Subscribe to Updates

    Get the latest creative news from FooBar about art, design and business.

    What's Hot

    Article | The End of an Era in the Malayalam Literary World

    June 7, 2025

    ಪ್ರೊ. ಕು.ಶಿ. ಹರಿದಾಸ ಭಟ್ ಶತಮಾನೋತ್ಸವ ಜಾನಪದ ಪ್ರಶಸ್ತಿ ಹಾಗೂ ಪ್ರೊ. ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಪ್ರಕಟ

    June 7, 2025

    ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 105ನೇ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ | ಜೂನ್ 10

    June 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧಾರವಾಡದಲ್ಲಿ ‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮೃತಿ ಪ್ರಶಸ್ತಿ’ ಪ್ರದಾನ
    Music

    ಧಾರವಾಡದಲ್ಲಿ ‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮೃತಿ ಪ್ರಶಸ್ತಿ’ ಪ್ರದಾನ

    February 1, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮಾರಕ ಪ್ರತಿಷ್ಠಾನ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ದಿನಾಂಕ 02-12-2023ರಂದು ‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮೃತಿ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು.

    ಈ ಸಮಾರಂಭದಲ್ಲಿ ಮನೋವೈದ್ಯ ಆನಂದ ಪಾಂಡುರಂಗಿ ಮಾತನಾಡಿ “ಮನೋವಿಜ್ಞಾನದಲ್ಲಿ ಚಿಕಿತ್ಸಾ ವಿಧಾನಗಳ ಜೊತೆಗೆ ಪೂರಕ ಚಿಕಿತ್ಸಾ ವಿಧಾನ ಸಂಗೀತ. ಆತಂಕ ಮೊದಲಾದ ಮನೋಸಮಸ್ಯೆಗಳನ್ನು ಸಂಗೀತ ಚಿಕಿತ್ಸೆಯಿಂದ ಗುಣಪಡಿಸಬಹುದು. ಮಕ್ಕಳಲ್ಲಿ ಏಕಾಗ್ರತೆ ಕೊರತೆ, ಮೊದಲಾದ ಸಮಸ್ಯೆಗಳು ಇದ್ದರೆ ಸಂಗೀತ, ಗಾಯನ ಅಭ್ಯಾಸದಲ್ಲಿ ತೊಡಗಿಸಿದರೆ ಅವುಗಳನ್ನು ಪರಿಹರಿಸಬಹುದು. ಸಂಗೀತವು ಶೈಕ್ಷಣಿಕ, ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿ. ಪೋಷಕರು ಮಕ್ಕಳಲ್ಲಿ ಸಂಗೀತದ ಹವ್ಯಾಸವನ್ನು ರೂಢಿಸಬೇಕು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅದು ಸಹಕಾರಿ. ಸಂಗೀತ ಆಲಾಪನೆ ಉಲ್ಲಾಸ, ನೆಮ್ಮದಿ ನೀಡುತ್ತದೆ” ಎಂದು ಹೇಳಿದರು.

    ವಯೋಲಿನ್ ವಾದಕರಾದ ಬಿ.ಎಸ್. ಮಠ ಮತ್ತು ಅಕ್ಕಮಹಾದೇವಿ ಹಿರೇಮಠ ದಂಪತಿಗೆ ‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮೃತಿ ಪ್ರಶಸ್ತಿ’ ಹಾಗೂ ತಬಲಾ ವಾದಕ ಓಂಕಾರ್ ಗುಲ್ವಾಡಿ ಅವರಿಗೆ ‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮೃತಿ ಸಹ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

    ‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮೃತಿ ಪ್ರಶಸ್ತಿ’ ಪಡೆದ ಪಿಟೀಲು ವಾದಕ ಬಿ.ಎಸ್. ಮಠ ಮಾತನಾಡಿ, “ಉಸ್ತಾದ್ ಬಾಲೇಖಾನ್ ಅವರು ನನಗೆ ಅಣ್ಣನಂತಿದ್ದರು. ಆಕಾಶವಾಣಿಯಲ್ಲಿ ಮಾರ್ಗದರ್ಶನ, ಪ್ರೋತ್ಸಾಹ ನೀಡಿದ್ದರು. ಅವರ ಆಶೀರ್ವಾದ ನನ್ನ ಮೇಲೆ ಇದೆ” ಎಂದರು.

    ‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮೃತಿ ಸಹ ಪ್ರಶಸ್ತಿ’ ತಬಲಾ ವಾದಕ ಓಂಕಾರ್ ಗುಲ್ವಾಡಿ ಮಾತನಾಡಿ, “ಸಾಥ್ ಸಂಗತ್‌ಗಾರರಾಗಿ ಪ್ರಶಸ್ತಿ ಪಡೆಯುವುದು ಸಾಧನೆಯ ವಿಚಾರ. ಸಾಥ್ ಸಂಗತ್ ವಿಷಯ ಬಹಳಷ್ಟು ಜನಸಮಾನ್ಯರಿಗೆ ತಿಳಿದಿಲ್ಲ, ಸಾಥ್ ಮಾಡುವುದು ಸುಲಭ ಎಂದು ಭಾವಿಸಿದ್ದಾರೆ. ಸಾಥ್ ಸಂಗತ್ ಮಾಡುವುದು ಸುಲಭ, ಸಾಥ್ ನಿಭಾಯಿಸುವುದು ಕಷ್ಟ” ಎಂದರು.

    ಕಾವೇರಿ ಕಲ್ಲಪ್ಪ ಬಾರ್ಕಿ ಅವರಿಗೆ ಸೌಭಾಗ್ಯ ಲಕ್ಷ್ಮೀ ವಸಂತ ರಾವ್ ಜಾಜೀ ವಿದ್ಯಾರ್ಥಿವೇತನ ಹಾಗೂ ಜ್ಯೋತಿ ತಿಗಡಿ ಅವರಿಗೆ ಸತೀಶ್ ಹಂಪಿಹೊಳಿ ಸಂಗೀತ ಪ್ರತಿಷ್ಠಾನದ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಿತಾರ್ ರತ್ನ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಆಯಿ ಅಧ್ಯಕ್ಷತೆ ವಹಿಸಿದ್ದ, ಈ ಕಾರ್ಯಕ್ರಮದಲ್ಲಿ ಫರೀದ್ ಹಸನ್ ಅವರು ಗಾಯನ ಪ್ರಸ್ತುತ ಪಡಿಸಿ, ಓಂಕಾರ್ ಗುಲ್ವಾಡಿ ಅವರು ತಬಲಾ ಹಾಗೂ ಸತೀಶ್ ಭಟ್ ಹೆಗ್ಗಾರ್ ಹಾರ್ಮೋನಿಯಂನಲ್ಲಿ ಸಹಕರಿಸಿದರು. ಬಾಲೇಖಾನ್ ಅವರ ಮೊಮ್ಮಗ ಹ್ಯಾರಿಸ್ ಖಾನ್ ಅವರ ಸಿತಾರ್ ವಾದನಕ್ಕೆ ಮಲ್ಲೇಶ್ ಹೂಗಾರ್ ಅವರು ತಬಲಾ ಸಾಥ್ ನೀಡಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ‘ಯಜ್ಞ ಸಂರಕ್ಷಣೆ’ ತಾಳಮದ್ದಳೆ
    Next Article ಕಾರ್ಕಳ ಜ್ಞಾನಸುಧಾ ಸಭಾಂಗಣದಲ್ಲಿ ‘ಕನ್ನಡ ಸಾಹಿತ್ಯ ಸಮ್ಮೇಳನ’
    roovari

    Add Comment Cancel Reply


    Related Posts

    ಬೆಂಗಳೂರಿನ ಬಸವನಗುಡಿಯಲ್ಲಿ ‘ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ’ | ಜೂನ್ 07

    June 6, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಗಾಯನ ಸಂಗೀತ ಕಾರ್ಯಾಗಾರ | ಜೂನ್ 14 ಮತ್ತು 15

    June 6, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ಕೃಷ್ಣಗೀತೆ’ | ಜೂನ್ 08

    June 6, 2025

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ‘ಹಲಸಿನ ಅರಿವಿನ ಹರಿವು’ ತಾಳಮದ್ದಲೆ | ಜೂನ್ 07

    June 5, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.