22 ಫೆಬ್ರವರಿ 2023, ತಮಿಳುನಾಡು: ಶಿವರಾತ್ರಿಯ ಪ್ರಯುಕ್ತ ತಮಿಳುನಾಡಿನ ಚಿದಂಬರಂ ಮತ್ತು ತಂಜಾವೂರಿನ ಪ್ರತಿಷ್ಠಿತ ನಾಟ್ಯಾಂಜಲಿ 2023 ಕಾರ್ಯಕ್ರಮದಲ್ಲಿ ದಿನಾಂಕ 18 ಮತ್ತು 19ರಂದು ಕರಾವಳಿಯ ಯುವ ನೃತ್ಯ ಕಲಾವಿದರಾದ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಅವರು ತಮ್ಮ ಏಕವ್ಯಕ್ತಿ ನೃತ್ಯವನ್ನು ಪ್ರದರ್ಶಿಸಿದರು ಮತ್ತು ನಟುವಾಂಗ ಕಲಾವಿದರಾಗಿಯೂ ಭಾಗವಹಿಸಿದರು.ಮಂಜುನಾಥ್ ಅವರು 66ಕ್ಕೂ ಹೆಚ್ಚಿನ ನೃತ್ಯ ಮತ್ತು ತಾಳದ ಕಾರ್ಯಾಗಾರಗಳನ್ನು ನಡೆಸಿದ್ದು,ನೃತ್ಯ ಸಾಹಿತ್ಯ ಸಂಯೋಜಕರಾಗಿ ಗುರುತಿಸಿಕೊಂಡಿದ್ದಾರೆ.

