Subscribe to Updates

    Get the latest creative news from FooBar about art, design and business.

    What's Hot

    ಕವನ | ಅನುಬಂಧ

    June 17, 2025

    ಬೆಂಗಳೂರಿನ ರಂಗಶಂಕರದಲ್ಲಿ ‘ದ್ರೋಪತಿ ಹೇಳ್ತವ್ಳೆ’ ನಾಟಕ ಪ್ರದರ್ಶನ | ಜೂನ್ 19

    June 17, 2025

    ಇಂದ್ರಾಳಿ ಯಕ್ಷಗಾನ ಕೇಂದ್ರದವರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ

    June 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಅಂತರಂಗ ಬಹಿರಂಗ ತಂಡದ ‘ಹಿಂಗ್ ಮಾಡಿದ್ರೆ ಹೇಗೆ?’ – ನಾಟಕ ವಿಮರ್ಶೆ
    Drama

    ಅಂತರಂಗ ಬಹಿರಂಗ ತಂಡದ ‘ಹಿಂಗ್ ಮಾಡಿದ್ರೆ ಹೇಗೆ?’ – ನಾಟಕ ವಿಮರ್ಶೆ

    February 9, 2023Updated:August 19, 20231 Comment2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    09 ಫೆಬ್ರವರಿ 2023, ಬೆಂಗಳೂರು: ಇಂದಿನ ಗ್ರಾಮ ಬದುಕಿನ ವಿನ್ಯಾಸಗಳ ಬಗೆಗೆ ಹಲವರಲ್ಲಿ ಹಲವು ತರಹದ ವಾದಗಳಿವೆ. ಜಾಗತೀಕರಣ ಎನ್ನುವುದು ಹಳ್ಳಿಗಳ ಸ್ವರೂಪವನ್ನು ಸಂಪೂರ್ಣ ಬದಲಿಸಿಬಿಟ್ಟಿದೆ ಎಂದು ಕೆಲವರು ಪುರಾವೆಗಳನ್ನು ಒದಗಿಸುತ್ತಾರೆ. ನಗರದ ಐಷಾರಾಮದ ಬದುಕು ಹಳ್ಳಿಗರನ್ನು ಇನ್ನಿಲ್ಲದಂತೆ ಸೆಳೆದು ಅವರು ಕೃಷಿಯಿಂದ ವಿಮುಕ್ತರಾಗುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಹಳ್ಳಿಗರು ತಾವಾಗಿ ಉಳಿಯದೆ ನಗರದವರ ಬದುಕಿನ ಶೈಲಿಯನ್ನು ಹಳ್ಳಿಯಲ್ಲೇ ಅನುಕರಿಸಲು ಆರಂಭಿಸಿದ್ದಾರೆ ಎಂದು ಕೆಲವರು ದೂರುತ್ತಿರುವುದು ಕೇಳಿಬರುತ್ತಿದೆ.

    ಆದರೆ ಈ ವಾದಕ್ಕೆ ಪ್ರತಿವಾದ ಮಾಡುವ ಗುಂಪೂ ಇದೆ. ಅವರ ಪ್ರಕಾರ ಹಳ್ಳಿಯ ಬದುಕು ಎಂದಿನಂತೆಯೇ ಇದೆ. ನಗರದಲ್ಲಿ ವಾಸಿಸುವವರ ಮನೆಗೆ ಒಂದಷ್ಟು ಜನ ಬಂದುಬಿಟ್ಟರೆ ಅವರನ್ನು ಸಂಭಾಳಿಸುವುದು ಕಷ್ಟದ ಕೆಲಸವಾಗುತ್ತದೆ, ಆದರೆ ಹಳ್ಳಿ ಮಂದಿ ಇದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ; ಹಾಗಾಗಿ ಅವರಲ್ಲಿ ನಿಜವಾದ ದೃಢತ್ವ ಇದೆ ಎನ್ನುವುದು ಅವರ ವಾದ.

