕ್ಕೆ ಕವನಗಳ ಆಹ್ವಾನ

    July 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಅಭಿರಾಮ ಧಾಮ’ ನವನವೀನ ಸಂಕೀರ್ತನ ಮಂದಿರದ ಲೋಕಾರ್ಪಣೆ
    Cultural

    ‘ಅಭಿರಾಮ ಧಾಮ’ ನವನವೀನ ಸಂಕೀರ್ತನ ಮಂದಿರದ ಲೋಕಾರ್ಪಣೆ

    January 23, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಭಾರತೀಯ ಸನಾತನ ದಿವ್ಯಾತಿದಿವ್ಯ ಕ್ಷೇತ್ರವಾದ ಉಡುಪಿಯಲ್ಲಿ ದಿನಾಂಕ 15-01-2024ರಂದು ನವ ನೂತನ ಸಂಕೀರ್ತನ ಮಂದಿರ ‘ಅಭಿರಾಮ ಧಾಮ’ ಲೋಕಾರ್ಪಣೆಗೊಂಡಿದೆ. ಬೆಂಗಳೂರಿನ ಹಿರಿಯ ಪತ್ರಕರ್ತರೂ, ಸಾಂಸ್ಕ್ರತಿಕ ಚಿಂತಕರೂ ಆದ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ ಉರುಫ್ ವೆಂಕಟ ವಿಠ್ಠಲ ಸುಗುಣದಾಸರು ತಮ್ಮ ಸುಪುತ್ರ ಸ್ವರಸಾಮ್ರಾಟ್ – ವಿದ್ವಾನ್ ಅಭಿರಾಮ್ ಭರತವಂಶಿಯವರ ಸಂಗೀತ ಸಾಧನೆಯನ್ನು ಅಮರಗೊಳಿಸುವಲ್ಲಿ ಇದು ಮಹತ್ತರ ಹೆಜ್ಜೆ ಎಂದು ‘ಅಭಿರಾಮಧಾಮ’ವನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿದ ಕಾಣಿಯೂರು ಮಠದ ಸ್ವಾಮೀಜಿ ಶ್ರೀ ಶ್ರೀ ಶ್ರೀ ವಿದ್ಯಾ ವಲ್ಲಭ ತೀರ್ಥರು ಅಶೀರ್ವದಿಸಿದರು.

    ಸುಮಾರು ಇನ್ನೂರು -ಮುನ್ನೂರು ಮಂದಿ ಭಗವದ್ಭಕ್ತರು, ಭಜನಾಕಾರರು ಈ ಸುಸಂಧರ್ಭದಲ್ಲಿ ಪಾರಾಯಣ, ಭಜನೆಗಳಲ್ಲಿ ‘ಅಭಿರಾಮಧಾಮ’ದಲ್ಲಿ ತೊಡಗಿಕೊಂಡರು. ಸಮಾಜದ ಎಲ್ಲಾ ವರ್ಗದ 8-18 ವರ್ಷದ ಮಕ್ಕಳಿಗೆ ಸಂಗೀತ, ನೃತ್ಯ, ಗಮಕ, ಭಜನೆ, ಯೋಗ, ಧ್ಯಾನ, ಗೀತಾಭಿಯಾನ ಸುಜ್ಞಾನ ದೊರಕಿಸಿ ಕೊಡುವುದೇ ಅಭಿರಾಮ ಧಾಮದ ಧ್ಯೇಯೋದ್ದೇಶ ಎಂದು ಸಂಸ್ಥಾಪಕ – ಕಾರ್ಯದರ್ಶಿ ವಿದುಷಿ ಸುಶ್ಮಾ ಸುದರ್ಶನ್ ವಿವರಿಸಿದರು.

    ಸಂಜೆಗೆ ನೂರಾರು ಭಕ್ತರಿಂದ ಶ್ರೀಕೃಷ್ಣ ನಾಮ ಸಂಕೀರ್ತನೆ ನಡೆಸಲಾಯಿತು ಹಾಗೂ ಕಾರ್ತೀಕ ಮಾಸದ ಶ್ರೀ ದಾಮೋದರ ಆರತಿಯನ್ನೂ ಬೆಳಗಲಾಯಿತು. ಉಡುಪಿಯ ಚಿಣ್ಣರಿಗೆ, ಯುವ ಜನತೆಗೆ ಸನಾತನ ಸಂಸ್ಕೃತಿಯನ್ನಪ್ಪಿಕೊಳ್ಳಲು ಗುಂಡಿಬೈಲಿನಲ್ಲಿರುವ
    ಸ್ವರಸಾಮ್ರಾಟ್ ಅಭಿರಾಮ್ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಸಹಾಯಕಾರೀ ಸಂಘಟನೆಯನ್ನು ಮಾಡುತ್ತದೆ ಎಂದು ಅಭಿರಾಮ್ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಸುಗುಣದಾಸರು ರೂವಾರಿಗೆ ತಿಳಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಮತ್ತು ಯಕ್ಷಗಾನ ತಾಳಮದ್ದಳೆ ಸಪ್ತಾಹ | ಜನವರಿ 29ರಿಂದ ಫೆಬ್ರವರಿ 5ರವರೆಗೆ
    Next Article ನಾಟಕ ರಚನಾ ಸ್ಪರ್ಧೆ | ಕೊನೆಯ ದಿನಾಂಕ ಫೆಬ್ರವರಿ 27  
    roovari

    Add Comment Cancel Reply


    Related Posts

    ವಿಶೇಷ ಲೇಖನ – ಚಿಂತನಶೀಲ, ಸ್ತ್ರೀವಾದಿ ಸಾಹಿತಿ ಡಾ. ಎಸ್. ವಿ. ಪ್ರಭಾವತಿ

    July 25, 2025

    ನಂದಳಿಕೆಯಲ್ಲಿ ‘ತುಳು ಪರ್ಬ ಮತ್ತು ತುಳು ಕವಿ ಗೋಷ್ಠಿ’ |ಜುಲೈ 27

    July 25, 2025

    ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ‘ಸಾಂಸ್ಕೃತಿಕ ಸಂವಾದ’ | ಜುಲೈ 26

    July 25, 2025

    ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ‘ಪುಸ್ತಕ ಬಿಡುಗಡೆ ಸಮಾರಂಭ’ | ಜುಲೈ 27

    July 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.