Subscribe to Updates

    Get the latest creative news from FooBar about art, design and business.

    What's Hot

    ಮಡಿಕೇರಿಯಲ್ಲಿ ‘ಬೂಕರ್ ಪ್ರಶಸ್ತಿ’ ಪುರಸ್ಕೃತೆ ದೀಪಾ ಭಾಸ್ತಿಯವರಿಗೆ ಗೌರವ | ಜೂನ್ 09

    June 7, 2025

    ಡಾ. ಇಂದಿರಾ ಹೆಗ್ಗಡೆ ಇವರಿಗೆ ‘ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’

    June 7, 2025

    ಮೈಸೂರಿನಲ್ಲಿ ‘ರಾಜ್ಯಮಟ್ಟದ ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ -2025’ | ಜೂನ್ 08

    June 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪಿ.ವಿ. ಆನಂದ ಸಾಲಿಗ್ರಾಮರವರಿಗೆ ಹುಟ್ಟೂರ ಸನ್ಮಾನ
    Felicitation

    ಪಿ.ವಿ. ಆನಂದ ಸಾಲಿಗ್ರಾಮರವರಿಗೆ ಹುಟ್ಟೂರ ಸನ್ಮಾನ

    March 13, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೋಟ : ಸಾಲಿಗ್ರಾಮದ ಗೆಂಡೆಕೆರೆಯಲ್ಲಿ ಪಿ.ವಿ. ಆನಂದ ಸಾಲಿಗ್ರಾಮರವರಿಗೆ ಅವರ 50ನೇ ಯಕ್ಷಗಾನ ಪ್ರಸಂಗವಾದ ‘ಆವರ್ಸೆ ಶ್ರೀ ಶಂಕರ ನಾರಾಯಣ ಮಹಾತ್ಮೆ’ ಪ್ರಸಂಗದ 50ನೆಯ ಪ್ರಯೋಗದ ಸಂದರ್ಭದಲ್ಲಿ ಹುಟ್ಟೂರ ಸನ್ಮಾನವು ದಿನಾಂಕ 03-03-2024ರಂದು ನಡೆಯಿತು.

    ಈ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಮಾತನಾಡಿ “ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ ಪಿ.ವಿ. ಆನಂದ ಸಾಲಿಗ್ರಾಮ ಅವರು ಕವಿ, ಸಮೀಕ್ಷಕ, ನಿರೂಪಕ, ಯಕ್ಷಗಾನ ಪ್ರಸಂಗಕರ್ತ, ಕಲಾವಿದ, ರಾಜ್ಯ ಮಟ್ಟದಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಶಿಕ್ಷಕ, ಸಾಹಿತ್ಯ ಪರಿಷತ್ತಿನ ಸಂಘಟಕ, ನಾಟಕಕಾರ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಪ್ರಬುದ್ಧತೆಯನ್ನು ಗಳಿಸಿಕೊಂಡ ಅನನ್ಯ ಪ್ರತಿಭೆ. ಐವತ್ತಮೂರು ಯಕ್ಷಗಾನ ಪ್ರಸಂಗಗಳನ್ನು ಕಿರಿಯ ವಯಸ್ಸಿನಲ್ಲಿ ರಚಿಸಿದ ಸಾಧನೆ ಬೆರಗು ಮೂಡಿಸುವಂತದ್ದು, ಅವರ ಸಾಧನೆ ಸಾಲಿಗ್ರಾಮಕ್ಕೆ ದೊಡ್ಡ ಹೆಮ್ಮೆ” ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಲಿಗ್ರಾಮ ಪುರಸಭೆಯ ಮಾಜಿ ಉಪಾಧ್ಯಕ್ಷರಾದ ಶ್ರೀನಿವಾಸ ಐತಾಳ ವಹಿಸಿದ್ದರು. ಆವರ್ಸೆ ಶ್ರೀ ಶಂಕರ ನಾರಾಯಣ ದೇವಳದ ಮೊಕ್ತೇಸರ ಮತ್ತು ಕುಂದಾಪುರ ಬಂಟರ ಸಂಘದ ಅಧ್ಯಕ್ಷರಾದ ಆವರ್ಸೆ ಸುಧಾಕರ ಶೆಟ್ಟಿ ಸನ್ಮಾನ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ ಶೆಟ್ಟಿ, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಚಿತ್ತೂರು ಪ್ರಭಾಕರ ಶೆಟ್ಟಿ, ಸಾಲಿಗ್ರಾಮ ಪ.ಪಂ. ಮಾಜಿ ಅಧ್ಯಕ್ಷ ಸಾಧು, ಸ್ಥಳೀಯ ವೈದ್ಯರಾದ ಡಾ. ಗಣೇಶ್, ಸೂರಾಲು ಮೇಳ ಮ್ಯಾನೇಜರ್ ಸೂರಾಲು ರವಿ ಕುಮಾರ್, ಭಾಗವತರಾದ ತಿಮ್ಮಪ್ಪ ದೇವಾಡಿಗ ಉಪಸ್ಥಿತರಿದ್ದರು. ಗೆಂಡೆಕೆರೆ ಸೌಹಾರ್ದ ಬಳಗದ ಅಬ್ದುಲ್ ಬಶೀರ್ ಸ್ವಾಗತಿಸಿ, ಭಾಗವತ ಕೃಷ್ಣ ಪಿ.ಎಂ. ವಂದಿಸಿ, ಸಾಲಿಗ್ರಾಮ ಪ. ಪಂ. ಸದಸ್ಯ ಶ್ರೀನಿವಾಸ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಸೂರಾಲು ಮೇಳದ ಎಲ್ಲಾ ಕಲಾವಿದರನ್ನು ಆವರ್ಸೆ ದೇವಳದ ವತಿಯಿಂದ ಗೌರವಿಸಲಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಮಕ್ಕಳ ರಂಗ ಶಿಬಿರ ‘ಬಣ್ಣದ ಬೇಸಿಗೆ’ | ಏಪ್ರಿಲ್ 7ರಿಂದ ಮೇ 12ರವರೆಗೆ
    Next Article ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನದಿಂದ 2023ರ ಸಾಲಿನ ‘ಅತ್ಯುತ್ತಮ ಕಾದಂಬರಿ ಪ್ರಶಸ್ತಿ’ ಪ್ರದಾನ ಸಮಾರಂಭ | 14 ಮಾರ್ಚ್
    roovari

    Add Comment Cancel Reply


    Related Posts

    ಮಡಿಕೇರಿಯಲ್ಲಿ ‘ಬೂಕರ್ ಪ್ರಶಸ್ತಿ’ ಪುರಸ್ಕೃತೆ ದೀಪಾ ಭಾಸ್ತಿಯವರಿಗೆ ಗೌರವ | ಜೂನ್ 09

    June 7, 2025

    ಡಾ. ಇಂದಿರಾ ಹೆಗ್ಗಡೆ ಇವರಿಗೆ ‘ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’

    June 7, 2025

    ಮೈಸೂರಿನಲ್ಲಿ ‘ರಾಜ್ಯಮಟ್ಟದ ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ -2025’ | ಜೂನ್ 08

    June 7, 2025

    ಸಿರಿಬಾಗಿಲಿನಲ್ಲಿ ಯಕ್ಷಗಾನ ಪ್ರಸಂಗ ರಚನಾ ಕಮ್ಮಟ | ಜುಲೈ 06

    June 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.