    ಮೇಲಿನ ಎರಡೂ ವಾದಗಳಿಗೆ ಕಿವಿಗೊಡುವವರಿಗೆ ನಿಜದ ವಾಸ್ತವ ಇನ್ನೂ ನಿಲುಕಿಲ್ಲ. ಹಳ್ಳಿಗಳು ಎಂದರೆ ಇಂಗ್ಲಿಷ್ ತೊಡಕು ಇರುವ ಮಕ್ಕಳು, ಅವರ ಮನೆಯ ಇಕ್ಕಟ್ಟುಗಳು, ತಮಾಷೆಗಳು ಈ ಎಲ್ಲ ಚಿತ್ರಗಳು ಒಂದು ಕಾಲದಲ್ಲಿ ಚಾಲ್ತಿಯಲ್ಲಿ ಇದ್ದವು. ಹಾಗೆಯೇ ಊರಿನ ಮುಖಂಡರು, ಅವರ ಮಾತುಗಳಿಗೆ ಇರುವ ಖದರು, ಅವರಲ್ಲಿ ಇರುವ ಸಂಘಟನೆಯ ಗುಣ, ಕಲೆಯ ಬಗ್ಗೆ ಪ್ರೀತಿ, ನಾಟಕ ಆಡುವ ಖಯಾಲಿ.. ಅದಕ್ಕಾಗಿ ನಡೆಸುವ ಸಿದ್ಧತೆ.. ಅಲ್ಲಿ ಏರ್ಪಡುವ ತಮಾಷೆಯ ಪ್ರಸಂಗಗಳು..ಇವು ಹಳ್ಳಿಯ ಬಗ್ಗೆ ಸಾರ್ವತ್ರಿಕವಾಗಿ ಹರಡಿರುವ ಚಿತ್ರಗಳು. ಸರಿಸುಮಾರು ಎಲ್ಲ ಹಳ್ಳಿಗಳಲ್ಲಿ ಇಂದಿಗೂ ಈ ಬಗೆಯದೇ ಚಿತ್ರಗಳಿರುತ್ತವೆ ಎಂದು ನಂಬಬೇಕೋ ಬೇಡವೋ ಅದು ಬೇರೆಯ ಸಂಗತಿ.

    ಈಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ್ದ ನಾಟಕೋತ್ಸವದಲ್ಲಿ ಅಂತರಂಗ ಬಹಿರಂಗ ತಂಡ ‘ಹಿಂಗ್ ಮಾಡಿದ್ರೆ ಹೇಗೆ?’ ನಾಟಕ ಪ್ರದರ್ಶಿಸಿತು. ಇದರಲ್ಲಿ ಅಭಿವ್ಯಕ್ತಗೊಂಡದ್ದು ಮತ್ತದೇ ಹಳ್ಳಿ ಬದುಕಿನ ಕಥನ. ಇದರಲ್ಲಿ ಬದಲಾಗುತ್ತಿರುವ ಹಳ್ಳಿಗಳ ಸ್ವರೂಪದ ಬಗೆಗೆ ಚರ್ಚೆಗಳಿಲ್ಲ. ಬದಲಿಗೆ ಇಂದೂ ಕೂಡ ಹಳ್ಳಿಗಳಲ್ಲಿ ಈ ಹಿಂದೆ ಇದ್ದ ವಾತಾರವಣವೇ ಮುಂದುವರೆದಿದೆ ಎನ್ನುವ ಚಿತ್ರಗಳನ್ನು ಹಾಸ್ಯದ ನೆಲೆಯಲ್ಲಿ ಕಟ್ಟಲಾಗಿದೆ. ನಾಟಕ ರಚನಾಕಾರರಾದ ನಳಿನಿ ರಂಗನ್ ಅವರಿಗೆ ಹಳ್ಳಿ ಎನ್ನುವುದು ಒಂದು ಘಟ್ಟದ ಬದುಕಿನ ಚಿತ್ರದ ಅನಾವರಣವಾಗಿ ಕಂಡಿರುವುದು ಅಚ್ಚರಿಯ ಅಂಶವೂ ಹೌದು, ಹಾಗೇ ಅದೇ ರೀತಿ ಹಳ್ಳಿಗಳು ಇಂದಿಗೂ ಇದ್ದರೆ ಸಮಾಧಾನವೂ ಹೌದು.

