Subscribe to Updates

    Get the latest creative news from FooBar about art, design and business.

    What's Hot

    ಆತ್ತಾವರದಲ್ಲಿ 109ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ | ಜುಲೈ 18

    July 16, 2025

    ಸಾಗರದಲ್ಲಿ ‘ಗದಾಯುದ್ಧ’ ಯಕ್ಷಗಾನ ಪ್ರದರ್ಶನ | ಜುಲೈ 19

    July 16, 2025

    ರಂಗಭೂಮಿ ಕಲಾವಿದ ಮೌನೇಶ ಆಚಾರ್ಯ ನಿಧನ

    July 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸುರತ್ಕಲ್ಲಿನಲ್ಲಿ ವಿದ್ವಾನ್ ಸುರತ್ಕಲ್ ಸುಬ್ಬರಾವ್ ಯಕ್ಷವೇದಿಕೆಯ ಉದ್ಘಾಟನೆ ಮತ್ತು ಸಂಸ್ಮರಣೆ
    Yakshagana

    ಸುರತ್ಕಲ್ಲಿನಲ್ಲಿ ವಿದ್ವಾನ್ ಸುರತ್ಕಲ್ ಸುಬ್ಬರಾವ್ ಯಕ್ಷವೇದಿಕೆಯ ಉದ್ಘಾಟನೆ ಮತ್ತು ಸಂಸ್ಮರಣೆ

    February 1, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುರತ್ಕಲ್ : ಶ್ರೀ ವಿನಾಯಕ ಯಕ್ಷಗಾನ ಮಂಡಲಿ ತಡಂಬೈಲ್ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಸಹಯೋಗದೊಂದಿಗೆ ವಿದ್ವಾನ್ ಸುರತ್ಕಲ್ ಸುಬ್ಬರಾವ್ ಯಕ್ಷವೇದಿಕೆಯ ಉದ್ಘಾಟನೆ, ಸಂಸ್ಮರಣೆ ಮತ್ತು ಸಭಾ ಕಾರ್ಯಕ್ರಮವು ದಿನಾಂಕ 28-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ವೇದಮೂರ್ತಿ ಸೀತಾರಾಮ ಆಚಾರ್ಯ ಪಚ್ಚನಾಡಿ ಇವರು ದೀಪ ಬೆಳಗಿ ಉದ್ಘಾಟಿಸಿ ಶುಭ ಹಾರೈಸಿದರು.

    ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ, ಯಕ್ಷಗಾನ ಕಲಾವಿದ ಡಾ. ಎಂ. ಪ್ರಭಾಕರ ಜೋಷಿಯವರು ಮಾತನಾಡಿ “ಯಕ್ಷಗಾನ ಕಲಾವಿದ, ಸಂಘಟಕ, ಮಹಿಳಾ ಯಕ್ಷಗಾನ ತಾಳಮದ್ದಳೆಗಳ ಸಂಯೋಜಕ ವಾಸುದೇವ ರಾವ್ ಅವರು ಯಕ್ಷಗಾನ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬಂದಿರುವುದು ಅವರ ಕ್ರಿಯಾಶೀಲ ಗುಣ, ಆಸಕ್ತಿ, ಇತರರಿಗೆ ಮಾದರಿ” ಎಂದು ನುಡಿದರು. ಪ್ರಸಂಗಕರ್ತ, ಸಾಹಿತಿ ಶ್ರೀಧರ ಡಿ.ಎಸ್‌. ಅವರು “ವೇದಿಕೆಯು ನಿರಂತರವಾಗಿ ಹೊಸ ಹೊಸ ಯಕ್ಷಗಾನ ಕಲಾವಿದರ ಆವಿಷ್ಕಾರದ ಕೇಂದ್ರವಾಗಲಿ” ಎಂದರು.

    ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣ ಮೂರ್ತಿ, ಶ್ರೀಮತಿ ಸುಲೋಚನಾ ವಿ. ರಾವ್ ಉಪಸ್ಥಿತರಿದ್ದರು. ಬಳಿಕ ಕವಿ ಪಾರ್ತಿ ಸುಬ್ಬ ವಿರಚಿತ ‘ಭರತಾಗಮನ’ ಯಕ್ಷಗಾನ ತಾಳಮದ್ದಳೆ ಜರಗಿತು. ಕಲಾವಿದರಾದ ಪಿ. ವೆಂಕಟರಮಣ ಐತಾಳ, ಮಾ. ಸುಮುಖ ಕಲ್ಲೂರಾಯ, ಪಿ. ಗಣೇಶ ಐತಾಳ ಹಿಮ್ಮೇಳದಲ್ಲಿ ಮತ್ತು ಡಾ. ಎಂ. ಪ್ರಭಾಕರ ಜೋಷಿ, ಸರ್ಪಂಗಳ ಈಶ್ವರ ಭಟ್, ಶ್ರೀಧರ ಡಿ.ಎಸ್., ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಸದಸ್ಯರಾದ ಸುಮಿತ್ರಾ ಶಶಿಕಾಂತ ಕಲ್ಲೂರಾಯ ಮತ್ತು ಉಮಾ ದಿವಾಕರ್ ಮುಮ್ಮೇಳದಲ್ಲಿ ಪಾತ್ರವಹಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleತಲಪಾಡಿ ದೇವಿ ನಗರದಲ್ಲಿ ‘ದಮಯಂತಿ ಸ್ವಯಂವರ’ ಗಮಕ ವ್ಯಾಖ್ಯಾನ
    Next Article ಚಾಮರಾಜಪೇಟೆಯಲ್ಲಿ ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
    roovari

    Add Comment Cancel Reply


    Related Posts

    ಸಾಗರದಲ್ಲಿ ‘ಗದಾಯುದ್ಧ’ ಯಕ್ಷಗಾನ ಪ್ರದರ್ಶನ | ಜುಲೈ 19

    July 16, 2025

    ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಎಂ. ಗಂಗಾಧರ ರಾವ್ ಪುನರಾಯ್ಕೆ

    July 16, 2025

    ಶ್ರೀ ಆಂಜನೇಯ ತಾಳಮದ್ದಳೆ ಸಪ್ತಾಹದ ಆಮಂತ್ರಣ ಪತ್ರ ಬಿಡುಗಡೆ

    July 16, 2025

    ಬೆಂಗಳೂರಿನಲ್ಲಿ ಯಕ್ಷಗಾನ ಪ್ರಸಂಗಕರ್ತ ದಿನೇಶ್ ಉಪ್ಪೂರ ಇವರಿಗೆ ಸನ್ಮಾನ

    July 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications