Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಚಿಂತನಶೀಲ, ಸ್ತ್ರೀವಾದಿ ಸಾಹಿತಿ ಡಾ. ಎಸ್. ವಿ. ಪ್ರಭಾವತಿ

    July 25, 2025

    ‘ಅಂತರಂಗ ಬಹಿರಂಗ’ ದಿಂದ ಒಂದೇದಿನ 2 ನಾಟಕಗಳ ಪ್ರದರ್ಶನ | ಜುಲೈ 27

    July 25, 2025

    ‘ಕನ್ನಡ ನುಡಿ ರತ್ನ’ ರಾಜ್ಯ ಮಟ್ಟದ ಕವನ ಸಂಕಲನಕ್ಕೆ ಕವನಗಳ ಆಹ್ವಾನ

    July 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೂಡುಬಿದಿರೆಯಲ್ಲಿ ಉದ್ಘಾಟನೆಗೊಂಡ ಸರಣಿ ತಾಳಮದ್ದಲೆ ಕಾರ್ಯಕ್ರಮ
    Yakshagana

    ಮೂಡುಬಿದಿರೆಯಲ್ಲಿ ಉದ್ಘಾಟನೆಗೊಂಡ ಸರಣಿ ತಾಳಮದ್ದಲೆ ಕಾರ್ಯಕ್ರಮ

    June 16, 2024Updated:June 15, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ : ಆಧ್ಯ ಶ್ರೀ ಚಾರುಕೀರ್ತಿ ಯಕ್ಷಗಾನ ಕಲಾಬಳಗದ 2024ರ ಸರಣಿ ತಾಳಮದ್ದಲೆ ಕಾರ್ಯಕ್ರಮವು ದಿನಾಂಕ 10-06-2024ರ ಸೋಮವಾರದಂದು ಮೂಡಬಿದಿರೆಯ ಜೈನಮಠದ ಭಟ್ಟಾರಕ ಭವನದಲ್ಲಿ ಪ್ರಾರಂಭಗೊಂಡಿತು.
    ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾ ಚಾರ್ಯವರ್ಯ ಸ್ವಾಮೀಜಿ “ತಾಳಮದ್ದಲೆಯಲ್ಲಿ ರಾಮಾಯಣ, ಮಹಾಭಾರತ, ಜೈನ ಪುರಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಯಕ್ಷಗಾನದ ಹಿಮ್ಮೇಳ, ಮುಮ್ಮೇಳ ಕಲಾವಿದರು ಸಂಪದ್ಭರಿತ ಮನಸ್ಸು ಕಟ್ಟುವವರು.” ಎಂದು ನುಡಿದರು. ಇದೇ ಸಂದರ್ಭದಲ್ಲಿ ತಾಳಮದ್ದಲೆಯ ಪ್ರಾಯೋಜಕರಾದ ಭುಜಬಲಿ ಧರ್ಮಸ್ಥಳ ಹಾಗೂ ಯಕ್ಷ ಗಾನ ಪೋಷಕ ಶೈಲೇಂದ್ರ ಕುಮಾ‌ರ್ ಇವರನ್ನು ಸ್ವಾಮೀಜಿ ಗೌರವಿಸಿದರು.
    ಕಾರ್ಯಕ್ರಮದಲ್ಲಿ ಬಸದಿಗಳ ಮೊತ್ತೇಸರ ಪಟ್ಟಶೆಟ್ಟಿ ಸುಧೇಶ್ ಕುಮಾರ್, ಮೂಡುಬಿದಿರೆ ಸರ್ವೀಸ್ ಕೋ- ಆಪರೇಟಿವ್‌ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಕಾರ್ಯಕ್ರಮದ ಸಂಯೋಜಕ ಶಾಂತರಾಮ ಕುಡ್ವ, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್, ಕೃಷ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು. ಡಾ. ಪ್ರಭಾತ್ ಕುಮಾ‌ರ್ ಬಲ್ನಾಡು ಕಾರ್ಯಕ್ರಮ ನಿರೂಪಿಸಿದರು. ಶಾಂತಾರಾಂ ಕುಡ್ವ ಇವರ ಸಂಯೋಜನೆಯಲ್ಲಿ ಸರಣಿಯ ಮೊದಲ ತಾಳಮದ್ದಲೆ ‘ಭೀಷ್ಮಾರ್ಜುನ’ವನ್ನು ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಚೆಂಡೆಯಲ್ಲಿ ರವಿರಾಜ್ ಜೈನ್, ಮದ್ದಲೆಯಲ್ಲಿ ಕೌಶಲ್ ರಾವ್ ಪುತ್ತಿಗೆ, ಭೀಷ್ಮನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಶ್ರೀಕೃಷ್ಣನಾಗಿ ಹಿರಣ್ಯ ವೆಂಕಟೇಶ್ ಭಟ್ ಹಾಗೂ ಅರ್ಜುನನಾಗಿ ಡಾ.ಪ್ರಭಾತ್ ಬಲ್ನಾಡ್ ನಡೆಸಿಕೊಟ್ಟರು.

    Share. Facebook Twitter Pinterest LinkedIn Tumblr WhatsApp Email
    Previous Articleಸುಳ್ಯದಲ್ಲಿ ‘ಸಾಹಿತ್ಯ ಸಂವಾದ ಮಾಲಿಕೆ’ ಕಾರ್ಯಕ್ರಮ | ಜೂನ್ 17  
    Next Article ಪುಸ್ತಕ ವಿಮರ್ಶೆ | ಇಂದಿರಾಜಾನಕಿ ಎಸ್. ಶರ್ಮ ಇವರ ‘ರಾಮ ಸಾಂಗತ್ಯ’
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ‘ಕುಂದಾಪ್ರ ಕನ್ನಡ ಹಬ್ಬ 2025’ | ಜುಲೈ 26 ಮತ್ತು 27

    July 25, 2025

    ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿಯಿಂದ ‘ರಾಜ್ಯೋತ್ಸವ ಪ್ರಶಸ್ತಿ’ಗೆ ಅರ್ಜಿ ಆಹ್ವಾನ

    July 25, 2025

    ತೆಕ್ಕಟ್ಟೆ ಹಯಗ್ರೀವದಲ್ಲಿ ಕುಂದಾಪ್ರ ಕನ್ನಡದಲ್ಲಿ ತಾಳಮದ್ದಲೆ | ಜುಲೈ 27

    July 24, 2025

    ಕಾಂತಾವರ ಯಕ್ಷದೇಗುಲ ಸಂಸ್ಥೆಯ ವಾರ್ಷಿಕ ಯಕ್ಷೋಲ್ಲಾಸದಲ್ಲಿ ‘ಯಕ್ಷದೇಗುಲ ಪ್ರಶಸ್ತಿ’ ಪ್ರದಾನ

    July 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.