    ‘ ಹಿಂಗ್ ಮಾಡಿದ್ರೆ ಹೆಂಗೆ?” ಪ್ರಯೋಗ ಹಳ್ಳಿಗಳಲ್ಲಿನ ಹೊಸ ಬದುಕಿನ ಶೋಧವನ್ನೇನೂ ಮಾಡಿಲ್ಲ. ಬದಲಿಗೆ ಹಳ್ಳಿ ಎಂದರೆ ನಮ್ಮ ಮನಸ್ಸುಗಳಲ್ಲಿ ಸ್ಥಿರವಾಗಿ ಕೂತಿರುವ ಹಿಂದಿನ ಮತ್ತು ಹಳೆಯ ಚಿತ್ರಗಳನ್ನು ಹಾಸ್ಯದ ಆವರಣದಲ್ಲಿ ಕಟ್ಟಲು ಪ್ರಯತ್ನಿಸಿದೆ. ಕಲಾಪೋಷಕ ಮತ್ತು ಕಲಾವಿದ ಆಗಿರುವ ಕೃಷ್ಣೇಗೌಡರ ಸುತ್ತ ಹೆಣೆದಿರುವ ಕಥೆ ಇದಾದರೂ ಅವರು ರಂಗದಲ್ಲಿ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ಹೊತ್ತಿಗೆ ನಾಟಕ ಮುಕ್ತಾಯದ ಹಂತಕ್ಕೆ ಬಂದಿತ್ತು. ಅಂದರೆ ಆವರಣವೇ ಹೆಚ್ಚಾಗಿ ಹೂರಣ ಕಡಿಮೆ ಅನಿಸುವಂತೆ ಇತ್ತು. ಇದನ್ನು ತಾಲೀಮಿನಲ್ಲಿ ನಿವಾರಿಸಿಕೊಳ್ಳಬಹುದಿತ್ತು. ಹಿಂಗೆ ಮಾಡಿದ್ರೆ ಹೆಂಗೆ? ಎನ್ನುವುದು ಹಳ್ಳಿಯ ಜಾತ್ರೆಯ ಸಂದರ್ಭದಲ್ಲಿ ಮಾಡುವ ನಾಟಕಕ್ಕೆ ಪಾತ್ರಗಳನ್ನು ಹಂಚುವ ಕುರಿತು ಇರುವಂಥದ್ದು. ಈ ಆಶಯಕ್ಕೆ ನಾಟಕ ತಲುಪುವ ಹೊತ್ತಿಗೆ ಹೆಚ್ಚು ಸಮಯ ಹಿಡಿದಿತ್ತು. ಹೀಗಾಗಲು ಕಾರಣ, ನಗಿಸಲು ಅಣಿಯಾಗಬೇಕು ಎನ್ನುವ ತುಡಿತ. ಹಾಗಾಗಿ ಶಾಲೆಯ ದೃಶ್ಯದಲ್ಲಿನ ಹಾಸ್ಯ ಚೆನ್ನಾಗಿತ್ತಾದರೂ ಅಷ್ಟು ಲಂಬಿಸುವ ಅಗತ್ಯವಿರಲಿಲ್ಲ ಅನಿಸಿತು. ಇಂಗ್ಲಿಷ್ ಬಾರದ ಹೆಣ್ಣುಮಗಳಿಗೆ ಪಾಠ ಹೇಳುವ ದೃಶ್ಯಗಳನ್ನು ಮೊಟಕು ಮಾಡಿ ಪ್ರಧಾನ ಭೂಮಿಕೆಗೆ ಬಂದಿದ್ದರೆ ಆಗ ಪ್ರಯೋಗದಲ್ಲಿ ಹೊಸ ಆಯಾಮವನ್ನು ಗುರುತಿಸಬಹುದಿತ್ತೇನೋ.

    ಈ ಎಲ್ಲದರ ಆಚೆಗೆ ಹಳ್ಳಿಯಲ್ಲಿ ನಡೆಸುವ ನಾಟಕಗಳಲ್ಲಿ – ವಿಶೇಷವಾಗಿ ತಾಲೀಮಿನ ಸಂದರ್ಭದಲ್ಲಿ ನಡೆಯುವ ತಮಾಷೆಗಳನ್ನು ಈಗಾಗಲೇ ‘ಕೃಷ್ಣ ಸಂಧಾನ’ ಕಟ್ಟಿಕೊಟ್ಟು ಪ್ರಸಿದ್ಧಿ ಪಡೆದುಕೊಂಡಿದೆ. ಹಾಗಾಗಿ ಈ ಆವರಣದ ಆಚೆಗೆ ‘ ಹಿಂಗ್ ಮಾಡಿದ್ರೆ ಹೆಂಗೆ?’ ನಾಟಕ ಮುಖಮಾಡಿದ್ದರೆ ಹೊಸತನ ಕಾಣುತ್ತಿತ್ತು. ಇದು ಕೃಷ್ಣ ಸಂಧಾನ ನಾಟಕದ ಎಳೆಯನ್ನು ಅನುಕರಿಸದಿದ್ದರೂ ಅದನ್ನು ನೆನಪಿಸದೆ ಇರಲಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.

    ಆದರೆ ಮೊದಲಿಂದ ಕಡೆಯವರೆಗೆ ಎಲ್ಲರ ನಟ ನಟಿಯರ ಅಭಿನಯದಲ್ಲಿ ಚೇತೊಹಾರಿ ಗುಣ ಇತ್ತು.  ಇದು ಬಾಷ್ ರಾಘವೇಂದ್ರ ಅವರ ಚೊಚ್ಚಿಲ ನಿರ್ದೇಶನವಾದರೂ ಅಚ್ಚುಕಟ್ಟುತನವಿತ್ತು.

    • ಎನ್.ಸಿ. ಮಹೇಶ್

     

    Share. Facebook Twitter Pinterest LinkedIn Tumblr WhatsApp Email
    Previous Articleಚಿತ್ರಕಲಾ ಪ್ರವೀಣೆ – ರಾಧಿಕಾ ಮಕರಂದ ಬಾಯರಿ
    Next Article ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರದಾನ ಸಮಾರಂಭ 2023
    roovari

    1 Comment

    1. Bheeshma Ramaiah on February 9, 2023 4:15 pm

      ಹಿಂಗ್ ಮಾಡಿದ್ರೆ ಹೆಂಗೆ ?
      ಹಳೆ ಬೇರುಗಳ ಜೊತೆ ಹೊಸ ಪಯಣ…
      ನೋಡಿದ ಪ್ರೇಕ್ಷಕರು ನಗುವಿನ ಹೊನಲಲ್ಲಿ ತೇಲಾಡಿದ್ದಂತು ನಿಜ.

      Reply

    Add Comment Cancel Reply


    Related Posts

    ಬೆಂಗಳೂರಿನ ರಂಗಶಂಕರದಲ್ಲಿ ‘ದ್ರೋಪತಿ ಹೇಳ್ತವ್ಳೆ’ ನಾಟಕ ಪ್ರದರ್ಶನ | ಜೂನ್ 19

    June 17, 2025

    ಬೆಂಗಳೂರಿನ ರಂಗ ಶಂಕರದಲ್ಲಿ ‘ಮನೆ ಮನೆ ಕಥೆ’ ನಾಟಕ ಪ್ರದರ್ಶನ | ಜೂನ್ 18

    June 17, 2025

    ಮಂಗಳೂರಿನ ರಂಗ ಸಂಸ್ಥೆ ಕಲಾಭಿಯಿಂದ ಶೀಘ್ರದಲ್ಲಿ ನಟನ ತರಬೇತಿ

    June 14, 2025

    ವಿಶೇಷ ಲೇಖನ – ಜನಪ್ರಿಯ ರಂಗಭೂಮಿ ನಟ ಯಶವಂತ ಸರದೇಶಪಾಂಡೆ

    June 13, 2025

    1 Comment

    1. Bheeshma Ramaiah on February 9, 2023 4:15 pm

      ಹಿಂಗ್ ಮಾಡಿದ್ರೆ ಹೆಂಗೆ ?
      ಹಳೆ ಬೇರುಗಳ ಜೊತೆ ಹೊಸ ಪಯಣ…
      ನೋಡಿದ ಪ್ರೇಕ್ಷಕರು ನಗುವಿನ ಹೊನಲಲ್ಲಿ ತೇಲಾಡಿದ್ದಂತು ನಿಜ.

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.